• Samvada
  • Videos
  • Categories
  • Events
  • About Us
  • Contact Us
Tuesday, February 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಜನವರಿ 12 ರಿಂದ ರಾಜ್ಯಾದ್ಯಂತ Be Good Do Good ಅಭಿಯಾನ

Vishwa Samvada Kendra by Vishwa Samvada Kendra
January 6, 2022
in News Digest
242
0
ಜನವರಿ 12 ರಿಂದ ರಾಜ್ಯಾದ್ಯಂತ Be Good Do Good ಅಭಿಯಾನ
491
SHARES
1.4k
VIEWS
Share on FacebookShare on Twitter

ಬೆಂಗಳೂರು, ಜನವರಿ 5, 2022 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ `ಉತ್ತಮನಾಗು–ಉಪಕಾರಿಯಾಗು‘ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘‘Be Good Do Good-2022’ ಇದೇ ಬರುವ ಜನವರಿ 12 ರಿಂದ 26, 2022 ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಬೆಂಗಳೂರಿನ ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ ಈ ಯುವ ಅಭಿಯಾನವನ್ನು ಆಯೋಜಿಸಿದೆ.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಕೋವಿಡ್ ನಿಯಮಾವಳಿಗನುಸಾರವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ಈ ಬಾರಿಯ ಅಭಿಯಾನವು ನಡೆಯಲಿದೆ.  ಜನವರಿ 12, 2022 ರಂದು ಸ್ವಾಮಿ ವಿವೇಕಾನಂದರ 159ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ‘‘Be Good Do Good-2022’ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ಸ್ವಾಮಿ ವಿವೇಕಾನಂದರು ಯುವಜನರಿಗೆ ನೀಡಿದ `ಉತ್ತಮನಾಗು-ಉಪಕಾರಿಯಾಗು’ (‘Be Good Do Good) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ಜನವರಿ 12, 2022 ರಿಂದ 26 ಜನವರಿ 2022ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ರಾಜ್ಯಾದ್ಯಂತ ಯುವಕ- ಯುವತಿಯರು ಭಾಗವಹಿಸಲಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ. ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತದ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು, ವಾಟ್ಸಪ್, ಮತ್ತು ಎಸ್‌ಎಮ್‌ಎಸ್ ಗಳನ್ನು ಬಳಸುವ ಮೂಲಕ #Be Good Do Good ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ಯುವಜನರು ತಮ್ಮ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

ಆಶಯಧ್ಯೇಯ (theme): 

ಬಿ ಗುಡ್: ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಭಾವಗಳನ್ನು ಮೈಗೂಡಿಸುವುದು. ಉದಾಹರಣೆಗೆ – ಎಲ್ಲರಿಗೂ ಗೌರವ ನೀಡುವುದು, ಎಲ್ಲರೊಂದಿಗೆ ಆತ್ಮೀಯವಾದ ವ್ಯವಹಾರ, ಸಮಯಪಾಲನೆ, ಕೊಟ್ಟಮಾತಿಗೆ ಬದ್ಧನಾಗಿರುವುದು, ತಾನು ವಹಿಸುವ ಕೆಲಸಕರ‍್ಯಗಳಲ್ಲಿ ಶ್ರದ್ಧೆ, ನಡೆನುಡಿಯಲ್ಲಿ ಶಿಸ್ತು, ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಇತ್ಯಾದಿ ಅಂಶಗಳು.

ಡು ಗುಡ್: ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು. ಉದಾಹರಣೆಗೆ – ಗಿಡವೊಂದನ್ನು ನೆಡುವುದು, ನೆಟ್ಟಿರುವ ಗಿಡವೊಂದಕ್ಕೆ ಸೂಕ್ತ ರಕ್ಷಣೆ-ಪೋಷಣೆ ನೀಡುವುದು, ರಕ್ತದಾನ, ನೇತ್ರದಾನ ಸಂಕಲ್ಪ, ಅಗತ್ಯವಿರುವ ಮಕ್ಕಳಿಗೆ ಕಲಿಕಾಕೇಂದ್ರಗಳಲ್ಲಿ ಉಚಿತವಾಗಿ ಟ್ಯೂಷನ್ ನೀಡುವುದು, ಪರಿಸರ ಸಂರಕ್ಷಣೆ, ಜಲಸಂಲಕ್ಷಣೆ ಸೇರಿದಂತೆ ಸಾಮಾಜಿಕ ಜಾಗೃತಿಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇತ್ಯಾದಿ.

ಈ ವರ್ಷ ಅಭಿಯಾನವು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬAಧಪಟ್ಟ ವಿಷಯಗಳ ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ. ಈ ಬಾರಿಯ ಅಭಿಯಾನವು ಸ್ವಾತಂತ್ರö್ಯಪ್ರಾಪ್ತಿಯ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ಸ್ವರಾಜ್ಯ-75: ಆತ್ಮನಿರ್ಭರ ಭಾರತಕ್ಕಾಗಿ ನಾನು’ ಎಂಬ ಆಶಯಧ್ಯೇಯವನ್ನು ಹೊಂದಿದ್ದು 3 ವಿಷಯಗಳಲ್ಲಿ ಜಾಗೃತಿ ಮೂಡಿಸಲಿದೆ.

