• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಬೇಕಿದೆ ಬಾಳಿಗೊಂದು ಭರವಸೆ !

Vishwa Samvada Kendra by Vishwa Samvada Kendra
May 18, 2021
in Articles
250
0
ಬೇಕಿದೆ ಬಾಳಿಗೊಂದು ಭರವಸೆ !
491
SHARES
1.4k
VIEWS
Share on FacebookShare on Twitter

ಕೊರೋನಾ ವೈರಾಣುವು ಎರಡನೇ ಅಲೆಯಲ್ಲಿ ತನ್ನ ಭೀಕರತೆಯನ್ನು ಹೆಚ್ಚಾಗಿಸಿದೆ. ಸೋಂಕು ಪೀಡಿತರ ಮರಣದ ಸಂಖ್ಯೆಯೂ ಹೆಚ್ಚಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆಕ್ಸಿಜನ್‌ ಕೊರತೆ, ವೆಂಟಿಲೇಟರ್‌ ಕೊರತೆ, ಐಸಿಯು ಬೆಡ್‌ಗಳ ಕೊರತೆ ಕಂಡು ಬರುತ್ತಿದೆ. ಕೊರತೆಯೆಂಬುದು ಭ್ರಷ್ಟರು ಮಾಡಿದ ಕೃತಕ ಸೃಷ್ಟಿಯೋ ಅಥವಾ ನಿಜವೋ ಹೇಗೆ ಆಗಿದ್ದರೂ ಜನಸಾಮಾನ್ಯರಂತೂ ಸೂಕ್ತ ಚಿಕಿತ್ಸೆಗೆಂದು ಒದ್ದಾಡುತ್ತಿದ್ದಾರೆ.  ಒಂದು ವೇಳೆ ಸಂಪನ್ಮೂಲದಲ್ಲಿ ಕೊರತೆ ಇಲ್ಲ ಎಂದಾದರೆ ಅವುಗಳ ನಿರ್ವಹಣೆಯಲ್ಲಿ, ಸಂವಹನದಲ್ಲಿ ಕೊರತೆ ಇದೆಯೆಂಬುದು ಎದ್ದು ಕಾಣುವ ಸಂಗತಿ. ಇದು ಬೆದರಿದವರ ಮೇಲೆ ಕಲ್ಲೆಸೆದರು ಎಂಬಂತೆ ಚಿಕಿತ್ಸೆಗಾಗಿ ಅಲೆದಾಡುವವರಲ್ಲಿ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಿದೆ.

