• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ

Vishwa Samvada Kendra by Vishwa Samvada Kendra
August 20, 2020
in News Digest
250
0
ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ
491
SHARES
1.4k
VIEWS
Share on FacebookShare on Twitter

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ

ನಾರಾಯಣಗುರು ( ೨೦ . ೮ . ೧೮೫೪ –  ೨೮ . ೯ . ೧೯೨೮ )
ಕೇರಳದ  ತಿರುವನಂತಪುರದಿಂದ  ಸುಮಾರು ಹತ್ತು ಮೈಲಿಯಾಚೆ ಚೆಂಪುಜಂತಿ ಎಂಬ ಗ್ರಾಮದಲ್ಲಿ ‘ಮದನ್ ಆಸನ್,’ ಹಾಗೂ ‘ಕುಟ್ಟಿ ಅಮ್ಮಾಳ್,’ ಎಂಬ ದಂಪತಿಗಳ ನಾಲ್ಕು ಮಕ್ಕಳಲ್ಲಿ ನಾರಾಯಣ್ ಒಬ್ಬನೇ ಗಂಡು ಮಗು. ಇವನನ್ನು ನಾಣು ಅಂತಲೇ ಎಲ್ಲರೂ ಸಂಬೋಧಿಸುತ್ತಿದ್ದುದು. ನಾಣು ತೋರಿಕೆಗೆ ತುಂಬ ತುಂಟನಾಗಿ ಕಂಡರೂ ಅನೇಕ ವೇಳೆ ಅವನು ಯೋಗಿಗಳಂತೆ ನಿರ್ಲಿಪ್ತನಾಗಿ ಗಂಭೀರವಾಗಿ ಇರುತ್ತಿದ್ದನು. ಒಮ್ಮೆ ನಾಣು ಇತರ ಬಾಲಕರೊಂದಿಗೆ ಶಾಲೆಯಿಂದ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಸಂನ್ಯಾಸಿಯೊಬ್ಬ ಎದುರಾದ. ಸಂನ್ಯಾಸಿಯ ಕಾವಿ ಬಟ್ಟೆ, ಗಡ್ಡದ ಬಗ್ಗೆ, ಅಪಹಾಸ್ಯ ಮಾಡುತ್ತಿದ್ದ ನಾಣುವಿನ ಸ್ನೇಹಿತರು ಕೊನೆಗೆ ಸಂನ್ಯಾಸಿಯತ್ತ ಕಲ್ಲು ತೂರಲಾರಂಭಿಸಿದರು. ನಾಣು ಇದನ್ನು ಕಂಡು ಬಹಳ ಬೇಸರಗೊಂಡು ತನ್ನ ಸ್ನೇಹಿತರಿಗೆ ಹಾಗೆಲ್ಲ ಮಾಡಬಾರದೆಂದು ಎಷ್ಟು ತಿಳಿಹೇಳಿದರೂ ಯಾರೂ ಇವನ ಮಾತು ಕೇಳಲಿಲ್ಲ. ಆಗಲೇ ಜೋರಾಗಿ ಅತ್ತು ತನ್ನ ದುಃಖವನ್ನು ತೋಡಿಕೊಂಡ ನಾಣುವನ್ನು ನೋಡಿ ಸ್ನೇಹಿತರು ಸಂನ್ಯಾಸಿಯ ಅವಹೇಳನ ನಿಲ್ಲಿಸಿ ಮುಂದೆ ನಡೆದರು. ಇದು ಆ ಪುಟ್ಟ ಬಾಲಕ ನಾಣುವಿನಲ್ಲಿ ಇದ್ದ ಭಕ್ತಿ ಶ್ರದ್ಧೆಯ ನಿದರ್ಶನ.
ಕೇರಳದಲ್ಲಿದ್ದ ಜಾತಿಗಳನ್ನು ಪ್ರಮುಖವಾಗಿ ಬ್ರಾಹ್ಮಣ, ನಾಯರ್, ಈಳವ, ಹರಿಜನ, ಗಿರಿಜನ ಎಂದು ವಿಂಗಡಿಸಬಹುದು. ಮೊದಮೊದಲು ನಾಯರ್ ಮತ್ತು ಈಳವ ಜಾತಿಗಳು ಸರಿಸಮಾನ ಎಂದು ಪರಿಗಣಿಸಲ್ಪಡುತ್ತಿದ್ದಾದರೂ ನಂತರದ ದಿನಗಳಲ್ಲಿ ನಾಯರ್ ಮೇಲ್ಜಾತಿ, ಈಳವ ಕೀಳುಜಾತಿ ಎಂಬ ರೂಢಿಗಳು ಬರಲಾರಂಭಿಸಿತು. ತಥಾಕಥಿತ ಕೀಳು ಜಾತಿಯಾದ ಈಳವದಲ್ಲಿಯೇ ನಾರಾಯಣ ಗುರು ಜನಿಸಿದ್ದು. ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿ ಶ್ರೀ ನಾಯಾರಣ ಗುರುಗಳ ಸಾಧನೆ ಗಮನಾರ್ಹ. ಜಾತಿ ಪದ್ಧತಿ, ಅಸ್ಪೃಶ್ಯತೆಗಳ ಬಗ್ಗೆ ಒಂದು ಕಡೆ; ಮದ್ಯಪಾನ, ಪ್ರಾಣಿವಧೆ, ಭೂತಾರಾಧನೆ ಮುಂತಾದ ಪಿಡುಗುಗಳ ಬಗ್ಗೆಯೂ ಸಮರ ನಡೆಸಿ ಪ್ರಸಿದ್ಧರಾದವರು ನಾರಾಯಣ ಗುರುಗಳು.
 
