• Samvada
  • Videos
  • Categories
  • Events
  • About Us
  • Contact Us
Tuesday, February 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home BOOK REVIEW

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

Vishwa Samvada Kendra by Vishwa Samvada Kendra
January 29, 2022
in BOOK REVIEW
296
0
581
SHARES
1.7k
VIEWS
Share on FacebookShare on Twitter

1552 ರಿಂದ 1606ರವರೆಗೆ ಐವತ್ನಾಲ್ಕು ವರ್ಷಗಳ ಕಾಲ ಹೈವ,ತುಳುವ,ಕೊಂಕಣ ಪ್ರದೇಶಗಳನ್ನಾಳಿದ ಹಾಡುವಳ್ಳಿ,ನಗಿರೆಗಳ ಮಹಾಮಂಡಳೇಶ್ವರಿ.
ಪೋರ್ಚುಗೀಸರಿಂದ ‘ರೈನಾ ದ ಪಿಮೆಂಟಾ’ ಅಥವಾ ಪೆಪ್ಪರ್ ಕ್ವೀನ್ (ಕರಿ ಮೆಣಸಿನ ರಾಣಿ )ಎಂದು ಕರೆಸಿಕೊಂಡ.. ಮೊಹಮ್ಮದ್ದೀಯರ, ಪೂರ್ಚುಗೀಸರ ಮತಾಂತರದ ಒತ್ತಾಯದಿಂದ ಬೇಸತ್ತು ಆಶ್ರಯ ಬೇಡಿಬಂದವರಿಗೆ ಆಶ್ರಯವಿತ್ತು ಅವ್ವರಸಿ ಎಂದೇ ಹೆಸರಾದ ರಾಣಿ ಚೆನ್ನಭೈರಾದೇವಿ.. ಇಂದು ಇತಿಹಾಸ ಪುಟಗಳಿಂದ ಮರೆಯಾಗಿ ಹೋಗಿರುವುದು ದುರದೃಷ್ಟಕರ ಸಂಗತಿ ..

ಪೋರ್ಚುಗೀಸರ ಹುಟ್ಟಡಗಿಸಿದ್ದ ರಾಣಿ ಅಬ್ಬಕರ ಸಮಕಾಲೀನಳಾದ ರಾಣಿ ಚೆನ್ನಭೈರಾದೇವಿ,ಯುದ್ಧಕ್ಕೂ, ಸ್ನೇಹಕ್ಕೂ, ಆಡಳಿತಕ್ಕೂ ಸೈ ಎನಿಸಿಕೊಂಡಿದ್ದಲ್ಲದೇ ತನ್ನ ಚತುರ ವ್ಯಾಪಾರನೀತಿಯಿಂರ ರಾಣಿ ಎಲಿಜಿಬತ್ ಳಿಗೆ ಸಮ ಎಂದು ಸ್ವತಃ ಪೋರ್ಚುಗೀಸರಿಂದಲೇ ಕರೆಸಿಕೊಂಡಿದ್ದಳು..

READ ALSO

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

Conflict resolution : The RSS way

ಚೆನ್ನಭೈರಾದೇವಿ ಜಿನೈಕ್ಯರಾದ 17 ವರ್ಷಗಳ ಬಳಿಕ ಆಕೆಯ ಬಗ್ಗೆ,ಆಕೆಯ ಚಾರಿತ್ರ್ಯಕ್ಕೆ ಮಸಿಬಳಿಯುವ ರೀತಿ ಇತಿಹಾಸ ಬರೆದ ಇಟಲಿ ಪ್ರವಾಸಿಗ ಡೆಲ್ಲಾವೆಲ್ಲೆಯಾ ಸುಳ್ಳುಗಳ್ಳನ್ನೇ ನಂಬಿ, ಶೌರ್ಯಕ್ಕೆ ಮತ್ತೊಂದು ಹೆಸರಂತಿದ್ದ ಭೈರಾದೇವಿಯಾ ಇತಿಹಾಸವನ್ನೇ ತಿರುಚಿ, ಆಕೆಯನ್ನು ಕಳಂಕಿತಳನ್ನಾಗಿ ಮಾಡಿ, ದಕ್ಷಿಣ ಭಾರತದ ಅತಿ ಶ್ರೀಮಂತ ಸಂಸ್ಥಾನದ ವೈಭವವನ್ನು ಮರೆತು ಸುಳ್ಳನ್ನೇ ಉಸಿರಾಡಿದ ಇತಿಹಾಸಕಾರರನ್ನು ಬಹುಶಃ ನಗಿರೆಯ ನೆಲ ಎಂದಿಗೂ ಕ್ಷಮಿಸದು!!