ಈಗಿನ ಜನರು ಇಂತಹ ಸಾಂಕ್ರಾಮಿಕ ರೋಗವನ್ನು ಈ ಹಿಂದೆ ತಮ್ಮ ಜೀವನದಲ್ಲಿ ಕಂಡಿರಲಿಕ್ಕಿಲ್ಲ. ಪ್ಲೇಗು, ಕಾಲರಾ, ಸಿಡುಬು ಇತ್ಯಾದಿಗಳ ಬಗ್ಗೆ ಕೇಳಿದ್ದರೂ ಅವು ಸ್ವಾತಂತ್ರ್ಯಪೂರ್ವ ಅಥವಾ ಬಹು ಹಳೆಯ ಸಂಗತಿಗಳಾಗಿ ಕತೆ, ಕಾದಂಬರಿಗಳಲ್ಲಿ ಮಾತ್ರ ಉಲ್ಲೇಖಿತ ವಿಷಯಗಳಾಗಿವೆ. ಹೀಗಾಗಿ ಕೊರೊನಾ ಪೆಟ್ಟಿಗೆ ಜನ ಆಘಾತಕ್ಕೆ ಒಳಗಾಗುತ್ತಿದ್ದಾರೆ. ಬರೇ ಮಾಹಿತಿ ಅಥವಾ ನ್ಯೂಸ್‌ ಆಗಿ ಟಿವಿಯ ಪರದೆಯಲ್ಲಿ, ವೃತ್ತಪತ್ರಿಕೆಗಳಲ್ಲಿ ಕಾಣುತ್ತಿದ್ದ ಸಂಗತಿಗಳು ತಮ್ಮ ಮನೆಯಲ್ಲೇ ಕಾಣುಬಹುದೆಂಬ ಕಲ್ಪನೆಯೇ ಹಲವರಿಗೆ ಇರಲಿಲ್ಲ. ತಾವೇ ಅಥವಾ ತಮ್ಮ ಕುಟುಂಬದವರೇ ಕೊವಿಡ್‌ ಸೋಂಕಿಗೆ ಒಳಗಾಗಿರುವುದನ್ನು ಜೀರ್ಣಿಸಿಕೊಳ್ಳಲು ಇಂತಹವರಿಗೆ ಸಾಧ್ಯವಾಗುತ್ತಿಲ್ಲ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಮಾನವೀಯತೆಯ, ಅಮಾನವೀತೆಯ ಎಲ್ಲದರ ಚಿತ್ರಣಗಳನ್ನೂ ಈ ರೋಗಸಂಕಷ್ಟ ತೆರೆದಿಟ್ಟು ಬಿಟ್ಟಿದೆ. ರಸ್ತೆಯಲ್ಲಿ ಯುವಕನೊಬ್ಬ ಗಂಟಲು ನೋವಿನಿಂದ ಬಿದ್ದು ಒದ್ದಾಡುತ್ತಿದ್ದರೂ ಕೊರೊನಾ ಭಯದಿಂದ ಹತ್ತಿರ ಸುಳಿಯದೇ ಜನರೆದುರೇ ಆತ ಒದ್ದಾಡುತ್ತಾ ಸತ್ತದ್ದಿದೆ. ಅಸಹಾಯಕ ಪತ್ನಿ, ಸೋಂಕಿತ ಗಂಡನನ್ನು ಮನೆಗೆ ಕರೆತರುತ್ತಿದ್ದಾಗ ರಸ್ತೆಯಲ್ಲಿಯೇ ಅಡ್ಡಗಟ್ಟಿ ಅವರಿಬ್ಬರನ್ನೂ ಗ್ರಾಮದಿಂದ ಹೊರಹಾಕಿ ಬೀದಿಪಾಲು ಮಾಡಿದ ಕ್ರೌರ್ಯವಿದೆ. ಇಂತಹ ಪ್ರಸಂಗಗಳು ಅನೇಕವಿದೆ.

ಅಮ್ಮನಿಗೆ ಕೋವಿಡ್‌ ಬಂದು ಜಿಲ್ಲಾಸ್ಪತ್ರೆಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಮನನೊಂದ ಯುವಕ ಅದೇ ಆಸ್ಪತ್ರೆಯಲ್ಲಿ ನೇಣಿಗೆ ಶರಣಾದ ವರದಿಯಿದೆ. ಗಂಡನಿಗೆ ಕೋವಿಡ್‌ ಬಂತೆಂದು ಹೆಂಡತಿ ನದಿಗೆ ಹಾರಿದ್ದು, ಹೆಂಡತಿಗೆ ಕೊರೊನಾ ತಗುಲಿತೆಂದು ಗಂಡ ಹಗ್ಗಕ್ಕೆ ನೇತಾಡಿದ ಸುದ್ದಿಗಳು ಪತ್ರಿಕೆಗಳಲ್ಲಿವೆ. ಅಷ್ಟೇ ಏಕೆ ಸ್ವತಃ ಕೊರೊನಾ ಸೋಂಕಿತರೇ ಇನ್ನು ನಮ್ಮ ಜೀವನ ಮುಗಿಯಿತು, ಆಸ್ಪತ್ರೆಯಲ್ಲಿ ಒದ್ದಾಡುವುದೇಕೆ ಎಂದು ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವು ಪ್ರಜ್ಞಾವಂತ, ನಾಗರಿಕ ಸಮಾಜದ ಮನ ಚುಚ್ಚುವಂತಹ ಸಂಗತಿಗಳು.

