• Samvada
  • Videos
  • Categories
  • Events
  • About Us
  • Contact Us
Friday, January 27, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ದೇಶಕ್ಕೆ ಒಂದೇ ಧ್ವಜ: 1952ರ ಜಮ್ಮು ಕಾಶ್ಮೀರದ ಪ್ರತ್ಯೇಕತೆಯ ಧ್ವಜವನ್ನು ಇಲ್ಲವಾಗಿಸಿದ ಕಥೆ

Vishwa Samvada Kendra by Vishwa Samvada Kendra
June 8, 2020
in Articles
250
0
End of an era when ‘doosra nishan’ prevailed
491
SHARES
1.4k
VIEWS
Share on FacebookShare on Twitter

ದೇಶಕ್ಕೆ ಒಂದೇ ಧ್ವಜ: 1952ರ  ಜಮ್ಮು ಕಾಶ್ಮೀರದ ಪ್ರತ್ಯೇಕತೆಯ ಧ್ವಜವನ್ನು ಇಲ್ಲವಾಗಿಸಿದ ಕಥೆ

ಕೃಪೆ: news13.in

ನವದೆಹಲಿ: 1952 ಜೂನ್ 7, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರೆಯಾಗಿಸಿ ದೇಶದೊಳಗೆಯೇ ಮತ್ತೊಂದು ದೇಶ (ಕಾಶ್ಮೀರ) ವನ್ನು ನಿರ್ಮಿಸುವ ಕೆಲಸವನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಶೇಕ್ ಮಹಮ್ಮದ್ ಅಬ್ದುಲ್ಲಾ ಭರ್ಜರಿಯಾಗಿಯೇ ಮಾಡುವ ಉತ್ಸಾಹದಲ್ಲಿದ್ದರು. ಪ್ರತ್ಯೇಕ ರಾಷ್ಟ್ರ, ಪ್ರತ್ಯೇಕ ಧ್ವಜದ ಕಲ್ಪನೆಗಳಿಗೆ ಸಾಕಾರ ರೂಪ ಕೊಡುವ ನಿಟ್ಟಿನಲ್ಲಿ ತಮ್ಮ ಬೆಂಬಲಿಗರ ಸಹಕಾರದೊಂದಿಗೆ ಪೂರಕವಾದ ಎಲ್ಲಾ ಕೆಲಸವನ್ನೂ ಸಂವಿಧಾನ ಸಭೆಯಲ್ಲಿ ಶೇಕ್ ಮಾಡಿದ್ದರು. ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ಆಗಿದ್ದವರು ನೆಹರೂ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

7 ಜೂನ್ 1957 ರಲ್ಲಿ ಜಮ್ಮು- ಕಾಶ್ಮೀರದ ಸಂವಿಧಾನ ಸಭೆಯಲ್ಲಿ ಕಣಿವೆ ರಾಜ್ಯವನ್ನು ಪ್ರತ್ಯೇಕ ಮಾಡುವ ಪ್ರತ್ಯೇಕ ಧ್ವಜ ಅಳವಡಿಸಿಕೊಳ್ಳುವ ನಿರ್ಣಯವನ್ನು ಮಂಡಿಸಲು ಶೇಕ್ ಯೋಚಿಸಿದ್ದರು. ಅವರನ್ನು ಜಮ್ಮು ಕಾಶ್ಮೀರದ ಪ್ರಧಾನಿ ಎಂದೇ ಕರೆಯಲಾಗುತ್ತಿತ್ತು. ಆ ಮೂಲಕ 2 ಪ್ರಧಾನ್, 2 ನಿಶಾನ್, 2 ವಿಧಾನ್ ಎಂಬಂತೆ ಭಾರತದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದೇ ದೇಶದಲ್ಲಿ ಎರಡು ರಾಷ್ಟ್ರದ ಕಲ್ಪನೆ, ಇಬ್ಬರು ಪ್ರಧಾನಿಗಳು, 2 ಸಂವಿಧಾನದ ಮೂಲಕ ದೇಶವನ್ನು ಪ್ರತ್ಯೇಕ ಮಾಡುವ ಕಾರ್ಯದಲ್ಲಿ ಶೇಕ್ ಮತ್ತವರ ಸಹಚರರು ಗೆಲುವು ಸಾಧಿಸಿದ್ದರು. ಪ್ರಪ್ರಥಮವಾಗಿ ಪ್ರತ್ಯೇಕ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸಿಯೇ ಬಿಟ್ಟರು.

