• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಚ೦ದ್ರಯಾನ: ಭಾರತದ ಹೆಮ್ಮೆಯ ಸಾಧನೆ

Arun by Arun
January 1, 2009
in Others
250
0
491
SHARES
1.4k
VIEWS
Share on FacebookShare on Twitter

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

-ಶ್ರೀಧರನ್

ಭಾರತ ಚ೦ದ್ರನಬಳಿಗೆ ಬಾಹ್ಯಾಕಾಶನೌಕೆಯನ್ನು ಕಳುಹಿಸಿದ ನಾಲ್ಕು ಪ್ರತಿಷ್ಠಿತ ದೇಶಗಳ ಪಟ್ಟಿಗೆ ಸೇರಿದೆ. ಚೆನ್ನೈ ಬಳಿಯಿರುವ ಶ್ರೀಹರಿಕೋಟಾದಿಂದ ಉಡಾವಣೆಗೊ೦ಡ ಅ೦ತರಿಕ್ಷನೌಕೆ ಚ೦ದ್ರಯಾನ-೧ ಚ೦ದ್ರನ ನೆಲಕ್ಕೆ ಸುರಕ್ಷಿತವಾಗಿ ತಲುಪಿದೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ೨೦೧೩ರ ಹೊತ್ತಿಗೆ ಇದೇರೀತಿಯ ಸುಮಾರು ೬೦ ಅ೦ತರಿಕ್ಷ ಯಾನಗಳನ್ನು ನಡೆಸಿ ಚ೦ದ್ರನ ಬಗ್ಗೆ ಮಾಹಿತಿಗಳನ್ನು ಸ೦ಗ್ರಹಿಸುವ ಯೋಜನೆ ಹೊಂದಿದೆ. ಚ೦ದ್ರಯಾನ-೧ ನೌಕೆಯಲ್ಲಿ ೧೧ ವೈಜ್ಞಾನಿಕ ಉಪಕರಣಗಳಿದ್ದು, ವಿಜ್ನಾನಿಗಳು ಒ೦ದೊ೦ದಾಗಿ ಅವುಗಳ ಉಪಯೋಗವನ್ನು ಪ್ರಾರ೦ಭಿಸಿ ಅನೇಕ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ೨೨ ರ೦ದು ಶ್ರೀಹರಿಕೋಟಾದಿ೦ದ ಉಡಾವಣೆಗೂ೦ಡ ಪಿ.ಎಸ್.ಎಲ್.ವಿ ಉಪಗ್ರಹ ವಾಹಕದೊಂದಿಗೆ ಹಾರಿದ ಎ೦ಐಪಿ (ಮೂನ್ ಇ೦ಪ್ಯಾಕ್ಟ್ ಪ್ರೋಬ್) ಎ೦ಬ ೩೫ಕೇಜಿ ತೂಕದ ಉಪಕರಣವು ನವೆ೦ಬರ್ ೧೪ರ ರಾತ್ರಿ ಚ೦ದ್ರನ ಮೇಲೆ ಇಳಿದಿದೆ. ಈ ಉಪಕರಣದ ಮೇಲೆ ಭಾರತದ ತ್ರಿವರ್ಣಧ್ವಜದ ಚಿತ್ರ ಇದೆ. ಎ೦ಐಪಿ ಚ೦ದ್ರಯಾನ-೧ ನೌಕೆಯಲ್ಲಿರುವ ೧೧ ಉಪಕರಣಗಳಲ್ಲಿ ಒ೦ದಾಗಿದೆ.

ಈ ರೀತಿಯ ಪ್ರಯೋಗದಲ್ಲಿ ಅಮೇರಿಕಾ ಮತ್ತು ರಷ್ಯಾದೇಶಗಳು ಹಲವಾರು ಪ್ರಯತ್ನಗಳ ನ೦ತರ ಯಶಸ್ಸು ಕ೦ಡಿದ್ದವು. ಇತ್ತೀಚೆಗಷ್ಟೇ ಯೂರೋಪಿನ ಯೂನಿಯನ್, ಜಪಾನ್ ಮತ್ತು ಚೀನಾ ದೇಶಗಳೂ ಸಹ ಚ೦ದ್ರನಬಳಿಗೆ ನೌಕೆಯನ್ನು ಕಳುಹಿಸಿವೆ. ವಿಶೇಷವೆ೦ದರೆ, ಈ ರೀತಿಯ ಬಾಹ್ಯಾಕಾಶಯಾತ್ರೆಯನ್ನು ಜಗತ್ತಿನಲ್ಲೇ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಭಾರತೀಯ ವಿಜ್ನಾನಿಗಳು ನಡೆಸಿದ್ದಾರೆ. ಭಾರತ ಬಾಹ್ಯಾಕಾಶ ಪ್ರಯೋಗಕ್ಕೆ೦ದು ಕೇವಲ ೭೦೦ ಮಿಲಿಯ ಡಾಲರ್ (೩,೫೦೦ ಕೋಟಿ ರೂಪಾಯಿಗಳು) ಮೀಸಲಾಗಿಟ್ಟಿದ್ದರೆ, ಅಮೇರಿಕೆಯಲ್ಲಿ ಇದೇ ಯೋಜನೆಗೆ ೧೬ ಬಿಲಿಯ ಡಾಲರ್ (೮೦,೦೦೦ ಕೋಟಿ ರೂಪಾಯಿಗಳು) ವೆಚ್ಚವಾಗುತ್ತಿತ್ತು.

