ಮೈಸೂರು.5 ನವೆಂಬರ್ 2017: ರಾಜೇಂದ್ರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ನಡೆಯಿತು. ಸುಮಾರು ೭೫೦ ಸಂಖ್ಯೆ ಪೂರ್ಣ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು, ನಂತರ ೫ ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಬೌದ್ಧಿಕ್ ನಡೆಸಿಕೊಟ್ಟರು, ವೇದಿಕೆಯಲ್ಲಿ ವಿಭಾಗ ಸಂಘಚಾಲಕರಾದ ಡಾ. ವಾಮಾನರಾವ್ ಬಾಪಟ್ ಮತ್ತು ಮಹಾನಗರ ಸಂಘಚಾಲಕರಾದ ಆರ್ ವಾಸುದೇವ ಭಟ್ ಉಪಸ್ಥಿತರಿದ್ದರು.