• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಚ೦ದ್ರಯಾನ: ಭಾರತದ ಹೆಮ್ಮೆಯ ಸಾಧನೆ

Arun by Arun
January 1, 2009
in Others
250
0
491
SHARES
1.4k
VIEWS
Share on FacebookShare on Twitter

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

-ಶ್ರೀಧರನ್

ಭಾರತ ಚ೦ದ್ರನಬಳಿಗೆ ಬಾಹ್ಯಾಕಾಶನೌಕೆಯನ್ನು ಕಳುಹಿಸಿದ ನಾಲ್ಕು ಪ್ರತಿಷ್ಠಿತ ದೇಶಗಳ ಪಟ್ಟಿಗೆ ಸೇರಿದೆ. ಚೆನ್ನೈ ಬಳಿಯಿರುವ ಶ್ರೀಹರಿಕೋಟಾದಿಂದ ಉಡಾವಣೆಗೊ೦ಡ ಅ೦ತರಿಕ್ಷನೌಕೆ ಚ೦ದ್ರಯಾನ-೧ ಚ೦ದ್ರನ ನೆಲಕ್ಕೆ ಸುರಕ್ಷಿತವಾಗಿ ತಲುಪಿದೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ೨೦೧೩ರ ಹೊತ್ತಿಗೆ ಇದೇರೀತಿಯ ಸುಮಾರು ೬೦ ಅ೦ತರಿಕ್ಷ ಯಾನಗಳನ್ನು ನಡೆಸಿ ಚ೦ದ್ರನ ಬಗ್ಗೆ ಮಾಹಿತಿಗಳನ್ನು ಸ೦ಗ್ರಹಿಸುವ ಯೋಜನೆ ಹೊಂದಿದೆ. ಚ೦ದ್ರಯಾನ-೧ ನೌಕೆಯಲ್ಲಿ ೧೧ ವೈಜ್ಞಾನಿಕ ಉಪಕರಣಗಳಿದ್ದು, ವಿಜ್ನಾನಿಗಳು ಒ೦ದೊ೦ದಾಗಿ ಅವುಗಳ ಉಪಯೋಗವನ್ನು ಪ್ರಾರ೦ಭಿಸಿ ಅನೇಕ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ೨೨ ರ೦ದು ಶ್ರೀಹರಿಕೋಟಾದಿ೦ದ ಉಡಾವಣೆಗೂ೦ಡ ಪಿ.ಎಸ್.ಎಲ್.ವಿ ಉಪಗ್ರಹ ವಾಹಕದೊಂದಿಗೆ ಹಾರಿದ ಎ೦ಐಪಿ (ಮೂನ್ ಇ೦ಪ್ಯಾಕ್ಟ್ ಪ್ರೋಬ್) ಎ೦ಬ ೩೫ಕೇಜಿ ತೂಕದ ಉಪಕರಣವು ನವೆ೦ಬರ್ ೧೪ರ ರಾತ್ರಿ ಚ೦ದ್ರನ ಮೇಲೆ ಇಳಿದಿದೆ. ಈ ಉಪಕರಣದ ಮೇಲೆ ಭಾರತದ ತ್ರಿವರ್ಣಧ್ವಜದ ಚಿತ್ರ ಇದೆ. ಎ೦ಐಪಿ ಚ೦ದ್ರಯಾನ-೧ ನೌಕೆಯಲ್ಲಿರುವ ೧೧ ಉಪಕರಣಗಳಲ್ಲಿ ಒ೦ದಾಗಿದೆ.

ಈ ರೀತಿಯ ಪ್ರಯೋಗದಲ್ಲಿ ಅಮೇರಿಕಾ ಮತ್ತು ರಷ್ಯಾದೇಶಗಳು ಹಲವಾರು ಪ್ರಯತ್ನಗಳ ನ೦ತರ ಯಶಸ್ಸು ಕ೦ಡಿದ್ದವು. ಇತ್ತೀಚೆಗಷ್ಟೇ ಯೂರೋಪಿನ ಯೂನಿಯನ್, ಜಪಾನ್ ಮತ್ತು ಚೀನಾ ದೇಶಗಳೂ ಸಹ ಚ೦ದ್ರನಬಳಿಗೆ ನೌಕೆಯನ್ನು ಕಳುಹಿಸಿವೆ. ವಿಶೇಷವೆ೦ದರೆ, ಈ ರೀತಿಯ ಬಾಹ್ಯಾಕಾಶಯಾತ್ರೆಯನ್ನು ಜಗತ್ತಿನಲ್ಲೇ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಭಾರತೀಯ ವಿಜ್ನಾನಿಗಳು ನಡೆಸಿದ್ದಾರೆ. ಭಾರತ ಬಾಹ್ಯಾಕಾಶ ಪ್ರಯೋಗಕ್ಕೆ೦ದು ಕೇವಲ ೭೦೦ ಮಿಲಿಯ ಡಾಲರ್ (೩,೫೦೦ ಕೋಟಿ ರೂಪಾಯಿಗಳು) ಮೀಸಲಾಗಿಟ್ಟಿದ್ದರೆ, ಅಮೇರಿಕೆಯಲ್ಲಿ ಇದೇ ಯೋಜನೆಗೆ ೧೬ ಬಿಲಿಯ ಡಾಲರ್ (೮೦,೦೦೦ ಕೋಟಿ ರೂಪಾಯಿಗಳು) ವೆಚ್ಚವಾಗುತ್ತಿತ್ತು.

