• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಅಯೋಧ್ಯೆಯ ನೂತನ ರಸ್ತೆಗಳಿಗೆ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದ ಯುಪಿ ಸರ್ಕಾರ

Vishwa Samvada Kendra by Vishwa Samvada Kendra
April 8, 2021
in Others
250
0
ಅಯೋಧ್ಯೆಯ ನೂತನ ರಸ್ತೆಗಳಿಗೆ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದ ಯುಪಿ ಸರ್ಕಾರ
491
SHARES
1.4k
VIEWS
Share on FacebookShare on Twitter

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆಗಳಿಗೆ ಶ್ರೀ ರಾಮಜನ್ಮಭೂಮಿ.ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದ ರಾಮ್ ಕುಮಾರ ಕೊಠಾರಿ ಮತ್ತು ಶರದ್ ಕುಮಾರ್ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದೆ.

1990ರಲ್ಲಿ ನಡೆದ 2ನೇ ಹಂತದ ಕರಸೇವೆಯಲ್ಲಿ  ಕೊಠಾರಿ ಸಹೋದರರು ವಿವಾದಗ್ರಸ್ಥ ಕಟ್ಟಡದ ಗುಂಬಜ್ ಮೇಲೆ ಭಗವಾಧ್ವಜವನ್ನು ಹಾರಿಸಿದ್ದರು. ಅತ್ಯಂತ ಕರಸೇವಕರ ಮೇಲೆ ಅಮಾನುಷವಾಗಿ ನಡೆದುಕೊಂಡ ಮುಲಾಯಂ ಸಿಂಗ್ ಸರ್ಕಾರದ ಪೊಲೀಸರು ಕೊಠಾರಿ ಸಹೋದರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ಈ ಕುರಿತು ಬೆಂಗಳೂರಿನ ಆಚಾರ್ಯ ಇನ್ ಸ್ಟಿಟ್ಯೂಟ್ ನ ಅಸಿಸ್ಟೆಂಟ್ ಪ್ರೊಫೇಸರ್ ಪವನ್ ಚೌತಾಯಿ ಅವರು ರಾಮಮಂದಿರದ ಶಿಲಾನ್ಯಾಸ ಸಂದರ್ಭದಲ್ಲಿ ಬರೆದ ಬರಹವನ್ನು ಇಲ್ಲಿ ನೀಡಲಾಗಿದೆ.

ಇದೆಂತಹಾ ಸಂದರ್ಭ, ಸುಧೀರ್ಘ ಹೋರಾಟದ ನಂತರ ಇದೀಗ ಭಾರತದ ಕುಲದೀಪನ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ.

ಈ ದಿನಕ್ಕೆ ಅದೆಷ್ಟು ಜನರ ನಿರಂತರ ಹೋರಾಟದ, ತ್ಯಾಗದ ಮತ್ತು ಬಲಿದಾನದ ಅರ್ಪಣೆಗಳಿದೆ ಎಂದರೆ, ಆ ಒಬ್ಬೂಬ್ಬ ಮಹಾತ್ಮನ ಪ್ರಾಣ ಒಂದೊಂದು ಅಡಿಗಲ್ಲಾಗಿ ರಾಮಮಂದಿರವನ್ನ ಕಟ್ಪಲಿವೆ.

ಈ ಹರುಷದ ಸಮಯದಲ್ಲಿ ನಾವು ಆ ಕರಸೇವಕರ ತ್ಯಾಗವನ್ನು ಮರೆಯದಿರೋಣ.

ಅದು ಅಕ್ಟೋಬರ್ 23, 1990 ಬಿಹಾರದಲ್ಲಿ ರಥಯಾತ್ರೆ ನಿಲ್ಲಿಸಿ ಅಡ್ವಾಣಿ ಜೀ ಯವರನ್ನು ಬಂಧಿಸಿಯಾಗಿತ್ತು.

