• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ – ಇದು ಔದಾರ್ಯವಲ್ಲ, ಎಕನಾಮಿಕ್ಸ್!

Vishwa Samvada Kendra by Vishwa Samvada Kendra
May 7, 2021
in Articles
250
0
ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ – ಇದು ಔದಾರ್ಯವಲ್ಲ, ಎಕನಾಮಿಕ್ಸ್!
491
SHARES
1.4k
VIEWS
Share on FacebookShare on Twitter

ಅಲೆ ಅಲೆಗಳಲ್ಲಿ ಭೀಕರವಾಗುತ್ತ ಸಾಗಿರುವ ಕರೋನಾ ಕಾಲಘಟ್ಟದಲ್ಲಿ ಅಮೆರಿಕದ ಒಂದು ನಿಲವು ತುಸು ಅಚ್ಚರಿ ಉಂಟುಮಾಡುವಂತಿದೆ.

ಲಸಿಕೆಗಳನ್ನು ಹಕ್ಕುಸ್ವಾಮ್ಯ ಮುಕ್ತವಾಗಿಸುವುದಕ್ಕೆ ತನ್ನದೂ ಅನುಮೋದನೆ ಇದೆ ಅಂತ ಬಿಡೆನ್ ಆಡಳಿತ ವಿಶ್ವ ಆರೋಗ್ಯ ಸಂಸ್ಥೆಗೆ ಹೇಳಿದೆ. ಭಾರತದಂಥ ದೇಶಗಳು ಕೊರೊನಾಗೆ ಸಂಬಂಧಿಸಿದ ಲಸಿಕೆಗಳು ಪೆಟೆಂಟ್ ಮುಕ್ತವಾಗಿರಬೇಕು ಅಂತ ತುಂಬ ಪ್ರಾರಂಭದಲ್ಲೇ ಹೇಳಿತ್ತು. ಅರ್ಥಾತ್, ಲಸಿಕೆಯ ರೆಸಿಪಿ ಎಲ್ಲರಿಗೂ ತಿಳಿಯುವಂತೆ, ಸಂಸಾಧನಗಳಿರುವ ಬೇರೆ ದೇಶಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ಪಾದಿಸಿಕೊಳ್ಳಲು ಅನುವಾಗುವಂತಿರುವ ವ್ಯವಸ್ಥೆ. ಸಹಜವಾಗಿಯೇ ಇದಕ್ಕೆ ಜಾಗತಿಕ ಫಾರ್ಮಾ ವಲಯದಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಲಸಿಕೆಗಳಲ್ಲಿ, ಭವಿಷ್ಯದಲ್ಲಿ ಬರಲಿರುವ ಇನ್ನೂ ಹಲವು ಸೋಂಕುಗಳಿಗೆ ಮದ್ದಿನ ಅನ್ವೇಷಣೆಯಲ್ಲಿ ಬಿಲಿಯಗಟ್ಟಲೇ ಡಾಲರುಗಳನ್ನು ತೊಡಗಿಸಿರುವ ಬಿಲ್ ಗೇಟ್ಸ್ ಥರದವರು ಇದು ಸಾಧ್ಯವೇ ಇಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದೂ ಆಗಿದೆ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಈ ಬಗ್ಗೆ ಹೆಚ್ಚಿನದನ್ನು ಚರ್ಚಿಸುವ ಮುನ್ನ ಒಂದು ಅಭಿಪ್ರಾಯ ಟಿಪ್ಪಣಿ ಅವಶ್ಯ. ಕೊರೋನಾದಂಥ ರೋಗಗಳಿಗೆ ಪ್ರತಿಯಾಗಿ ಹುಟ್ಟಿಕೊಂಡಿರುವ ಲಸಿಕೆಗಳು – ಅವು ದೇಸಿ ಆಗಿರಲಿ, ಫಿಜರ್ ನಂಥ ವಿದೇಶಿ ಕಂಪನಿಗಳಾಗಿರಲಿ – ಆರಂಭಿಕವಾಗಿ ಸ್ವಲ್ಪ ವ್ಯವಹಾರಿಕವಾಗಿದ್ದರೆ ತಪ್ಪಿಲ್ಲ. ಅವು ಒಂದಿನಿತೂ ಲಾಭದ ಅಪೇಕ್ಷೆ ಇಟ್ಟುಕೊಳ್ಳದೇ ಮನುಕುಲದ ಸೇವೆಗೆ ತಮ್ಮ ತಂತ್ರಜ್ಞಾನ ವಿನಿಯೋಗಿಸಬೇಕು ಎಂಬುದು ಉದಾತ್ತ ಒತ್ತಾಸೆಯೇ ಆದರೂ, ಅನ್ವೇಷಣೆಗೆ ಬೆಲೆ ಇಲ್ಲ ಎಂದಾದಾಗ ಸಹಜವಾಗಿಯೇ ಆ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಬಂಡವಾಳಗಳು ಇಲ್ಲವಾಗುತ್ತವೆ. ಹೀಗಾಗಿ ಮುಂದಿನ ಸಾಂಕ್ರಾಮಿಕ ವಕ್ಕರಿಸಿಕೊಂಡಾಗ, ‘ಮಲಗುವುದಕ್ಕೆ ಜಾಗವೇ ಸಿಗುತ್ತಿಲ್ಲ ಆಸ್ಪತ್ರೆಯಲ್ಲೂ, ಸ್ಮಶಾನದಲ್ಲೂ’ ಅಂತ ಎದೆ ಗೋಳಾಗಿಸುವ ಕವಿಗಳಷ್ಟೇ ಇದ್ದುಬಿಟ್ಟರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದಕ್ಕೆ ನಮ್ಮೆಲ್ಲರಿಂದ ಲಾಭಕೋರರು, ಬಂಡವಾಳಶಾಹಿಗಳು ಅಂತ ಉಗಿಸಿಕೊಳ್ಳುವ ಖಾಸಗಿ ಕ್ಷೇತ್ರವೇ ಬೇಕಾಗುತ್ತದೆ. ಆದರೆ, ವ್ಯವಹಾರ ತಕ್ಷಣಕ್ಕೆ ದುರಾಸೆಗೆ ತಿರುಗಿಕೊಳ್ಳುವುದೂ ವಾಸ್ತವವೇ ಆದ್ದರಿಂದ, ಫಿಜರ್ ಥರದ ಲಸಿಕೆ ಕಂಪನಿಗಳು ತಮ್ಮ ಒಪ್ಪಂದದಲ್ಲಿ ಲ್ಯಾಟಿನ ಅಮೆರಿಕ ದೇಶಗಳ ಸಂಪನ್ಮೂಲಗಳನ್ನೇ ಅಡಕ್ಕೆ ಇಟ್ಟುಕೊಳ್ಳುವ, ಏನೇ ಹೆಚ್ಚು-ಕಡಿಮೆ ಆದರೂ ತಮಗೆ ಸಂಬಂಧವಿಲ್ಲ ಎಂಬ ಷರತ್ತು ಹಾಕಿರುವ ಪ್ರಕರಣಗಳು ವರದಿಯಾಗಿವೆ.

