• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಬಂಗಾಳ : ಮೇಲೆದ್ದ ದಲಿತ ರಾಜಕಾರಣ

Vishwa Samvada Kendra by Vishwa Samvada Kendra
May 11, 2021
in Articles
250
0
ಬಂಗಾಳ : ಮೇಲೆದ್ದ ದಲಿತ ರಾಜಕಾರಣ

West Bengal, Jan 04 (ANI): West Bengal Chief Minister Mamata Banerjee addresses during a press conference, in Kolkata on Monday. (ANI Photo)

491
SHARES
1.4k
VIEWS
Share on FacebookShare on Twitter

ಜಿದ್ದಾಜಿದ್ದಿನ ಚುನಾವಣಾ ಕಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಕೊನೆಗೆ ಮಮತಾ ಬ್ಯಾನರ್ಜಿ ದಾಖಲೆಯ ಬಹುಮತದೊಂದಿಗೆ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ . ಆಡಳಿತ ಪಕ್ಷವಾಗಿ , ವಿರೋಧ ಪಕ್ಷವಾಗಿ ದೊಡ್ಡ ಇತಿಹಾಸ ಹೊಂದಿದ್ದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ನಾಮಾವಶೇಷಗೊಂಡಿವೆ . ಐದು ವರ್ಷದ ಹಿಂದೆ ಲೆಕ್ಕಕ್ಕೆ ಇಲ್ಲದಂತೆ ಇದ್ದ ಬಿಜೆಪಿ 77 ಶಾಸಕರ ಪ್ರಬಲ ವಿರೋಧ ಪಕ್ಷವಾಗಿ ಎದ್ದು ನಿಂತಿದೆ . ಈ ಚುನಾವಣೆ ಪಶ್ಚಿಮ ಬಂಗಾಳದಲ್ಲಿ ‘ ಭದ್ರಲೋಕ ‘ ಎಂದೇ ಗುರುತಿಸಲಾಗುವ ಮುಂದುವರೆದ ಜಾತಿಗಳ ಪ್ರಾಬಲ್ಯಕ್ಕೆ ಏಟು ಕೊಟ್ಟಿದೆ . ಮಾತ್ರವಲ್ಲ ದಲಿತ ರಾಜಕಾರಣದ ಹೊಸ ಅಲೆ ಮೇಲೇಳಲು ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ದಲಿತ ರಾಜಕಾರಣ ಎರಡೂ ಒಟ್ಟೊಟ್ಟಿಗೆ ಗಟ್ಟಿಗೊಳ್ಳುತ್ತಿರುವುದು ಹೆಚ್ಚು ಚರ್ಚೆಗೆ ಒಳಪಡಬೇಕಾದ ಸಂಗತಿಯಾಗಿದೆ .

ಪಂಜಾಬ್ , ಹಿಮಾಚಲ ಪ್ರದೇಶದ ನಂತರ ಅತಿಹೆಚ್ಚು ಅಂದರೆ ಶೇ 23 ರಷ್ಟು ಪರಿಶಿಷ್ಟ ಜಾತಿಯವರಿರುವುದು ಪಶ್ಚಿಮ ಬಂಗಾಳದಲ್ಲಿ . ಜೊತೆಗೆ ಶೇ 6 ರಷ್ಟು ಪರಿಶಿಷ್ಟ ವರ್ಗದವರೂ ಇದ್ದಾರೆ . ಆದರೂ ದಲಿತ ರಾಜಕಾರಣ , ದಲಿತ ನಾಯಕತ್ವ ಮುನ್ನೆಲೆಗೆ ಬಂದಿರಲಿಲ್ಲ . ಪಶ್ಚಿಮ ಬಂಗಾಳದ ಎಸ್ಸಿ ಪಟ್ಟಿಯಲ್ಲಿ ಅರವತ್ತು ಜಾತಿಗಳಿದ್ದರೂ ಸಂಖ್ಯಾಬಲದಿಂದ ನಾಮಶೂದ್ರ , ರಾಜಬಂಶಿ , ಬೌರಿ , ಪೌಂಡ್ರ , ಬಾಗಡಿ, ಚಮ್ಮಾರ ಇವು ಪ್ರಮುಖ ದಲಿತ ಜಾತಿಗಳು . ಪಶ್ಚಿಮ ಬಂಗಾಳದಲ್ಲಿ 68 ಎಸ್ಸಿ ಮೀಸಲು ಕ್ಷೇತ್ರಗಳಿದ್ದರೆ , 16 ಎಸ್ಟಿ ಮೀಸಲು ಕ್ಷೇತ್ರಗಳಿವೆ. 2010 ರಲ್ಲಿ ಮೊದಲಬಾರಿಗೆ ಮಮತಾ ಬ್ಯಾನರ್ಜಿ ಎಡಪಕ್ಷಗಳನ್ನು ಸೋಲಿಸಿ ಅಧಿಕಾರ ಹಿಡಿದರು. ಆಗ ಮಮತಾರವರ ಟಿಎಂಸಿ ಪಕ್ಷ 37 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಗೆದ್ದಿತ್ತು . ಎಡರಂಗಕ್ಕೆ 21 , ಕಾಂಗ್ರೆಸ್ ಗೆ 10 ಸ್ಥಾನಗಳು ದಕ್ಕಿತ್ತು. 2016 ರ ಚುನಾವಣೆಯಲ್ಲಿ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಟಿಎಂಸಿ ಗಳಿಕೆ 50 ಕ್ಕೇರಿದರೆ , ಎಡರಂಗ 11 , ಕಾಂಗ್ರೆಸ್ 8ಕ್ಕೆ ಇಳಿದಿತ್ತು .