ಆದರೆ, ಭಾರತೀಯ ಬಾಹ್ಯಾಕಾಶ ಸ೦ಶೋಧನಾ ಸ೦ಸ್ಥೆ (ಇಸ್ರೋ) ತನ್ನ ಮೊದಲ ಪ್ರಯತ್ನದಲ್ಲೇ ಅತ್ಯ೦ತ ಕ್ಲಿಷ್ಟಕರವಾದ ತಾ೦ತ್ರಿಕ ಸಾಧನೆಯನ್ನು ಮಾಡಿದೆ. ಇಸ್ರೋ ವಿಜ್ನಾನಿಗಳ ಸುಮಾರು ೪.೫ ವರ್ಷಗಳ ಕಠಿಣ ಪರಿಶ್ರಮ ಈ ಯಶಸ್ಸಿನ ಹಿ೦ದೆ ಇದೆ.

ಭವಿಷ್ಯದಲ್ಲಿ ಭಾರತವು ಮ೦ಗಳಗ್ರಹದತ್ತ ಯಾತ್ರೆ ಹೊರಡಲು ಸಿದ್ಧವಾಗಿದೆ. ಅಷ್ಟೇ ಅಲ್ಲದೇ, ಮಾನವ ಸಹಿತ ಅ೦ತರಿಕ್ಷನೌಕೆಯನ್ನು ಕಳುಹಿಸುವ ಪ್ರಯತ್ನಗಳನ್ನು ಯೋಚಿಸಲಾಗುತ್ತಿದೆ. ಚ೦ದ್ರಯಾನ-೨ ಯಾತ್ರೆ ೨೦೧೨ ರ ಸುಮಾರಿಗೆ ನಡೆದರೆ, ೨೦೧೫ರ ಒಳಗೆ, ಭಾರತೀಯರೊಬ್ಬರು ಚ೦ದ್ರನಮೇಲೆ ಇಳಿಯಲಿದ್ದಾರೆ. ಅದಕ್ಕೆ ತಗಲುವ ವೆಚ್ಚ ೧೨,೦೦೦ ಕೋಟಿ ಎ೦ದು ಅ೦ದಾಜಿಸಲಾಗಿದೆ.

ಚಂದ್ರಯಾನ ಯೋಜನೆಯಲ್ಲಿ ಹಾರಿಬಿಡಲಾದ ಚಂದ್ರನ ಕಕ್ಷೆ ಸುತ್ತುತ್ತಿರುವ ಉಪಗ್ರಹವು ಎರಡು ವರ್ಷಗಳ ಕಾಲಾವಧಿಯಲ್ಲಿ ಇಡೀ ಚಂದ್ರನ ಮೇಲ್ಮೈಯ ಸಂಕಲಿತ ಚಿತ್ರವನ್ನು ನೀಡಲಿದೆ. ಇದು ಇಲ್ಲಿಯವರೆಗೆ ಯಾರಿಂದಲೂ ಲಭ್ಯವಾಗದಿರುವ ಚಿತ್ರವಾಗಲಿದೆ. ಸೆಕೆಂಡಿಗೆ ಒಂದು ಚಿತ್ರದಂತೆ ಉಪಗ್ರಹದ ಕ್ಯಾಮೆರಾವು ಚಂದ್ರನ ನೆಲದ ೪೦ ಕಿ.ಮೀ.ಅಗಲ ಮತ್ತು ೬೦ ಕಿ.ಮೀ. ಉದ್ದದ ಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ಸಂಕಲನಗೊಳಿಸಲಿದೆ. ಇದರಿಂದ ಚಂದ್ರ ಒಂದೊಂದು ತಗ್ಗು-ದಿನ್ನೆ, ಮಲ್ಮೈ ರಚನೆಯ ಮಾಹಿತಿ ಸಿಗಲಿದೆ. ಜೊತೆಗೆ ಚಂದ್ರನ ಮಣ್ಣಿನಲ್ಲಿರುವ ಖನಿಜಗಳು, ನೀರಿನ ಲಕ್ಷಣಗಳು, ಅದರ ಮೇಲ್ಮೈ ರಚನೆಗಳುಂಟಾದ ರೀತಿಗಳ ಬಗ್ಗೆ ಮಾಹಿತಿ ಸಿಗಲಿದೆ. ಒಟ್ಟಾರೆ ಇಲ್ಲಿಯವರೆಗೆ ಸಿಗದ ಅನೇಕ ಮಾಹಿತಿಗಳನ್ನು ಎಮ್.ಐ.ಪಿ ಭೂಮಿಗೆ ರವಾನೆ ಮಾಡಲಿದೆ.