ಆದರೆ ಈ ನಿರ್ಣಯಕ್ಕೆ ಭಾರತದ ಶ್ಯಾಮ ಪ್ರಸಾದ್ ಮುಖರ್ಜಿ ಅವರಂತಹ ಅನೇಕ ದೇಶಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್ ಮೂಲಕ ಏಕ ರಾಷ್ಟ್ರದ ಪರಿಕಲ್ಪನೆ ಹೊಂದಿದ್ದ ಅದೆಷ್ಟೋ ದೇಶಭಕ್ತರಿಗೆ ಪ್ರತ್ಯೇಕ ಕಾಶ್ಮೀರ ನೋವಿನ ಸಂಗತಿಯಾಗಿತ್ತು. ಜನ ಸಂಘದ ಸ್ಥಾಪಕ ಮುಖರ್ಜಿ ಅವರು, ಸಭೆಯಲ್ಲಿಯೇ ಇದನ್ನು ವಿರೋಧಿಸಿದ್ದರು. ಪ್ರಧಾನಿ ನೆಹರೂ ಅವರು ಕಾಶ್ಮೀರಕ್ಕೆ ನೀಡಿದ ಪ್ರತ್ಯೇಕತೆಯ ದನಿ ಆರ್ಟಿಕಲ್ 370ಯಿಂದಲೇ ದೇಶ ಅನೇಕ ಕಷ್ಟವನ್ನೆದುರಿಸಲಾರಂಭಿಸಿದೆ‌. ಇನ್ನು ಪ್ರತ್ಯೇಕ ಧ್ವಜ ಒಂದು ರಾಷ್ಟ್ರದೊಳಗೆ ಮತ್ತೊಂದು ರಾಷ್ಟ್ರವನ್ನು ನಿರ್ಮಿಸಿದಂತಾಗಿ ಏಕತೆಯ ಸಂದೇಶಕ್ಕೆ ಧಕ್ಕೆ ಉಂಟುಮಾಡುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂಬುದಾಗಿಯೂ ಮುಖರ್ಜಿ ಅವರು ವಾದಿಸಿದ್ದರು. ಆದರೆ ನೆಹರೂ ಅವರ ಮಾತನ್ನು ಪರಿಗಣಿಸದೆ, ಅವರ ಸ್ನೇಹಿತನಿಗೆ ಬೇಕಾದಂತೆ ಕಾನೂನು ಬದಲಿಸಿದರು. ಅಲ್ಲಿಗೆ ಏಕರಾಷ್ಟ್ರದ ಏಕತೆಯ ಧ್ಯೇಯ ಛಿದ್ರವಾಯಿತು.

ಕೊನೆಗೂ ಅಧಿವೇಶನದಲ್ಲಿ ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಬಂತು. ಕೆಂಪು ಬಣ್ಣದ, 2.3 ಇಂಚು ಉದ್ದದ, ಮಧ್ಯೆ 3 ಲಂಬ ಗೆರೆಗಳು ಮತ್ತು ನೇಗಿಲಿನ ಚಿತ್ರದ ಬಾವುಟ ಕಾಶ್ಮೀರದಲ್ಲಿ ಹಾರಿಯೇ ಬಿಟ್ಟಿತು. ಇದು ಕಾಶ್ಮೀರವನ್ನು ಸ್ವಲ್ಪ ವಿಶೇಷ ಎನ್ನುವ ಸ್ಥಾನಕ್ಕೆ ಕೊಂಡೊಯ್ಯಿತು. ಕೊನೆಗೂ ನೆಹರು ಸಹಾಯದಿಂದ ಕೋಟ್ಯಂತರ ಜನರ ಏಕತೆಯ ಮಂತ್ರಕ್ಕೆ ಬೆಂಕಿ ಇಟ್ಟು ಶೇಕ್ ತಮ್ಮ ಆಸೆ ನೆರವೇರಿಸಿಕೊಳ್ಳುವಲ್ಲಿ ಯಶಸ್ವಿ ಹೆಜ್ಜೆ ನೆಟ್ಟರು. ಇದು ಶೇಕ್ ರಿಗೆ ನಾಯಕನ ಪಟ್ಟ ಮತ್ತು ಭಾರತದ ಸಾರ್ವಭೌಮತೆ ಪ್ರಶ್ನಿಸುವ ಅಧಿಕಾರವನ್ನು ತಂದುಕೊಟ್ಟಿತು.