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಈ ವರ್ಷದ ಚುನಾವಣೆಯದ್ದು ಬೇರೆಯದೆ ಕಥೆ . 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರವೇಶ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ , ಎಡರಂಗವನ್ನು ಮೂಲೆಗುಂಪು ಮಾಡಿತು . ಬಂಗಾಳದ 10 ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 5 ಹಾಗೂ ಎರಡೂ ಎಸ್ಟಿ ಮೀಸಲು ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು .

ಈ ಬೆಳವಣಿಗೆ ಟಿಎಂಸಿಯ ರಣನೀತಿ ನಿರೂಪಕರನ್ನು ಎಚ್ಚೆತ್ತು ಕೊಳ್ಳುವಂತೆ ಮಾಡಿತು . ಈ ಸಲ ಟಿಎಂಸಿ ಚುನಾವಣೆಯ ದಿನಾಂಕ ಘೋಷಣೆಯಾದ ಮರುದಿನವೇ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತು . ಅಚ್ಚರಿಯೆಂದರೆ ಟಿಎಂಸಿ 68 ಎಸ್ಸಿ ಮೀಸಲು ಕ್ಷೇತ್ರವಲ್ಲದೇ 11 ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೇಟ್ ನೀಡಿತು . ಹಾಗೆಯೇ ಮುಸ್ಲೀಮರಿಗೆ ಕೊಡುತ್ತಿದ್ದ 60 ಸ್ಥಾನಗಳನ್ನು 44 ಕ್ಕೆ ಇಳಿಸಿತು . ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೇಟ್ ಕೊಡುವ ಪ್ರಯೋಗವನ್ನು ಬಿಜೆಪಿ 2016 ರಲ್ಲೇ ಮಾಡಿತ್ತಾದರೂ ಗಮನ ಸೆಳೆದಿರಲಿಲ್ಲ . ಈ ಸಲ ಬಿಜೆಪಿ , ಟಿಎಂಸಿಗಿಂತಲೂ ಮುಂದೆ ಹೋಯಿತು . 68 ಎಸ್ಸಿ ಮೀಸಲು ಕ್ಷೇತ್ರಗಳ ಜೊತೆಗೆ 27 ಸಾಮಾನ್ಯ ಕ್ಷೇತ್ರಗಳಲ್ಲಿಯೂ ದಲಿತರಿಗೆ ಬಿಜೆಪಿ ಟಿಕೇಟ್ ನೀಡಿತು . ಇದು ದಲಿತ ರಾಜಕಾರಣದಲ್ಲಾದ ದೊಡ್ಡ ಬೆಳವಣಿಗೆ . ಅನ್ಯಾನ್ಯ ರಾಜ್ಯಗಳಲ್ಲಿ ಒಂದೆರಡು ಸಾಮಾನ್ಯ ಕ್ಷೇತ್ರಗಳಲ್ಲಿ ಟಿಕೇಟ್ ಕೊಟ್ಟ ಉದಾಹರಣೆ ಇತ್ತಾದರು ಈ ಪ್ರಮಾಣದಲ್ಲಿ ಎಲ್ಲಿಯೂ ಮುಂದೆ ಹೋಗಿರಲಿಲ್ಲ . ಈ ಸಲದ ಚುನಾವಣೆಯ ಫಲಿತಾಂಶದಲ್ಲಿ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ನಿರ್ಮಿಸಿತಾದರೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ 50 ರಿಂದ 36 ಕ್ಕೆ ಕುಸಿದಿದೆ . ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 8 ದಲಿತ ಅಭ್ಯರ್ಥಿಗಳು ಗೆದ್ದು ಟಿಎಂಸಿ ಹೆಮ್ಮೆಪಡುವಂತೆ ಮಾಡಿದ್ದಾರೆ . ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯಿಂದ 32 ಅಭ್ಯರ್ಥಿಗಳು ಗೆದ್ದರೆ ‘ ಹೊಸ ಪ್ರಯೋಗ’ ದಿಂದ ಬಿಜೆಪಿಗೆ ಮೂವರು ಹೆಚ್ಚುವರಿ ದಲಿತ ಶಾಸಕರು ಸಿಕ್ಕಿದ್ದಾರೆ . ಎಸ್ಟಿ ಸಮುದಾಯದವರು ಟಿಎಂಸಿಯಿಂದ 10 , ಬಿಜೆಪಿಯಿಂದ 9 ಅಭ್ಯರ್ಥಿಗಳು ಗೆದ್ದಿದ್ದಾರೆ . ಇದರಲ್ಲಿ ಟಿಎಂಸಿಯ ಒಬ್ಬರು , ಬಿಜೆಪಿಯ ಇಬ್ಬರು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದವರು . ಒಟ್ಟಾರೆ ಬಿಜೆಪಿಯಿಂದ ಗೆದ್ದ 77 ಶಾಸಕರಲ್ಲಿ 44 ( ಅಂದರೆ ಶೇ 57 ರಷ್ಟು ) ಮಂದಿ ಪರಿಶಿಷ್ಟ ಜಾತಿ , ವರ್ಗದವರಾಗಿದ್ದಾರೆ .