ಕೋಜಿಕೋಡ್, ಪಾಲ್ಘಾಟ್, ಕಣ್ಣಾನೂರು, ತಮಿಳು ನಾಡಿನ ಹಲವೆಡೆಗಳಲ್ಲಿ, ಕರ್ನಾಟಕದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ನಿರ್ಮಿಸಿದ ನಾರಾಯಣಗುರುಗಳಿಗೆ ಎಲ್ಲಡೆಯಲ್ಲಿಯೂ ಮನ್ನಣೆ ದೊರೆಯುತ್ತಲೇ ಇತ್ತು. ತಮ್ಮನ್ನು ಹಿಂಬಾಲಿಸುವ ಶಿಷ್ಯವರ್ಗವೂ ಇತ್ತು. ಹೀಗೆ ಸದಾ ಸಂಚಾರದಲ್ಲಿದ್ದಾಗ ಒಮ್ಮೆ ಕೊಚ್ಚಿಯ ಆಳ್ವಾಯಿ ನದಿಯ ತೀರಕ್ಕೆ ಬಂದರು. ಸುತ್ತಲೂ ಹಸಿರು ಗದ್ದೆಗಳು, ಗುಡ್ಡಗಳನ್ನು ಒಳಗೊಂಡ ಮನೋಹರವಾದ ಪ್ರದೇಶದಲ್ಲಿ ತಮ್ಮ ಶಿಷ್ಯರ ಸಹಾಯದಿಂದ ಇಲ್ಲೊಂದು ಆಶ್ರಮವನ್ನು  ನಿರ್ಮಿಸಿ ಅದ್ವೈತಾಶ್ರಮ ಎಂದು ಹೆಸರಿಟ್ಟರು.
 
 ೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, ‘ಮಿಶ್ರ ಭೋಜನ,’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು.  ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದವರು ಶ್ರೀ ನಾರಾಯಣ ಗುರುಗಳು. ಕೆಲವರು ಎಲ್ಲ ಸಮಸ್ಯೆಗಳಿಗೂ ಮತಾಂತರವೇ ಮದ್ದು ಎಂದು ಸಾರುತ್ತಿರಬೇಕಾದರೆ ನಾರಾಯಣಗುರುಗಳು ಮತಾಂತರಕ್ಕೆ ಸರ್ವಥಾ ಒಪ್ಪದೇ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕೆಂಬ ದಿವ್ಯ ಕರೆ ಇತ್ತವರು . ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಪ್ರಸ್ತುತ. ” ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ” ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ವಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಸಾರಿದವರು  ಶ್ರೀ ನಾರಾಯಣ ಗುರುಗಳು.
 
ಆಳ್ವಾಯಿಯಲ್ಲಿ, ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ ‘ಸರ್ವಧರ್ಮಗಳ ಸಮ್ಮೇಳನ,’ ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ ‘ಬ್ರಹ್ಮ ವಿದ್ಯಾಲಯ,‘ ವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು.
 
ರಾಷ್ಟ್ರೋತ್ಥಾನ ಸಾಹಿತ್ಯದವರು ಹೊರತಂದಿರುವ ಬಾರತ ಭಾರತಿ ಮಾಲಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಪುಸ್ತಕ
  • email
  • facebook
  • twitter
  • google+
  • WhatsApp
Tags: #SantNarayanGuruJayantiNaarayaGuru

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
My BHARAT: 15-day Statewide Online Youth Campaign to commence from August 1, 2020 #MyBharat

Day15: Walking in the same direction without differences results in a strong vibrant Bharat #MyBharat

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

UDUPI

UDUPI

December 25, 2010
RSS Swawayamsevaks volunteered during the reputed Rath Yatra of Sri Jagannath at Puri, Odisha

RSS Swawayamsevaks volunteered during the reputed Rath Yatra of Sri Jagannath at Puri, Odisha

July 7, 2016
‘Know About RSS’ – authored by Arun Anand; A new book launched at New Delhi

‘Know About RSS’ – authored by Arun Anand; A new book launched at New Delhi

December 25, 2015
RSS not to interfere leadership change issue of the Karnataka govt

RSS not to interfere leadership change issue of the Karnataka govt

July 26, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In