ಈಗ ಮತ್ತೆ ಪೇಟೆಂಟ್ ಮುಕ್ತವೆಂಬ ಪರಿಕಲ್ಪನೆಗೆ ತೆರೆದುಕೊಳ್ಳುತ್ತಿರುವ ಅಮೆರಿಕದಂಥ ದೇಶಗಳ ವಿಚಾರಧಾಟಿಯನ್ನೇ ಅಗೆದು ನೋಡುವುದಾದರೆ…. ಇದೇನೋ ಮಾನವಕುಲ ಉದ್ದಾರವಾಗಲೆಂಬ ಉದಾತ್ತ ಯೋಚನೆಯ ಪರಾಕಾಷ್ಠೆ ಅಂತೇನೂ ಭ್ರಮೆಗೆ ಬೀಳಬೇಕಿಲ್ಲ. ಆದರೆ, ಮೊನ್ನೆಯವರೆಗೆ ಲಸಿಕೆಗೆ ಬೇಕಾದ ಕಚ್ಚಾ ಪದಾರ್ಥಗಳನ್ನೂ ತಮ್ಮಲ್ಲೇ ಇಟ್ಟುಕೊಂಡಿದ್ದ ಹಾಗೂ ತಮ್ಮ ದೇಶಕ್ಕೆ ಎರಡು ಸಲ ಲಸಿಕೆ ಹಾಕಿದ ನಂತರವು ಮತ್ತೆ ಇಡೀ ಜನಸಂಖ್ಯೆಗೆ ಮತ್ತೊಮ್ಮೆ ಹಾಕಬಹುದಾದಷ್ಟು ಲಸಿಕೆ ಸ್ಟಾಕನ್ನು ಅನವಶ್ಯಕವಾಗಿ ತನ್ನಲ್ಲಿರಿಸಿಕೊಂಡಿದ್ದ ಅಮೆರಿಕದಂಥ ದೇಶ ತನ್ನ ವಿಚಾರಧಾಟಿಯನ್ನು ಬದಲಾಯಿಸಿದ್ದೇಕೆ? ತನ್ನ ನೆಲದ ಫಾರ್ಮಾ ಕಂಪನಿಗಳ ಮುನಿಸಿಗೆ ಕಾರಣವಾಗಬಲ್ಲ ನಿರ್ಧಾರವೊಂದಕ್ಕೆ ತಿರುಗಿಕೊಂಡಿದ್ದೇಕೆ?

ಸಂಕ್ಷಿಪ್ತವಾಗಿ ಉತ್ತರಿಸುವುದಾದರೆ ರೂಪಾಂತರಿ ಕರೋನಾ ವೈರಸ್ಸಿನ ಭಯ!

ವಿಸ್ತರಿಸಿ ಹೇಳುವುದಾದರೆ-

ಅಮೆರಿಕ, ಇಂಗ್ಲೆಂಡ್ ಗಳೇನೋ ತಮ್ಮೆಲ್ಲ ಜನಸಂಖ್ಯೆಗೆ ತಿಂಗಳೊಪ್ಪತ್ತಿನಲ್ಲಿ ಲಸಿಕೆ ಪೂರ್ಣಗೊಳಿಸಿಬಿಡುತ್ತವೆ ಎಂದುಕೊಳ್ಳೋಣ. ಇತ್ತ ಭಾರತವು ತನ್ನ ಅಗಾಧ ಜನಸಂಖ್ಯೆ ಕಾರಣದಿಂದ ಹಾಗೂ ಆಫ್ರಿಕಾದ ದೇಶಗಳಲ್ಲಿ ಹಲವು ಸಂಪನ್ಮೂಲ ಕೊರತೆ ಕಾರಣದಿಂದ ಲಸಿಕೆ ಅಭಿಯಾನ ಮುಗಿಸುವುದಕ್ಕೆ ವರ್ಷಗಳನ್ನೇ ತೆಗೆದುಕೊಳ್ಳುತ್ತವೆ.

ಆಗೇನಾಗುತ್ತದೆ? ವೈರಸ್ಸಿಗೆ ಸಮಯ ಸಿಗುತ್ತದೆ. ಈ ಸಮಯದಲ್ಲಿ ಅದು ಬಲಿಷ್ಟವಾಗುತ್ತದೆ, ರೂಪಾಂತರ ಹೊಂದುತ್ತದೆ. ಮೊದಲ ಅಲೆಯಲ್ಲಿ ವಯಸ್ಸಾದವರು ಮತ್ತು ಅನ್ಯರೋಗಗಳಿದ್ದವರಿಗೆ ಮಾತ್ರವೇ ಹೆಚ್ಚಾಗಿ ಸಾವನ್ನು ತೋರಿಸಿದ್ದ ಕರೋನಾ ಈ ಬಾರಿ ಉಳಿದವರನ್ನೂ ಸಾವಿನ ಮನೆಗೆ ಕರೆದೊಯ್ಯುವಂತೆ ರೂಪಾಂತರ ಹೊಂದಿರುವಂತೆ.

