• Samvada
Monday, August 15, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಕಳೆದ 30 ವರ್ಷದಿಂದ ರೂ. 1 ಕ್ಕೆ ಇಡ್ಲಿ ನೀಡುವ ಅನ್ನಪೂರ್ಣೆ: ಕೋಯಮತ್ತೂರಿನ ಕಮಲತ್ತಲ್

Vishwa Samvada Kendra by Vishwa Samvada Kendra
April 2, 2021
in Others
250
0
ಕಳೆದ 30 ವರ್ಷದಿಂದ ರೂ. 1 ಕ್ಕೆ ಇಡ್ಲಿ ನೀಡುವ ಅನ್ನಪೂರ್ಣೆ: ಕೋಯಮತ್ತೂರಿನ ಕಮಲತ್ತಲ್
491
SHARES
1.4k
VIEWS
Share on FacebookShare on Twitter
ಚಿತ್ರ ಕೃಪೆ: ದಿ. ಹಿಂದು

ಪ್ರತಿಯೊಬ್ಬರಿಗೂ ಆಹಾರ, ಔಷದಿ,ಶಿಕ್ಷಣ ಇವಿಷ್ಟು ಉಚಿತವಾಗಿಯೇ ಸಿಗಬೇಕು ಎನ್ನುವುದು ನಮ್ಮ ಪರಂಪರೆ ಹೇಳಿಕೊಟ್ಟ ಪಾಠ. ಆದರೆ ಇಂದು ಅದೇ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ಅತೀ ಹೆಚ್ಚು ಕೊಟ್ಟು ತಿನ್ನುವುದು ಅಂತಸ್ತಿನ ಪ್ರಶ್ನೆಯಾಗಿದೆ. ಇದೆಲ್ಲದರ ಮದ್ಯದಲ್ಲಿ 1 ರೂಪಾಯಿಗೆ ಇಡ್ಲಿ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ?

ಖಂಡಿತಾ ನಂಬಲೇಬೇಕು. ಯಾಕಂದರೆ ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಕಮಲತ್ತಲ್ ಎನ್ನುವ ಅಜ್ಜಿಯೋರ್ವರು ಈ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಸರಕಾರದ ದುಡ್ಡಿನಲ್ಲಿ ಕ್ಯಾಂಟೀನ್ ತೆರೆದು ಅದರ ಸಾಧನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಅಬ್ಬರದ ಈ ಕಾಲದಲ್ಲಿ ತಾನು ಕಷ್ಟಪಟ್ಟು ಎಲೆಮರೆಯ ಕಾಯಿಯಂತೆ ಅನೇಕರಿಗೆ ಅನ್ನದಾತ ಳಾಗಿದ್ದಾಳೆ ಈ 80 ವರ್ಷ ವಯಸ್ಸಿನ ಅಜ್ಜಮ್ಮ.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

“ಈ ಕೆಲಸಕ್ಕೆ ನನಗೆ ತಗಲುವುದು 5೦ ಪೈಸೆ ಮಾತ್ರ. ಆದರೆ ಈಗ ಪದಾರ್ಥಗಳು ದುಬಾರಿಯಾದ್ದರಿಂದ 1 ರೂಪಾಯಿಗೆ ಮಾರಾಟ ಮಾಡುತ್ತೇನೆ. ಎಲ್ಲರೂ ನನ್ನ ಆಹಾರವನ್ನು ಮೆಚ್ಚುತ್ತಾರೆ. ಸಾಂಬಾರ್ ಮತ್ತು ಚಟ್ನಿ ಚನ್ನಾಗಿದೆ ಎನ್ನುತ್ತಾರೆ. ಅದು ನನಗೆ ಹೆಮ್ಮೆ.”

ಕಮಲತ್ತಲ್

ಕಳೆದ 30 ವರ್ಷಗಳಿಂದ ಸೂರ್ಯನಿಗಿಂತ ಮೊದಲೇ ಬೆಳಕು ಕಾಣುತ್ತಿರುವ ಈಕೆಯ ಗುಡಿಸಲಿನಲ್ಲಿ ತನಗೆ 80ರ ಇಳಿ ವಯಸ್ಸಾದರೂ ಕಟ್ಟಿಗೆಯ ಒಲೆಯ ಮುಂದು ಕೂತು ನಿತ್ಯ 1000 ನಯವಾದ ಇಡ್ಲಿಗಳನ್ನು ಮಾಡುವುದಲ್ಲದೇ ಅದಕ್ಕೆ ಬೇಕಾದ ಚಟ್ನಿ ಮತ್ತು‌ ಸಾಂಬಾರನ್ನು‌ ಸಿದ್ಧಪಡಿಸುವ  One man army ಇವರು ಅದನ್ನು ಮಾರುವುದು ಕೇವಲ ಒಂದು ರೂಪಾಯಿಗೆ!

ನಿತ್ಯ ಕಷ್ಟಪಟ್ಟು ದುಡಿಯುವ ಕೂಲಿ ಕಾರ್ಮಿಕರು, ಬಡವರು ಮತ್ತು ಅವರ ಕುಟುಂಬಗಳು ಹಸಿದು ಮಲಗಬಾರದೆಂಬ ಉದ್ದೇಶದಿಂದ ಯಾವುದೇ ಲಾಭದ ಉದ್ದೇಶವಿಲ್ಲದೇ ಈ ಕೆಲಸ  ಶುರುಮಾಡಿದ ಕಮಲತ್ತಲ್ ಇಂದು ಅಕ್ಕಪಕ್ಕದ ಗ್ರಾಮದ ಬಡವರ ಪಾಲಿಗೂ ನಿಜವಾದ ಅನ್ನದಾತೆ ಅನ್ನಪೂರ್ಣೆಯಾಗಿದ್ದಾಳೆ.

