• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಅಮೃತಕ್ಕೆ ಬೇಕಿದೆ ಗರುಡನ ರಕ್ಷಣೆ !

Vishwa Samvada Kendra by Vishwa Samvada Kendra
May 24, 2021
in Articles
250
0
ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ – ಇದು ಔದಾರ್ಯವಲ್ಲ, ಎಕನಾಮಿಕ್ಸ್!
491
SHARES
1.4k
VIEWS
Share on FacebookShare on Twitter

ಕೊರೊನಾಗೆ ಕಡೆಗೊಂದು ಔಷಧಿ ಬಂದಿದೆ.  ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೈದ್ಯವಿಜ್ಞಾನಿಗಳು (ಡಿಆರ್‌ಡಿಒ) ಕೊರೊನಾವನ್ನು ಕಟ್ಟಿಹಾಕಲು 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ)ಯನ್ನು ಕಂಡುಹಿಡಿದಿದ್ದಾರೆ. ಈ ಔಷಧವನ್ನು ಮೇ 17ರಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ.  ಈ ಔಷಧಿಯ ಅಭಿವೃದ್ಧಿಯಲ್ಲಿ ಡಿಆರ್​ಡಿಒ ಗೆ ಸಹಯೋಗ ನೀಡಿದ್ದ ಡಾ.ರೆಡ್ಡಿಸ್ ಲ್ಯಾಬ್​ ಇದನ್ನು ಮಾರುಕಟ್ಟೆಗೆ ತಂದಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಇದು ಯಶಸ್ವಿಯಾಗಿದೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿದೆ.

ಭರವಸೆ ನೀಡಬಲ್ಲ ಫಲಿತಾಂಶವನ್ನು ನೀಡಿರುವ 2ಡಿಜಿ, ಪೌಡರ್​ ರೂಪದಲ್ಲಿ ಇರಲಿದ್ದು ನೀರಿನ ಜತೆ ಬೆರೆಸಿ ಸೇವಿಸಬಹುದಾಗಿದೆ. ಸೋಂಕಿತರ ಆಕ್ಸಿಜನ್​ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ ಮತ್ತು ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗುವ ಸಾಧ್ಯತೆ ನೂರಕ್ಕೆ ನೂರರಷ್ಟು ಸಮೀಪದಲ್ಲಿದೆ. ನಮ್ಮ ದೇಶಕ್ಕೆ ಇದು ಸಂಜೀವಿನಿಯಾಗುವುದರ ಜೊತೆಗೆ ಇಡೀ ವಿಶ್ವಕ್ಕೇ ಹೊಸ ಭರವಸೆ ಮೂಡಿಸಿದೆ.  

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಸದ್ಯದ ತೀವ್ರ ಬೇಡಿಕೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಔಷಧವನ್ನು ಅತ್ಯಂತ ಶೀಘ್ರವಾಗಿ ಉತ್ಪಾದಿಸುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ ಇದು ದೇಶದ ಎಲ್ಲಾ ಮೂಲೆಗಳನ್ನು ತಲುಪುವಂತೆ ಸೂಕ್ತ ನಿಯಂತ್ರಿತ ಸರಬರಾಜು ಜಾಲವನ್ನು ಹೊಸೆಯಬೇಕಿದೆ.  ಸೋಂಕಿತರ ಕೈಗೆ ಸುಲಭವಾಗಿ ಯಾವುದೇ ರೀತಿಯ ವಿಳಂಬವಾಗದಂತೆ ತಲುಪಿಸಬೇಕಿದೆ.    ಇದೆಲ್ಲಕ್ಕಿಂತ ಅಗತ್ಯವಾಗಿ ಈ ನವ ಸಂಜೀವಿನಿಯನ್ನು ಭಾರತ ವಿರೋಧಿ ದುಷ್ಟಕೂಟಗಳಿಂದ ರಕ್ಷಿಸಬೇಕಿದೆ.

