• Samvada
  • Videos
  • Categories
  • Events
  • About Us
  • Contact Us
Wednesday, May 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home BOOK REVIEW

ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ

Vishwa Samvada Kendra by Vishwa Samvada Kendra
December 25, 2020
in BOOK REVIEW
251
0
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
492
SHARES
1.4k
VIEWS
Share on FacebookShare on Twitter

ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ

ಮೂಲ ತೆಲಗು ಭಾಷಿಗ ದಲಿತ ಹೆಣ್ಣುಮಗಳು, ತಮಿಳುನಾಡಿನ ಶಿವಗಂಗೆ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಹೋರಾಟ, ಪ್ರಾಣಾರ್ಪಣೆಯ ಕಥನ ಇದೀಗ ಮೊದಲಬಾರಿಗೆ ಕನ್ನಡದಲ್ಲಿ ಪುಸ್ತಕವಾಗಿ ಹೊರಬರುತ್ತಿದೆ.

READ ALSO

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

Conflict resolution : The RSS way

ತಮಿಳುನಾಡಿನ ಕುಂಡಚವಾಡಿಯಲ್ಲಿ ಅರುಂಧತಿಯಾರ್ ಸಮಾಜದ ಪೆರಿಯಮುತ್ತನ್ – ರಾಕು ದಂಪತಿಗಳ ಮಗಳು ಕುಯಿಲಿ. ತಾಯಿ ರಾಕುವಿನದು ಕೊಬ್ಬಿದ ಗೂಳಿಗಳನ್ನು ಪಳಗಿಸುವ ಕಾಯಕ. ತಂದೆ ಪೆರಿಯಮುತ್ತನ್ ಕುದುರೆ ಲಾಯದಲ್ಲಿ ದುಡಿಯುವವನು . ಮಗಳು ಕುಯಿಲಿಗೆ ಸಾಹಸ ಪ್ರವೃತ್ತಿ ರಕ್ತದಲ್ಲೇ ಇತ್ತೇನೊ!

ವಿಲಕ್ಷಣ ಸನ್ನಿವೇಶದಲ್ಲಿ ಕಾಡುಪಾಲಾದ ಶಿವಗಂಗೆಯ ರಾಜಮನೆತನದ ರಾಣಿ ವೇಲುನಾಚಿಯಾರ್ ಕಟ್ಟಿದ ಐದು ಸಾವಿರ ಮಹಿಳಾ ಸೈನಿಕರ ಪಡೆಗೆ ಅಧಿನಾಯಕಿಯಾದವಳು ಕುಯಿಲಿ .

ಬ್ರಿಟಿಷ್ ಸೈನ್ಯ, ಆರ್ಕಾಟ್ ನವಾಬ ಒಟ್ಟಾಗಿ 1772ರಲ್ಲಿ ಶಿವಗಂಗೆಯ ಮೇಲೆ ನೆಡಸಿದ ಆಕ್ರಮಣದಲ್ಲಿ ರಾಜ ಮನ್ನಾರ್ ಮುತ್ತುವದುಗಂತಾರ್ ಮತ್ತು ಮಗಳು ಗೌರಿ ಸಾವಿಗೀಡಾಗುತ್ತಾರೆ. ಬ್ರಿಟಿಷರ ಅಪಾರ ಶಸ್ತ್ರಾಸ್ತ್ರ ಸಂಗ್ರಹದೆದುರು ಶಿವಗಂಗೆಯ ಸೈನಿಕರ ಪರಾಕ್ರಮ ಸಾಕಾಗುವುದಿಲ್ಲ. ಆಗಲೇ ರಾಣಿ ವೇಲುನಾಚಿಯಾರ್ ಮತ್ತೆ ಸೈನ್ಯ ಕಟ್ಟಲು ಕಾಡು ಸೇರಿದ್ದು. ಅಲ್ಲಿಯೇ ಕುಯಿಲಿಗೂ ಸೈನ್ಯ ತರಬೇತಿ ಸಿಕ್ಕಿದ್ದು .

ಯುದ್ಧಕಲೆ ಕಲಿಸುತ್ತಿದ್ದ ತರಬೇತುದಾರನೊಬ್ಬ ಆರ್ಕಾಟ್ ನವಾಬನ ಆಮಿಷಕ್ಕೆ ಬಿದ್ದು ರಾಣಿಯನ್ನು ಮೋಸದಿಂದ ಮುಗಿಸಲು ಗುಪ್ತಸಂಚು ನೆಡಸುತ್ತಿರುವದನ್ನು ಕುಯಿಲಿ ಪತ್ತೆ ಹಚ್ಚುತ್ತಾಳೆ. ಸಂಚುಗಾರ ತರಬೇತುದಾರನಿಗೆ ಗತಿ ಕಾಣಿಸುತ್ತಾಳೆ. ಇದರಿಂದಾಗಿ ಕುಯಿಲಿ ರಾಣಿಗೆ ನಂಬಿಕಸ್ಥ ಬಂಟಳಾಗುತ್ತಾಳೆ .