ಮುಖರ್ಜಿ ಅವರಂತಹ ನೂರಾರು ದೇಶಭಕ್ತರ ಕನಸು ಕಳೆದ ಆರೇಳು ದಶಕಗಳಿಂದ ನನಸಾಗಲೇ ಇಲ್ಲ. ಏಕತೆ ಕೇವಲ ಮಾತಾಗಿಯೇ ಉಳಿಯಿತಲ್ಲದೆ ನಿಜಾರ್ಥವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಆದರೆ 2019 ರ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಜಾರಿಗೊಳಿಸುವ ಸಲುವಾಗಿ ಕೆಲಸ ಮಾಡಲಾರಂಭಿಸಿತು. ಸಾಂವಿಧಾನಿಕ ಬದಲಾವಣೆಯ ಮೂಲಕ ಭಾರತದ ಏಕತೆ, ಸಾರ್ವಭೌಮತೆ ಗೆ ಮತ್ತೆ ಗೌರವ ನೀಡಿತು. ಆರ್ಟಿಕಲ್ 370 ಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನವನ್ನು ಹಿಂಪಡೆದುಕೊಂಡಿತು. ಆ ಮೂಲಕ ಭಾರತದ ಇತರ ರಾಜ್ಯಗಳಂತೆಯೇ ಕಣಿವೆ ರಾಜ್ಯ ಎಂಬುದನ್ನು ಜಗತ್ತಿಗೆ ಸಾರಿತು. ನೆಹರೂ ಬೇಜವಾಬ್ದಾರಿ ಯಿಂದಾಗಿ ಆಗಿದ್ದ ತಪ್ಪನ್ನು ಮೋದಿ ಸರ್ಕಾರ ವಿರೋಧದ ನಡುವೆಯೂ ಸರಿಪಡಿಸಿತು.

1952 ಜೂನ್ 7 ರಂದು ಕಾಶ್ಮೀರದ ಕಛೇರಿ, ಕಟ್ಟಡ, ವಾಹನ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಹಾರಾಡಲಾರಂಭಿಸಿದ ಪ್ರತ್ಯೇಕ ಧ್ವಜ, ಜಾರಿಯಲ್ಲಿದ್ದ ಪ್ರತ್ಯೇಕ ಸಂವಿಧಾನಕ್ಕೆ ಮೋದಿ ಸರ್ಕಾರ ಕೊನೆ ಹಾಡಿತು. 2 ನಿಶಾನ್ 2 ವಿಧಾನ್ ಪರಿಕಲ್ಪನೆಯನ್ನು ರದ್ದುಗೊಳಿಸಿರುವ ಬಗ್ಗೆ ಪ್ರತಿಪಕ್ಷ ಗಳ ವಿರೋಧದ ನಡುವೆಯೂ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ನಲ್ಲಿ ಘೋಷಣೆ ಮಾಡಿದರು. ಆ ಮೂಲಕ ಭಾರತ ಒಂದು ಅಭೂತಪೂರ್ವ ಬದಲಾವಣೆಯತ್ತ ತೆರೆದುಕೊಂಡಿತು. ಈ ಸಂದರ್ಭವನ್ನು ಅಮಿತ್ ಶಾ ಅವರು ನಿಭಾಯಿಸಿದ ಚಾಕಚಕ್ಯತೆ ಮಾತ್ರ ಇಡೀ ದೇಶವನ್ನೇ ನಿಬ್ಬೆರಗು ಮಾಡಿತು.

ಶೇಕ್ ಅವರ ಆಶಯ ಮತ್ತು ಅದಕ್ಕೆ ನೆಹರೂ ಬೆಂಬಲ ಇದೆರಡನ್ನೂ ರದ್ದುಗೊಳಿಸಲು ಮುಖರ್ಜಿ ನೇತೃತ್ವದ ದೇಶಭಕ್ತ ಬಣ ಅಂದಿನಿಂದಲೆ ಕೆಲಸ ಆರಂಭಿಸಿತ್ತು. ಆದರೆ ಈ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ್ದ ಶೇಕ್ ಪ್ರತ್ಯೇಕ ಬಾವುಟದ ಕೆಂಪು ಬಣ್ಣ ಕಾರ್ಮಿಕರನ್ನು ಪ್ರತಿನಿಧಿಸುತ್ತದೆ‌, ಲಂಬ ರೇಖೆಗಳು ಸಮಾನಾಂತರ ಮತ್ತು ಸಮವಾದ ಮಂಡಿಸುತ್ತದೆ ಮತ್ತು ನೇಗಿಲು ರೈತರನ್ನು ಪ್ರತಿಬಿಂಬಿಸುತ್ತದೆ ಎಂದು ಸಮಜಾಯಿಷಿ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಅಂದು ಅಬ್ದುಲ್ ಗನಿಗೋನಿ ಅವರು ತಮ್ಮ ಭಾಷಣದಲ್ಲಿ ಕಾಶ್ಮೀರಕ್ಕೆ ಪ್ರತ್ಯೇಕ ರಾಷ್ಟ್ರೀಯ ಚಿಹ್ನೆ ಬಳಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬಕ್ಷಿ ಗುಲಾಂ ಮೊಹಮ್ಮದ್ ಅವರು ಎಲ್ಲರೂ ಈ ಪ್ರತ್ಯೇಕವಾದವನ್ನು ಬೆಂಬಲಿಸುವಂತೆಯೂ ಸೂಚಿಸಿದ್ದರು. ಜೊತೆಗೆ ಕಾಶ್ಮೀರ ಪ್ರತ್ಯೇಕತಾ ಇರಾದೆ ಹೊಂದಿದ್ದ ಎಲ್ಲರೂ, ರಾಷ್ಟ್ರ ಎಂಬ ಶಬ್ದ ಪ್ರಯೋಗ ಮಾಡುತ್ತಿದ್ದದ್ದು, ಅವರು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಯೋಜನೆ ಹೊಂದಿದ್ದರು ಎಂಬುದಕ್ಕೆ ಸ್ಪಷ್ಟ ನಿದರ್ಶನ.