ಇವೆಲ್ಲವೂ ಮನಸ್ಸಿನ ದೃಢತೆಯನ್ನು ಪರೀಕ್ಷಿಸುವ ಸಮಯಗಳು. ಆತುರದ ತೀರ್ಮಾನ, ಗುಂಪುಗೂಡಿದ ಜನ ಗೊಂದಲದ ಮನಸ್ಥಿತಿಯಲ್ಲಿ ಕೈಗೊಂಡ ನಿಲುವುಗಳು ಅನೇಕ ಜೀವಗಳಿಗೇ ಕುತ್ತು ತಂದಿವೆ. ಕೆಲ ಬಾರಿ ಕೊವಿಡ್‌ ಟೆಸ್ಟ್‌ ಫಲಿತಾಂಶವೇ ತಪ್ಪಾಗಿರುವ ಸಾಧ್ಯತೆಗಳಿವೆ. ಒಂದು ಪರೀಕ್ಷಾಕೇಂದ್ರ ಒಬ್ಬಾತನಿಗೆ ಕೊವಿಡ್‌ ಇದೆ ಎಂದು ಪಾಸಿಟಿವ್‌ ವರದಿ ನೀಡಿದ್ದರೆ, ಯಾವುದೇ ಚಿಕಿತ್ಸೆ ಪಡೆಯದೇ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ಸ್ವಾಬ್‌ ಟೆಸ್ಟ್ ಮಾಡಿಸಿದಾಗ ಕೊವಿಡ್‌ ನೆಗೆಟಿವ್‌ ಫಲಿತಾಂಶ ಬಂದ ಪ್ರಸಂಗಗಳಿವೆ.ಇಂತಹ ಪರಿಸ್ಥಿತಿಯಲ್ಲಿ ಆತುರದ ಕೈಗೆ ಬುದ್ಧಿಕೊಟ್ಟವರದು ದುರಂತ ಕತೆ.

ನಮ್ಮ ಜನ ಈಗ ನಿಜವಾಗಿ ಹೊಂದಬೇಕಾದದ್ದು ವಿವೇಚನೆ ಮತ್ತು ಆತ್ಮಸಂಯಮಗಳೆಂಬ ಶಕ್ತಿಗಳನ್ನು. ಆದರೆ ಸಮೂಹ ಮಾಧ್ಯಮಗಳು ಜವಾಬ್ದಾರಿ ಮರೆತು ಜಾಗೃತಿಗಿಂತ ಹೆಚ್ಚಾಗಿ ಭೀತಿ ಮೂಡಿಸುವ ಚಿತ್ರಣಗಳನ್ನು ಜನರ ಮುಂದಿಡುತ್ತಿವೆ. ಅದಕ್ಕೆ ಕಾರಣ ಟಿ ಆರ್ ಪಿಯೋ ಅಥವಾ‌ ಮತ್ತೊಂದೋ ಗೊತ್ತಿಲ್ಲ. ಆದರೆ ನಿರಂತರವಾಗಿ ಸಾವುನೋವು, ದುಗುಡ ದೊಂಬಿಗಳ ವಾರ್ತೆಗಳನ್ನೇ ಕೇಳುವ, ನೋಡುವ ಬಹುತೇಕ ಜನರು ಸಾಮಾನ್ಯ ಯೋಚನಾ ಶಕ್ತಿಯನ್ನೂ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿಬಿಟ್ಟಿದ್ದಾರೇನೋ ಎನಿಸುತ್ತಿದೆ. ಸತ್ತವರ ಹೆಣಸುಡುವ, ಸಂಬಂಧಿಕರು ಗೋಳಾಡುವ ದೃಶ್ಯಗಳನ್ನೇ ಪದೇ ಪದೇ ತೋರಿಸುವುದು, ವೀಕ್ಷಿಸುವುದು ಜನರ ಮನೋಧೈರ್ಯವನ್ನೇ ಉಡುಗಿಸಿ ಭಯವನ್ನು ಮೂಡಿಸುವ ಕೆಲಸ ಮಾಡುತ್ತಿದೆ. 

ಸೋಂಕಿದ್ದರೂ ಅದು ಉಲ್ಪಣಿಸಲು ಅಥವಾ ನಿರ್ಮೂಲನಗೊಳ್ಳಲು ಮನಸ್ಸಿನ ಶಕ್ತಿ ಬಹಳ ದೊಡ್ಡ ಪಾತ್ರವಹಿಸುತ್ತದೆ. ಮಾನಸಿಕವಾಗಿ ಆರೋಗ್ಯವನ್ನು ರೂಢಿಸಿಕೊಂಡರೆ ಅದರ ಪ್ರತಿಫಲನ ದೈಹಿಕವಾಗಿಯೂ ಆಗುವುದು ಖಂಡಿತ ಸತ್ಯ. ಆರೋಗ್ಯಕರ ಜೀವನ ಪದ್ಧತಿಯ ಜೊತೆಗೆ ಆರೋಗ್ಯಕರ ವಿಚಾರ ಪದ್ಧತಿಯನ್ನೂ ರೂಢಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಋಣಾತ್ಮಕ ಚಿಂತನೆಗಳು ಮನಸ್ಸನ್ನು ಆಕ್ರಮಿಕೊಳ್ಳಲು ಎಂದಿಗೂ ಅವಕಾಶ ಕೊಡಬಾರದು.

