• Samvada
  • Videos
  • Categories
  • Events
  • About Us
  • Contact Us
Sunday, April 2, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಪದಕಗಳನ್ನು ಹಿಡಿದ ಕೈಯಲ್ಲಿ ಬಂದೂಕು ಹಿಡಿದು ದೇಶಸೇವೆಗೆ ಹೊರಟ ಕುಂದಾಪುರದ ವಿದ್ಯಾ .ಎಚ್. ಗೌಡ

Vishwa Samvada Kendra by Vishwa Samvada Kendra
March 31, 2021
in Articles
250
0
ಪದಕಗಳನ್ನು ಹಿಡಿದ ಕೈಯಲ್ಲಿ ಬಂದೂಕು ಹಿಡಿದು ದೇಶಸೇವೆಗೆ ಹೊರಟ ಕುಂದಾಪುರದ ವಿದ್ಯಾ .ಎಚ್. ಗೌಡ
491
SHARES
1.4k
VIEWS
Share on FacebookShare on Twitter

ಭಾರತೀಯ ಸೇನೆ ಎಂದಾಕ್ಷಣ ಎಂತವನಿಗಾದರೂ ರೋಮಾಂಚನವಾಗುತ್ತದೆ. ದೇಶ ಭಕ್ತಿಯ ಭಾವ ಸ್ಫುರಿಸುತ್ತದೆ. ಅದರಲ್ಲಿ ತಾನೂ ಕೆಲಸ ಮಾಡಬೇಕೆಂದು ಹಲವಾರು ಜನ ಕನಸು ಕಂಡು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಹೇಗೆ‌ ಸುಲಭದ ತುತ್ತಲ್ಲವೋ ಹಾಗೆ ಅದಕ್ಕೆ ಆಯ್ಕೆಯಾಗುವುದು ಕೂಡ ಸುಲಭದ ಮಾತಲ್ಲ. ಅನೇಕ ಪರೀಕ್ಷೆಗಳಿಗೆ ಮೈಮನಸ್ಸನ್ನು ಒಡ್ಡಿ ತೇರ್ಗಡೆಯಾಗುವುದು ಸುಲಭ ಸಾಧ್ಯವೂ ಅಲ್ಲ. ಆದರೆ ಉಡುಪಿ ಜಿಲ್ಲೆಯ ಹೆಣ್ಣು ಮಗಳೋರ್ವಳು ತನ್ನ ಮೊದಲ ಯತ್ನದಲ್ಲಿಯೇ ಭಾರತೀಯ ಸೇನೆಯ ಬಿಎಸ್ಎಫ್ (B.S.F- Border Security Force)ಗೆ ಆಯ್ಕೆಯಾಗುವುದರ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸೇನೆಗೆ ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಮೇಲೆ ಸೇನೆಗೆ ಸೇರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕಮಾತ್ರ ಅಭ್ಯರ್ಥಿ ಈಕೆಯ ಹೆಸರು ವಿದ್ಯಾ .ಎಚ್. ಗೌಡ

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಯಳಜಿತ ಎನ್ನುವ ಕುಗ್ರಾಮದಲ್ಲಿನ ಹುಣ್ಸೆಮಕ್ಕಿಯ ರಮೇಶ ಗೌಡ ಮತ್ತು ಪಾರ್ವತಿ ಎನ್ನುವ ಬಡ ಕೃಷಿಕ ದಂಪತಿಗಳ ೨ ಮಕ್ಕಳಲ್ಲಿ ವಿದ್ಯಾ ಕಿರಿಯವರು.  ಕೃಷಿಕರಾದರೂ ಬಡತನ ಮೈಮೇಲೆ ಹೊದ್ದುಕೊಂಡೇ ಇದ್ದರೂ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಆಸೆ ಕನಸುಗಳಿಗೆ ಪ್ರೇರಣೆಯಾಗಿ ನಿಂತ ತಂದೆಯೇ ನಾನು ಸೇನೆಗೆ ತಲುಪಲು ಕಾರಣ ಎಂದು ವಿದ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮಗಳು ಸೇನೆ ಸೇರುತ್ತಿರುವುದರ ಬಗ್ಗೆ ಖುಷಿಯಿದೆ. ನಾನು  ಹೆಚ್ಚು ಓದಿಲ್ಲ. ಆದರೆ ಮಕ್ಕಳು ಚನ್ನಾಗಿ ಕಲಿತು ಒಳ್ಳೆಯ ಕೆಲಸ ಪಡೆಯಲಿ ಎಂಬ ಆಸೆ ಇತ್ತು. ಅದರಂತೆ ಮಗಳು ಒಳ್ಳೆಯ ಶಿಕ್ಷಣ ಪಡೆದು ಸೇನೆಗೆ ಆಯ್ಕೆಯಾಗಿದ್ದಾಳೆ ಅದರ ಬಗ್ಗೆ ಹೆಮ್ಮೆಯಿದೆ.
ರಮೇಶ ಗೌಡ (ವಿದ್ಯಾಳ ತಂದೆ)

