Organisation Profiles

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

ಆಗಬೇಕಾಗಿದೆ ವನವಾಸಿ ಕಲ್ಯಾಣ! ಭಾರತ ದೇಶದಲ್ಲಿ ಸುಮಾರು ಒಂಭತ್ತೂವರೆ ಕೋಟಿಗೂ ಮಿಕ್ಕ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದಾರೆ. ರಾಷ್ಟ್ರ-ರಾಜ್ಯದ ಕಾನೂನುಗಳಿಂದ ಬೃಹತ್ ಯೋಜನೆ, ಕಾರ್ಖಾನೆಗಳಿಂದ ಸರಿಯಾದ ಪುನರ್ವಸತಿ ಇಲ್ಲದೇ ತಮ್ಮ ಮೂಲ ನಿವಾಸದಿಂದ, ಅರಣ್ಯದಿಂದಲೂ ಹೊರದೂಡಲ್ಪಟ್ಟಿದ್ದಾರೆ. ಬಡತನ, ಅಜ್ಞಾನ, ಮತಾಂತರ ಪಿಡುಗಿನ ವಿರುದ್ಧ ನಿಂತು ಹಲವು ಸೇವಾ ಕಾರ್ಯಕ್ರಮ ಮತ್ತು ವೈವಿಧ್ಯ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ ವನವಾಸಿ ಕಲ್ಯಾಣ. ೧೯೫೨ರಲ್ಲಿ ಸ್ಥಾಪಿಸಿವಾದ `ವನವಾಸಿ ಕಲ್ಯಾಣ’ ಆಶ್ರಮ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತವಾಯಿತು. ವನವಾಸಿ [...]

KRUSHI PRAYOG PARIVAR – ಕೃಷಿ ಪ್ರಯೋಗ ಪರಿವಾರ

೧೯೯೦ರ ದಶಕ. ಬೇಸಿಗೆಯ ಒಂದು ದಿನ. ಶರಾವತಿ ಹಿನ್ನೀರಿನ ಮಧ್ಯದಲ್ಲಿರುವ ಸಣ್ಣ ಗ್ರಾಮ ತುಮರಿಯಲ್ಲಿ ಕೃಷಿಕರಿಗಾಗಿ ಒಂದು ಶಿಬಿರವನ್ನೇರ್ಪಡಿ ಸಲಾಗಿತ್ತು.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಡಾ|| ಉಪೇಂದ್ರ ಶೆಣೈ ಮತ್ತು ತೀರ್ಥಹಳ್ಳಿಯ ಪ್ರಗತಿಪರ ಸಾವಯವ ಕೃಷಿಕರಾದ ಪುರುಷೋತ್ತಮರಾಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶಿಬಿರದಲ್ಲಿ ಶೆಣೈಯವರು ಕೃಷಿಕರಿಗಿರುವ ಸಮಸ್ಯೆಗಳ ಪಟ್ಟಿ ಮಾಡಲು ಹೇಳಿದರು. ಸುಮಾರು ೪೦ ಸಮಸ್ಯೆಗಳ ಆ ಪಟ್ಟಿಯಲ್ಲಿ ರಾಸಾಯನಿಕ ಕೃಷಿಯಿಂದುಂಟಾಗುತ್ತಿದ್ದ ಸಮಸ್ಯೆಯೂ ಒಂದು. ಎಲ್ಲಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನ ಮಂಥನ ನಡೆದ ಬಳಿಕ [...]