ಬಂಗಾಳದಲ್ಲಿ ‘ ಭದ್ರಲೋಕ್ ‘ ಎಂದು ಗುರುತಿಸಲಾಗುವ ಬ್ರಾಹ್ಮಣ , ಕ್ಷತ್ರಿಯ ಇತ್ಯಾದಿ ಮೇಲುಜಾತಿಗಳಿಂದ ಟಿಎಂಸಿಗೆ 102 ಶಾಸಕರು ದಕ್ಕಿದರೆ ಬಿಜೆಪಿಯಿಂದ ಗೆದ್ದವರು 25 .

ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯ ಬಲು ಕಡಿಮೆ . ಈ ಸಲ ಟಿಎಂಸಿಯಿಂದ 15 , ಬಿಜೆಪಿಯಿಂದ 8 ಓಬಿಸಿ ಶಾಸಕರು ಆಯ್ಕೆಯಾಗಿದ್ದಾರೆ . ಪಶ್ಚಿಮ ಬಂಗಾಳದ ‘ಮುಸ್ಲಿಂ ಓಲೈಕೆ ‘ ರಾಜಕಾರಣ ಹಿಂದುಳಿದ ವರ್ಗಗಳ ವಿಷಯದಲ್ಲಿ ಢಾಳಾಗಿ ನೆಡದಿದೆ. ಕಾಂಗ್ರೆಸ್, ಎಡರಂಗ, ಟಿಎಂಸಿ ಪೈಪೋಟಿಗೆ ಬಿದ್ದವರಂತೆ ಮುಸ್ಲಿಂ ಸಮುದಾಯದ 177 ಜಾತಿಗಳಲ್ಲಿ 99 ಜಾತಿಗಳನ್ನು ಓಬಿಸಿ ಪಟ್ಟಿಗೆ ಸೇರಿಸಿವೆ. ಅದೇ ಮಶಿಯಾ, ತೇಲಿ, ತಮುಲ್, ಸಹಾ ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗುಳಿದಿವೆ . ಮುಸ್ಲಿಂ ಸಮುದಾಯದ ಸಗಟು ಮತಗಳು ಟಿಎಂಸಿಗೆ ಒಲಿದಿದ್ದು ಮೀಸಲು ಕ್ಷೇತ್ರಗಳ ಮೇಲು ಪ್ರಭಾವ ಮೂಡಿಸಿದೆ . ಅತಿಯಾದ ಮುಸ್ಲಿಂ ಬಾಹುಳ್ಯದ ಮುರ್ಶಿದಾಬಾದ್ , ದಕ್ಷಿಣ ಪರಗಣ , ಉತ್ತರ ದಿಗ್ಣಾಪುರ್ , ಹೂಗ್ಲಿ ಜಿಲ್ಲೆಗಳಲ್ಲಿನ ಮೀಸಲು ಕ್ಷೇತ್ರಗಳಲ್ಲಿ ಟಿಎಂಸಿ ಅನಾಯಸವಾಗಿ ಗೆದ್ದಿದೆ . ಕಾಂಗ್ರೆಸ್ , ಎಡಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿ , ಸ್ಥಳೀಯ ಮುಸ್ಲಿಂ ಪಕ್ಷದೊಂದಿಗೆ ಮಾಡಿಕೊಂಡ ಮೈತ್ರಿ ಮುಸ್ಲಿಂ ಸಮುದಾಯದ ಮೇಲೆ ಯಾವ ಪ್ರಭಾವವನ್ನು ಬೀರಿಲ್ಲ . ಟಿಎಂಸಿ ಮುಸ್ಲಿಮರಿಗೆ 44 ಕ್ಷೇತ್ರಗಳಲ್ಲಿ ಟಿಕೇಟ್ ಕೊಟ್ಟರೆ ಕಾಂಗ್ರೆಸ್ , ಎಡರಂಗದ ಮೈತ್ರಿಕೂಟ 78 ಕಡೆಗಳಲ್ಲಿ ಟಿಕೇಟ್ ಕೊಟ್ಟೂ ಏನೂ ಸಾಧಿಸಲಿಲ್ಲ . ಒಟ್ಟಾರೆ ಯಾವ ಸೀಟನ್ನು ಗೆಲ್ಲದಿದ್ದರೂ ಸಿಪಿಎಮ್ ಶೇ 4.73 ರಷ್ಟು , ಕಾಂಗ್ರೆಸ್ ಶೇ 2.93 ರಷ್ಟು ಮತಗಳನ್ನಷ್ಟೆ ಗಳಿಸಿವೆ . ಪಕ್ಕದ ಬಿಹಾರದಲ್ಲಿ 12 ಶಾಸಕರನ್ನು ಹೊಂದಿರುವ ನಕ್ಸಲ್ ಪ್ರೇರಿತ ಸಿಪಿಎಮ್ಮೆಲ್ ಶೇ 0.3 ಮತ ಗಳಿಸಿದರೆ ದಲಿತರ ಪಕ್ಷ ಎಂದೇ ಗುರುತಿಸಲಾಗುವ ಬಿಎಸ್ಪಿ ಶೇ 0.39 ಮತ ಪಡೆದಿದೆ .