ಮಹಿಳಾ ಪಡೆಯೊಂದಿಗೆ ಮತೈದು ಸಾವಿರ ಅಶ್ವದಳವೂ ಸಿದ್ಧವಾಗುತ್ತದೆ. ಇಷ್ಟೆಲ್ಲ ತಯಾರಿಗೆ ಎಂಟು ವರ್ಷಗಳೇ ಬೇಕಾಗುತ್ತದೆ. ಆದರೂ ರಾಣಿ ವೇಲೂನಾಚಿಯಾರ್ ಗೆ ವಿಶ್ವಾಸ ಸಾಕಾಗುವುದಿಲ್ಲ, ಸೈನ್ಯದ ಶೌರ್ಯ, ಪರಾಕ್ರಮವೇನೋ ಸರಿ. ಆದರೆ ಶತೃರಾಜ್ಯದಲ್ಲಿನ ಅಧುನಿಕ ಶಸ್ತ್ರಾಸ್ತ್ರಗಳನ್ನು ಸರಿಗಟ್ಟುವುದು ಹೇಗೆ? ಕುಯಿಲಿ ಅದಕ್ಕೊಂದು ಷಡ್ಯಂತ್ರ ಹೆಣೆಯುತ್ತಾಳೆ.

ಶಿವಗಂಗೆಯಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಗೋದಾಮು, ಅದರ ಪಕ್ಕದಲ್ಲೇ ಚಿಕ್ಕದೊಂದು ರಾಜರಾಜೇಶ್ವರಿ ದೇಗುಲ. ಅವತ್ತು ೧೭೮೦ನೇ ಇಸವಿಯ ವಿಜಯದಶಮಿ, ನವರಾತ್ರಿಯ ಕೊನೇ ದಿನ. ಕುಯಿಲಿ ಕೆಲ ಗೆಳತಿಯರೊಂದಿಗೆ ದೇಗುಲಕ್ಕೆ ತೆರಳಿದಳು . ಕಾವಲಿಗಿದ್ದ ಭಟರು ಬಡಪಾಯಿ ಹೆಣ್ಣುಮಕ್ಕಳೆಂದು ನಿರ್ಲಕ್ಷಿಸಿದರು. ಸ್ವಲ್ಪ ಹೊತ್ತಷ್ಟೆ. ಗೋದಾಮು ಸ್ಫೋಟಿಸಿತು . ಊರಿಗೆ ಊರೇ ಬೆಚ್ಚಿ ಬೀಳುವಂತಹ ಶಬ್ದ, ಬೆಂಕಿಯ ಕೆನ್ನಾಲಿಗೆ. ಇಡೀ ಶಸ್ತ್ರಾಗಾರ ಸುಟ್ಟುಬೂದಿ. ಅದೇ ಕ್ಷಣವೆ ರಾಣಿ ವೇಲುನಾಚಿಯಾರ್ ಸೈನ್ಯ ಶಿವಗಂಗೆಯ ಮೇಲೆ ಎರಗಿತು. ಸಿದ್ಧತೆಯೂ ಇಲ್ಲದೆ , ಶಸ್ತ್ರಾಸ್ತ್ರಗಳಿಲ್ಲದೆ ವೈರಿ ಪಡೆ ಕಂಗಾಲು. ನೋಡುನೋಡುತ್ತಿದ್ದಂತೆ ಹಾರಿದ ವಿಜಯಪತಾಕೆ . ಸೋತು ದಿಕ್ಕೆಟ್ಟು ಓಡಿದ ಶತೃಸೈನ್ಯ …..

ಕುಯಿಲಿಯ ಯೋಜನೆ ಫಲಿಸಿತು . ರಾಜರಾಜೇಶ್ವರಿಯ ಪೂಜೆಗೆಂದು ತಂದ ತುಪ್ಪವನ್ನು ತಾನೇ ಸುರಿದುಕೊಂಡಿದ್ದಳು . ಬೆಳಗಬೇಕಾದ ದೀಪದಿಂದಲೇ ಮೈಗೆ ಬೆಂಕಿ ಹಚ್ಚಿಕೊಂಡಿದ್ದಳು . ಗೋದಾಮಿನ ಮೇಲೆ ಧುಮಿಕಿದ್ದಳು …..

ಅದೊಂದು ಐತಿಹಾಸಿಕ ಅತ್ಮಾರ್ಪಣೆ !