VISHWA HINDU PARISHAD – ವಿಶ್ವ ಹಿಂದು ಪರಿಷತ್

VISHWA HINDU PARISHAD – ವಿಶ್ವ ಹಿಂದು ಪರಿಷತ್

ಹಿಂದುಗಳನ್ನು ಒಂದುಗೊಡಿಸುವ ಮೂಲಕ, ಹಿಂದು ಧರ್ಮವನ್ನು ಇಡೀ ವಿಶ್ವದಲ್ಲಿ ರಕ್ಷಿಸುವ ಉದ್ದೇಶದೊಂದಿಗೆ,  ಋಷಿ-ಮುನಿಗಳ ಆಶಿರ್ವಾದದೊಡನೆ, 29 ಆಗಸ್ಟ್, 1964 ರಂದು ವಿಶ್ವ ಹಿಂದು ಪರಿಷತ್ ನ ಸ್ಥಾಪನೆಯಾಯಿತು. ನಿರಂತರವಾಗಿ ಬೆಳೆಯುತ್ತ, ಇಂದು ವಿ.ಹಿಂ.ಪ, ಲಕ್ಷಾಂತರ ನಗರ-ಗ್ರಾಮಗಳಲ್ಲಿ ಅಸ್ತಿತ್ವ ಹೊಂದಿದೆ. ವಿಶ್ವದೆಲ್ಲೆಡೆ ಹಿಂದು ಚಟುವಟಿಕೆ ನಡೆಸುವ ಮೂಲಕ, ವಿ.ಹಿಂ.ಪ ಒಂದು ಬೄಹತ್ ಹಿಂದು ಸಂಘಟನೆಯಾಗಿ ಮಾರ್ಪಡಾಗಿದೆ. ಶಿಕ್ಷಣ, ಸ್ವಾವಲಂಬನೆ, ಗ್ರಾಮ ಶಿಕ್ಷಾ ಮಂದಿರ ಎಂಬಿತ್ಯಾದಿ 32,000 ಕ್ಕೊ ಹೆಚ್ಚು ಸೇವಾ ಚಟುವಟಿಕೆಗಳ ಮುಖೇನ, , ವಿ.ಹಿಂ.ಪ ಹಿಂದು ಧರ್ಮದ [...]

SAHAKARA BHARATI – ಸಹಕಾರ ಭಾರತಿ :

SAHAKARA BHARATI – ಸಹಕಾರ ಭಾರತಿ :

ಸಹಕಾರ ಭಾರತಿ : ಒಂದು ವಿಶಿಷ್ಟ ಹೆಜ್ಜೆ ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಕೇವಲ ಸ್ವಾರ್ಥಸಾಧನೆಗಾಗಿ ಸಹಕಾರ ವಿಶೇಷವೇನಲ್ಲ. ಸಹಕಾರವು ಸಂಸ್ಕಾರಯುತ ವಾದಾಗ ಸಮಾಜಕ್ಕೆ ಹೆಚ್ಚು ಹಿತ. ಎಲ್ಲರೂ ಪ್ರತ್ಯೇಕವಾಗಿ ತಮ್ಮ ತಮ್ಮದೇ [...]

SAMSKRITA BHARATI – ಸಂಸ್ಕೃತ ಭಾರತಿ

SAMSKRITA BHARATI –  ಸಂಸ್ಕೃತ ಭಾರತಿ

ಸಂಸ್ಕೃತ ಭಾರತಿ ಸಂಸ್ಕೃತವನ್ನು ಮತ್ತೊಮ್ಮೆ ಜನಸಾಮಾನ್ಯರ ವ್ಯವಹಾರದ ಭಾಷೆಯನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಪ್ರಾರಂಭವಾದ ಆರೆಸ್ಸೆಸ್‌ನ ಸಹಸಂಘಟನೆ ‘ಸಂಸ್ಕೃತಭಾರತಿ’. ೧೯೮೧ರಲ್ಲಿ ಅದೇ ತಾನೇ ತಿರುಪತಿಯಿಂದ ಸಂಸ್ಕೃತದ ಅಧ್ಯಯನ ಮುಗಿಸಿಬಂದ ಮೂವರು ತರುಣರಿಂದ ಈ ಕಾರ್ಯ ಪ್ರಾರಂಭ. ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ೧೦ದಿನದಲ್ಲಿ ದಿನಕ್ಕೆರಡು ಗಂಟೆಯಂತೆ ನಡೆಸಲಾಗುವ ಸಂಭಾಷಣಾ ಶಿಬಿರದ ಮೂಲಕ ಸಂಘಟನೆಯ ಆರಂಭ. ಸಂಸ್ಕೃತದ ಬಗ್ಗೆ ಪ್ರೀತಿಯನ್ನು ಶ್ರದ್ಧೆಯನ್ನು ಇರಿಸಿಕೊಂಡು ಅದರ ಉತ್ಥಾನಕ್ಕಾಗಿ ಪ್ರಯತ್ನಪಡುತ್ತಿರುವ ಸಾವಿರಾರು ಸಂಸ್ಥೆಗಳು ದೇಶದಲ್ಲಿ ಇಂದಿಗೂ ಕೆಲಸ ಮಾಡುತ್ತಿವೆ. ಇವತ್ತಿಗೆ ಸಂಸ್ಕೃತವನ್ನು ಓದುತ್ತಿರುವ ವಿದ್ಯಾರ್ಥಿಗಳ [...]