ಇವತ್ತಿನ ಜಾಗತಿಕ ಎಕಾನಮಿ ಅದೆಷ್ಟು ಅಂತರ್ಬೆಸುಗೆ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತು. ಪಕ್ಕದ ಮನೆಯವ ಕೆಮ್ಮಿಕೊಂಡಿದ್ದಾರೆ ಅಂತ ತುಂಬ ದಿನ ಬಾಗಿಲು ಹಾಕಿಕೊಂಡೇ ಇರುವುದು ನಮಗೆ ಹೇಗೆ ವೈಯಕ್ತಿಕ ನೆಲೆಯಲ್ಲಿ ಸಾಧ್ಯವಿಲ್ಲವೋ ಹಾಗೆಯೇ ದೇಶಗಳಿಗೂ ಸಹ.

ಹೀಗಾಗಿ ಮೂಲ ವುಹಾನ್ ಹೆಸರನ್ನೇ ಮರೆಸುವಂತೆ ಆಫ್ರಿಕನ್ ವೆರೈಟಿ, ಲಂಡನ್ ವೆರೈಟಿ, ಇಂಡಿಯನ್ ವೆರೈಟಿಗಳೆಲ್ಲ ಈಗ ಸದ್ದು ಮಾಡಿಕೊಂಡಿವೆ. ಇಂಥ ಮುಂದುವರೆದ ಅಲೆಗಳೆಲ್ಲ ಅದಾಗಲೇ ಲಸಿಕೆ ಪಡೆದುಕೊಂಡವರಿಗೆ ತೀರ ಹಾನಿ ಮಾಡಿಲ್ಲ ಎಂಬುದು ಈ ಕ್ಷಣದ ಸತ್ಯವಾಗಿದ್ದಿರಬಹುದಾದರೂ, ರೂಪಾಂತರ ಹೆಚ್ಚುತ್ತಲೇ ಹೋದರೆ ಮೊದಲು ಪಡೆದ ರೋಗನಿರೋಧಕತೆ ಎಷ್ಟರಮಟ್ಟಿಗೆ ನಿಂತುಕೊಂಡಿದ್ದೀತು ಎಂಬುದು ಅನುಮಾನಾರ್ಹವೇ. ಹಾಗೆಂದೇ, ಅಮೆರಿಕದಂಥ ಧನವಂತ ದೇಶಗಳು ಈ ರೋಗದಲೆ ಇನ್ಯಾವುದೋ ದೇಶದಲ್ಲಿ ಮುಂದುವರಿದುಕೊಂಡಿದ್ದರೂ ದೀರ್ಘಾವಧಿಯಲ್ಲಿ ತನ್ನಂಥವರು ತೆರಬೇಕಿರುವ ಬೆಲೆ ಏನು ಎಂಬುದನ್ನು ಲೆಕ್ಕ ಹಾಕಿದೆ. ಹಾಗೆಂದೇ ರೂಪಾಂತರಗಳಾಗುವ ಮುಂಚೆ ಶೇ. 60-70ರಷ್ಟು ಜಾಗತಿಕ ಜನಸಂಖ್ಯೆ ಈ ವೈರಸ್ಸನ್ನು ಏಕಕಾಲದಲ್ಲಿ ಹಿಮ್ಮೆಟ್ಟಿಸುವಂತಾಗಬೇಕು. ಅದಕ್ಕಾಗಿಯೇ ಪೆಟೆಂಟ್ ಮುಕ್ತ ಲಸಿಕೆಯ ವಿಚಾರಧಾರೆ ಗಟ್ಟಿಯಾಗುತ್ತಿದೆ.

