• Samvada
  • Videos
  • Categories
  • Events
  • About Us
  • Contact Us
Thursday, March 30, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಎಬಿಪಿಎಸ್ ಆಶಯದ ಹಿನ್ನೆಲೆಯಲ್ಲಿ ಸಾಮಾಜಿಕ ಪರಿವರ್ತನೆಯ ವೈಚಾರಿಕ ನೆಲೆಗಳು

Vishwa Samvada Kendra by Vishwa Samvada Kendra
March 22, 2021
in Articles
250
0
ಆರ್.‌ಎಸ್.‌ಎಸ್. ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ?
491
SHARES
1.4k
VIEWS
Share on FacebookShare on Twitter

ಶ್ರೀ. ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ರಾಸ್ವಸಂದ) ಸರಕಾರ್ಯವಾಹರಾಗಿ ಚುನಾಯಿತರಾಗಿದ್ದಾರೆ.  ಸರಕಾರ್ಯವಾಹರೆಂದರೆ ಪ್ರಧಾನ ಕಾರ್ಯದರ್ಶಿ ಎನ್ನಬಹುದು. ಈ ಜವಾಬ್ದಾರಿಯು ಕಾರ್ಯತತ್ಪರ ಮುಖ್ಯಸ್ಥರ ಮಟ್ಟದ್ದಾಗಿದೆ.  ಸರಸಂಘಚಾಲಕರ ನೇತೃತ್ವ-ಮಾರ್ಗದರ್ಶನಗಳಲ್ಲಿ ಈ ಜವಾಬ್ದಾರಿಯುನ್ನು ನಿರ್ವಹಿಸಲಾಗುತ್ತದೆ.  ನೂತನ ಜವಾಬ್ದಾರಿ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ (ಅಭಾಪ್ರಸ ಅಥವಾ ಎಬಿಪಿಎಸ್) 2021ರ ಸಾಲಿನ ನಿರ್ಣಯಗಳೆರಡನ್ನೂ ವಿವರಿಸಿದ ನಂತರ, ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯು “ಕಾರ್ಯವಿಸ್ತರಣೆ, ಸಾಮಾಜಿಕ ಪರಿವರ್ತನೆ, ಮತ್ತು ವೈಚಾರಿಕ ಪರಿವರ್ತನೆ” ಗಳೆಂಬ ಮೂರು ದಿಕ್ಸೂಚೀ ಅಂಶಗಳ ಆಧಾರದ ಮೇಲೆ ನಡೆಯಲಿದೆ ಎಂದು ಹೇಳಿದರು. ಎಬಿಪಿಎಸ್ ಸಭೆಗೆ ನಡೆಸುವ ವ್ಯವಸ್ಥಿತ ಸಿದ್ಧತೆಗಳನ್ನೂ, ಸಂಘಕ್ಕೆ ತನ್ನ ಗುರಿಯಲ್ಲಿರುವ ಸ್ಪಷ್ಟತೆಯನ್ನೂ ಈ ನಿರೂಪಣೆಯು ಸೂಚಿಸಿತು. 