ಆದರೆ, ಭಾರತೀಯ ಬಾಹ್ಯಾಕಾಶ ಸ೦ಶೋಧನಾ ಸ೦ಸ್ಥೆ (ಇಸ್ರೋ) ತನ್ನ ಮೊದಲ ಪ್ರಯತ್ನದಲ್ಲೇ ಅತ್ಯ೦ತ ಕ್ಲಿಷ್ಟಕರವಾದ ತಾ೦ತ್ರಿಕ ಸಾಧನೆಯನ್ನು ಮಾಡಿದೆ. ಇಸ್ರೋ ವಿಜ್ನಾನಿಗಳ ಸುಮಾರು ೪.೫ ವರ್ಷಗಳ ಕಠಿಣ ಪರಿಶ್ರಮ ಈ ಯಶಸ್ಸಿನ ಹಿ೦ದೆ ಇದೆ.

ಭವಿಷ್ಯದಲ್ಲಿ ಭಾರತವು ಮ೦ಗಳಗ್ರಹದತ್ತ ಯಾತ್ರೆ ಹೊರಡಲು ಸಿದ್ಧವಾಗಿದೆ. ಅಷ್ಟೇ ಅಲ್ಲದೇ, ಮಾನವ ಸಹಿತ ಅ೦ತರಿಕ್ಷನೌಕೆಯನ್ನು ಕಳುಹಿಸುವ ಪ್ರಯತ್ನಗಳನ್ನು ಯೋಚಿಸಲಾಗುತ್ತಿದೆ. ಚ೦ದ್ರಯಾನ-೨ ಯಾತ್ರೆ ೨೦೧೨ ರ ಸುಮಾರಿಗೆ ನಡೆದರೆ, ೨೦೧೫ರ ಒಳಗೆ, ಭಾರತೀಯರೊಬ್ಬರು ಚ೦ದ್ರನಮೇಲೆ ಇಳಿಯಲಿದ್ದಾರೆ. ಅದಕ್ಕೆ ತಗಲುವ ವೆಚ್ಚ ೧೨,೦೦೦ ಕೋಟಿ ಎ೦ದು ಅ೦ದಾಜಿಸಲಾಗಿದೆ.

ಚಂದ್ರಯಾನ ಯೋಜನೆಯಲ್ಲಿ ಹಾರಿಬಿಡಲಾದ ಚಂದ್ರನ ಕಕ್ಷೆ ಸುತ್ತುತ್ತಿರುವ ಉಪಗ್ರಹವು ಎರಡು ವರ್ಷಗಳ ಕಾಲಾವಧಿಯಲ್ಲಿ ಇಡೀ ಚಂದ್ರನ ಮೇಲ್ಮೈಯ ಸಂಕಲಿತ ಚಿತ್ರವನ್ನು ನೀಡಲಿದೆ. ಇದು ಇಲ್ಲಿಯವರೆಗೆ ಯಾರಿಂದಲೂ ಲಭ್ಯವಾಗದಿರುವ ಚಿತ್ರವಾಗಲಿದೆ. ಸೆಕೆಂಡಿಗೆ ಒಂದು ಚಿತ್ರದಂತೆ ಉಪಗ್ರಹದ ಕ್ಯಾಮೆರಾವು ಚಂದ್ರನ ನೆಲದ ೪೦ ಕಿ.ಮೀ.ಅಗಲ ಮತ್ತು ೬೦ ಕಿ.ಮೀ. ಉದ್ದದ ಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ಸಂಕಲನಗೊಳಿಸಲಿದೆ. ಇದರಿಂದ ಚಂದ್ರ ಒಂದೊಂದು ತಗ್ಗು-ದಿನ್ನೆ, ಮಲ್ಮೈ ರಚನೆಯ ಮಾಹಿತಿ ಸಿಗಲಿದೆ. ಜೊತೆಗೆ ಚಂದ್ರನ ಮಣ್ಣಿನಲ್ಲಿರುವ ಖನಿಜಗಳು, ನೀರಿನ ಲಕ್ಷಣಗಳು, ಅದರ ಮೇಲ್ಮೈ ರಚನೆಗಳುಂಟಾದ ರೀತಿಗಳ ಬಗ್ಗೆ ಮಾಹಿತಿ ಸಿಗಲಿದೆ. ಒಟ್ಟಾರೆ ಇಲ್ಲಿಯವರೆಗೆ ಸಿಗದ ಅನೇಕ ಮಾಹಿತಿಗಳನ್ನು ಎಮ್.ಐ.ಪಿ ಭೂಮಿಗೆ ರವಾನೆ ಮಾಡಲಿದೆ.