ಯುದ್ಧ ಗೆದ್ದ ರಾಣಿ ವೇಲುನಾಚಿಯಾರ್ ರಾಜರಾಜೇಶ್ವರಿ ದೇಗುಲದತ್ತ ಧಾವಿಸಿದಳು. ಸುಟ್ಟು ಕರಕಲಾದ ಕುಯಿಲಿಯನ್ನು ತೊಡೆಯ ಮೇಲಿಟ್ಟುಕೊಂಡು ಕಣ್ಣೀರಾದಳು .

ಅಮರಳಾದಳು ಕುಯಿಲಿ ಕನ್ನಡದ ಓಬವ್ವಳಂತೆ!

ಆರ್ಕಾಟ್ ನವಾಬನ ಕೌರ್ಯಕ್ಕೆ ಸಿಲುಕಿ ಹುಸೈನ್ ನಗರವಾದದ್ದು ಮತ್ತೆ ಶಿವಗಂಗೆಯಾಯಿತು .

************

ಇಂತಹದೊಂದು ಐತಿಹಾಸಿಕ ವಿದ್ಯಮಾನವನ್ನು ಹುಡುಕಿ ತೆಗೆದು, ದಾಖಲೆಗಳನ್ನು ಶೋಧಿಸಿ ‘ಬೆಂಕಿಯ ಚೆಂಡು ಕುಯಿಲಿ’ ಪುಸ್ತಕ ಬರೆದವರು ಮೈಸೂರಿನ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಓ ಶಾಮಭಟ್ . ಈ ಹಿಂದೆ ಅವರು ಸಮಾಜ ಸುಧಾರಕ ನಾರಯಣಗುರುಗಳ ಬಗ್ಗೆಯೂ ಪುಸ್ತಕ ಬರೆದು ಗಮನ ಸೆಳೆದವರು. ವಾಸ್ತವದಲ್ಲಿ ಶಾಮಭಟ್ಟರಿಗೆ ಬರವಣಿಗೆ ಅಧ್ಯತೆಯ ವಿಷಯವಲ್ಲ. ಸಮಾಜಕ್ಕಾಗಿ ಧುಮುಕಿ ಕೆಲಸ ಮಾಡುವುದು ಅವರ ಆಧ್ಯತೆ. ಬಡಾವಣೆಯ ಪೌರಕಾರ್ಮಿಕರನ್ನು ಮನೆಗೆ ಕರೆದು ಸತ್ಕರಿಸಿ ಹೊಸ ಮನೆಯ ಗೃಹಪ್ರವೇಶ ಮಾಡಿದವರು ಶಾಮಭಟ್. ‘ಬೆಂಕಿಯ ಚೆಂಡು…. ‘ ಪುಸ್ತಕ ಮಾದಿಗ ಸಮುದಾಯದಿಂದ ಬಂದ ಕುಯಿಲಿಯ ಕಥೆಯನ್ನಷ್ಟೆ ಹೇಳುವುದಿಲ್ಲ , ತಮಿಳಿನಾಡಿನ ರಾಜಕೀಯ ವೈರುಧ್ಯಗಳನ್ನು ತೆರೆದಿಡುತ್ತದೆ .

ಈ ಅಪರೂಪದ ಪುಸ್ತಕ ಇದೇ ಡಿಸೆಂಬರ್ 26ರಂದು ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ, ಅದಕ್ಕೆಂದೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಮೈಸೂರಿಗೆ ಬರುತ್ತಿದ್ದಾರೆ.

ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ
  • email
  • facebook
  • twitter
  • google+
  • WhatsApp

Related Posts

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
BOOK REVIEW

Conflict resolution : The RSS way

April 21, 2022
BOOK REVIEW

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

February 28, 2022
BOOK REVIEW

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

January 29, 2022
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

April 28, 2021
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
BOOK REVIEW

ಹುತಾತ್ಮ ಕುಯಿಲಿ, ಹೇಗಾದಾಳು ಎಲ್ಟಿಟಿಇ?

April 9, 2021
Next Post
ವಾಸ್ತವದಲ್ಲಿ ಮಕ್ಕಳ ದಿನಾಚರಣೆ ನಡೆಯಬೇಕಿರುವುದು ಡಿಸೆಂಬರ್ 26ರಂದು!

ವಾಸ್ತವದಲ್ಲಿ ಮಕ್ಕಳ ದಿನಾಚರಣೆ ನಡೆಯಬೇಕಿರುವುದು ಡಿಸೆಂಬರ್ 26ರಂದು!

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

Vijayadashami – Live from Nagpur

October 11, 2016
4 terrorists killed in Kashmir gun battle

4 terrorists killed in Kashmir gun battle

September 27, 2011
ವಿಭಿನ್ನ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ : ಮುಕುಂದ

ವಿಭಿನ್ನ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ : ಮುಕುಂದ

March 7, 2021
Bangalore gets ready for Seva Bharathi convention

Bangalore gets ready for Seva Bharathi convention

February 20, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In