ಮುಂದಿನ ಮೂರು ವರ್ಷಗಳಲ್ಲಿ ಕಾರ್ಯವಿಸ್ತರಣೆ ಎಂದರೆ, ಮಂಡಲ (ಸ್ಥಳೀಯ ಆಡಳಿತ ಅನ್ವಯಿಸುವ ಪ್ರದೇಶ)ದ ವರೆಗೆ ಸಂಘದ ಕಾರ್ಯ ಮತ್ತು ಅಸ್ತಿತ್ವವನ್ನು ವಿಸ್ತರಿಸುವುದು.   ಹಾಗೆಯೇ ಸಾಮಾಜಿಕ ಪರಿವರ್ತನೆ ಎಂದರೆ, ಕುಟುಂಬ, ಪರಿಸರ, ಸಾಮರಸ್ಯ, ಗ್ರಾಮವಿಕಾಸ ಮತ್ತಿತರ ಸಾಮಾಜಿಕ ಸ್ತರಗಳಲ್ಲಿ ನಡೆಯುವ / ನಡೆಸಬೇಕಾದ ಕಾರ್ಯಗಳು ಮತ್ತು ಗುಣಾತ್ಮಕವಾಗಿ ತಲುಪಬೇಕಾದ ಗುರಿಗಳು ಎನ್ನಬಹುದು. ಸಾಮಾಜಿಕ ಪರಿವರ್ತನೆ ಸಂಘದ ಒಂದು ಹಳೆಯ ಕಾರ್ಯಕ್ರಮವಾಗಿದೆ. ಈ ಪರಿವರ್ತನೆಯು ಸಾಮರಸ್ಯದ ನೆಲೆಯಲ್ಲಿ ನಡೆಯುತ್ತಿತ್ತು.  ಇತ್ತೀಚೆಗೆ, ಪರಿಸರ, ಸ್ವಾಸ್ಥ್ಯ ಕುಟುಂಬಗಳ ಆಯಾಮಗಳನ್ನೂ ಸಹ ಸೇರಿಸಿಕೊಂಡಿದೆ. ಕೊನೆಯದಾದ ವೈಚಾರಿಕ ಪರಿವರ್ತನೆಯು ಭಾರತ ಕೇಂದ್ರಿತ ಮಾಹಿತಿಗಳನ್ನು ಜನರಿಗೆ ತಲುಪಿಸುವ ಮತ್ತು ಭಾರತವು ನೀಡುತ್ತಲೇ ಬಂದಿರುವ ಸಂದೇಶಗಳು (ವೈಯುಕ್ತಿಕತೆಯ ಸಾರ್ಥಕ್ಯದ ಮತ್ತು ಜಗತ್ತಿನ ಹಿತದ ಸಂದೇಶಗಳು) ಅವರ ಮನದೊಳಗೆ ಇಳಿಯುವಂತೆ ಮಾಡುವ ಕ್ರಿಯಾಯೋಜನೆ ಆಗಿರುತ್ತದೆ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

 ಈ ಮೂರೂ ದಿಕ್ಸೂಚೀ ಅಂಶಗಳು ಸಂಘಕ್ಕೆ ಹೊಸದಲ್ಲ.  ಆದರೂ, ಇವುಗಳ ತಾತ್ವಿಕ-ವ್ಯಾವಹಾರಿಕ ವಿವರಗಳೆಲ್ಲವೂ ಪ್ರಸ್ತುತ ಕಾಲಘಟ್ಟದಲ್ಲಿ ಸಿದ್ದರೂಪದಲ್ಲಿ ಲಭ್ಯ ಎಂದು ಹೇಳಲಾಗದು. ಕಳೆದ 96 ವರ್ಷಗಳಲ್ಲಿ ಸಂಘದ ಕಾರ್ಯವಿಸ್ತರಣೆ ಪರಿಣಾಮಕಾರಿಯಾಗಿ ಆಗಿದೆ. ಕಾರ್ಯವಿಸ್ತರಣೆ ಆದಂತೆ, ಹಿಂದೂ ಸಂಘಟನೆಯ ಸಾಮಾಜಿಕ ಹಾಗೂ ವೈಚಾರಿಕ ಪರಿವರ್ತನೆಯ ಸಂದೇಶ ಮತ್ತು ಕಾರ್ಯಯೋಜನೆಗಳ ಪ್ರಭಾವ ಹೆಚ್ಚಾಗುತ್ತಿವೆ.  ಸಾಮಾಜಿಕ ನಿಲುವುಗಳ ಮೂಲಕ ಮತ್ತು ಮತ್ತು ವೈಚಾರಿಕ ಸ್ಪಷ್ಟತೆಯಿಂದ ಸಂಘಟನೆಯ ಬಲವರ್ಧನೆ ಆಗಿರುವುದೂ ಸಹ ಸಂಘದ ಅನುಭವಕ್ಕೆ ಹಲವಾರು ಬಾರಿ ಬಂದಿದೆ.  ಅಂದರೆ, ಈ ಮೂರೂ ದಿಕ್ಸೂಚೀ ಅಂಶಗಳಲ್ಲಿ ಯಾವುದೇ ಒಂದು ಅಂಶದ ಆಧಾರದ ಮೇಲೆ ಮಾಡಲಾದ ಯೋಜನೆಯ ಫಲ ಮೂರೂ ದಿಕ್ಕುಗಳಲ್ಲೂ ಆಗುತ್ತಿದೆ ಎಂದು ಪರಿಗಣಿಸಿದರೆ ತಪ್ಪಾಗಲಾರದು.  ಆದರೆ, ಕೇವಲ ಸಂಘದ ನಿರ್ಧಾರಗಳ ಮೇಲೆಯೇ ಈ ಮೂರೂ ದಿಕ್ಸೂಚೀ ಯೋಜನೆಗಳ ಯಶಸ್ಸು ನಿಂತಿಲ್ಲ. ಏಕೆಂದರೆ, ಬಾಹ್ಯ ಮತ್ತು ವಿದೇಶೀ ಶಕ್ತಿಗಳು ತಾವಾಗಿಯೇ ಅಥವಾ ಆಂತರಿಕವಾದ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ತಮ್ಮದೇ ಆದ ಪ್ರಭಾವವನ್ನು ಬೀರುತ್ತಲೇ ಇವೆ. ಸಂಘದ ಕಾರ್ಯಗತಿಯ ಮೇಲೆ ಪ್ರತಿಕೂಲ ವಾತಾವರಣವನ್ನು ನಿರ್ಮಿಸುವ ಸಾಮರ್ಥ್ಯಹೊಂದಿವೆ.  ಪ್ರಚಲಿತ ವಿದ್ಯಮಾನಗಳಲ್ಲಿ ಭಾರತೀಯ ಸಂದೇಶವನ್ನು ಮಸುಕುಗೊಳಿಸುವಲ್ಲಿ ಇಂದಿನವರೆವಿಗೂ ಯಶಸ್ವಿಯಾಗಿವೆ. ಹಿಂದೂ ಸಮಾಜದ ಮೇಲೆ ಸತತ ಅಪಪ್ರಚಾರ ಮಾಡುವ ತಂತ್ರದಿಂದ ಹೊಸ ಪೀಳಿಗೆಗಳನ್ನು ದಾರಿ ತಪ್ಪಿಸುವ ಪ್ರಕ್ರಿಯೆ ತುಂಬಾ ಹಿಂದಿನಿಂದ ನಡೆದು ಬಂದಿದ್ದು ಈಗ ಹಿಂದೂ ಸಂಘಟನೆಗಳ ಮೇಲೆ ಸಹ ಅಪಪ್ರಚಾರವೂ ಪ್ರಬಲವಾಗುತ್ತಿದೆ.  ಸಮಾಜದ ಘಟಕಗಳನ್ನು ಒಡೆಯುವ ಸಾಮರ್ಥ್ಯ ಇರುವ ಅಪಪ್ರಚಾರದ ಅಪಾಯವನ್ನು ಹೆಚ್ಚುತ್ತಿರುವ ಸಾಮಾಜಿಕ ವಿಷಮತೆಯಿಂದ ಗ್ರಹಿಸಬಹುದಾಗಿದೆ.