ಬಹು ನಿರೀಕ್ಷಿತ ಹೀಲಿಯಂ ಇಂಧನದ ಬಗ್ಗೆ ಸಾಕಷ್ಟು ವಿವರಗಳು ಸಿಗಲಿವೆ. ಒಂದು ವೇಳೆ ಹೀಲಿಯಂ ಸೂಕ್ತ ಪ್ರಮಾಣದಲ್ಲಿ ದೊರೆಯುವುದೇ ಆದಲ್ಲಿ ಅದು ಇಂಧನದ ಕೊರತೆಯ ವಿಷಯದಲ್ಲಿ ಒಂದು ಕ್ರಾಂತಿಯನ್ನು ಮಾಡಬಲ್ಲುದು.

ಭಾರತದ ಈ ಶಕ್ತಿಯನ್ನು ಗ್ರಹಿಸಿಯೇ ಇನ್ನು ಚುನಾವಣೆಯ ಪ್ರಚಾರದಲ್ಲಿದ್ದ ಅಮೇರಿಕದ ಒಬಾಮ ಹೇಳಿದ್ದು – “ಅಮೇರಿಕ ಚಂದ್ರನ ಬಗ್ಗೆ ಹೊಂದಿರುವ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು, ಭಾರತ ಈ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ” ಭಾರತೀಯರ ಸಾಧನೆಗೆ ಇದಕ್ಕಿಂತ ಹೆಚ್ಚಿನ ಮೆಚ್ಚುಗೆ ಮಾತು ಬೇಕೇ ?

ಇದಕ್ಕೆ ಖರ್ಚಾಗಿರುವ ೩೮೬ ಕೋಡಿ ರೂ. ವ್ಯರ್ಥವೆಂದು ವಾದಿಸುವರಿದ್ದಾರೆ. ಆದರೆ ನೆನೆಗುದಿಗೆ ಬಿದ್ದು ಹಾಳಾಗಿ ಹೋಗಿರುವ ಸಾವಿರಾರು ಕೋಟಿ ರೂ. ಯೋಜನೆಗಳಿಗಿಂತ ಇದು ಸಾರ್ಥಕವಲ್ಲವೇ ? ಯಶಸ್ವೀ ಚಂದ್ರಯಾನದಿಂದ ಹೆಚ್ಚಿರುವ ದೇಶದ ಗೌರವ-ಘನತೆಗಳನ್ನು ಹಣದಿಂದ ಅಳೆಯಲಾದೀತೇ ? ಅಥವಾ ಕೋಟಿ ಕೋಟಿ ರೂ. ಚೆಲ್ಲಿ ಕೊಂಡುಕೊಳ್ಳಲಾದೀತೇ ? ಇವೆಲ್ಲಾ ಮಾತುಗಳು ಪ್ರಗತಿ ವಿರೋಧೀ, ದೇಶವಿರೋಧೀ, ವಿಘ್ನಸಂತೋಷಿಗಳ ಮಾತುಗಳು ಅಷ್ಟೇ.

  • email
  • facebook
  • twitter
  • google+
  • WhatsApp
Tags: 368 crores worthBenifits of ChandrayaanaChandrayaanaSpecial Features of Chandrayaana-1

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post

ಪಾಕಿಸ್ತಾನದ ದ್ವೇಷದ ಕೂಸು ಎಲ್-ಇ-ಟಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

VHP national Meet at Guwahati; Major Resolution on Assam and other National Issues

VHP national Meet at Guwahati; Major Resolution on Assam and other National Issues

July 28, 2013
रा.स्व.संघ के अखिल भारतीय प्रचार प्रमुख डॉ. मनमोहन वैद्य द्वारा जारी  प्रेस वक्तव्य, बंगलुरु, 13 मार्च, 2014.

रा.स्व.संघ के अखिल भारतीय प्रचार प्रमुख डॉ. मनमोहन वैद्य द्वारा जारी प्रेस वक्तव्य, बंगलुरु, 13 मार्च, 2014.

March 13, 2014
Nation remembers Social Reformer, former RSS Chief Prof Rajju Bhaiyya on his 13th Punyatithi 

Nation remembers Social Reformer, former RSS Chief Prof Rajju Bhaiyya on his 13th Punyatithi 

July 14, 2016
From the diaries of Swayamsevaks: Octogenarian showers blessings

From the diaries of Swayamsevaks: Octogenarian showers blessings

April 21, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In