1.      ಸ್ವಾವಲಂಬನೆ: ನಾನು ಸ್ವಾವಲಂಬಿ, ನನ್ನ ಕುಟುಂಬವೂ ಸ್ವಾವಲಂಬಿ

2.     ಸ್ವಾಭಿಮಾನ: ನನ್ನ ದೇಶ, ನನ್ನ ಹೆಮ್ಮೆ

3.     ಸ್ವದೇಶಿ: ಸ್ವದೇಶಿ ಜೀವನಶೈಲಿ, ಸ್ವದೇಶಿ ವಸ್ತು ಬಳಕೆ 

ಅಭಿಯಾನಕ್ಕೆ ಚಾಲನೆ: ಜನವರಿ 12, 2022ರಂದು ಸ್ವಾಮಿ ವಿವೇಕಾನಂದರ 159ನೇ ಜಯಂತಿಯನ್ನು `ಉತ್ತಮನಾಗು-ಉಪಕಾರಿಯಾಗು’ (‘Be Good Do Good) ಎಂಬ ಸಂದೇಶದೊAದಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಆಚರಿಸುವುದರೊಂದಿಗೆ ಅಭಿಯಾನ ಪ್ರಾರಂಭಗೊಳ್ಳಲಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ:  ಈ ಅಭಿಯಾನದ ನಿಮಿತ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ: ‘ಸ್ವಾತಂತ್ರö್ಯಸAಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರದ ಪ್ರಭಾವ’. Influence of Swami Vivekananda’s Thoughts on Freedom Movement. ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಬಹುಮಾನ ರೂ 10,000. ದ್ವಿತೀಯ ಬಹುಮಾನ ರೂ 7500, ತೃತೀಯ ಬಹುಮಾನ ರೂ 5000 ಹಾಗೂ ತಲಾ ರೂ 1000 ದಂತೆ 20 ಸಮಾಧಾನಕರ ಬಹುಮಾನಗಳನ್ನು ಪ್ರಶಸ್ತಿಪತ್ರ ಸಹಿತ ನೀಡಲಾಗುತ್ತದೆ. 2500 ಪದಗಳ ಮಿತಿಯಲ್ಲಿ, ಸ್ವಹಸ್ತಾಕ್ಷರದಲ್ಲಿ ಬರೆದ ಪ್ರಬಂಧಗಳನ್ನು ಜನವರಿ 31, 2022ರ ಒಳಗೆ ಅಂಚೆ ಮೂಲಕ ಕಳುಹಿಸಿಕೊಡಬೇಕು. ವಿಳಾಸ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಂಗಳೂರು 560001. ಮಾಹಿತಿಗಾಗಿ 9483150527

ಆನ್‌ಲೈನ್ ಉಪನ್ಯಾಸ ಸರಣಿ:

ಜನವರಿ 12 ರಿಂದ 26 ತನಕ ಅಭಿಯಾನದ ನಿಮಿತ್ತ ಪ್ರತಿದಿನ ಸಂಜೆ 6.00 ಕ್ಕೆ ಸಮರ್ಥ ಭಾರತ ಫೇಸ್‌ಬುಕ್ www.facebook.com/SamarthaBharata  ಮೂಲಕ ಆನ್‌ಲೈನ್ ಉಪನ್ಯಾಸ ಕರ‍್ಯಕ್ರಮಗಳು ನಡೆಯಲಿದ್ದು ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು, ಚಿಂತಕರು, ಲೇಖಕರು, ಯುವಸಾಧಕರು, ಸಾಮಾಜಿಕ ಕಾರ‍್ಯಕರ್ತರು ಸ್ವಾಮಿ ವಿವೇಕಾನಂದರ ಜೀವನ-ವಿಚಾರಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾವಿರಾರು ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಯುವಉದ್ಯೋಗಿಗಳು ಈ 15 ದಿನಗಳ ಫೇಸ್‌ಬುಕ್ ಲೈವ್ ಉಪನ್ಯಾಸ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ವಾಕಥಾನ್: ಜನವರಿ 26, 2022ರಂದು ಬೆಳಗ್ಗೆ 7.30 ಗಂಟೆಗೆ ಅನೇಕ ಜಿಲ್ಲೆಗಳಲ್ಲಿ ಕೋವಿಡ್ ನಿಯಮಾವಳಿಗನುಸಾರವಾಗಿ ವಾಕಥಾನ್ (ಕಾಲ್ನಡಿಗೆ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರ ಉತ್ತಮನಾಗು-ಉಪಕಾರಿಯಾಗು’ (BE GOOD – DO GOOD) ಎಂಬ ಸಂದೇಶದೊAದಿಗೆ ಯುವಕ-ಯುವತಿಯರು ಹೆಜ್ಜೆಹಾಕಲಿದ್ದಾರೆ. ಸಾಮಾಜಿಕ ಕರ‍್ಯಗಳಲ್ಲಿ ಸಕ್ರಿಯರಾಗಿರುವ ಯುವಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಇದರಿಂದ ಅನೇಕ ಯುವಕ-ಯುವತಿಯರು ತಾವೂ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗುವ ಪ್ರೇರಣೆ ಪಡೆಯುತ್ತಾರೆ.