ಕೊರೊನಾ ಪೀಡಿತನೊಬ್ಬ ಸತ್ತದ್ದನ್ನು ನೋಡಿದೆವೆಂದ ಮಾತ್ರಕ್ಕೆ ನಾವು ಸಹ ಹಾಗೆಯೇ ಸಾಯುತ್ತೇವೆಂದು ಭಾವಿಸುವ ಅಗತ್ಯವಿಲ್ಲ. ಲಕ್ಷಾಂತರ ಜನ ಆ ಸೋಂಕಿಗೆ ಒಳಗಾದರೂ ವೈದ್ಯರ ಸೂಕ್ತ ಚಿಕಿತ್ಸೆಯಿಂದ ಅಥವಾ ಮನೆಯಲ್ಲಿಯೇ ಇದ್ದು ಸೇವಿಸಿದ ಔಷಧಿ ಹಾಗೂ ಮಾಡಿಕೊಂಡ ಮನೆಮದ್ದಿನಿಂದ ಈಗ ಆರೋಗ್ಯವಾಗಿ ಇರುವುದನ್ನು ಸಹ ಗಮನಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕೊವಿಡ್‌ ಸೋಂಕಿನ ರೋಗಿಗಳಿಗೆ ಸೂಕ್ತ ಸಲಹೆಗಳ ಮೂಲಕ ಮಾನಸಿಕ ಆರೋಗ್ಯವನ್ನು ನೀಡಿ ಧೈರ್ಯ ತುಂಬುವ ಪ್ರಯತ್ನಗಳಿಗೆ ಅನೇಕರು ಕೈ ಹಾಕಿರುವ ಶ್ಲಾಘನೀಯ ಕಾರ್ಯವೂ ಕಂಡು ಬರುತ್ತಿದೆ. 

ಇಂದಿನ ಈ ಸಮೂಹ ಸನ್ನಿಯಂತಹ ಕಾಲದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ, ಮನೋಲ್ಲಾಸವನ್ನು ವೃದ್ಧಿಸುವ ವಿಚಾರ ವ್ಯವಹಾರಗಳಲ್ಲಿ ನಿರತರಾಗಬೇಕು. ʼಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿʼ ಎಂಬ ನಂಬಿಕೆ ಹೇಗೆ ಆಸ್ತಿಕನಿಗೆ ಅಪರಿಮಿತ ವಿಶ್ವಾಸವನ್ನು ತುಂಬುತ್ತದೆಯೋ ಹಾಗೆಯೇ ನಮಗೆ ಒಳಿತೇ ಆಗುತ್ತದೆ ಎಂಬ ದೃಢವಿಶ್ವಾಸವೂ ಮುಂದಿನ ಬಾಳಿಗೆ ಭರವಸೆಯನ್ನು ತುಂಬಿ ಬದುಕನ್ನು ಮುನ್ನೆಸುವ ಇಂಧನವಾಗುತ್ತದೆ.

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಬಂಗಾಳದ ಪ್ರಭುತ್ವ ಪ್ರಾಯೋಜಿತ ಹಿಂಸೆ

ಬಂಗಾಳದ ಪ್ರಭುತ್ವ ಪ್ರಾಯೋಜಿತ ಹಿಂಸೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Video: Speech by Dr Prabhakara Bhat at Bangalore

August 27, 2012
Dec 16:Vijay Diwas to be observed at Bangalore

Dec 16:Vijay Diwas to be observed at Bangalore

August 25, 2019
RSS Functionary Ram Madhav’s speech abstract at Tehran Conference, held on Dec-24-2012

RSS Functionary Ram Madhav’s speech abstract at Tehran Conference, held on Dec-24-2012

December 30, 2012
Suryanamaskars by Sevikas is now a Limca Record

Suryanamaskars by Sevikas is now a Limca Record

April 15, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In