• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

Vishwa Samvada Kendra by Vishwa Samvada Kendra
April 28, 2021
in Articles, BOOK REVIEW
253
1
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
496
SHARES
1.4k
VIEWS
Share on FacebookShare on Twitter

ನಮ್ಮ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನೇಕರು ಯತ್ನಿಸಿ ವಿಫಲರಾಗಿದ್ದಾರೆ ಹಾಗೂ ಮತ್ತೆ ಕೆಲವರು ಯಶಸ್ವಿ ಕೂಡ ಆಗಿದ್ದಾರೆ. ಇದೇ ಹಾದಿಯಲ್ಲಿರುವ ಇನ್ನೊಂದು ಹೋರಾಟವೇ ‘ಕೃಷಿ ಮಸೂದೆ ವಿರೋಧಿಸಿ ರೈತರ ಮುಖವಾಡ ಧರಿಸಿದವರು ಮಾಡುತ್ತಿರುವ ಹೋರಾಟ’. ರೈತರ ಪರ ಎಂದು ಹೇಳಿಕೊಂಡು ಯಾವುದಾದರೂ ಹೋರಾಟ ಶುರು ಮಾಡಿದರೆ ಅದಕ್ಕೆ ಬಹುಪಾಲು ಜನರ ಬೆಂಬಲವಂತೂ ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಸಿಕ್ಕೇ ಸಿಗುತ್ತದೆ. ಹೀಗೆಯೇ ಶುರುವಾಗಿದ್ದು ಕೇಂದ್ರ ಸರಕಾರ ತಂದ ಕೃಷಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಹೋರಾಟ. ‘ಅರೇ, ರೈತರು ಬೀದಿಯಲ್ಲಿದ್ದಾರೆ ನೀನು ಬೆಂಬಲಿಸುವುದಿಲ್ಲವೇ?!’ ಎಂದು ಯಾರಾದರೂ ನಮ್ಮನ್ನು ಕೇಳಿದರೆ ಇಲ್ಲ ಎನ್ನಲು ನಮಗೆ ಆ ಕ್ಷಣಕ್ಕೆ ಸಾಧ್ಯವಿಲ್ಲ. ಏಕೆಂದರೆ ರೈತನಿಗೆ ಒಂದು ವಿಶೇಷ ಸ್ಥಾನವನ್ನು ನಮ್ಮ ಮನಸ್ಸಿನಲ್ಲಿ ನಾವು ನೀಡಿದ್ದೇವೆ.