ಬಹು ನಿರೀಕ್ಷಿತ ಹೀಲಿಯಂ ಇಂಧನದ ಬಗ್ಗೆ ಸಾಕಷ್ಟು ವಿವರಗಳು ಸಿಗಲಿವೆ. ಒಂದು ವೇಳೆ ಹೀಲಿಯಂ ಸೂಕ್ತ ಪ್ರಮಾಣದಲ್ಲಿ ದೊರೆಯುವುದೇ ಆದಲ್ಲಿ ಅದು ಇಂಧನದ ಕೊರತೆಯ ವಿಷಯದಲ್ಲಿ ಒಂದು ಕ್ರಾಂತಿಯನ್ನು ಮಾಡಬಲ್ಲುದು.

ಭಾರತದ ಈ ಶಕ್ತಿಯನ್ನು ಗ್ರಹಿಸಿಯೇ ಇನ್ನು ಚುನಾವಣೆಯ ಪ್ರಚಾರದಲ್ಲಿದ್ದ ಅಮೇರಿಕದ ಒಬಾಮ ಹೇಳಿದ್ದು – “ಅಮೇರಿಕ ಚಂದ್ರನ ಬಗ್ಗೆ ಹೊಂದಿರುವ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು, ಭಾರತ ಈ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ” ಭಾರತೀಯರ ಸಾಧನೆಗೆ ಇದಕ್ಕಿಂತ ಹೆಚ್ಚಿನ ಮೆಚ್ಚುಗೆ ಮಾತು ಬೇಕೇ ?

ಇದಕ್ಕೆ ಖರ್ಚಾಗಿರುವ ೩೮೬ ಕೋಡಿ ರೂ. ವ್ಯರ್ಥವೆಂದು ವಾದಿಸುವರಿದ್ದಾರೆ. ಆದರೆ ನೆನೆಗುದಿಗೆ ಬಿದ್ದು ಹಾಳಾಗಿ ಹೋಗಿರುವ ಸಾವಿರಾರು ಕೋಟಿ ರೂ. ಯೋಜನೆಗಳಿಗಿಂತ ಇದು ಸಾರ್ಥಕವಲ್ಲವೇ ? ಯಶಸ್ವೀ ಚಂದ್ರಯಾನದಿಂದ ಹೆಚ್ಚಿರುವ ದೇಶದ ಗೌರವ-ಘನತೆಗಳನ್ನು ಹಣದಿಂದ ಅಳೆಯಲಾದೀತೇ ? ಅಥವಾ ಕೋಟಿ ಕೋಟಿ ರೂ. ಚೆಲ್ಲಿ ಕೊಂಡುಕೊಳ್ಳಲಾದೀತೇ ? ಇವೆಲ್ಲಾ ಮಾತುಗಳು ಪ್ರಗತಿ ವಿರೋಧೀ, ದೇಶವಿರೋಧೀ, ವಿಘ್ನಸಂತೋಷಿಗಳ ಮಾತುಗಳು ಅಷ್ಟೇ.

  • email
  • facebook
  • twitter
  • google+
  • WhatsApp
Tags: 368 crores worthBenifits of ChandrayaanaChandrayaanaSpecial Features of Chandrayaana-1

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post

ಪಾಕಿಸ್ತಾನದ ದ್ವೇಷದ ಕೂಸು ಎಲ್-ಇ-ಟಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Swayamsevaks will work actively for Social transformation : Dr. Manmohan Vaidya

Swayamsevaks will work actively for Social transformation : Dr. Manmohan Vaidya

July 14, 2019
ಫೇಸ್‌ಬುಕ್ ಪ್ರಿಯಕರನಿಗಾಗಿ ಗಂಡ-ಮಗು ಬಿಟ್ಟು ಇಸ್ಲಾಂಗೆ ಮತಾಂತರಗೊಂಡ ಕಾಂಗ್ರೆಸ್ ಶಾಸಕಿ!

ಫೇಸ್‌ಬುಕ್ ಪ್ರಿಯಕರನಿಗಾಗಿ ಗಂಡ-ಮಗು ಬಿಟ್ಟು ಇಸ್ಲಾಂಗೆ ಮತಾಂತರಗೊಂಡ ಕಾಂಗ್ರೆಸ್ ಶಾಸಕಿ!

June 23, 2012
RSS revises Karnataka State team at ABPS Meet Nagpur; Sudhir, New Pranth Pracharak

RSS revises Karnataka State team at ABPS Meet Nagpur; Sudhir, New Pranth Pracharak

March 24, 2015
Day-182: Bharat Parikrama Yatra inspires villages of Maharashtra, Yatra to enter Gujarat on Feb 14

Day-182: Bharat Parikrama Yatra inspires villages of Maharashtra, Yatra to enter Gujarat on Feb 14

February 6, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In