ತನ್ನ ಕಾರ್ಯವೈಖರಿಯಿಂದಲೇ ತನ್ನ ಮೇಲೆ ನಡೆಯುತ್ತಿರುವ ಅಪಪ್ರಚಾರವನ್ನು ನಿಷ್ಕ್ರಿಯಗೊಳಿಸುವ ಹಿಂದೂ ವಿಧಾನವನ್ನು ಸಂಘವು ಅಳವಡಿಸಿಕೊಂಡಿದೆ.  ಸಮಾಜ ಸುಧಾರಣೆಯ ನೆಲೆಯಲ್ಲಿ ಸಾಮಾಜಿಕ ಸಾಮರಸ್ಯವನ್ನು ಸಾಧಿಸುವ ಗುರಿಯಿಂದ ಮುನ್ನಡೆಯುತ್ತಿದೆ. ಮೀಸಲಾತಿಯನ್ನು ಮುಂದುವರೆಸುವ ಅಗತ್ಯತೆಯನ್ನು ಪ್ರತಿಪಾದಿಸುವ ಸಂಘಕ್ಕೆ ಸಾಮಾಜಿಕ ಸಾಮರಸ್ಯದ ಇತರ ಅಯಾಮಗಳ ಆಳವಾದ ಅರಿವಿದೆ.  ಕಾನೂನಾತ್ಮಕವಾಗಿ ಅಸ್ಪೃಷ್ಯತೆಯನ್ನು ನಿಷೇಧಿಸಲಾಗಿದ್ದು, ಸಂಘವು ಅದನ್ನು ಭಾವನಾತ್ಮಕವಾಗಿ ವಿವರಿಸಲು ಪ್ರಯತ್ನಿಸುತ್ತಿದೆ. ರಾಷ್ಡ್ರೀಯತೆಯ ಭಾವನೆಗಳು ಜನಮಾನಸದಲ್ಲಿ ಪ್ರಕಟೀಕೃತಗೊಳಿಸುತ್ತಾ, ಸಾಮಾಜಿಕ ಸಾಮರಸ್ಯವನ್ನು ಸಂಘವು ಬಲಗೊಳಿಸುತ್ತಿದೆ.