ಈ ಕೃಷಿ ಮಸೂದೆ ವಿರೋಧಿ ಹೋರಾಟದ ಮೂಲ ಉದ್ದೇಶವೇ ಬೇರೆಯಿತ್ತು ಎಂದು ದೇಶದ ಜನತೆಗೆ ಬಹುಬೇಗನೇ ತಿಳಿದು ಹೋಯಿತು. ಆದರೆ ಈ ಸುಳ್ಳು ಹೋರಾಟ, ಟೂಲ್ ಕಿಟ್, ದೇಶವಿರೋಧಿ ಚಟುವಟಿಕೆಗಳ ನಡುವೆ ನಾವೆಷ್ಟು ಜನ ‘ಕೃಷಿ ಕಾಯಿದೆಯ’ ಒಳ ಹೊರವನ್ನು ಅರಿತಿದ್ದೇವೆ? ಮೋದಿಯವರು ಜಾರಿಗೆ ತಂದರೆಂದರೆ ಎಲ್ಲವೂ ಸರಿಯೇ? ಈ ಕಾನೂನಿನಲ್ಲಿ ಏನೂ ಲೋಪ ದೋಷಗಳಿಲ್ಲವೇ? ರೈತರ ವಿರೋಧ ಯಾವ ವಿಷಯಕ್ಕೆ? ಯಾಕೆ ಪಂಜಾಬ್ ಮತ್ತು ಹರಿಯಾಣ ರೈತರು ಬಿಗಿ ಪಟ್ಟು ಹಿಡಿದು ಕೂತಿದ್ದಾರೆ?ಪಂಜಾಬ್ ನ ‘ಆರ್ಥಿಯಾಸ್’ ಅಲ್ಲಿನ ರೈತರನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ? ಹೊಸ ಕೃಷಿ ಕಾಯಿದೆಯಲ್ಲಿ ‘ಎಫ್ ಪಿ ಓ’ ಗಳ ಪಾತ್ರವೇನು? ಎ ಪಿ ಎಂ ಸಿ ಗಳು ರಾಜಕೀಯ ಪುಢಾರಿಗಳ ತಾಣವಾಗಿ ಬದಲಾಗಿದ್ದು ಹೇಗೆ? ಎಂ ಎಸ್ ಪಿ ಎಷ್ಟು ಪರಿಣಾಮಕಾರಿಯಾಗಿದೆ? ಹೊಸ ಕೃಷಿ ಕಾಯಿದೆಗಳಲ್ಲಿ ಎಂ ಎಸ್ ಪಿಗೆ ಪ್ರಾಮುಖ್ಯತೆ ಇಲ್ಲವೇ? ಕೃಷಿ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಅಶೋಕ್ ಗುಲಾಟಿ ಈ ಕಾಯಿದೆಯ ಬಗ್ಗೆ ಏನನ್ನುತ್ತಾರೆ? ಹೊಸ ಕೃಷಿ ಕಾಯಿದೆ ಏಕೆ ಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮಗೂ ಮೂಡಿರಬೇಕಲ್ಲವೇ? ಹೀಗೆ ಮೂಡುವ ಹಲವು ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪುಸ್ತಕವೊಂದು ಕನ್ನಡಲ್ಲಿ ಬಿಡುಗಡೆಯಾಗಿದೆ.ಅದೇ ವಿಜಯ ಕರ್ನಾಟಕದ ಕೇಶವ ಪ್ರಸಾದ್ ಬಿ ಅವರು ಬರೆದಿರುವ ‘ ಕೃಷಿ ಕಾಯಿದೆ 2020, ಏನು..ಏಕೆ.. ಹೇಗೆ?’ ಎಂಬ ಪುಸ್ತಕ .ಈ ಪುಸ್ತಕದಲ್ಲಿ ಅವರು ಕೃಷಿ ಕಾಯಿದೆಗಳ ಸಂಪೂರ್ಣ ಒಳ ಹೊರವನ್ನು ಸರಳವಾಗಿ ವಿವರಿಸುವುದರ ಜೊತೆಗೆ ಕೃಷಿ ಕಾಯಿದೆ ವಿರೋಧಿಸಿ ನಡೆಸುತ್ತಿರುವ ಹೋರಾಟದ ಹಿಂದಿನ ಮರ್ಮವನ್ನೂ ತಿಳಿಸಿದ್ದಾರೆ. ಕೇಶವ ಪ್ರಸಾದರ ‘ಮೇಕಿಂಗ್ ಇಂಡಿಯಾ’ ಅಂಕಣ ಮತ್ತು ಅನೇಕ ಬರಹಗಳ ಖಾಯಂ ಓದುಗಾರನಾದ ನನಗೆ ಅವರು ಈ ಕೃತಿ ಬರೆಯುತ್ತಿದ್ದೇನೆ ಎಂದು ಹೇಳಿದಾಗ ಖುಷಿಯ ಜೊತೆಗೆ ಕಾತರತೆ ಕೂಡ ಜಾಸ್ತಿಯಾಗಿತ್ತು. ನಿಜಕ್ಕೂ ಈ ಪುಸ್ತಕವನ್ನು ಅದ್ಭುತವಾಗಿ ಬರೆದ ಕೇಶವ ಪ್ರಸಾದ್ ಅವರು ನಿರೀಕ್ಷೆಯನ್ನಂತೂ ಹುಸಿಗೊಳಿಸಲಿಲ್ಲ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

