• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಅಂಬೇಡ್ಕರ್ ಕನಸನ್ನು ಆರೆಸ್ಸೆಸ್ ಮಾತ್ರ ನನಸಾಗಿಸಬಲ್ಲದು: ವಿ ಶ್ರೀನಿವಾಸ್ ಪ್ರಸಾದ್

Vishwa Samvada Kendra by Vishwa Samvada Kendra
June 15, 2017
in News Digest
250
0
ಅಂಬೇಡ್ಕರ್ ಕನಸನ್ನು ಆರೆಸ್ಸೆಸ್ ಮಾತ್ರ ನನಸಾಗಿಸಬಲ್ಲದು: ವಿ ಶ್ರೀನಿವಾಸ್ ಪ್ರಸಾದ್
491
SHARES
1.4k
VIEWS
Share on FacebookShare on Twitter

ಮೈಸೂರು,ಜೂ.14: ಈ ದೇಶದ ತಥಾಕತಿತ ದಲಿತನಿಗೆ ಸಮಾಜದೊಳಗೆ ಒಂದಾಗಿ ಬದುಕುವ ಯಾವ ಸಮಾಜದ ಕನಸನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಂಡಿದ್ದರೋ, ಅಂತಹ ಸಮಾಜ ಕೇವಲ ಆರೆಸ್ಸೆಸ್ ನಿಂದ ಸಾಧ್ಯ ಎಂಬುದು ನನ್ನ ನಂಬಿಕೆ ಎಂದು ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ನಗರದ ಮಾಧವಕೃಪಾದಲ್ಲಿ ಸಾಮರಸ್ಯ ವೇದಿಕೆ ಆಯೋಜಿಸಿದ್ದ ಸ್ನೇಹಮಿಲನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾವಪೂರ್ಣವಾಗಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಚಿಕ್ಕಂದಿನಿಂದಲೂ ಸಂಘದ ವಿಜಯ ಶಾಖೆ ಸ್ವಯಂಸೇವಕನಾಗಿ ಬೆಳೆದಿದ್ದರಿಂದ, ಸಂಸ್ಕಾರಯುತ ಗುಣಗಳು ನನ್ನಲ್ಲೂ ಬೆಳೆಯಿತು. ಮೈಸೂರಿನಲ್ಲಿ ಮೊದಲನೆಯ ಸಂಘಶಿಕ್ಷಾವರ್ಗ ಹಾಗೂ ಧಾರವಾಡದಲ್ಲಿ ಹರಿಬಾವೂ ವಝೆಯವರ ಒತ್ತಾಯದಿಂದ ಎರಡನೇ ವರ್ಷದ ಸಂಘ ಶಿಕ್ಷಾವರ್ಗ ಮುಗಿಸಿದೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಕೆಲಸಮಯ ವಿದ್ಯಾರ್ಥಿ ಪರಿಷತ್ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೆ. ಪರಮಪೂಜನೀಯ ಡಾಕ್ಟರ್ ಜೀ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ತೃತೀಯ ಸರಸಂಘಚಾಲಕರಾಗಿದ್ದ ಪೂಜನೀಯ ಬಾಳಾಸಾಹೇಬ್ ದೇವರಸ್ ಅವರೊಂದಿಗೆ ವೇದಿಕೆಯಲ್ಲಿ ಕೂಡುವ ಭಾಗ್ಯ ನನ್ನದಾಗಿತ್ತು. ರಾಜಕೀಯದಂತಹ ಕ್ಷೇತ್ರದಲ್ಲಿದ್ದರೂ ಬಾಲ್ಯದಿಂದಲೂ ಸಂಘದ ಸಕ್ರಿಯ ಸ್ವಯಂಸೇವಕನಾಗಿದ್ದ ಪ್ರಭಾವ ಮಾತ್ರದಿಂದ ಪ್ರಾಮಾಣಿಕತೆ ಮತ್ತು ನೈತಿಕತೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ, ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕರಾದ ಮ. ವೆಂಕಟರಾಂ, ಸಾಮರಸ್ಯ ವೇದಿಕೆಯ ರಾಜ್ಯಸಂಚಾಲಕರಾದ ವಾದಿರಾಜರು ಹಾಗೂ ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ವಿ ಶ್ರೀನಿವಾಸ ಪ್ರಸಾದರ ಅನುಯಾಯಿಗಳು ಮತ್ತು ಉಪೇಕ್ಷಿತ ಬಂಧುಗಳು ಪಾಲ್ಗೊಂಡರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಕಾರ್ಯಕ್ರಮದ ಮೊದಲು ಸಂಘದ ಪರಿಚಯದ ವಿಡಿಯೋ ಪ್ರದರ್ಶನವಿತ್ತು. ನಂತರ ಶ್ರೀ ವಾದಿರಾಜರು ಪ್ರಾಸ್ತಾವಿಕವಾಗಿ ಸಂಘದ ಬಗ್ಗೆ ಡಾ. ಅಂಬೇಡ್ಕರ್ ಅವರಿಗೆ ಇದ್ದ ಅಭಿಪ್ರಾಯ ಹಾಗು ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಸಂಘ ಮತ್ತು ಸಂಘ ಪರಿವಾರ ಮಾಡಿರುವ ಸಾಧನೆ ಮತ್ತು ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿದರು. ಹಾಗೂ ಇತರರು ಉಪಸ್ಥಿತರಿದ್ದರು.

