• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

’ಮಠ ಪರಂಪರೆ’ಯ ಆದರ್ಶ ಕೊಂಡಿ ಶ್ರೀ ಶಿವಕುಮಾರಸ್ವಾಮಿಜೀ

Vishwa Samvada Kendra by Vishwa Samvada Kendra
April 1, 2021
in Articles
251
0
’ಮಠ ಪರಂಪರೆ’ಯ ಆದರ್ಶ ಕೊಂಡಿ ಶ್ರೀ ಶಿವಕುಮಾರಸ್ವಾಮಿಜೀ
492
SHARES
1.4k
VIEWS
Share on FacebookShare on Twitter

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ

ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನುಟ್ಟು ನಭವೇ ಕಿರಣಹಸ್ತವ ಚಾಚಿದೆ

ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ

– ಕವಿ ಜಿ.ಎಸ್. ಶಿವರುದ್ರಪ್ಪ

ಹಿಂದುತ್ವದ ಪರಮಗುಣವಾದ ಸರ್ವಭೂತಗಳಲ್ಲೂ ತನ್ನನ್ನೇ ಕಾಣುವ, ಎಲ್ಲರೂ ತನ್ನವರೇ ಎನ್ನುವ ಐಕ್ಯಭಾವವೇ ಮೂರ್ತಿವೆತ್ತಂತೆ ಇದ್ದು ಮೆರೆದ ಸಿದ್ಧಗಂಗೆಯ ಪೀಠಾಧ್ಯಕ್ಷರಾದ ಶಿವೈಕ್ಯ ಪರಮಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ (ಏಪ್ರಿಲ್ 1, 1908 – ಜನವರಿ 21, 2019) ಅವರ ಜನ್ಮ ದಿನ ಇಂದು. ಅಸಂಖ್ಯಾತ ಭಕ್ತರ ಪಾಲಿಗೆ ’ನಡೆದಾಡುವ ದೇವರು’ ಆಗಿದ್ದವರು ಅವರು. ಲಕ್ಷಾಂತರ ಮಂದಿಗೆ ಆಶ್ರಯ-ಅಕ್ಷರ-ಅಶನವನ್ನಿತ್ತು ಸುಖೀ ಬದುಕನ್ನು ಕಟ್ಟಿಕೊಳ್ಳಲು ನೆರವಾದವರು ಅವರು.

ಮಾರ್ಚ್ ೩, ೧೯೩೦ರಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದಲ್ಲಿಂದ ಆರಂಭವಾದ ಅವರ ಸಂನ್ಯಾಸಜೀವನ ಕಠಿಣತಮ ಅಧ್ಯಾತ್ಮಸಾಧನೆಗಳಿಗಷ್ಟೇ ಸೀಮಿತವಾಗದೆ ಮಠದ ಅನುಯಾಯಿಗಳನ್ನೂ ಮೀರಿ ಸಮಾಜಮುಖಿಯಾಗಿ ಪ್ರವಹಿಸಿದ್ದು ನಾಡಿನ ಭಾಗ್ಯವೇ ಸರಿ. ಶ್ರೀ ಸ್ವಾಮಿಜೀ ಇಹದ ಸಾಮಾಜಿಕ ನೆಲೆಯೊಳಗೇ ನಿಂತು ಶಿವಯೋಗವನ್ನು ಸಾಧಿಸುತ್ತ ಶಿವಾರ್ಪಿತ ಮನೋಭಾವದಿಂದ ನಡೆಸಿದ ಸಮಾಜಸೇವೆಯ ಕಾಯಕಗಳಿಂದಾಗಿಯೆ ಭಕ್ತಜನರ ಹೃದಯದಲ್ಲಿ ಅಮರರಾದವರು.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಶ್ರೀಶ್ರೀ ಶಿವಕುಮಾರ ಸ್ವಾಮಿಜೀ ನಮ್ಮ ನಡುವೆಯೇ ಇದ್ದು ಹೋದ ಮಹಾನ್ ಕರ್ಮಯೋಗಿ. ಧರ್ಮ- ಕರ್ಮಗಳನ್ನು ಅರ್ಥಪೂರ್ಣವಾಗಿ ಸಮನ್ವಯಗೊಳಿಸಿದ ವಿರಳಾತಿವಿರಳರಲ್ಲಿ ಒಬ್ಬರು. ಸುಸಂಸ್ಕೃತ ಹಾಗೂ ಆರೋಗ್ಯಕರ ಸಮಾಜವನ್ನು ರೂಪಿಸುವುದಕ್ಕಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಸದಾ ಸರ್ವತ್ರ ಅನುಕರಣೀಯವಾದವು.

