ಮಾನ್ಯ ಚಿದಂಬರಂ ಅವರೆ, ನಿಮ್ಮ ಅದ್ಭುತ ಶೋಧಕ್ಕೆ ನೊಬೆಲ್ ಪ್ರಶಸ್ತಿಯೇ ದೊರೆಯಬೇಕು. ರಾಷ್ಟ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿಂದ ಜನ ಬಸವಳಿದಿರುವಾಗ ಭಯೋತ್ಪಾದನೆಯ ಹೊಸ ಬಗೆಯನ್ನು ಕಂಡುಹಿಡಿದು ಅದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಕ್ರಿಯೇಟಿವ್ ಹೆಸರನ್ನು ನೀಡಿ ಮಹದುಪಕಾರವನ್ನೇ ಮಾಡಿದ್ದೀರಿ! ಬುದ್ಧಿಗೆ ಖಗ್ರಾಸ ಗ್ರಹಣ ಹಿಡಿದು ವ್ಯಕ್ತಿ ಅದೆಷ್ಟು ವಿವೇಕರಹಿತವಾಗಿ, ಸ್ವಾಭಿಮಾನಶೂನ್ಯನಾಗಿ ನಡೆದುಕೊಳ್ಳುತ್ತಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದೀರಿ.
News Analysis
ಮಂಗಳಮಯವಾಗಲಿ ಚಂದ್ರಯಾನ
ಚಂದ್ರಯಾನ -೧ ಎಂಬ ಉಪಗ್ರಹ ಚಂದ್ರನನ್ನು ಸುತ್ತಿ ಚಂದ್ರನ ಬಗೆಗಿನ ಮಾಹಿತಿಯನ್ನು ನಮಗೆ ಕಳುಹಿಸಲು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ನೆಗೆದಿದೆ. ಜೊತೆಗೆ ಭಾರತದ ಮತ್ತು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಬಗೆಗಿನ ಗೌರವವನ್ನು ಅಷ್ಟೇ ಎತ್ತರಕ್ಕೆ ಕೊಂಡೊಯ್ದಿದೆ. ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲೇ ಇದೊಂದು ಮೈಲಿಗಲ್ಲಾಗಲಿದೆ. ಒಂದೆಡೆ ಸಾಧನೆಯ ಸಂಭ್ರಮ ಕಂಡರೆ ಇನ್ನು ಕೆಲವರಿಗೆ ಆರೋಪ ಮಾಡುವ ಖಯಾಲಿ. ’ಸುಖಾಸುಮ್ಮನೆ ಸಾರ್ವಜನಿಕ ಹಣದ
ಪಾಕಿಸ್ತಾನದ ದ್ವೇಷದ ಕೂಸು ಎಲ್-ಇ-ಟಿ
ಪಾಕಿಸ್ತಾನವನ್ನು ದ್ವೇಷದ ಕೂಸು ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜನ್ಮದ ಗುಟ್ಟಿರುವುದೇ ಭಾರತ ದ್ವೇಷದಲ್ಲಿ. ಅದರ ಉಳಿವು ಸಹ ಅದರಲ್ಲಿಯೇ. ಅದಕ್ಕಾಗಿಯೇ ಅದು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಒಂದಲ್ಲ ಒಂದು ಕುತಂತ್ರ ಹೂಡುತ್ತ ಬಂದಿದೆ. ಅಂತಹ ಪಾಕ್ನ ದ್ವೇಷದ ಮರಿ ಕೂಸು ಅದೇ ’ಲಷ್ಕರ್ ಇ ತೊಯ್ಬಾ’ – ಎಲ್.ಇ.ಟಿ. ’ಲಷ್ಕರ್ ಇ ತೊಯ್ಬಾ’ ಎಂದರೆ ಶುದ್ಧರ ಸೈನ್ಯ. ಇದರ ಮುಖ್ಯಸ್ಥ ಝಕಿಯಾರ್ ರೆಹಮಾನ್ ಲಖ್ವಿ ಅಲಿಯಾಸ್ ’ಚಾಚಾಜಿ’. ಇವನೇ ಮುಂಬೈ ದಾಳಿಗಳನ್ನು ರೂಪಿಸಿ ಅದರ [...]
ರಕ್ಷಣೆ ಮತ್ತು ಗೂಡಚರ್ಯೆ : ಸಾಧ್ಯತೆ-ಸವಾಲುಗಳು
ಪ್ರತಿ ಬಾರಿ ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ಸುರಕ್ಷಾ ಪಡೆಗಳ ಸಂಖ್ಯೆ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಜನಸಂಖ್ಯೆ, ದೇಶದ ವಿಶಾಲತೆ ಇವುಗಳನ್ನು ಮರೆತು ರಕ್ಷಣಾ ಪಡೆಗಳ ವೈಫಲ್ಯ, ಪೊಲೀಸ್ ನಿರ್ಲಕ್ಷ್ಯ ಮುಂತಾದ ಆಪಾದನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಹವಾ ನಿಯಂತ್ರಿತ ವ್ಯವಸ್ಥೆಗಳಲ್ಲೆ ಇರುವ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ಕೆಲವೊಮ್ಮೆ ಬಹಳ ಸುಲಭವಾಗಿ ನಮ್ಮ ರಕ್ಷಣಾತಂಡಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಈ ದೇಶದಲ್ಲಿ ಪೊಲೀಸ್ ಬಲ ಎಷ್ಟಿದೆ ? ಮುಂತಾದ [...]
ಮುಂಬೈ ಸ್ಫೋಟದ ಒಳನೋಟಗಳು
– ಅರುಣ್ ಕುಮಾರ್ ಅಂದು ೨೬ ನವೆಂಬರ್, ರಾತ್ರಿ ೮.೪೫ರ ಸುಮಾರು. ಮುಂಬೈ ಕಡಲತೀರದಲ್ಲಿ ೧೦ ಯುವಕರು ಭಾರಿ ಬೆನ್ನು ಚೀಲಗಳೊಂದಿಗೆ ಹಳದಿ ಯಾಂತ್ರಿಕ ಬೋಟಿನಿಂದ ಇಳಿಯುತ್ತಾರೆ. ಇವರನ್ನು ಕಂಡ ಭರತ್ ತಾಮೋರ್ ಎಂಬ ಮೀನುಗಾರ ಕೋಲಿ ಜನಾಂಗಕ್ಕೆ ಸೇರಿದ ಯುವಕ ಹತ್ತಿರ ಹೋಗಿ ಮಾತನಾಡಿಸುತ್ತಾನೆ. ಆ ಯುವಕರ ಉತ್ತರ ಇಷ್ಟೇ, “ ಹಮ್ ಅಭಿ ಬಹುತ್ ಟೆನ್ಷನ್ ಮೇ ಹೈ, ಹಮೇ ಔರ್ ಟೆನ್ಷನ್ ನಹೀ ದೇನಾ” ಎಂದು ಅವಸರದಲ್ಲಿ ಹೆಜ್ಜೆ ಹಾಕಿ ನಾಲ್ಕಾರು ಗುಂಪುಗಳಲ್ಲಿ [...]
RSS Feed
Twitter