 

ಸಂಘಕ್ಕೆ ಸಾಮರಸ್ಯ ಎನ್ನುವುದು ರಣತಂತ್ರವಲ್ಲ ಬದಲಾಗಿ ಅದೊಂದು ಬದ್ಧತೆ : ಸು. ರಾಮಣ್ಣ
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಾಮರಸ್ಯ ಎನ್ನುವುದು ರಣತಂತ್ರವಲ್ಲ ಬದಲಾಗಿ ಅದೊಂದು ಬದ್ಧತೆ ಎಂದು ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ಸು. ರಾಮಣ್ಣನವರು, ಆಯೋಜಿಸಿದ್ದ ಉಪೇಕ್ಷಿತ ಸಮಾಜದ ಗಣ್ಯರೊಡನೆ ಸ್ನೇಹ ಮಿಲನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು
ಸಂಘ ಹಿಂದೂ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಂಡಾಗ ಎರಡು ಅಂಶಗಳನ್ನು ಅದು ನಿರ್ಧರಿಸಿತ್ತು. ಅವೆಂದರೆ ಈ ದೇಶದ ಸಮಸ್ತ ಹಿಂದೂಗಳನ್ನು ಸಂಘಟಿಸುವುದು ಮತ್ತು ದೇಶದಲ್ಲಿ ತುಂಬಿರುವ ಜಾತಿ, ಮೇಲು ಕೀಳು, ಸ್ಪೃಷ್ಯಾ ಅಸ್ಪೃಸ್ಯ ಭಾವನೆಗಳೇ ಮುಂತಾದ ಹಿಂದೂಗಳ ಮನಗಳಲ್ಲಿದ್ದ ಕೊಳಕನ್ನು ತೊಡೆದು ಹಾಕುವುದೇ ಆಗಿತ್ತು. ಸಂಘ ಯಾವತ್ತೂ ಯಾರನ್ನೂ ಯಾವ ಜಾತಿ ಎಂದು ಕೇಳುವುದಿಲ್ಲ. ಸಂಘದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ ಯಾವುದೇ ಭಿನ್ನತೆ ತಾರತಮ್ಯವಿಲ್ಲ. ಇಲ್ಲಿ ತುಷ್ಟೀಕರಣ ಇಲ್ಲ. ಬದಲಾಗಿ ಸಮಾಜದಲ್ಲಿ ಒಟ್ಟಾಗಿ ಬದುಕಲು ಬೇಕಾದ, ಒಬ್ಬರಿಗೊಬ್ಬರು ನೆರವಾಗಬಲ್ಲ ಪೂರಕ ಸಬಲೀಕರಣ ವ್ಯವಸ್ಥೆ ಇಲ್ಲಿದೆ ಎಂದರು. ಮುಂದುವರೆದ ಅವರು ಮಾನವ ದೇಹದ ಹಲ್ಲು ಮತ್ತು ನಾಲಗೆ ನಡುವಣ ಇರಬಹುದಾದ ಸಾಮರಸ್ಯವೇ ಇಂದು ಸಮಾಜದ ಎಲ್ಲಾ ವಿಭಾಗಗಳಲ್ಲೂ ಉಂಟಾಗಬೇಕು. ಸಂಘ ಪ್ರಾಮಾಣಿಕವಾಗಿ ಈ ದೇಶದಲ್ಲಿ ಜಾತಿಗಳ ನಡುವಣ ತಾರತಮ್ಯವನ್ನು ಹೋಗಲಾಡಿಸಲು ಕೇವಲ ಭಾಷಣಗಳಲ್ಲಿ ಮಾತ್ರವಲ್ಲ ದಿನನಿತ್ಯದ ವ್ಯವಹಾರಗಳಲ್ಲೂ ಸಾಮರಸ್ಯದ ಅಂಶಗಳನ್ನು ಅಳವಡಿಸಿಕೊಂಡಿದೆ. ಸಂಘದ ಪ್ರಚಾರಕರುಗಳಿಗೆ ದಲಿತರ ಮನೆಯಲ್ಲಿ ಸಹ ಪಂಕ್ತಿ ಭೋಜನ ಇದೊಂದು ದಿನನಿತ್ಯದ ಅಭ್ಯಾಸವಾಗಿದ್ದು ಇದೊಂದು ಮಹತ್ವದ ಸುದ್ದಿಯೇ ಅಲ್ಲ. ಇನ್ನೊಬ್ಬರಿಗಾಗಿ ಬದುಕುವುದನ್ನೇ ಜೀವನದ ಗುರಿಯಾಗಿರಿಸಿಕೊಂಡಿರುವ ಸಾವಿರಾರು ತರುಣರು ಪ್ರಮಾಣಿಕತೆಯಿಂದ ಮತ್ತು ಪಾರದರ್ಶಕವಾಗಿ ಸಮಾಜದ ಉಪೇಕ್ಷಿತ ಬಂಧುಗಳ ಜೊತೆ ಸಮ್ಮಿಲಿತವಾಗಿದ್ದರೂ ಇನ್ನೂ ಈ ದಲಿತ ಸಮಾಜ ಕೆಲವರು ಇನ್ನೂ ಸಂಘವನ್ನು ನಂಬುತ್ತಿಲ್ಲಾ ಎನ್ನುವುದೇ ನೋವಿನ ಸಂಗತಿ. ಸಂಘವನ್ನು ಅರ್ಥಮಾಡಿಕೊಳ್ಳಲು ಸಂಘಕ್ಕೆ ಬನ್ನಿ ದೂರದಿಂದಷ್ಟೇ ನೋಡಿ ಸಂದೇಹ ಪಡಬೇಡಿ ಎಂದು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Global Economic & Political Crisis & its Implications on India : Manthana talk by Prof R Vaidyanathan