ಇವೆಲ್ಲದರ ನಡುವೆ ಮಿರ್ ಖಾಸಿಂ ಅವರು ಇದರ ವಿರುದ್ಧ ತಮ್ಮ ಅಭಿಪ್ರಾಯ ಮಂಡಿಸುವಾಗ ಈ ನಿರ್ಣಯದಿಂದ ಪ್ರತ್ಯೇಕ ಪತಾಕೆ, ಪ್ರತ್ಯೇಕ ರಾಷ್ಟ್ರ ಎಂಬ ಶಬ್ಧವನ್ನು ತೆಗೆದು ಹಾಕುವಂತೆ ಸೂಚಿಸಿದರು. ಅದಕ್ಕೆ ಸರ್ದಾರ್ ಹರ್ಬಜನ್ ಸಿಂಗ್ ಅಜಾದ್ ಅವರು ಅನುಮೋದನೆಯನ್ನೂ ನೀಡಿದರು.

ಅಂದು ಕಾಶ್ಮೀರವನ್ನು ದೇಶದೊಳಗೆಯೇ ಉಳಿಸಿಕೊಳ್ಳುವ, ಅದನ್ನು ಭಾರತದ ಇತರ ರಾಜ್ಯಗಳಂತೆಯೇ ನೋಡುವ ಒಟ್ಟಿನಲ್ಲಿ ಹೇಳುವುದಾದರೆ, ಏಕ ಪ್ರಧಾನ್, ಏಕ ನಿಶಾನ್, ಏಕ ವಿಧಾನ್ ಪರಿಕಲ್ಪನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಮೋದಿ ಪಡೆ ಕಾರ್ಯ ತತ್ಪರವಾಗಿದೆ. ಆ ಮೂಲಕ ಏಕತೆಯ ಸಂದೇಶವನ್ನು, ಏಕ ರಾಷ್ಟ್ರ, ಏಕ ಸಂವಿಧಾನದ ಮಹತ್ವವನ್ನು ದೇಶದ ಜನರಿಗೆ ತಿಳಿಸುವ ಮೂಲಕ, ವಿಶ್ವಕ್ಕೇ ಏಕತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

  • email
  • facebook
  • twitter
  • google+
  • WhatsApp
Tags: Jammu and KashmirJammu flag

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
Atma Nirbhar Bharath: Freedom from the despondency created by Covid-19

Atma Nirbhar Bharath: Freedom from the despondency created by Covid-19

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ABVP mourns on Thackeray’s demise, says A SAFFRON STORM SUBSIDES

ABVP mourns on Thackeray’s demise, says A SAFFRON STORM SUBSIDES

November 17, 2012
Jagruta Hindu Sangama at BC Road ‘ಜಾಗೃತ ಹಿಂದೂ ಸಂಗಮ’ – ಕೇಸರಿಮಯವಾದ ಬಿ ಸಿ ರೋಡು.

Jagruta Hindu Sangama at BC Road ‘ಜಾಗೃತ ಹಿಂದೂ ಸಂಗಮ’ – ಕೇಸರಿಮಯವಾದ ಬಿ ಸಿ ರೋಡು.

November 9, 2014

Text of Memorandum submitted to Governor

July 7, 2012
Ram Mandir at Ayodhya should start soon after eliminating all odds

Ram Mandir at Ayodhya should start soon after eliminating all odds

November 24, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In