ಅದಕ್ಕಿಂತ ಒಂದು ದಿನದ ಮುಂಚೆ ಬಂಗಾಳದ ಸಿಂಹ ಹೃದಯದ ಸಹೋದರರಿಬ್ಬರು ರಾಮ ಮಂದಿರ ಕಟ್ಟಿಯೇ ಬರುವುದಾಗಿ, ಹಸೆಮಣೆ ಏರಲಿದ್ದ ಮುದ್ದು ತಂಗಿ ಪೂರ್ಣಿಮಾಳಿಗೆ ಮಾತು ಕೊಟ್ಟು, ಒಲ್ಲದ ಮನಸಿನ ಅಪ್ಪನ ಅನುಮತಿ ಪಡೆದು ಹೊರಟರು.

ತೀವ್ರ ನಿರ್ಬಂಧಗಳ ನಡುವೆ ವಾರಾಣಸಿ ತಲುಪಿ ಅಲ್ಲಿಂದ 200 ಕಿಲೋಮೀಟರ್ ನಡೆದು ಅಯೋಧ್ಯೆ ತಲುಪಿದವರ ನಾಲಿಗೆಯಲ್ಲಿ ರಾಮನಾಮ, ಹೃದಯದಲ್ಲಿ ರಾಮ ಮಂದಿರದ ಸಂಕಲ್ಪ.

ಯಾವಾಗ ರಥಯಾತ್ರೆ ತಡೆದು ಅಡ್ವಾಣಿ ಜೀ ಅವರ ಬಂಧನವಾಯಿತೋ, ಯಾವಾಗ “ವಹಾ ಪರಿಂದಾಭೀ ಪಾರ್ ನಹೀ ಮಾರೇಗ” “ಅಲ್ಲಿ ಒಂದು ಹಕ್ಕಿಯನ್ನೂ ಹಾರಲಿಕ್ಕೆ ಬಿಡಲ್ಲ” ಎಂಬ ಮಾತು ಅಂದಿನ ಉ.ಪ್ರ. ಮುಖ್ಯಮಂತ್ರಿ ಗಳಿಂದ ಕೇಳಿಬರತ್ತೋ, ಕೆರಳಿಹೋಗ್ತಾರೆ ಈ ಸಹೋದರರು. ಅಲ್ಲಿಂದ ಮುಂದೆ ನಡೆದದ್ದೇ ಒಂದು ರೋಚಕ ಘಟನೆ.

ಮಾರನೇ ದಿನ ಬೆಳಿಗ್ಗೆ ಸುಮಾರು ನೂರು ಜನ ಕರಸೇವಕರನ್ನ ಒಗ್ಗೂಡಿಸಿಕೊಂಡು ವಿವಾದಿತ ಸ್ಥಳ ತಲುಪೇ ಬಿಡ್ತಾರೆ. ಪ್ರಾಣದ ಹಂಗು ತೊರೆದು ಆ ಜಾಗದ ತುತ್ತತುದಿಗೇರಿದವರ ಕೈಯಲ್ಲಿ ಸರ್ಕಾರಕ್ಕೆ ಕಟು ಎಚ್ಚರಿಕೆ ಕೊಡುವಂತೆ ಅಖಂಡ ಹಿಂದೂ ಸಾಮ್ರಾಜ್ಯದ ಲಾಂಛನದ ಭಗವಧ್ವಜ.

ಜೈ ಶ್ರೀ ರಾಮ್ ಅಂತ ಇನ್ನೇನು ಧ್ವಜವನ್ನ ಗೋಪುರದಲ್ಲಿ ನೆಡಬೇಕು, ಅಷ್ಟರಲ್ಲಿ ಧ್ವಜವನ್ನ ಹಿಡಿದ ಅಣ್ಣನ ಎದೆಯಿಂದ ರಕ್ತ ಧಾರಾಕಾರವಾಗಿ ಹರಿದು ಬರೋಕೆ ಶುರುವಾಗುತ್ತೆ. ಪೋಲೀಸರ ಗುಂಡು ನೇರವಾಗಿ ಅವನ ಎದೆಯಲ್ಲಿ.