ಹೌದು ಈ ಕ್ಲಿಷ್ಟಕರ ಸಾಂಕ್ರಾಮಿಕ ಸೋಂಕಿನ ಸನ್ನಿವೇಷದಲ್ಲಿ ಅಮೃತ ಸಮವಾದ ಈ 2ಡಿಜಿ ಔಷಧಿಯನ್ನು, ಅದರ ಉಪಯುಕ್ತತೆಯನ್ನು ಹಾಗೂ ರೋಗಿಗಳಿಗೆ ತಲುಪಿಸುವ ಎಲ್ಲ ಪ್ರಯತ್ನಗಳನ್ನು ಭಂಗಗೊಳಿಸಲು ಕೆಲವರು ಕಾಯುತ್ತಿದ್ದಾರೆ. ಈಗಾಗಲೇ ಈ ದುರುದ್ದೇಶಕ್ಕಾಗಿ ಟೂಲ್‌ಕಿಟ್‌ ರೆಡಿ ಮಾಡಿಕೊಂಡು ಕೂತಿರುವ ಸಾಧ್ಯತೆಗಳೂ ಇವೆ. ಇದು ಸುಮ್ಮನೆ ತಮಾಷೆಗೋ ಅಥವಾ ಯಾವುದೋ ರಾಜಕೀಯ ವ್ಯಕ್ತಿ, ಪಕ್ಷದ ಮೇಲಿನ ದ್ವೇಷಸಾಧನೆಗೋ ಹೇಳುವ ಮಾತಲ್ಲ. ಕಳೆದೆರಡು ವರ್ಷಗಳಲ್ಲಿ ಭಾರತದ ಇಮೇಜನ್ನು ಹಾಳು ಮಾಡಲು ಶತಪ್ರಯತ್ನ ಮಾಡುತ್ತಿರುವ ಗುಂಪುಗಳ ಪ್ರಯತ್ನಗಳನ್ನು ಗಮನಿಸಿದ ಯಾರೇ ಆದರೂ ಇದೇ ನಿಲುವನ್ನು ತಳೆಯ ಬೇಕಾಗುತ್ತದೆ.

ಭಾರತದ ಒಳಗೆ ಇರುವ ತುಕ್ಡೇಗ್ಯಾಂಗಿನ ಸದಸ್ಯರು ತಮ್ಮ ದೇಶದ ವಿರುದ್ಧವೇ ಒಳಸಂಚು ರೂಪಿಸಿ ಕೊರೊನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌, ಆಪ್‌, ಕಮ್ಯುನಿಸ್ಟ್‌ ಇತ್ಯಾದಿ ರಾಜಕೀಯ ಪಕ್ಷಗಳ ಕುಮ್ಮಕ್ಕು ಬೇರೆ ಇದೆ. ದೇಶದ ಜನರ ಆರೋಗ್ಯ ರಕ್ಷಣೆಗೆಂದು ಮೋದಿ ನೇತೃತ್ವದ ಆಡಳಿತ ಹಗಲುರಾತ್ರಿ ಶ್ರಮವಹಿಸುತ್ತಿದ್ದರೆ ಇದನ್ನು ಹಾಳುಮಾಡಿ ನೀರುಪಾಲು ಮಾಡಲು ಈ ದುಷ್ಟಕೂಟ ಪ್ರಯತ್ನಿಸುತ್ತಿದೆ.