Global Economic & Political Crisis & its Implications on India : Manthana talk by Prof R Vaidyanathan

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ABKM Day-1: Press breifing by Dr Manmohan VAIDYA

ABKM Day-1: Press breifing by Dr Manmohan VAIDYA

October 13, 2011
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪರವಾಗಿ ಡಾ‌‌ ನಿರ್ಮಲಾನಂದನಾಥ ಸ್ವಾಮೀಜಿಗೆ ವಿಹಿಂಪ ಆಹ್ವಾನ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪರವಾಗಿ ಡಾ‌‌ ನಿರ್ಮಲಾನಂದನಾಥ ಸ್ವಾಮೀಜಿಗೆ ವಿಹಿಂಪ ಆಹ್ವಾನ

July 26, 2020
Full text of speech by Mohan Bhagwat at Martyr’s Memorial Research Institute, Hyderabad

Full text of speech by Mohan Bhagwat at Martyr’s Memorial Research Institute, Hyderabad

July 27, 2011
ಟಿಪ್ಪುವಿನ ದಬ್ಬಾಳಿಕೆಯಿಂದ ಮುಸಲ್ಮಾನರಾಗಿ ಮತಾಂತರಗೊಂಡಿದ್ದವರನ್ನು ಮಾತೃ ಧರ್ಮಕ್ಕೆ ತರುವ ಕಾರ್ಯದಲ್ಲಿ ತೊಡಗುವುದೇ ಸರಿಯಾದ ಟಿಪ್ಪು ಜಯಂತಿ ಆಚರಣೆ

ಟಿಪ್ಪುವಿನ ದಬ್ಬಾಳಿಕೆಯಿಂದ ಮುಸಲ್ಮಾನರಾಗಿ ಮತಾಂತರಗೊಂಡಿದ್ದವರನ್ನು ಮಾತೃ ಧರ್ಮಕ್ಕೆ ತರುವ ಕಾರ್ಯದಲ್ಲಿ ತೊಡಗುವುದೇ ಸರಿಯಾದ ಟಿಪ್ಪು ಜಯಂತಿ ಆಚರಣೆ

November 1, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In