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಳಜಿತದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ ವಿದ್ಯಾ ಬಾಲ್ಯದಲ್ಲಿಯೇ ಕ್ರೀಡೆಯನ್ನು ಉಸಿರಾಗಿಸಿಕೊಂಡು ಬೆಳೆದವರು. ಈಕೆಯಲ್ಲಿ ಚಿಗುರುತ್ತಿದ್ದ ಕ್ರೀಡಾ ಪ್ರತಿಭೆಯನ್ನು ನೀರೆರೆದು ಪ್ರೋತ್ಸಾಹಿಸಿದವರು ದೈಹಿಕ ಶಿಕ್ಷಕಿ ಜ್ಯೋತಿ H.S ಅವರು.  7& 8 ನೇ ತರಗತಿಯಲ್ಲಿಯೇ ಅಥ್ಲೇಟಿಕ್ಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾ ಅಲ್ಲಿಂದ ತಿರುಗಿ ನೋಡಲೇ ಇಲ್ಲ.

ಮುಂದೆ ಕೊಲ್ಲೂರಿನ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಂದುವರಿಸಿ ದೈಹಿಕ ಶಿಕ್ಷಕರಾದ ಸಚಿನ್ ಶೆಟ್ಟಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಪಳಗಿ ನೆಟ್ ಬಾಲ್ ನಲ್ಲಿ ರಾಜ್ಯ ರಾಷ್ಟ್ರ ಮಟ್ಟದವನ್ನು ಪ್ರತಿನಿಧಿಸುತ್ತಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದಿದ ವಿದ್ಯಾ ಈ ಅವಧಿಯಲ್ಲಿ ಕೂಡ ನೆಟ್ ಬಾಲ್ ಮತ್ತು ಪೋಲ್ ವಾಲ್ಟ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ‌.

ಹೀಗೆ ನೆಟ್ ಬಾಲ್ ನಲ್ಲಿ 5 ಬಾರಿ ರಾಜ್ಯಮಟ್ಟ ಹಾಗೂ ಒಂದು ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದರೆ ಮಂಗಳೂರು ಯೂನಿವರ್ಸಿಟಿ ಯ ಅಂತರಾಷ್ಟ್ರೀಯ ನೆಟ್ ಬಾಲ್ ಕ್ಯಾಂಪ್ ನಲ್ಲಿ ಭಾಗವಹಿಸಿದ ಕೀರ್ತಿ ಕೂಡ ಇವರದ್ದು. ಅಥ್ಲೇಟಿಕ್ಸ್ ನಲ್ಲಿ ೬ ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ಪೋಲ್ ವಾಲ್ಟ್ ನಲ್ಲಿ ರಾಜ್ಯಮಟ್ಟದಲ್ಲಿ ಕಂಚಿನ ಪದಕ ಪಡೆದ ವಿದ್ಯಾ, ಎರಡು ಬಾರಿ ಜಿಲ್ಲಾ ಮಟ್ಟದ ವೈಯಕ್ತಿಕ ಚಾಂಪಿಯನ್, ನಾಲ್ಕು ಬಾರಿ ತಾಲ್ಲೂಕು ಮಟ್ಟದ ವೈಯಕ್ತಿಕ ಚಾಂಪಿಯನ್ ಅಲ್ಲದೇ B.ed  ಇಲಾಖೆ ನಡೆಸಿದ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹಿಮ್ಮಿದ್ದಾರೆ.

“ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಹಾಗೆ ಸೇನೆಗೆ ಸೇರಬೇಕೆಂಬುದು ಕೂಡ ನನ್ನಂತ ಹಲವಾರು ಹುಡುಗಿಯರ ಕನಸು. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅದಕ್ಕಾಗಿ ಶ್ರಮವಹಿಸಿದರೆ ಅದು ಕಷ್ಟವೂ ಅಲ್ಲ. ಕುಗ್ರಾಮದ ಹಳ್ಳಿಯ ರೈತನೊಬ್ಬನ ಮಗಳಾಗಿ ಮೊದಲ ಪ್ರಯತ್ನದಲ್ಲಿಯೇ ಇಡೀ ಜಿಲ್ಲೆಗೆ ಒಬ್ಬಳಾಗಿ ಆಯ್ಕೆಯಾಗಿದ್ದರ ಬಗ್ಗೆ ಅತೀವ ಹೆಮ್ಮೆಯಿದೆ.  ದೇಶದ ರಕ್ಷಣೆಯ ಕಾರ್ಯದಲ್ಲಿ ಸೇನೆಯಲ್ಲಿ ಒಬ್ಬಳಾಗಿ ದೇಶಕಾರ್ಯಕ್ಕೆ ಅಳಿಲು ಸೇವೆ ಸಲ್ಲಿಸಲು ಕಾತರದಿಂದ ಕಾಯುತ್ತಿರುವೆ.”