‘ಇಡ್ಲಿ ಅಮ್ಮ’ನೆಂದೇ ಖ್ಯಾತಳಾಗುತ್ತಿರುವ ಕಮಲಾಥಾಲ್ ಅವರ ಕಾರ್ಯ ಎಲ್ಲಾ ಕಡೆ ಸುದ್ದಿಯಾಗುತ್ತಿದ್ದಂತೆ ತುಂಬಾ ಜನರು ಮೆಚ್ಚಿ ಕೊಂಡಾಡಿದ್ದಾರೆ. ಆದರೆ ಅಷ್ಟೆ ನಿಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆನಂದ್ ಮಹೀಂದ್ರಾ ಕಂಪೆನಿಯವರು ಈ ಮಹಾತಾಯಿಗೆ ಇಂಧನ ಒಲೆ ಒದಗಿಸಿಕೊಡುವ ಹಾಗೂ ಆಕೆಗೆ ಸ್ವಂತ ಮನೆ ಹಾಗೂ ಅಡುಗೆಗೆ ಮತ್ತು ವ್ಯಾಪಾರಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಿಕೊಡಲು ಮುಂದೆಬಂದಿದ್ದಾರೆ.

“ಪಕ್ಕದ ಹಳ್ಳಿಗೆ ಹೋದರೆ ಒಂದು ದೋಸೆಗೆ 20 ರೂಪಾಯಿ, ಒಂದು ಇಡ್ಲಿಗೆ 6 ರೂಪಾಯಿ. ಆದರೆ ಇಲ್ಲಿ ಒಂದು ರೂಪಾಯಿಗೆ ಜನರಿಗೆ ಸಿಗುತ್ತಿದೆ. ಸುತ್ತಲಿನ 2 ಕಿ.ಮಿ ದೂರದಿಂದ ಜನರು ಬರುತ್ತಾರೆ. 30 ರೂಪಾಯಿ ಕೊಟ್ಟು ಖರೀದಿಸಿದರೆ  ಮೂರು ಜನ ತೃಪ್ತಿಯಾಗಿ ತಿನ್ನುವಷ್ಟು ಇಲ್ಲಿ ಸಿಗುತ್ತದೆ. ಹೀಗಾಗಿ ತುಂಬಾ ಜನ ಬರುತ್ತಾರೆ‌. ಮತ್ತು ಈಕೆಗೆ ಶುಭ ಹಾರೈಸುತ್ತಾರೆ. ತಿಂದವರು ಹಣ ಕೊಟ್ಟರೋ, ಬಿಟ್ಟರೋ ಈ ಅಜ್ಜಮ್ಮ ಕೇಳುವುದಿಲ್ಲ. ಕೊಟ್ಟಷ್ಟು ಸ್ವೀಕರಿಸುತ್ತಾರೆ. 10 ರೂಪಾಯಿಯಷ್ಟು ತಿನ್ನುವ ಜನರಿದ್ದಾರೆ ಮತ್ತು 10 ಇಡ್ಲಿ ತಿಂದು 5 ರೂಪಾಯಿ ಕೊಡುವ ಜನರೂ ಇದ್ದಾರೆ. ಈಕೆ ಇರುವ ವರೆಗೆ ಬಹಳಷ್ಟು ಜನ ಹೊಟ್ಟೆ ತುಂಬಾ ತಿನ್ನುತ್ತಾರೆ ಗ್ರಾಹಕರು.

ತಾನು ಮಾಡುವ ಕೆಲಸ ಬಗ್ಗೆ ಹಮ್ಮೆ ಪಡುವ ಕಮಲಾತ್ತಲ್ ತನ್ನ ಅಡಿಗೆಯ ಬಗ್ಗೆ ಜನರ ಒಳ್ಳೆಯ ಪ್ರತಿಕ್ರಿಯೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಳೆ. ಯಾರಾದರೂ ಕಡಿಮೆ ಬೆಲೆಯ ಬಗ್ಗೆ ವಿಚಾರಿಸಿದರೆ ‘ಜನರು ಬರಲಿ, ತಿನ್ನಲಿ’ ಎಂದಷ್ಟೆ ಹೇಳಿ ಸುಮ್ಮನಾಗುತ್ತಾಳೆ ಈ ಮಹಾತಾಯಿ.

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಸುರಾಜ್ಯದ ಸಾಕಾರಪುರುಷ ಶಿವಾಜಿ

ಸುರಾಜ್ಯದ ಸಾಕಾರಪುರುಷ ಶಿವಾಜಿ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ದೇಶದ ಜನತೆಗೆ ಆತ್ಮ ಸ್ಥೈರ್ಯವನ್ನು ತುಂಬಿದ ವಿವೇಕಾನಂದ : ಟಿ ಎಸ್ ನಾಗಾಭರಣ

ದೇಶದ ಜನತೆಗೆ ಆತ್ಮ ಸ್ಥೈರ್ಯವನ್ನು ತುಂಬಿದ ವಿವೇಕಾನಂದ : ಟಿ ಎಸ್ ನಾಗಾಭರಣ

November 26, 2013
Video: Speech by Mohan Bhagwat, Sarasanghachalak of RSS at World Hindu Congress

Video: Speech by Mohan Bhagwat, Sarasanghachalak of RSS at World Hindu Congress

November 22, 2014
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’: ಆರೆಸ್ಸೆಸ್ ಕರ್ನಾಟಕ

‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’: ಆರೆಸ್ಸೆಸ್ ಕರ್ನಾಟಕ

October 25, 2010
Day 69: Bharat Parikrama Yatra reaches remote Village Dharmatthadka of Kasaragod

Day 69: Bharat Parikrama Yatra reaches remote Village Dharmatthadka of Kasaragod

October 16, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In