ಸಾಳುವ ವಂಶದ ಕುಡಿ ಚೆನ್ನ ಭೈರಾದೇವಿ ಕರಿ ಮೆಣಸಿನ ರಾಣಿಯಾಗಿ ಬೆಳೆದ ಪರಿ ಇತಿಹಾಸದಲ್ಲಿ ಅಜರಾಮರವಾಗಿರಲೇ ಬೇಕು..

ಕರಿ ಮೆಣಸಿನ ರಾಣಿಯ ಅಕಳಂಕ ಚರಿತೆ ಕೃತಿಯು
ಭೈರಾದೇವಿ ಕಾಲದ ವ್ಯಾಪಾರ,ತೆರಿಗೆ ನೀತಿ, ನಗಿರೆ ಮತ್ತು ಹಾಡುವಳ್ಳಿಗಳ ಸುಧಾರಣೆ, ರಾಜ್ಯವೊಂದನ್ನು ಸುಭೀಕ್ಷಗೊಳಿಸುವಲ್ಲಿ ರಾಣಿಯ ಪಾತ್ರ. ವಿಜಯನಗರ ಅರಸರ ನೆಚ್ಚಿನ ಸಾಮಂತಳಾಗಿ ಆಕೆ ಉಳಿದ ಪರಿ,ಕೆಳದಿ, ಬಿಳಗಿ ರಾಜರುಗಳನ್ನ ಹಿಮ್ಮೆಟ್ಟಿಸಿದ್ದು,ಪೂರ್ಚುಗೀಸರಿಗೆ ಈಕೆ ಹೆಣ್ಣಲ್ಲ ಕಿಚ್ಚೊತ್ತ ಕಾಳಿ ಎಂಬಂತೆ ಕಾಡಿಸಿದ್ದನ್ನು ಸವಿಸ್ತಾರವಾಗಿ ತಿಳಿಸಿದೆ. ಅಲ್ಲದೇ,‌ರಾಣಿಯ ಶೌರ್ಯ, ಜೀವನ, ಧಾರ್ಮಿಕತೆ, ಪ್ರಜೆಗಳೆಡೆಗಿದ್ದ ಪ್ರೀತಿ ಓದುಗರ ಮನಸ್ಸಲ್ಲಿ ಆಕೆಯ ಚಿತ್ರವನ್ನ ಅಚ್ಚೊತ್ತದೆ ಇರಲಾರದು.

ಗೆರುಸೊಪ್ಪೆ, ಹಾಡುವಳ್ಳಿ ಭವ್ಯ ಸಂಸ್ಥಾನನವನ್ನು 54 ವರ್ಷಗಳವರೆಗೆ ಆಳಿ,ಕೆಳದಿ ನಾಯಕರ ವಂಚನೆಯಿಂದ ಸರೆ ಸಿಕ್ಕಿ,ಮುಪ್ಪಿನಲ್ಲೂ ಸಲ್ಲೇಖನ ವ್ರತದ ಮೂಲಕ ಎಲ್ಲ ವೈಷಮ್ಯಗಳ ತೊರೆದು ಸಾವಿನಲ್ಲೂ ಸಾರ್ಥಕತೆ ಕಂಡಳೆಂಬ ಭೈರಾದೇವಿ ಕುರಿತ ಈ ಕಾದಂಬರಿ ಕೊನೆಯಲ್ಲಿ ಕಣ್ಣೀರು ತರಿಸಿದ್ದು ಸುಳ್ಳಲ್ಲ.. ವಿದೇಶಿಗರು ಎಷ್ಟೇ ಬಾರಿ ಈ ನೆಲದ ವೀರ ಮಾತೆಯರ ಇತಿಹಾಸ ತಿರುಚಲು ಯತ್ನಿಸಿದರೂ, ಬೂದಿ ಮುಚ್ಚಿದ ಕೆಂಡದಂತ ಇಂದಲ್ಲ ನಾಳೆ ನೈಜ್ಯ ಇತಿಹಾಸ ಹೊರಬರುತ್ತದೆಯಂಬುದಕ್ಕೆ ಭೈರಾದೇವಿ ಕುರಿತಾದ ಈ ಕಾದಂಬರಿ ಸಾಕ್ಷಿ ಎಂದರೇ ಅತಿಶಯೋಕ್ತಿ ಏನಲ್ಲ.