ಅಬ್ಬರದ ಪ್ರಚಾರದಿಂದ ಗಮನ ಸೆಳದಿದ್ದ ಬಿಜೆಪಿಗಿದ್ದದ್ದು ಏರು ಹಾದಿ . ಶೇ 70.54 ರಷ್ಟಿರುವ ಹಿಂದುಗಳ ಮತಗಳಲ್ಲೇ ಬಿಜೆಪಿ ಬಹುಮತ ಸಾಧಿಸಬೇಕಿತ್ತು . ಬಿಜೆಪಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟ್ ಕೊಟ್ಟಿತ್ತಾದರು ಹೆಚ್ಚಿನ ಮತಗಳಿಕೆ ಸಾಧ್ಯವಾಗಿಲ್ಲ . ಒಟ್ಟು ಮತದಾನದಲ್ಲಿ ಬಿಜೆಪಿ ಶೇ 38.1 ರಷ್ಟು ಮತಗಳಿಸಿದೆಯಾದರೂ , ಹಿಂದುಗಳಲ್ಲಿ ಶೇ 54 ರಷ್ಟು ಮತ ಪಡೆದಿದೆ . ಅದೇ ಟಿಎಂಸಿಗೆ ಮುಸ್ಲಿಂ ಮತಗಳು ಸಗಟಾಗಿ ಬಂದಿದೆಯಾದರು ಹಿಂದುಗಳ ಮತ ಬಂದಿರುವದು ಶೇ 31 ರಷ್ಟು ಮಾತ್ರ .