– ವಿದ್ಯಾ ಎಚ್ ಗೌಡ

ಹೀಗೆ ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿ ಹಲವಾರು ಪದಕ ಪ್ರಶಸ್ತಿಗಳನ್ನು ಬಾಚಿಕೊಂಡ ದೈತ್ಯ ಪ್ರತಿಭೆ ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಕ್ರೀಡಾ ಸಾಧಕರಿಗೆ ಕೊಡುವ  ಚೈತ್ರದ ಚಿಗುರು ಪ್ರಶಸ್ತಿಗೂ ೨೦೨೦ ರಲ್ಲಿ ಭಾಜನರಾಗಿದ್ದಾರೆ.

B.ed  ಮಾಡಿರುವ ವಿದ್ಯಾ ಅವರಿಗೆ ಅಧ್ಯಾಪನ ವೃತ್ತಿ ಕೈಬೀಸಿ ಕರೆಯುತ್ತಿದ್ದರೂ, ತನ್ನ ಪ್ರೀತಿಯ ಕ್ರೀಡಾಕ್ಷೇತ್ರದಲ್ಲಿ ಅವಕಾಶದ ಬಾಗಿಲು ತೆಗೆದೇ ಇದ್ದರೂ ಇದೆಲ್ಲವನ್ನು ದಾಟಿ ತಾಯಿ ಭಾರತಿಯ ಸೇವೆಗಾಗಿ ಪದಕಗಳನ್ನು ಹಿಡಿದ ಕೈಯಲ್ಲಿ ಬಂದೂಕು ಹಿಡಿಯಲು ಹೊರಟಿದ್ದಾರೆ.

ಯವ್ವನದ ವಯಸ್ಸಿನಲ್ಲಿ ಕನಸುಗಳ ಮೂಟೆ ಹೊತ್ತು ಚಂದದ ಬದುಕು ನಮ್ಮದಾಗಬೇಕೆಂಬ ಆಸೆಯಿಂದ ಓಡುತ್ತಿರುವ ಇಂದಿನ ಯುವ ಸಮೂಹದ ಮದ್ಯದಿಂದ ದೇಶಕ್ಕಾಗಿ ಸರ್ವಸ್ವ ಎನ್ನು ಭಾವ ಹೊತ್ತು ಹಳ್ಳಿಯ ಮೂಲೆಯಿಂದ ದೇಶದ ಗಡಿಯ ಭಾಗಕ್ಕೆ ನಡೆಯುವ ಕಲ್ಲುಮುಳ್ಳಿನ ಹಾದಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾ ಎಚ್. ಗೌಡ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿ ನಿಂತಿದ್ದಾರೆ.

ದೇಶದ ರಕ್ಷಣೆಗೆ ಕಟಿಬದ್ಧವಾಗಿ ನಿಂತಿರುವ ಸೇನೆಯಲ್ಲಿ ತಾನು ಒಬ್ಬಳಾಗಿ ತನ್ನಿಂದಾದ ಅಳಿಲು ಸೇವೆಯನ್ನು ಮಾಡಿ ದೇಶಸೇವೆಯೆಂಬ ಬಹುದೊಡ್ಡ ಯಜ್ಞದಲ್ಲಿ  ಸಮಿಧೆಯಾಗಬೇಕೆಂಬುದು ವಿದ್ಯಾ ಅವರ ಮಾತು. ಅದರ ಸಾಕಾರಕ್ಕಾಗಿ ತರಬೇತಿಗಾಗಿ ಗ್ವಾಲಿಯರ್ ಗೆ ಹೊರಟಿದ್ದಾರೆ.  ಅವರಿಗೆ ಶುಭವಾಗಲಿ ಎನ್ನುವುದಷ್ಟೇ ನಮ್ಮ ಹರಕೆ ಹಾರೈಕೆ.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಸೂಪರ್ ಸ್ಟಾರ್ ರಜನಿಕಾಂತ್ ಗೆ 2021ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಸೂಪರ್ ಸ್ಟಾರ್ ರಜನಿಕಾಂತ್ ಗೆ 2021ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

NEWS IN BRIEF – JULY 06, 2013

December 9, 2013

ABPS Resolution – Need to promote work opportunities to make Bharat Self Reliant

March 13, 2022
RSS Chief Bhagwat to visit Karnataka from Nov 11 to 18, to inaugurate Sant Sammelan at Tumakuru

RSS Chief Bhagwat to visit Karnataka from Nov 11 to 18, to inaugurate Sant Sammelan at Tumakuru

November 9, 2014

SAVE ASSAM: Memorandum Submitted to Hon President of India

August 27, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In