ದಾನಗುಣ ಬಿತ್ತಿ ಬೆಳೆಸಿದ ಕಾಯಕಯೋಗಿ

ಹಗಲು-ರಾತ್ರಿಯೆನ್ನದೆ ಬಂದುಹೋಗುವ ಭಕ್ತಾದಿಗಳಿಗೆ ಹಾಗೂ ಮಠಾಶ್ರಿತ ವಿದ್ಯಾರ್ಥಿಗಳಿಗೆ ’ಒಲೆಯಾರದಂತೆ’ ನಿರಂತರ ಊಟದ ವ್ಯವಸ್ಥೆ ಮಾಡುವುದೆಂದರೆ ಮಹದಾಶ್ಚರ್ಯದ ಸಂಗತಿ. ಇದು ಸಾಧ್ಯವಾಗುವಂತೆ ಸಾರ್ವಜನಿಕರನ್ನು ಪ್ರೇರೇಪಿಸಿ ಅವರಲ್ಲಿ ದಾನಗುಣವನ್ನು ಬಿತ್ತಿ ಬೆಳೆಸಿದ ಕಾಯಕಯೋಗಿ – ಶ್ರೀಶ್ರೀ ಶಿವಕುಮಾರಸ್ವಾಮಿಜೀ. ’ದುಡಿಯಬೇಕು, ದುಡಿದುದನ್ನು ಹಂಚಿಕೊಂಡು ತಿನ್ನಬೇಕು’ – ಎಂಬುದು ಸ್ವಾಮಿಜೀಯವರು ತೋರಿದ ಆದರ್ಶ. ಸ್ವಾಮಿಜೀ ನಡೆಸುವ ನಿತ್ಯದಾಸೋಹ ಮತ್ತು ಶಿಕ್ಷಣಕಾರ್ಯಗಳನ್ನು ಕಂಡು ಕೊಂಡಾಡುವ ಜನ ತಾವಾಗಿಯೇ ಮುಂದೆಬಂದು ತಮ್ಮ ಪಾಲಿನ ಕಾಣಿಕೆಗಳನ್ನು ನೀಡುತ್ತಾರೆ. ಗಾಡಿಗಾಡಿಗಳಲ್ಲಿ ಅಕ್ಕಿ ರಾಗಿ ಮುಂತಾಗಿ ದವಸ-ಧಾನ್ಯಗಳನ್ನೂ, ಕಾಯಿ-ಪಲ್ಲೆಗಳನ್ನೂ ತಂದು ಶ್ರೀಮಠದ ಉಗ್ರಾಣವನ್ನು ತುಂಬಿ ಅಕ್ಷಯವನ್ನಾಗಿಸುತ್ತಾರೆ.