ದೇಶದಲ್ಲಿ ಆತಿ ಹೆಚ್ಚು ಪರಿಶಿಷ್ಟ ಜಾತಿಯವರ ಜನಸಾಂದ್ರತೆ ಇರುವ ಜಿಲ್ಲೆ ಎಂದರೆ ಅದು ಪಶ್ಚಿಮ ಬಂಗಾಳದ ಕೂಚ್ ಬಿಹಾರ್, ಇಲ್ಲಿ ಶೇ 53 ರಷ್ಟು ದಲಿತರಿದ್ದಾರೆ . ಈ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 7 ಗೆದ್ದರೆ , ಟಿಎಂಸಿ 2 ಗೆದ್ದಿದೆ . ಅರವತ್ತರ ದಶಕದಲ್ಲಿ ನಕ್ಸಲ್ ಚಳವಳಿಯ ಬೀಜ ಬಿತ್ತಿದ ನಕ್ಸಲ್ ಬಾರಿ ಇರುವುದು ಡಾರ್ಜಲಿಂಗ್ ಜಿಲ್ಲೆಯಲ್ಲಿ . ಈ ಸಲ ನಕ್ಸಲ್ ಬಾರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಆನಂದಮಯ ಬರ್ಮನ್ ಗೆದ್ದಿದ್ದಾರೆ . ತನ್ನ ಆತ್ಮಕಥೆ Interrogating My Chandal Life ಮೂಲಕ ದೇಶದ ಗಮನಸೆಳದಿದ್ದ , ಶಾಲೆಯ ಮುಖ ನೋಡದ ರಿಕ್ಷಾ ಚಾಲಕ , ಲೇಖಕ ಮನೋರಂಜನ್ ಬೈಪಾರಿ ಬಾಲಘರ್ ಮೀಸಲು ಕ್ಷೇತ್ರದಿಂದ ಟಿಎಂಸಿ ಟಿಕೇಟ್ ಪಡೆದು ವಿಧಾನಸಭೆ ಪ್ರವೇಶಿಸಿದ್ದಾರೆ . ಪುಟ್ಟ ಗುಡಿಸಲಲ್ಲಿ ವಾಸಿಸುವ ಬಿಜೆಪಿ ಕಾರ್ಯಕರ್ತೆ ಚಂದನಾ ಬೌರಿ ಸಲ್ತೋರಾ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ .

ಚುನಾವಣಾ ಫಲಿತಾಂಶದ ನಂತರ ಬಂಗಾಳದಲ್ಲಿ ಹಿಂಸಾಚಾರ ಮುಂದುವರಿದೆ . ಇದು ಕಮ್ಯುನಿಷ್ಟರ ಕಾಲದಿಂದಲೂ ನೆಡೆಯುತ್ತಿರುವ ಚುನಾವಣೋತ್ತರ ದೌರ್ಜನ್ಯ. ಈಗ ಏಟು ತಿನ್ನುತ್ತಿರುವವರಲ್ಲಿ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸಿದ ದಲಿತರು. ಪಾಠ ಕಲಿತಿರುವ ಮಮತಾ ಇದೆಲ್ಲವನ್ನು ನಿಭಾಯಿಸಿಯಾರು. ಆದರೆ ಬಂಗಾಳದಲ್ಲಿ ಮೇಲೆದ್ದಿರುವ ದಲಿತ ರಾಜಕಾರಣ ಇಲ್ಲಿಗೆ ನಿಲ್ಲುವುದಿಲ್ಲ .

ಪ್ರಜಾವಾಣಿಯಲ್ಲಿ ಪ್ರಕಟಿತ

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ದೇವಾಲಯಗಳನ್ನು ಬಾಹ್ಯ ಲೆಕ್ಕಪರಿಶೋಧನೆ ನಡೆಸುವಂತೆ ಕೋರಿ ಜಗ್ಗಿ ವಾಸುದೇವ್ ಹೈಕೋರ್ಟ್ ಗೆ ಅರ್ಜಿ

We have to work together as one and not point fingers : Jaggi Vasudev #PositivityUnlimited

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಕಾಸರಗೋಡು: ಫೆಬ್ರವರಿ 14, 2016ರ “ವಿಜಯಧ್ವನಿ” ಘೋಷ್ ಸಂಚಲನಕ್ಕೆ ಭರದ ಸಿದ್ದತೆ

ಕಾಸರಗೋಡು: ಫೆಬ್ರವರಿ 14, 2016ರ “ವಿಜಯಧ್ವನಿ” ಘೋಷ್ ಸಂಚಲನಕ್ಕೆ ಭರದ ಸಿದ್ದತೆ

January 27, 2016
‘No Compromise on National Integrity’: Ram Madhav on Socio-Political situation of J&K at Bengaluru

‘No Compromise on National Integrity’: Ram Madhav on Socio-Political situation of J&K at Bengaluru

April 5, 2015
Our concept of Rashtra is more profound and inclusive than ‘Nation’ : Dr. Krishna Gopal, Sahsarakaryavah, RSS

Our concept of Rashtra is more profound and inclusive than ‘Nation’ : Dr. Krishna Gopal, Sahsarakaryavah, RSS

September 26, 2017
Day-100: Inspiring the coastal Villages on Gram Vikas; Bharat Parikrama Yatra completes 100 days

Day-100: Inspiring the coastal Villages on Gram Vikas; Bharat Parikrama Yatra completes 100 days

November 17, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In