ಸುಮ್ಮನೆ ಲೆಕ್ಕ ಹಾಕಿ, ಕೊರೊನಾ ಸಮಯದಲ್ಲಿ ಇವರು ಎಬ್ಬಿಸಿಡ ರಾಡಿ ಎಷ್ಟು? ಮೊದಲ ಅಲೆಯ ಸಮಯದಲ್ಲಿ ಸಿಎಎ-ಎನ್‌ಆರ್‌ಸಿ ವಿರುದ್ಧ ಹೋರಾಟ, ವಲಸೆ ಕಾರ್ಮಿಕರನ್ನು ಭಯಗೊಳಿಸಿ ಓಡಿಸಿದ್ದು,  ಕರೊನಾ ವಾರಿಯರ್‌ಗಳ ಮೇಲೆ ಹಲ್ಲೆ ನಡೆಸಿದವರಿಗೆ ರಕ್ಷಣೆ, ರೈತಕಾಯಿದೆ ವಿರೋಧಿ ಹೋರಾಟದ ಹೆಸರಿನಲ್ಲಿ ದಂಗೆ, ಕೊರೊನಾ ಲಸಿಕೆ ವಿರುದ್ಧ ಅಪಪ್ರಚಾರ, ಮೋದಿ ಜನರನ್ನು ಬಲಿಪಶು ಮಾಡುತ್ತಿದ್ದಾರೆಂಬ ಹೇಳಿಕೆಗಳು – ಇವೆಲ್ಲವೂ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ದೇಶದ ಆಡಳಿತವನ್ನು ದುರ್ಬಲಗೊಳಿಸುವ ಪ್ರಯತ್ನಗಳೇ.

ಕಳೆದ ಮಾರ್ಚ್‌ ನಂತರದ ಎರಡನೆ ಅಲೆಯ ಸಮಯದಲ್ಲಿಯೂ ಇವರ ಧ್ವಂಸಕಾರ್ಯ ಇನ್ನಷ್ಟು ಉಲ್ಪಣಿಸಿತು. ಸುಡುವ ಹೆಣಗಳನ್ನು ತೋರಿಸಿ ಜಗತ್ತಿನಲ್ಲಿ ದೇಶದ ಮಾನ ಕಳೆಯುವುದರ ಜೊತೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೊರೊನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿ ಜನರಲ್ಲಿ ಭಯವನ್ನು ಮೂಡಿಸುವಲ್ಲಿ ಬಹುಪಾಲು ಸಫಲರಾದರು. ಲಸಿಕೆ ತಯಾರಿಕೆಗೂ ನೂರಾರು ಅಡ್ಡಿಗಳನ್ನೇರ್ಪಡಿಲು ಯತಿಸಿದರು. ಆಕ್ಸಿಜನ್‌ ಕಂಟೈನರ್ ಹೊತ್ತ ರೈಲು ಪಯಣಿಸುವ ಹಳಿಗಳನ್ನು ಕಿತ್ತರು.

ಕೃತಕವಾಗಿ ಆಕ್ಸಿಜನ್‌ ಕೊರತೆ, ಬೆಡ್‌ಗಳ ಕೊರತೆ, ರೆಮಿಡಿಸಿವಿಯರ್‌ ಚುಚ್ಚುಮದ್ದಿನ ಕೊರತೆ, ವೆಂಟಿಲೇಟರ್‌ಗಳ ಕೊರತೆ ಆಗುವಂತೆ ಮಾಡಿದ್ದೇ ಈ ದೇಶವಿರೋಧಿ ಕೂಟಗಳು. ದೇಶವನ್ನು ಬಹುಕಾಲ ಆಳಿದ್ದ ಪಕ್ಷದ ಜೊತೆಗೆ ಈಗ  ದೆಹಲಿ, ಮಹಾರಾಷ್ಟ್ರಗಳಲ್ಲಿ ಆಡಳಿತ ನಡೆಸುತ್ತಿದ್ದ ಪಕ್ಷಗಳ ಸದಸ್ಯರೇ ಇವುಗಳಲ್ಲಿ ಪಾಲ್ಗೊಂಡಿದ್ದು ನೋಡಿದರೆ  ಇವರ ವಿಚಾರ, ಕಾರ್ಯದ ಕುರಿತು ಹೇಸಿಗೆಯೆನಿಸುತ್ತದೆ.