ಶೈಕ್ಷಣಿಕ ಕ್ರಾಂತಿಪುರುಷ

ಹೊಟ್ಟೆಯ ಹಸಿವಿಗೆ ಅನ್ನದಾಸೋಹವಾದರೆ, ಬೌದ್ಧಿಕ ಹಸಿವಿಗೆ ಹಾಗೂ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ಸ್ವಾಮಿಜೀ ಕೈಗೊಂಡಿದ್ದು ಅಕ್ಷರದಾಸೋಹ. ವ್ಯಕ್ತಿತ್ವವನ್ನು ಸಶಕ್ತಗೊಳಿಸುವಂತಹ ವಿದ್ಯೆಯನ್ನು ಸಮೂಹಕ್ಕೆ ದೊರಕಿಸಿಕೊಡುವುದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಸ್ವಾಮಿಜೀ ಶ್ರೀಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನಂತರ ಅದುವರೆಗೆ ಶ್ರೀಮಠದ ವತಿಯಿಂದ ನಡೆದುಕೊಂಡು ಬರುತ್ತಿದ್ದ ಸಂಸ್ಕೃತ ಪಾಠಶಾಲೆಯು ಕಾಲೇಜಾಗಿ ಪರಿವರ್ತಿತವಾಯಿತು. ಸದ್ಯಃ ಶ್ರೀಮಠದ ಶಿಕ್ಷಣಸಾಮ್ರಾಜ್ಯದ ವ್ಯಾಪ್ತಿ ಎ? ವಿಶಾಲವೆಂದರೆ – ಎಲ್‌ಕೆಜಿಯಿಂದ ಎಂ.ಟೆಕ್ ವರೆಗಿನ ವಿದ್ಯಾಭ್ಯಾಸ ನೀಡುವ ಮಹಾವಿಶ್ವವಿದ್ಯಾಲಯದ ವರೆಗೆ. ಈ ವ್ಯಾಪ್ತಿಯು ಕೇವಲ ತುಮಕೂರು ಜಿಲ್ಲೆಗಷ್ಟೇ ಸೀಮಿತವಾದದ್ದಲ್ಲ; ನಾಡಿನಾದ್ಯಂತ ವ್ಯಾಪಿಸಿದೆ. ಶ್ರೀಮಠದ ೧೨೫ಕ್ಕೂ ಹೆಚ್ಚು ಶಿಕ್ಷಣಸಂಸ್ಥೆಗಳಲ್ಲಿ ಜಾತಿ ಮತ ಧರ್ಮ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಜ್ಞಾನದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ಅಧ್ಯಾತ್ಮ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪಸರಿಸುವುದರಲ್ಲಿ ಶ್ರೀಮಠದ ವಿದ್ಯಾಸಂಸ್ಥೆಗಳ ಕೊಡುಗೆ ಗಣನೀಯವಾದದ್ದು.

ನಾಡಿನ ಎಲ್ಲ ಭಾಗಗಳ ಎಲ್ಲ ವರ್ಗಗಳ ಮಕ್ಕಳು ಶ್ರೀಮಠದ ಆಶ್ರಯದಲ್ಲಿ ವಿದ್ಯೆ ಹಾಗೂ ಅನ್ನವನ್ನು ಕಂಡುಕೊಂಡಿದ್ದಾರೆ; ತಮ್ಮ ಬದುಕಿನ ಬುತ್ತಿಯನ್ನು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಯೊಂದು ಇ? ಬೃಹತ್‌ಪ್ರಮಾಣದಲ್ಲಿ ಉನ್ನತಮಟ್ಟದ ಶಿಕ್ಷಣವನ್ನು ಅತ್ಯಂತ ವ್ಯವಸ್ಥಿತವಾಗಿ ನೀಡುತ್ತಿರುವುದು ಅತಿ ವಿರಳ ಉದಾಹರಣೆಯೇ ಸರಿ.

ರೈತಹಿತಾಕಾಂಕ್ಷಿ

ಶ್ರೀಶ್ರೀ ಶಿವಕುಮಾರಸ್ವಾಮಿಜೀ ರೈತಹಿತಾಕಾಂಕ್ಷಿಗಳಾಗಿದ್ದವರು. ಶ್ರೀಮಠದ ಬಾಗಿಲನ್ನು ಅವರು ಯಾವತ್ತೂ ರೈತಾಪಿಜನರಿಗೆ ಮುಕ್ತವಾಗಿ ತೆರೆದಿಟ್ಟಿದ್ದರು. ಸಿದ್ಧಗಂಗೆಯ ವರ್ಷಾವಧಿ ಜಾತ್ರೆಯಲ್ಲಿ ನಡೆಯುವ ’ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ ಅನ್ನದಾತನಿಗೆ ಸಮಸಾಮಯಿಕ ಬೇಸಾಯಕ್ರಮಗಳನ್ನು ಪರಿಚಯಿಸಿಕೊಳ್ಳಲು ನೆರವಾಗುತ್ತಿತ್ತು. ಜಾತ್ರೆಗೆ ಮುನ್ನ ರಾಜ್ಯದ ಎಲ್ಲೆಡೆಯಿಂದ ಬಂದು ಸೇರುವ ದನಗಳ ನೆರವಿಯು ಕೂಡ ಕೃಷಿಕಾರ್ಯಗಳಿಗೆ ಪೋಷಕವಾದದ್ದು. ಒಟ್ಟಾರೆಯಾಗಿ ಸಿದ್ಧಗಂಗಾ ಜಾತ್ರೆಯನ್ನು ಕೇವಲ ಜನಜಂಗುಲಿಯ ಜಾತ್ರೆಯಾಗದೆ ನಿಜಾರ್ಥದಲ್ಲಿ ’ರೈತರ ಜಾತ್ರೆ’ಯಾಗುವಂತೆ ಪರಿವರ್ತಿಸುವುದರಲ್ಲಿ ಸ್ವಾಮಿಜೀ ಯಶಸ್ವಿಯಾಗಿದ್ದಾರೆ.