1991 ರಲ್ಲಿ ಮನಮೋಹನ ಸಿಂಗ್ ಅವರ ನೇತೃತ್ವದಲ್ಲಿ ಬಂದ ಉದಾರೀಕರಣ ನೀತಿಗೆ ಈ ಕೃಷಿ ಕಾಯಿದೆಗಳನ್ನು ಏಕೆ ಹೋಲಿಸಬಾರದು? ಇದು ಕೂಡ ಅಂತಹ ಐತಿಹಾಸಿಕ ನಿರ್ಧಾರವೇ ಅಲ್ಲವೇ ?ಇದು ಯಾಕೆ ಐತಿಹಾಸಿಕ ನಿರ್ಧಾರ? ತಿಳಿಯಬೇಕೆಂದರೆ ಈ ಪುಸ್ತಕ ಓದಿ. ಪುಸ್ತಕ ಓದಿ ಮುಗಿಸಿದ ಮೇಲೆ ನನಗನ್ನಿಸಿದ್ದು ಮೋದಿಯವರು ಜಾರಿಗೆ ತಂದ ಈ ಕಾಯಿದೆ ಐತಿಹಾಸಿಕವೇ ಸೈ.ಈ ಕಾಯಿದೆ ವಿರೋಧಿ ಹೋರಾಟಗಾರ ಪ್ರಕಾರ ರೈತ ಖಾಸಗಿ ಕಂಪನಿಗಳ ಗುಲಾಮನಾಗುತ್ತಾನೆ ಆದರೆ ಈ ವಾದದಲ್ಲಿ ಹುರುಳಿಲ್ಲ ಏಕೆಂದರೆ ಈ ಹೊಸ ಕೃಷಿ ಕಾಯಿದೆಗಳು ರೈತನಿಗೆ ಒಂದು ಆಯ್ಕೆಯೇ ಹೊರತು ಇದರ ಪ್ರಕಾರ ಮಾತ್ರ ರೈತ ನಡೆದುಕೊಳ್ಳಬೇಕು ಎಂದೇನಿಲ್ಲ. ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ ಎನ್ನುವವರೇ, 2002 ರಿಂದ ಹೊಸ ಕೃಷಿ ನೀತಿಯ ಬಗ್ಗೆ ವಿವಿಧ ಸ್ತರಗಳಲ್ಲಿ ನಡೆದಿದ್ದು ಚರ್ಚೆಯಲ್ಲವೇ? ಅನೇಕ ಕೃಷಿ ಅರ್ಥ ಶಾಸ್ತ್ರಜ್ಞರು ಈ ಹೊಸ ಕಾಯಿದೆಯನ್ನು ಸುಮ್ಮನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅವರಲ್ಲಿ ಅನೇಕರು ಹೊಸ ಕಾಯಿದೆಯ ಅನುಕೂಲತೆಗಳ ಬಗ್ಗೆ ಒಳ್ಳೆಯ ವಾದವನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತನಿಗೆ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಅಧಿಕಾರ ನೀಡುತ್ತೇವೆ ಎಂದು 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮರೆಯಲು ಸಾಧ್ಯವೇ? ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಎಲ್ಲ ರಾಜ್ಯಗಳಿಗೆ ಬರೆದ ಪತ್ರವ ಮರೆಯಲು ಸಾಧ್ಯವೇ? ಇದೆ ರಾಕೇಶ್ ಟಿಕಾಯತ್ ನ ಭಾರತೀಯ ಕಿಸಾನ್ ಯೂನಿಯನ್ 2019 ರ ಚುನಾವಣಾ ಪ್ರಣಾಳಿಕೆಯ ಏನು ಭರವಸೆ ನೀಡಿತ್ತು? ನೀವದನ್ನು ಓದಿದರೆ ನಿಜಕ್ಕೂ ಗಾಬರಿಯಾಗುತ್ತೀರಿ. ಈ ಎಲ್ಲ ವಿರೋಧ ಪಕ್ಷಗಳ ದ್ವಂದ್ವ ನಿಲುವುಗಳ ಬಗ್ಗೆ ತಿಳಿಯಬೇಕೆಂದರೆ ಒಮ್ಮೆ ಈ ಪುಸ್ತಕ ಓದಿ.

ದೇಶದ ಶೇಖಡಾ 50 ಕ್ಕೂ ಅಧಿಕ ಜನರಿಗೆ ಕೆಲಸ ನೀಡಿರುವ ಹೆಮ್ಮೆಯ ಕೃಷಿ ಕ್ಷೇತ್ರ ಜಿಡಿಪಿ ಗೆ ನೀಡುತ್ತಿರುವ ಕೊಡುಗೆ ಕೇವಲ ಶೇಖಡಾ 17 ಅಂದರೆ ಆಶ್ಚರ್ಯವಾಗಲೇಬೇಕಲ್ಲವೇ ? ಹೌದು ಈಗ ಕೃಷಿಯೊಂದು ಮಾಡರ್ನ್ ಇಂಡಸ್ಟ್ರೀ. ಈ ಕೃಷಿಗೀಗ ಹೊಸತನದ ಅವಶ್ಯಕತೆಯಿದೆ, ರೈತ ಸಾಲದಿಂದ ಹೊರಬರಬೇಕಿದೆ. ಕೃಷಿಯಲ್ಲಿನ ಹೊಸತನಕ್ಕೆ ರೈತ ಹೊರಳಬೇಕಾದರೆ ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಾಗಬೇಕಿದೆ. ಹೌದು! Aggriculture needs sophisticated technical knowhow. ಸೋಶಿಯಲಿಸಮ್ ಹೆಸರಲ್ಲಿ ರೈತರನ್ನು ಹೆದರಿಸುವ ಸಂಘಟನೆಗಳಿಂದ ರೈತರು ದೂರವಿರಬೇಕಿದೆ. ದೇಶದ ರೈತರು ಶ್ರೀಮಂತರಾಗಬೇಕು ಮತ್ತು ಸ್ವಾವಲಂಬಿಗಳಾಗಬೇಕೆಂದರೆ ಇಂತಹ ಕಾನೂನುಗಳ ಅವಶ್ಯಕತೆಯಿದೆ. ಈ ಕಾನೂನನ್ನು ಬಹುಪಾಲು ರೈತರು ಒಪ್ಪಲು ಕೂಡ ಇದೇ ಕಾರಣ. ಕನ್ನಡದಲ್ಲಿ ಬಹುಶಃ ಇಂತಹ ಇನ್ನೊಂದು ಕೃತಿ ಬಂದಿರಲಿಕ್ಕಿಲ್ಲ ಇದನ್ನು ನಾವೆಲ್ಲ ಓದಬೇಕು, ಹೊಸ ಕೃಷಿ ಕಾಯಿದೆಯ ಮೂಲ ಆಶಯಗಳನ್ನು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ಹಂಚಬೇಕು. ಈ ಪುಸ್ತಕವನ್ನು ಬರೆದು ಕನ್ನಡಿಗರಿಗೊಪ್ಪಿಸಿದ ಕೇಶವ ಪ್ರಸಾದ್ ಬಿ. ಅವರಿಗೆ ಹಾಗೂ ಪ್ರಕಾಶಕರಾದ ಸ್ನೇಹ ಬುಕ್ ಹೌಸ್ ನವರಿಗೆ ನನ್ನ ಅನಂತ ಧನ್ಯವಾದವನ್ನು ಈ ಮೂಲಕ ತಿಳಿಸುತ್ತೇನೆ.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
BOOK REVIEW