SAMSKARA BHARATI- ಸಂಸ್ಕಾರ ಭಾರತಿ,

SAMSKARA BHARATI- ಸಂಸ್ಕಾರ ಭಾರತಿ,

ಸಂಸ್ಕಾರ ಭಾರತಿ ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಭಾರತೀಯ ಸಂಸ್ಕೃತಿಯ ಪೋಷಣೆಗಾಗಿ ಲಲಿತಕಲೆಗಳ ಸಂವರ್ಧನೆಗೆ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಸಂಘಟನೆ ಸಂಸ್ಕಾರ ಭಾರತಿ. ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಎಂಬುದು ಸಂಸ್ಕಾರ ಭಾರತಿಯ ಧ್ಯೇಯ ವಾಕ್ಯ. ವ್ಯಕ್ತಿಯನ್ನು ಸಮಾಜ-ದೇಶದೊಂದಿಗೆ ಜೋಡಿಸುವ ಶಕ್ತಿ ಭಾರತೀಯ ಕಲೆಗಳಿಗಿವೆ. ವ್ಯಕ್ತಿತ್ವವನ್ನು ಹೆಚ್ಚಿಸಲು ಕಲೆಯ ಆಸಕ್ತಿ-ಅಭಿವ್ಯಕ್ತಿ ಎಂದಿಗೂ ಸಹಕಾರಿ. ಭಾವನಾತ್ಮಕವಾದ ಸಮಾಜ ಪರಿವರ್ತನೆ ಹಾಗೂ ಸಮನ್ವಯಪೂರ್ಣ ಸಮಾಜ ಜೀವನ ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕರಾಗಿದ್ದ [...]

HINDU SEVA PRATISHTANA- ಹಿಂದು ಸೇವಾ ಪ್ರತಿಷ್ಠಾನ

HINDU SEVA PRATISHTANA- ಹಿಂದು ಸೇವಾ ಪ್ರತಿಷ್ಠಾನ

ಹಿಂದು ಸೇವಾ ಪ್ರತಿಷ್ಠಾನ ಸೇವೆಯ ಭಾರತಕ್ಕೆ ಹೊಸ ಕಲ್ಪನೆಯೇನಲ್ಲ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಅದೆಷ್ಟೋ ಮಹಾಪುರುಷರು ಸಮಾಜದ ದೀನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊನೆ ಉಸಿರಿನ ತನಕ ಪರೋಪಕಾರದಲ್ಲಿ ತೊಡಗಿದ್ದನ್ನು ಕಾಣುತ್ತೇವೆ. ಮಹರ್ಷಿ ವ್ಯಾಸರು ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಎಂಬುದನ್ನು ಸಾರಿ ಹೇಳಿದ್ದಾರೆ. ಇಂತಹ ಮಹಾಪುರುಷರ ಆದರ್ಶವನ್ನಿಟ್ಟುಕೊಂಡು ಪ್ರಾರಂಭವಾದ ಸಂಸ್ಥೆಯೇ ಹಿಂದು ಸೇವಾ ಪ್ರತಿಷ್ಠಾನ. ‘ಲೋಕಹಿತಂ ಮಮ ಕರಣೀಯಂ’ (ಸಮಾಜಕ್ಕೆ ಹಿತವಾಗುವ ಕೆಲಸವನ್ನು ನಾನು ಮಾಡಬೇಕು) ಎಂಬುದೇ ಪ್ರತಿಷ್ಠಾನದ ಧ್ಯೇಯ. ಹೆಚ್ಚು [...]