ಅಮೆರಿಕ ಅನುಮೋದಿಸಿದ ಮಾತ್ರಕ್ಕೆ ಇನ್ನು ನಾಲ್ಕು ದಿನಗಳಲ್ಲಿ ಆಗಿಬಿಡುವ ಮಾತು ಇದಲ್ಲ. ಸರ್ಕಾರಗಳನ್ನು ಮೀರಿಸುವ ಬೃಹತ್ ಉದ್ದಿಮೆ ಲೆಕ್ಕಾಚಾರಗಳೆಲ್ಲ ಇಲ್ಲಿವೆ. ಆದರೆ, ಅದೃಶ್ಯ ವೈರಿಯ ರೂಪಾಂತರ ಪರಾಕ್ರಮ ಮುಂದೊಂದು ದಿನ ತಮ್ಮ ದೌರ್ಬಲ್ಯವನ್ನು ಜಾಹೀರಾಗಿಸೀತು ಎಂಬ ಭಯವೇನಾದರೂ ಈ ಕಂಪನಿಗಳಿಗೆ ಗೋಚರಿಸಿಬಿಟ್ಟರೆ ಎಲ್ಲರೂ ಒಂದಾಗಿ ಬಂದು ಮನುಕುಲವನ್ನು ರಕ್ಷಿಸುವ ‘ಮಹಾ ಔದಾರ್ಯ’ದ ನಡೆಯನ್ನು ಶೀಘ್ರ ದಲ್ಲೇ ಘೋಷಿಸಿಯಾರು.

—

ಈ ರೋಗಕ್ಕೆ ಸೀಮಿತವಾದ ಈ ಜಗತ್ತಿನ ಕತೆ ಹಾಗಿರಲಿ. ‘ಎಲ್ರಿಗೂ ಒಳ್ಳೆಯದಾಗಲಿ’ ಎಂಬ ಬದುಕಿನ ಫಿಲಾಸಫಿ ದೊಡ್ಡತನವಲ್ಲ; ವಾಸ್ತವದಲ್ಲದು ನಮ್ಮೆಲ್ಲರ ಅನಿವಾರ್ಯ. ಪಕ್ಕದವನ ಎದೆಗಪ್ಪಳಿಸಿದ ಅಲೆಯ ಕಂಪನಗಳು ಇಂದಲ್ಲ ನಾಳೆ ನಮ್ಮೆಲ್ಲರನ್ನೂ ಸವರದೇ ಇರದೇ?

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ನಡೆದ ಅನಿಯಂತ್ರಿತ ಹಿಂಸಾಚಾರಕ್ಕೆ ಆರೆಸ್ಸೆಸ್ ಖಂಡನೆ. ಇದೊಂದು ನಿಯೋಜಿತ ಕೃತ್ಯ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ನಡೆದ ಅನಿಯಂತ್ರಿತ ಹಿಂಸಾಚಾರಕ್ಕೆ ಆರೆಸ್ಸೆಸ್ ಖಂಡನೆ. ಇದೊಂದು ನಿಯೋಜಿತ ಕೃತ್ಯ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

NEWS IN BRIEF: OCT 16, 2011

October 18, 2011
ಸಕ್ಷಮ: ಆಗಸ್ಟ್ 25ರಿಂದ ಸೆಪ್ಟೆಂಬರ್ 8ರ ವರೆಗೆ ರಾಜ್ಯಾದ್ಯಂತ ‘ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ’

RSS inspired SAKSHAMA to launch ‘Cornea Andhatv Mukt Bharat Abhiyan’ from Aug 25 to Sept 8, 2016

July 7, 2016
New methods of incentivising proselytization

New methods of incentivising proselytization

March 29, 2011

Keep Off Hindu Temples: Compilation of Top Tweets

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In