ಆದರೆ, ಅಪಪ್ರಚಾರವನ್ನು ಸೃಷ್ಟಿಸುವ ಮತ್ತು ಪೋಷಿಸುವವರನ್ನು ಗುರುತಿಸುವ ಮತ್ತು ಅವರ ಪ್ರಭಾವವನ್ನು ಕುಗ್ಗಿಸುವ ಆಯಾಮವನ್ನೂ ಕೂಡ ಒಳಗೊಳ್ಳದೇ ಸಾಮಾಜಿಕ ಸಾಮರಸ್ಯದ ಸಾಧನೆ ಅಸಾಧ್ಯ. ಸಾಮಾಜಿಕ ಸಾಮರಸ್ಯದ ಮುಂದಿನ ಮಜಲುಗಳನ್ನು ತಲುಪುವುದು ಹೇಗೆ ಎನ್ನುವುದು ಇಂದಿನ ಒಂದು ಮುಖ್ಯ ಪ್ರಶ್ನೆ.  ಸಾಮಾಜಿಕ ಪರಿವರ್ತನೆಯನ್ನು ಕಾರ್ಯವಿಸ್ತಾರದ ಮೂಲಕ ಸಾಧಿಸಬಹುದು ಎಂಬುದು ಸಾಮಾನ್ಯ ಉತ್ತರ.  ನೂತನ ಸರಕಾರ್ಯವಾಹರ ಕಾರ್ಯಯೋಜನೆಯಲ್ಲಿರುವ ವೈಚಾರಿಕ ಪರಿವರ್ತನೆ ಹೊಸ ಸಾಧ್ಯತೆಗಳತ್ತ ನಮ್ಮ ಗಮನ ಸೆಳೆಯುತ್ತದೆ.  ಸಾಮಾಜಿಕ ಸಾಮರಸ್ಯಕ್ಕೆ ವೈಚಾರಿಕ ನೆಲೆಯಲ್ಲಿ ಭಾರತೀಯ ಸಂದೇಶ ಯಾವುದು?  ಭಾರತೀಯ ವಿಚಾರಧಾರೆಗಳಲ್ಲಿ ನಮಗೆ ಹಲವು ಉತ್ತರಗಳು ಸಿಗುತ್ತವೆಯೇ? ಅವುಗಳ ಮಧ್ಯೆ ತಾರ್ಕಿಕ ತಾಕಲಾಟ ಇರಬಹುದೇ? ಈ ಪ್ರಶ್ನೆಗಳ ವಿಶ್ಲೇಷಣೆ ನಮಗೆ ಒಂದು ಸ್ಪಷ್ಟತೆ ನೀಡುತ್ತದೆ. ಅದೆಂದರೆ, ಭಾರತೀಯ ವಿಚಾರಧಾರೆಗಳಲ್ಲಿ ವೈಚಾರಿಕ ಸಾಮರಸ್ಯವನ್ನು ಸ್ಪಷ್ಟವಾಗಿ ಅರಿಯುವ ಪ್ರಕ್ರಿಯೆ ವೈಚಾರಿಕ ಪರಿವರ್ತನೆಯ ಪೂರ್ವಭಾವೀ ಅಗತ್ಯತೆಗಳಲ್ಲಿ ಒಂದಾಗಿದೆ ಎಂಬುದಾಗಿದೆ.   

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಿರಂಜನ್ ಮುಕುಂದನ್ ಗೆ 4 ಚಿನ್ನದ ಪದಕ

ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಿರಂಜನ್ ಮುಕುಂದನ್ ಗೆ 4 ಚಿನ್ನದ ಪದಕ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

AMMA addressed United Nations Alliance of Civilizations in China

AMMA addressed United Nations Alliance of Civilizations in China

August 25, 2019

Politics post Pandemic – A peep into the case of Spanish flu and after

April 28, 2020
Hindu Help Line – For Assam Violence victim Tribes & other Hindus who lost Everything

Hindu Help Line – For Assam Violence victim Tribes & other Hindus who lost Everything

August 19, 2012

‘ಕೇಸರಿ’ ಭೀತಿವಾದವಲ್ಲ, ರಾಷ್ಟ್ರೀಯತೆಯ ಸಂಕೇತ

September 7, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In