SAKSHAMA- ಸಮದೃಷ್ಟಿ, ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ

SAKSHAMA- ಸಮದೃಷ್ಟಿ, ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ

ಸ ಮದೃಷ್ಟಿ, ಕ್ಷಮ ತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ ‘ಸಕ್ಷಮ’ವು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶನಿಷ್ಠ ವಿಚಾರದಿಂದ ಪ್ರೇರಿತವಾಗಿರುವ ದಾನಶೀಲ ರಾಷ್ಟ್ರೀಯ ಸಂಸ್ಥೆಯಾಗಿದೆ. ಸಕ್ಷಮವು ವಿಕಲಚೇತನ ಸಮುದಾಯದ ಸಾಮಾಜೀಕರಣ, ಸಾಮಾಜೀಕೃತ ಸಮುದಾಯಗಳ ಏಕೀಕರಣ, ಏಕೀಕೃತ ಸಮಾಜದ ರಾಷ್ಟ್ರೀಕರಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ರೀತಿಯ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಾಗಿರದೆ ದೇಶದ ಆಸ್ತಿಯಾಗಿದ್ದಾರೆ ಎಂಬುದು ‘ಸಕ್ಷಮ’ದ ನಂಬಿಕೆಯಾಗಿದೆ. ವಿಕಲಚೇತನರೆಲ್ಲರನ್ನೂ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತರಬೇಕೆನ್ನುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ‘ಸಕ್ಷಮ’ದ ಉದಯ ‘ಸಕ್ಷಮ’ವು ಮಹಾರಾಷ್ಟ್ರದ ನಾಗಪುರದಲ್ಲಿ [...]

RASHTRA SEVIKA SAMITI – ರಾಷ್ಟ್ರಸೇವಿಕಾ ಸಮಿತಿ

RASHTRA SEVIKA SAMITI – ರಾಷ್ಟ್ರಸೇವಿಕಾ ಸಮಿತಿ

ರಾಷ್ಟ್ರ ಸೇವಿಕಾ ಸಮಿತಿ ಹಿಂದೂ ರಾಷ್ಟ್ರದ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ ಮೌಶೀಜೀ ಎಂದೇ ಕರೆಯಲ್ಪಡುತ್ತಾರೆ). ಪ್ರಖರವಾದ ದೇಶಭಕ್ತಿ ಇವರಿಗೆ ತಾಯಿಯಿಂದಲೇ ಬಂದ ಬಳುವಳಿ. ಜನಿಸಿದ್ದು ಸಾಮಾನ್ಯ ಕುಟುಂಬದಲ್ಲಾದರೂ ಚಿಂತನೆ ಮಾತ್ರ ಉನ್ನತ ಮಟ್ಟದ್ದು. ಸ್ತ್ರೀ ಮತ್ತು ಪುರುಷರು ರಥದ ಎರಡು ಗಾಲಿಗಳು ಎಂದು ಎಂದು ಸಾಮಾನ್ಯರೆಲ್ಲಾ ಭಾವಿಸುತ್ತಿದ್ದಾಗ, ಸ್ತ್ರೀ ರಾಷ್ಟ್ರದ ಸಾರಥಿ, ಆಕೆ ರಾಷ್ಟ್ರದ ಆಧಾರಶಕ್ತಿ [...]

VIDYA BHARATI-ವಿದ್ಯಾಭಾರತಿ

vidya bharati

ವಿದ್ಯಾಭಾರತಿ- ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ ಆರಂಭವಾದ ರೀತಿ ? ಉತ್ತರ ಪ್ರದೇಶದ ಗೋರಖಪುರದಲ್ಲಿ ೧೯೫೨ರಲ್ಲಿ ಕೆಲವು ಉತ್ಸಾಹೀ ಕಾರ್ಯಕರ್ತರಿಂದ. ತಿಂಗಳಿಗೆ ೫ರೂ. ಬಾಡಿಗೆ ನೀಡಿದ ಒಂದು ಕಟ್ಟಡದಲ್ಲಿ ಆರಂಭ. ೧೯೪೬ರಲ್ಲಿ ಶ್ರೀ ಗುರೂಜಿ ಯವರಿಂದ ಶಿಲಾನ್ಯಾಸಗೊಂಡ ಕುರುಕ್ಷೇತ್ರದ ಗೀತಾ ಶಾಲೆಯೂ ಸೇರಿದಂತೆ ವಿದ್ಯಾಭಾರತಿ ಶಾಲಾ ಬಳಗಕ್ಕೆ ಹತ್ತಾರು ಕಡೆಗಳಿಂದ ಸ್ವಾಗತ. ಹೇಗೆ ಬೆಳೆಯಿತು ? ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿ ಸರಸ್ವತಿ ಶಿಶು ಮಂದಿರಗಳು ಆರಂಭವಾಗಿ, ೧೯೫೮ರ ಹೊತ್ತಿಗೆ ಶಿಶು ಶಿಕ್ಷಾ ಪ್ರಬಂಧ ಸಮಿತಿ ಹೆಸರಿನಲ್ಲಿ ಕೇಂದ್ರೀಯ ಮಾರ್ಗದರ್ಶಕ [...]

Powered by WordPress | Free WordPress News Theme by Free WordPress Themes | Thanks to Premium Themes and WordPress 3 Themes