ರಕ್ತ ಬಸಿದು ನೋವಿನಿಂದ ಇನ್ನೇನು ಕೆಳಗೆ ಬೀಳಬೇಕು ಅಷ್ಟರಲ್ಲಿ ಒಂದು ಮೆಟ್ಟಿಲು ಕೆಳಗೆ ನಿಂತಿದ್ದ ತಮ್ಮ “ಯಾವಕಾರಣಕ್ಕೂ ಧ್ವಜವನ್ನ ನೆಲಕ್ಕಿಡಬೇಡ” ಅಂತ ಕೂಗಿಹೇಳ್ತಾನೆ. ಅಷ್ಟರಲ್ಲಿ ತಮ್ಮನಿಗೂ ಗುಂಡು ಬೀಳುತ್ತೆ.

ಭಗವಧ್ವಜವನ್ನು ಗೋಪುರದ ಮೇಲೆ ನಿಲ್ಲಿಸಿಯೇ ಸೋದರರಿಬ್ಬರೂ ಕೆಳಕ್ಕುರುಳುತ್ತಾರೆ. ಅವರ ಧೀರತೆಯನ್ನು ಕಂಡು ಆಗಿನ ಸರ್ಕಾರ ನಡುಗಿಹೋಗತ್ತೆ.

ಪೋಲೀಸರ ಗುಂಡಿಗೆ ಅಂದು 16 ಜನ ಕರಸೇವಕರು ಹುತಾತ್ಮರಾದರು, ಪ್ರತಿಯೋಬ್ಬರ

ನಾಲಿಗಯೂ ಕೊನೆಯದಾಗಿ ನುಡಿದದ್ದು ರಾಮ ನಾಮ,

ಕಣ್ಣಲ್ಲಿ ತುಂಬಿದ್ದು ರಾಮ ಮಂದಿರದ ಕನಸು,

ಹೃದಯದಲಿ ನಿಂತಿದ್ದು ರಾಮ ಮಂದಿರದ ಸಂಕಲ್ಪ.

ಆ ವೀರ ಸೋದರರೇ ಬಂಗಾಳದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ.

ಇಂಥಾ ಅಸಂಖ್ಯ ಕರಸೇವಕರ ತ್ಯಾಗ ಬಲಿದಾನಗಳನ್ನ ನಾವು ಮರೆಯದಿರೋಣ. ಆ ಮಹಾತ್ಮರ ಪಾದಗಳಿಗೆ ನಮ್ಮದೊಂದು ಶಿರಸಾಷ್ಠಾಂಗ ನಮನಗಳಿರಲಿ.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ|

ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಾಮ:||

ಜೈ ಶ್ರೀ ರಾಮ್

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ಕಾಶಿಯ ಜ್ಞಾನವಾಪಿ ಮಸೀದಿಯ ಎಎಸ್ಐ  ಸರ್ವೇ ನಡೆಸುವಂತೆ ನ್ಯಾಯಾಲಯ ಆದೇಶ.

ಕಾಶಿಯ ಜ್ಞಾನವಾಪಿ ಮಸೀದಿಯ ಎಎಸ್ಐ ಸರ್ವೇ ನಡೆಸುವಂತೆ ನ್ಯಾಯಾಲಯ ಆದೇಶ.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

St. Thomas in India: True or False? – N.S. Rajaram

August 25, 2019
RSS strongly condemns Mumbai terror attacks, says Dr Manmohan Vaidya in Bangalore

RSS strongly condemns Mumbai terror attacks, says Dr Manmohan Vaidya in Bangalore

July 13, 2011
Uttarakhand Calamity: Thousands of devotees affected; RSS, VHP keen on rescue/relief works

Uttarakhand Calamity: Thousands of devotees affected; RSS, VHP keen on rescue/relief works

June 26, 2013
Students performed GURU VANDANA a pre-fair event for Hindu Spiritual and Service Fair-2016 at Bengaluru

Students performed GURU VANDANA a pre-fair event for Hindu Spiritual and Service Fair-2016 at Bengaluru

December 8, 2016

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In