Conflict resolution : The RSS way

April 21, 2022
Next Post
ಪರಸ್ಪರ ಸಹಕಾರದಿಂದ ಮಾತ್ರ ಕೊರೋನಾ ಅಲೆಯನ್ನು ಎದುರಿಸಬಹುದು : ಆರೆಸ್ಸೆಸ್ ನ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶಜೀ

ಪರಸ್ಪರ ಸಹಕಾರದಿಂದ ಮಾತ್ರ ಕೊರೋನಾ ಅಲೆಯನ್ನು ಎದುರಿಸಬಹುದು : ಆರೆಸ್ಸೆಸ್ ನ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶಜೀ

Comments 1

  1. ಕೇಶವ ಪ್ರಸಾದ್ ಬಿ. ಬೆಂಗಳೂರು says:
    2 years ago

    ಕೃಷಿ ಕಾಯಿದೆ 2020 ಕೃತಿಯನ್ನು ಸೊಗಸಾಗಿ ಪರಿಚಯಿಸಿದ ಲೇಖಕ ಪ್ರಸನ್ನ ಕಂಬದಮನೆ ಹಾಗೂ ಸಂವಾದ ಬಳಗಕ್ಕೆ ಧನ್ಯವಾದಗಳು.
    ಕೇಶವ ಪ್ರಸಾದ್.ಬಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Day 2 #PositivityUnlimited Series : Sri Sri Ravishankar, Azim Premji, Nivedita Bhide call for compassion, Seva and overcome current crisis through confidence

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆ. ದಿನ ೨ : ‘ಎಲ್ಲರೂ ಸೇವೆಯಲ್ಲಿ ತೊಡಗಿಸಿಕೊಂಡು ಕೋವಿಡ್ ವಿರುದ್ಧ ಹೋರಾಡೋಣ’ ಎಂಬ ಶ್ರೀ ಶ್ರೀ, ಅಜೀಮ್ ಪ್ರೇಮ್ ಜಿ, ನಿವೇದಿತಾ ಭಿಡೆ ಸಂದೇಶ #PositivityUnlimited

May 12, 2021
ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ : ಸಹ ಸರಕಾರ್ಯವಾಹ, ಡಾ. ಮನಮೋಹನ್ ವೈದ್ಯರ ಲೇಖನ

July 13, 2020
Nationwide Protest held condemning Communist Violence on RSS Swayamsevaks in Kerala, Top Trend #EndViolenceCPM

Nationwide Protest held condemning Communist Violence on RSS Swayamsevaks in Kerala, Top Trend #EndViolenceCPM

March 1, 2017
Seva Sanghik: RSS Swayamsevaks cleaned premises of ground ಸೇವಾಸಾಂಘಿಕ್ : ಮೈದಾನ ಸ್ವಚ್ಛಗೊಳಿಸಿದ ಸ್ವಯಂಸೇವಕರು

Seva Sanghik: RSS Swayamsevaks cleaned premises of ground ಸೇವಾಸಾಂಘಿಕ್ : ಮೈದಾನ ಸ್ವಚ್ಛಗೊಳಿಸಿದ ಸ್ವಯಂಸೇವಕರು

September 22, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In