ವಿಭೂತಿಸದೃಶರಾಗಿ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ ನಡೆಸಿದ್ದು 111 ವಸಂತಗಳನ್ನು ಕಂಡ ಬೆರಗುಹುಟ್ಟಿಸುವ ಜೀವನ. ಅದರಲ್ಲಿ ಸಂನ್ಯಾಸಜೀವನ 88 ವರ್ಷಗಳು; ಮಠಾಧ್ಯಕ್ಷರಾಗಿ ಕಾಯಕ ನಿರ್ವಹಿಸಿದ್ದು 77 ವರ್ಷಗಳು. ಸ್ವಾಮಿಜೀಯವರ ಬದುಕು ಸಂನ್ಯಾಸಧರ್ಮವನ್ನು ಅತ್ಯಲ್ಪವೂ ಲೋಪಬಾರದಂತೆ ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಜೊತೆಗೆ ಅಸದೃಶ ಸಾಮಾಜಿಕ ಕಾಳಜಿಯನ್ನೂ ಹೊಂದಿತ್ತು. ಅವರ ಹೃದಯ ಮಾನವೀಯ ಮೌಲ್ಯಗಳ ರಕ್ಷಣೆ-ಪೋಷಣೆಗಳ ಕಡೆಗೆ ಸದಾ ತುಡಿಯುತ್ತಿತ್ತು.

ಶ್ರೀ ಶ್ರೀ ಶಿವಕುಮಾರಸ್ವಾಮಿಜೀ ಅನುಸರಿಸಿದ ಮೌಲ್ಯಗಳು ’ಮಠ ಪರಂಪರೆ’ಗೆ ಆದರ್ಶವಾಗಿತ್ತು. ಜನವರಿ 21, 2019ರಂದು ಅವರ ಭೌತಿಕ ನಿರ್ಗಮನದಿಂದ ಅಧ್ಯಾತ್ಮ ಹಾಗೂ ಸಮಾಜಮುಖೀ ಜೀವನದ ಮಾರ್ಗದರ್ಶಿ ಕೊಂಡಿಯೊಂದು ಕಳಚಿದಂತಾಗಿತ್ತು.

ಕೃಪೆ: ಉತ್ಥಾನ
  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಸಿದ್ದಣ್ಣಗೌಡ ಗಡಿಗುಡಾಳರ ನಿಧನಕ್ಕೆ ಆರೆಸ್ಸೆಸ್ ಸಂತಾಪ

ಸಿದ್ದಣ್ಣಗೌಡ ಗಡಿಗುಡಾಳರ ನಿಧನಕ್ಕೆ ಆರೆಸ್ಸೆಸ್ ಸಂತಾಪ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

VANAMITRA – A Quarterly newsletter of Vanavasi Kalayana Ashrama launched in Bengaluru

VANAMITRA – A Quarterly newsletter of Vanavasi Kalayana Ashrama launched in Bengaluru

August 4, 2016
V Nagaraj condoles death of Poet Sumatheendra Nadig.

V Nagaraj condoles death of Poet Sumatheendra Nadig.

August 8, 2018

Call for justice ground report on West Bengal violence

July 17, 2021
RSS congratulates the Central Government on a historic decision

RSS congratulates the Central Government on a historic decision

August 5, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In