ಈ ಹಿಂದಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೀವ್ರವಾಗಿ ಇವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಬೇಕು. ಈಗ ಅಮೃತೋಪಸಮವಾಗಿ ಬಂದಿರುವ ಹೊಸ ಔಧಿಯೂ ಈ ದುಷ್ಟರ ಜಾಲಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸ ಬೇಕಿದೆ.

ತನ್ನ ತಾಯಿಯ ಬಂಧ ವಿಮೋಚನೆಗೆಂದು ದೇವಲೋಕಕ್ಕೆ ಹಾರಿ ಅಮೃತಕಳಸ ಹೊತ್ತುತಂದ ಪಕ್ಷಿರಾಜ ಗರುಡನು ಅದು ದುಷ್ಟನಾಗಗಳ ಕೈಗೆ ಸಿಗದಂತೆ ಹೇಗೆ ಜೋಪಾನ ಮಾಡಿ ಸಂರಕ್ಷಿಸಿದನೋ ಹಾಗೆಯೇ 2ಡಿಜಿ ಔಷಧಿಯ ರಕ್ಷಣೆಗೂ ಬಲಶಾಲಿಯಾದ ಗರುಡನ ರಕ್ಷಣೆಯನ್ನೇರ್ಪಡಿಸಬೇಕಿದೆ. ಅಪಪ್ರಚಾರ, ಅಕ್ರಮ ದಾಸ್ತಾನು ಇತ್ಯಾದಿಗಳ ಮೂಲಕ ಮತ್ತೆ ಇದರ ತಂಟೆಗೆ ಬರಲೆತ್ನಿಸುವ ವಿಷಸರ್ಪಗಳನ್ನು ವೈನತೇಯ ಆಪೋಷಣ ತೆಗೆದುಕೊಳ್ಳಬೇಕಿದೆ.

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಬಂಗಾಳದ ಪ್ರಭುತ್ವ ಪ್ರಾಯೋಜಿತ ಹಿಂಸೆ

ಬಂಗಾಳ ಹಿಂಸಾಚಾರ: ಮುಖ್ಯ ನ್ಯಾಯಮೂರ್ತಿಗಳು ತಕ್ಷಣ ಗಮನ ಹರಿಸಬೇಕೆಂದು ೨೦೦೦ ಮಹಿಳಾ ವಕೀಲರ ಆಗ್ರಹ.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

“ಜಾಗೃತ ಗ್ರಾಹಕ, ಸಮರ್ಥ ಭಾರತ”

“ಜಾಗೃತ ಗ್ರಾಹಕ, ಸಮರ್ಥ ಭಾರತ”

January 3, 2022
ಕಡ್ಡಾಯ ಶಿಕ್ಷಣ ಕಾಯ್ದೆ : ಅಲ್ಪಸಂಖ್ಯಾತ ಸಂಸ್ಥೆಗಳಿಗೆ ವಿನಾಯಿತಿ! ಅಲ್ಪಸಂಖ್ಯಾತ ಶಾಲೆಗಳಿಗೆ  ಬಡವರ ಮಕ್ಕಳು ಬೇಕಿಲ್ಲವೆ?

ಕಡ್ಡಾಯ ಶಿಕ್ಷಣ ಕಾಯ್ದೆ : ಅಲ್ಪಸಂಖ್ಯಾತ ಸಂಸ್ಥೆಗಳಿಗೆ ವಿನಾಯಿತಿ! ಅಲ್ಪಸಂಖ್ಯಾತ ಶಾಲೆಗಳಿಗೆ ಬಡವರ ಮಕ್ಕಳು ಬೇಕಿಲ್ಲವೆ?

May 1, 2012

NEWS IN BRIEF – OCT 31, 2011

October 31, 2011

ನೇರನೋಟ: ಭಗತ್‌ಸಿಂಗ್‌ಗೆ ‘ಹುತಾತ್ಮ’ ಎನ್ನುವುದಕ್ಕೂ ನಮ್ಮ ಸರ್ಕಾರಕ್ಕೆ ಮನಸ್ಸಿಲ್ಲ!

August 28, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In