ಅಭಿಯಾನಕ್ಕೆ ದನಿಗೂಡಿಸಿದ ಗಣ್ಯರು:

ಅನೇಕ ಸಂಘಸAಸ್ಥೆಗಳು, ವಿದ್ಯಾಸಂಸ್ಥೆಗಳು, ಸಾಂಸ್ಕöÈತಿಕ ಸಂಘಗಳು, ಸಮಾಜದ ಅನೇಕ ಕ್ಷೇತ್ರಗಳ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ. ಡಾ|| ಡಿ.ವೀರೇಂದ್ರ ಹೆಗ್ಗಡೆ, ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಶ್ರೀ ರವಿಶಂಕರ್ ಗುರೂಜಿ, ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮöÈತಿ ಇರಾನಿ, ಇಸ್ರೋದ ಡಾ. ಕೆ, ರಾಧಾಕೃಷ್ಣನ್, ಡಾ|| ಮೈಲಸ್ವಾಮಿ ಅಣ್ಣಾದೊರೈ, ಲಕ್ಷಿ÷್ಮ ಗೋಪಾಲಸ್ವಾಮಿ, ಮೇಜರ್ ಭಾವನಾ, ಅಶ್ವಿನಿ ಅಂಗಡಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಡಾ|| ದೇವಿ ಶೆಟ್ಟಿ, ಮಮತಾ ಪೂಜಾರಿ, ಚಕ್ರವರ್ತಿ ಸೂಲಿಬೆಲೆ, ಅಭಿಮನ್ಯು ಮಿಥುನ್, ಗುರುಕಿರಣ್, ಅರ್ಜುನ್ ದೇವಯ್ಯ ಸೇರಿದಂತೆ ಅನೇಕ ಗಣ್ಯರು, ಶಿಕ್ಷಣತಜ್ಞರು, ಸಾಮಾಜಿಕ ಕಾರ್ಯಕರ್ತರು ಬಿ ಗುಡ್ ಡು ಗುಡ್ ಅಭಿಯಾನಕ್ಕೆ  ಶುಭಹಾರೈಸಿ ಹೆಚ್ಚಿನ ಸಂಖೈಯಲ್ಲಿ ಯುವಕ ಯುವತಿಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದ್ದಾರೆ.

        ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9113263342

            ಎಲ್ಲಾ ವಿವರಗಳು www.samarthabharata.org ನಲ್ಲಿ ಲಭ್ಯವಿರುತ್ತದೆ.

************************************************************************************

  • email
  • facebook
  • twitter
  • google+
  • WhatsApp
Tags: begooddogoodSamartha bharataswami vivekananda

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಗಳು – ಶ್ರೀ ಸುನೀಲ್ ಅಂಬೇಕರ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಗಳು - ಶ್ರೀ ಸುನೀಲ್ ಅಂಬೇಕರ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS Statement on Goa; “No unit of RSS can dissociate from a Prant as its own”: Dr Vaidya.

RSS Statement on Goa; “No unit of RSS can dissociate from a Prant as its own”: Dr Vaidya.

September 2, 2016
ನೆರೆ ರಾಷ್ಟ್ರಗಳೊಂದಿಗೆ ವ್ಯೂಹಾತ್ಮಕ ವ್ಯಹವಾರ ಇಂದಿನ ಅಗತ್ಯ: ಹುಬ್ಬಳ್ಳಿಯಲ್ಲಿ ರಾಮ್ ಮಾಧಮ್

ನೆರೆ ರಾಷ್ಟ್ರಗಳೊಂದಿಗೆ ವ್ಯೂಹಾತ್ಮಕ ವ್ಯಹವಾರ ಇಂದಿನ ಅಗತ್ಯ: ಹುಬ್ಬಳ್ಳಿಯಲ್ಲಿ ರಾಮ್ ಮಾಧಮ್

August 25, 2019
‘Nothing anti-India should be tolerated’: RSS Prachar Pramukh Dr Manmohan Vaidya’s interview to Economic Times

Political parties must understand why people are turning towards RSS

March 29, 2019
RSS ABPS passes Resolution-2 : ‘Elementary Education in Mother Language’

RSS ABPS passes Resolution-2 : ‘Elementary Education in Mother Language’

March 15, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In