ಮತಾಂತರದ ವಿರುದ್ಧ ಗುಡುಗಿ, ಪೂರ್ಚುಗೀಸರ ವಿರುದ್ಧ ಬಿಜಾಪುರ,ಕಲ್ಲಿಕೋಟೆ ರಾಜರುಗಳ ಜತೆಗೆ ಸಾಮಾಂತರನ್ನು ಒಗ್ಗೂಡಿಸಿದ್ದ ಆಕೆಗೆ ಈ ರೀತಿ ಬಹುಪಾರಕ್ ಹೇಳುತ್ತಿದ್ದರಂತೆ.

ತಾಳ್ಮೆಯೊಳ್ ತಿರೆಯಂತಿಪ್ಪ, ಜಾಣ್ಮೆಯೊಳ್ ಗುರುವನಿನಂತಿಪ್ಪ, ತ್ಯಾಗದೊಳ್ ಜಿನನಂತಿಪ್ಪ, ಬೀರದೊಳ್ ಭೈರವನಂತಿಪ್ಪ, ಸಾರದೊಳ್ ಸಾಗರದಂತಿಪ್ಪ, ಪ್ರತಾಪದೊಳ್ ಬೆಂಗದಿರನಂತಿಪ್ಪ, ಶಾಂತತೆಯೊಳ್ ತಂಗದಿರನಂತಿಪ್ಪ, ಛಲದೊಳ್ ಸಿಂಗನಂತಿಪ್ಪ, ಪರಾಕ್ರಮದೊಳ್ ಸಿಡಿಲಂತಿಪ್ಪ, ಗಾಂಭೀರ್ಯದೊಳ್ ಕಡಲಂ ಪಡಿಗೊಳ್ವ, ಸರ್ವಾವನೀವಲ್ಲಭರಿಂ ಸಂಪ್ರಾಪ್ತ ಗೌರವರಾಗಿರ್ಪ,
ವಿದ್ವದ್ರಾಜಕವೀಂದ್ರನಟೇಂದ್ರ ಕಲೇಂದ್ರಗುಣೇಂದ್ರಾದಿಗಳಿಂ ಸಂಸ್ತುತರಾಗಿರ್ಪ, ಯಶೋಭೂಷಿತರಾಗಿರ್ಪ, ಸರ್ವಧರ್ಮಾಶ್ರಯ ಪ್ರದಾಯಿನಿ, ಮುಕ್ತಾರತ್ನಗಜಾಶ್ವಸ್ವರ್ಣ ಸಂಭೂಷಿಣಿ, ಶ್ರೀವರ್ಧಮಾನಸಮಚಾರ್ಯನುಸಂಧಾನಶಾಲಿನಿ, ಪ್ರಜಾಸಂಪತ್ಪರಿತ ಪಾಲಿನಿ, ಶ್ರೀಮತ್ಸಾಳುಕೃಷ್ಣದೇವಧರಣೀಕಾಂತಸ್ನುಷೆ, ಭಲ್ಲಾತಕೀಪುರವರಾಧೀಶ್ವರಿ, ಸಂಗೀತಪುರವರಾಧೀಶ್ವರಿ ಶ್ರೀಮನ್ಮಹಾಮಂಡಳೇಶ್ವರಿ ಚೆನ್ನ ಭೈರಾದೇವಿ ಬಹುಪರಾಕ್ ಬಹುಪರಾಕ್!!

ಭಾರತದ ಮಾತೃಶಕ್ತಿಗೆ ಸ್ಫೂರ್ತಿಯಾಗಿ ಚೆನ್ನಭೈರಾದೇವಿಯ ಹೆಸರೂ ಅನಂತವಾಗಿರಲಿ..ಸ್ವಾತಂತ್ರ್ಯ ಹೋರಾಟವೆಂಬುದನ್ನ ಕೆಲವರ ಹೆಸರಿಗಷ್ಟೇ ಮೀಸಲಿಟ್ಟವರಿಗೆ ಆ ಹೋರಾಟದ ಹಿಂದೆ ಇಂತಹದ್ದೊಂದು ದೈತ್ಯ ಮಾತೃಶಕ್ತಿಯ ತ್ಯಾಗವಿತ್ತೆಂಬುದು ಇನ್ನಾದರೂ ಅರಿವಿಗೆ ಬರಲಿ.. ಸ್ವಾತಂತ್ರ್ಯ ಅಮೃತಮಹೋತ್ಸವ ಮುಗಿವುದರೊಳಗೆ ಇಂತಹ ಮಾತೃಶಕ್ತಿಯ ಬೆಳಗು ಯುವಜನತೆಯ ