• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಧರಂಪಾಲ್ ಎಂಬ ಪುನರುತ್ಥಾನದ ತೋರುಗಂಬ

Vishwa Samvada Kendra by Vishwa Samvada Kendra
March 1, 2021
in Articles
250
0
ಧರಂಪಾಲ್ ಎಂಬ ಪುನರುತ್ಥಾನದ ತೋರುಗಂಬ
491
SHARES
1.4k
VIEWS
Share on FacebookShare on Twitter

ಯಾವ ದೇಶದ ಯುವಜನತೆ ತನ್ನ ಭೂತಕಾಲವನ್ನು ಮರೆಯುತ್ತದೆಯೋ ಆ ದೇಶಕ್ಕೆ ಭವಿಷ್ಯವೂ ಇಲ್ಲʼ ಎಂಬುದು ಪ್ರಸಿದ್ಧ ಪಾಶ್ಚಾತ್ಯ ಚಿಂತಕ ಖಲೀಲ್ ಗಿಬ್ರಾನ್ ನ ಮಾತು. ನಿಜವೂ ಹೌದು. ಆದರೆ ಪರಕೀಯರೇ ಬರೆದ ಚರಿತ್ರೆ, ಇತಿಹಾಸಗಳನ್ನು ಈಗಲೂ ಓದುವ ನಮ್ಮ ಯುವಜನತೆ ಭಾರತದ ಭವಿತವ್ಯವನ್ನು ಯಾವ ನೆಲೆಯ ಮೇಲೆ ನಿರ್ಮಿಸಬೇಕೆಂಬ ಗೊಂದಲದಲ್ಲಿ ಮುಳುಗಿರುವುದು ಸತ್ಯ. ಇಂತಹ ಕತ್ತಲ ನಿವಾರಣೆಗೆ ಧರಂಪಾಲರಂತಹ ಈ ನೆಲದ ನಿಜವಾದ ಸತ್ವವನ್ನು ಅಧಿಕೃತವಾಗಿ ಹೇಳಬಲ್ಲವರ ಮಾತುಗಳು ಬೆಳಕಾಗುತ್ತವೆ.

ಭಾರತದ ಶಿಕ್ಷಣ ವ್ಯವಸ್ಥೆ ಬ್ರಿಟಿಷರು ಕಾಲಿಡುವುದಕ್ಕೆ ಮುಂಚೆ ಹೇಗಿತ್ತು, ಎಷ್ಟು ವಿಸ್ತಾರವಾಗಿ ಹಾಗೂ ವ್ಯವಸ್ಥಿತವಾಗಿತ್ತು? ಎಂಬುದನ್ನು ಅವರ ʼಬ್ಯೂಟಿಫುಲ್ ಟ್ರೀʼ ಪುಸ್ತಕ ಕಟ್ಟಿ ಕೊಡುತ್ತದೆ. ಇದರ ಆಧಾರದ ಮೇಲೆ ಭಾರತೀಯ ಶಿಕ್ಷಣದ ಭವ್ಯತೆ ಹಾಗೂ ವೈಜ್ಞಾನಿಕತೆಯನ್ನು ನಾವು ತಿಳಿಯಬಹುದು. ಜಾತಿಗಳೊಳಗಿನ ಮೇಲುಕೀಳು ಎಂಬ ಭ್ರಮೆ ನಿಜವಲ್ಲದ ಆದರೆ ಪ್ರಯತ್ನಪೂರ್ವಕವಾಗಿ ಹುಟ್ಟಿಹಾಕಿದ್ದು ಎಂಬ ವಿಚಾರ ತಿಳಿದು ರೋಮಾಂಚನವಾಗುತ್ತದೆ. ಶಿಕ್ಷಣವು ಬ್ರಾಹ್ಮಣರ ಬುತ್ತಿ ಅದು ಎಲ್ಲರಿಗೂ ಹಂಚಿಕೆಯಾಗುತ್ತಿರಲಿಲ್ಲ ಎಂಬ ಸುಳ್ಳಿನ ಬೃಹತ್ ಬಲೂನನ್ನು ಅವರ ನೀಡುವ ಅಧಿಕೃತ ಅಂಕಿಅಂಶಗಳು ಚುಚ್ಚಿ ಒಡೆದು ಹಾಕುತ್ತವೆ.

ಧರಂಪಾಲ ಸಮಗ್ರ – Dharampal Classics Series 5 Books ಪುಸ್ತಕಗಳನ್ನು ಇಲ್ಲಿ ಖರೀದಿಸಬಹುದು:

https://www.sahityabooks.com/shop/moulika-vaicharika/dharmapal-classics-series-5-books/



ಧರಂಪಾಲರು ಮಾತನಾಡುವುದೆಲ್ಲವೂ ದಾಖಲೆಗಳ ಮೂಲಕವೇ. ತಮ್ಮ ನಿಲುವು ನೋಟಗಳನ್ನು ತಮ್ಮ ಕೃತಿಗಳಲ್ಲಿ ತುಂಬಿರುವುದು ಕಡಿಮೆಯೇ, ಹಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅದಕ್ಕೆ ರಾಶಿಯಾಗಿ ದಾಖಲೆಗಳನ್ನು ಒದಗಿಸುತ್ತಾರೆ. ಮತ್ತು ಇಷ್ಟೆಲ್ಲಾ ದಾಖಲೆಗಳನ್ನು ಅವರ ಒದಗಿಸುವುದು ಲಂಡನ್ನಿನ ಇಂಡಿಯಾ ಅರ್ಕೈವ್ಸ್ ನ ಸಂಗ್ರಹಗಳಿಂದ. ಬ್ರಿಟಿಷ್ ಅಧಿಕಾರಿ, ಲೇಖಕ ಮತ್ತು ಪ್ರವಾಸಿಗಳೇ ನೀಡಿದ ವರದಿ, ಮಾಡಿದ ಟಿಪ್ಪಣಿಗಳನ್ನು ಸುಮಾರು ಒಂದೂವರೆ ದಶಕಗಳ ಕಾಲ ಆಳವಾಗಿ ಅಧ್ಯಯನ ಮಾಡಿ, ಬೇಕಾದ್ದೆಲ್ಲವನ್ನೂ ನಕಲು ಪ್ರತಿ ಮಾಡಿಕೊಂಡು, ಹತ್ತಾರು ಟ್ರಂಕುಗಳಲ್ಲಿ ಹೇರಿಕೊಂಡು ಭಾರತಕ್ಕೆ ತಂದಂತಹ ಅಧ್ಯಯನ ಸಾಮಾಗ್ರಿಯಿಂದ.

ಭಾರತದ ಅಸ್ಮಿತೆ ಏನು ಎನ್ನುವುದರ ಅರಿವನ್ನು ತಮ್ಮ ಆಳವಾದ ಸಂಶೋಧನೆಗಳಿಂದ ತಿಳಿಸಿಕೊಟ್ಟವರು ಧರಂಪಾಲರು. ಗಾಂಧಿವಾದಿಯಾಗಿದ್ದರೂ ಆ ವಿಚಾರಕ್ಕೆ ಹೊಂದಿಸಲು ಸಂಶೋಧನೆಯನ್ನು ಮಾಡದೇ ಸತ್ಯವೆಂದು ಕಂಡಿದ್ದನ್ನೇ ದಾಖಲಿಸಿದರು. ಇದು ಈಗಿನ ಕಾಲಕ್ಕೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೊಂದು ಆದರ್ಶ. ದೇಶದ ಸಮಗ್ರತೆಯ ಹಿನ್ನೆಲೆಯಲ್ಲಿ ಅತ್ಯಂತ ಮೌಲ್ಯಯುತವಾದ ವಿಚಾರಗಳು ಅವರಿಂದ ಮೂಡಿಬಂದವು. ಇಂಗ್ಲಿಷ್ನಲ್ಲಿ 5 ಮತ್ತು ಹಿಂದಿಯಲ್ಲಿ 10 ಸಂಪುಟಗಳಲ್ಲಿ ಅವರ ಕೃತಿಗಳು ಈಗ ಲಭ್ಯ.

1922ರ ಫೆಬ್ರವರಿ 19ರಂದು ಜನಿಸಿದ ಧರಂಪಾಲರು ದಿವಂಗತರಾದದ್ದು 2006ರಲ್ಲಿ. ಪ್ರಸ್ತುತ ವರ್ಷ ಅಂದರೆ 2021 ಧರಂಪಾಲರ ಜನ್ಮ ಶತಮಾನದ ವರ್ಷ. ಇಂತಹ ಒಬ್ಬ ಮಹನೀಯರ ದರ್ಶನ, ಅವರೊಂದಿಗೆ ವಿಚಾರ ವಿನಿಮಯ ಮತ್ತು ಅವರ ಹಲವು ಕೃತಿಗಳನ್ನು ಓದುವ ಸೌಭಾಗ್ಯ ನನಗೆ ಪ್ರಾಪ್ತವಾಗಿದ್ದು ನನ್ನ ಸುಕೃತವೇ. ಹಾಗೇ ನೋಡಿದರೆ ವೈಚಾರಿಕ ಓದಿನ ಕಡೆಗೆ ನನ್ನನ್ನು ಸೆಳೆದದ್ದು ಸಹ ಧರಂಪಾಲರೇ ಎಂದರೆ ಅಚ್ಚರಿಯಿಲ್ಲ. ಅದು ʼಭಾರತ ಜಾಗೃತಿʼ ಎಂಬ ಧರಂಪಾಲರದೇ ವಿಚಾರ ಸಂಗ್ರಹದ ಕೃತಿ. ಕನ್ನಡಕ್ಕೆ ಶ್ರೀಯುತ ಎಸ್ಆರ್ ರಾಮಸ್ವಾಮಿಯವರು ತಂದದ್ದು. ಕಾಲೇಜು ದಿನಗಳಲ್ಲಿ ಆ ಕೃತಿ ನನ್ನ ಮೇಲೆ ಅಪಾರ ಪ್ರಭಾವ ಬೀರಿತು. ಅಲ್ಲಿಯವರೆಗೆ ಇದ್ದ ಐತಿಹಾಸಿಕ ಕತೆ, ಕಾದಂಬರಿಗಳ ಹುಚ್ಚನ್ನು ಬಿಡಿಸಿದ್ದು ಇದೇ ಪುಸ್ತಕ. ಗಾತ್ರದಲ್ಲಿ ಚಿಕ್ಕದು ಆದರೆ ವಿಚಾರದಲ್ಲಿ ಮಹತ್ವದ್ದಾದ ಕೃತಿ.

1999 ಅಥವಾ 2000ನೇ ಇಸವಿಯಲ್ಲಿ ನಾನು ಧರಂಪಾಲರನ್ನು ನೋಡಿದ್ದು. ಅಂದು ಬೆಂಗಳೂರಿನ ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಅವರ ಭೇಟಿ. ಭಾರತೀಯ ಜ್ಞಾನವಿಜ್ಞಾನ ಪರಂಪರೆ, ಯೋಗ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯುಳ್ಳ ಯುವಕಯುವತಿಯರಿಗಾಗಿ ಡಾ ಶ್ಯಾಮಸುಂದರ್ ರವರು ಅಲ್ಲಿ ನಿವಾಸಿ ಶಿಬಿರಗಳನ್ನು ಏರ್ಪಡಿಸುತ್ತಿದ್ದರು. ನಾನು ಸಹ ಕಾರ್ಯಕರ್ತನಾಗಿ ಅದರ ನಿರ್ವಹಣೆಯಲ್ಲಿ ಸಕ್ರಿಯನಾಗಿದ್ದೆ. ಆ ದಿನ ನಾವು ನಿಗದಿಗೊಳಿಸಿದ ಉಪನ್ಯಾಸಗಳು ಎಲ್ಲ ಮುಗಿದಿದ್ದರೂ ಸಹ ಧರಂಪಾಲರು ಅದೇ ಕೇಂದ್ರದಲ್ಲಿ ವಿಶ್ರಾಂತಿಯಲ್ಲಿದ್ದಾರೆಂದು ತಿಳಿದು ಅವರ ಭೇಟಿಗೆ ಹೋದೆವು. ಅತ್ಯಂತ ಆಪ್ತ ಹಿರಿಯರನ್ನು ಕಂಡ ಭಾವ. ಜ್ಞಾನದ ಅಹಂಕಾರ ಯಾವುದೇ ರೀತಿಯಲ್ಲೂ ಅವರ ಹತ್ತಿರವೂ ಸುಳಿದಿರಲಿಲ್ಲ. ನಮ್ಮಂತಹ ಚಿಗುರು ಮೀಸೆಯವರ ಪ್ರಶ್ನೆಗಳನ್ನೂ ಗಂಭೀರವಾಗಿ ಆಲಿಸುತ್ತಿದ್ದರು. ನಾವು ಯಾರು? ಏನು ಎಂಬ ಬಗ್ಗೆ ಅವರಿಗೆ ಒಂದಿನಿತೂ ಕುತೂಹಲವಿಲ್ಲ ಬದಲಾಗಿ ಕೇಳಿದ ಪ್ರಶ್ನೆಯೆಡೆಗಷ್ಟೇ ಅವರ ಗಮನ.

ಅವರೊಂದಿಗಿನ ಮಾತುಕತೆ ನೆನೆಸಿಕೊಂಡರೆ ಇಂದಿಗೂ ಮನಸ್ಸು ಪುಳಕಗೊಳ್ಳುತ್ತದೆ. ಅತ್ಯಂತ ಆಸಕ್ತಿಯಿಂದ ಹಾಗೂ ನಗುಮುಖದಿಂದ ನಮ್ಮನ್ನು ಆಲಿಸುತ್ತಿದ್ದರು, ಆ ಹೊತ್ತಿಗೆ ಸ್ವಲ್ಪ ಶ್ರವಣದ ಸಮಸ್ಯೆಯಿತ್ತೆನಿಸುತ್ತದೆ ನಾವು ತುಸು ಜೋರಾಗಿ ಮಾತನಾಡಬೇಕಿತ್ತು. ಅವರು ನೀಡುತ್ತಿದ್ದ ಉತ್ತರ ಅತ್ಯಂತ ಧೀರ್ಘವಾಗಿದ್ದವು. ಕೆಲವೊಮ್ಮೆ ವಿಷಯಕ್ಕೆ ಸಂಬಂಧವಿಲ್ಲದ್ದು ಹೇಳುತ್ತಿದ್ದಾರೆ ವಯೋಸಹಜ ಮರೆವಿರಬೇಕು ಎಂದು ಕೊಳ್ಳುವಷ್ಟರಲ್ಲೇ ತಮ್ಮ ಮಾತುಗಳ ನಡುವಿನ ಕೊಂಡಿಯನ್ನು ಗಟ್ಟಿಗೊಳಿಸಿ ಚಕಿತರನ್ನಾಗಿಸುತ್ತಿದ್ದರು. ಬಹುಶಃ ಭಾರತದ ಜನಜೀವನವನ್ನು ಸಮಗ್ರವಾಗಿ ಕಂಡುಕೊಂಡಂತೆ, ಉತ್ತರಗಳನ್ನು ಸಹ ಎಲ್ಲ ಕೋನಗಳಿಂದ ಸಮರ್ಪಕವಾಗಿರುವಂತೆ ನೀಡುತ್ತಿದ್ದರು. ಪ್ರಶ್ನೆ ಕೇಳಿ ನಾವು ಬಳಲಿದರೂ ಉತ್ತರಿಸುವ ಅವರ ಉತ್ಸಾಹ ಹೆಚ್ಚುತ್ತಲೇ ಇತ್ತು. ಅವರೊಂದಿಗೆ ಕಳೆದ ಸುಮಾರು ಎರಡೂವರೆ ಮೂರು ಗಂಟೆಗಳ ಕಾಲವನ್ನು ಧ್ವನಿಮುದ್ರಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ಕೊರಗು ನನಗಿನ್ನೂ ಇದೆ.

ಸ್ವತಂತ್ರ ಭಾರತ ಯಾವ ಅಡಿಪಾಯಗಳ ಮೇಲೆ ನಿರ್ಮಾಣಗೊಳ್ಳಬೇಕು ಎಂಬುದಕ್ಕೆ ತಳೆಯಬೇಕಾದ ಸ್ಪಪ್ಟವಾದ ನೀತಿ ನಿಲುವು ದೊರೆಯಲು ನಮಗೆ ಧರಂಪಾಲರು ಬೇಕೇ ಬೇಕು. ಅವರ ಅಧ್ಯಯನ ಮತ್ತು ಆ ದಿಕ್ಕಿನಲ್ಲಿಯೇ ಇನ್ನಷ್ಟು ಮಂದಿ ಸಂಶೋಧನೆ ನಡೆಸಿದವರು ನಮ್ಮ ಆಡಳಿತ ಪದ್ಧತಿ, ಜನಜೀವನದ ನೀತಿ ನಿಯಮಗಳನ್ನು ನಿರೂಪಿಸಿದ್ದರೆ ಇಂದಿಗೂ ನಾವು ಅನುಭವಿಸುತ್ತಿರುವ, ಒಂದು ಸಮಾಜವಾಗಿ ನಾವು ಹೊಂದಿರುವ ಗೊಂದಲಮಯ ನಿಲುವುಗಳಿಂದ ಮುಕ್ತವಾಗಬಹುದಿತ್ತು. ಅದರಲ್ಲೂ ಬ್ರಿಟಿಷರು ಹೋದ ನಂತರ ದೇಶದ ಸ್ವತಂತ್ರ ಜೀವನದ ಆರಂಭಿಕ ದಿನಗಳಲ್ಲಿ ಇದು ಅತ್ಯಂತ ಅವಶ್ಯಕವಾಗಿತ್ತು. ಈಗಾಗಲೇ ತಡವಾಗಿದೆ, ಚಿಂತೆಯಿಲ್ಲ ಇನ್ನಾದರೂ ಈ ವಿಫುಲ ಸಂಶೋಧನೆಯ ಕಡೆಗೆ ಗಮನ ಕೊಡಬೇಕಿದೆ. ವೈಭವಶಾಲಿ ಭಾರತದ ಪುನರುತ್ಥಾನದೆಡೆಗೆ ಸಾಗಲು ಧರಂಪಾಲರ ಕಾರ್ಯ ನಿಜಕ್ಕೂ ತೋರುಗಂಬವಾಗುವುದರಲ್ಲಿ ಸಂಶಯವಿಲ್ಲ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಭಾರತದ ವಿದ್ಯುತ್ ಜಾಲವನ್ನು ಹಾಳುಗೆಡವಲು ಚೀನಾ ಸಂಚು: ಅಮೆರಿಕ ಸಂಸ್ಥೆಯ ವರದಿ

ಭಾರತದ ವಿದ್ಯುತ್ ಜಾಲವನ್ನು ಹಾಳುಗೆಡವಲು ಚೀನಾ ಸಂಚು: ಅಮೆರಿಕ ಸಂಸ್ಥೆಯ ವರದಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Sitarama Kedilaya writes letter to PM Narendra Modi, says ‘Bharat will become Vishwaguru’

Sitarama Kedilaya writes letter to PM Narendra Modi, says ‘Bharat will become Vishwaguru’

May 28, 2014
Sri M.P. Kumar is the new President of Rashtrotthana Parishat, Sri Dwarakanath is the Vice President.

ರಾಷ್ಟ್ರೋತ್ಥಾನ ಪರಿಷತ್ತಿನ ‘ತಪಸ್’ ಯೋಜನೆಯ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಾವಕಾಶ

October 7, 2020
“Hindu terror” is invented to woo Muslim votes:M G Vaidya

“Hindu terror” is invented to woo Muslim votes:M G Vaidya

May 9, 2011
ಸಾರ್ವಜನಿಕರಿಗಾಗಿ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿದ ದ.ಕನ್ನಡದ ಮಾಧವ ಭಟ್

ಸಾರ್ವಜನಿಕರಿಗಾಗಿ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿದ ದ.ಕನ್ನಡದ ಮಾಧವ ಭಟ್

April 27, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In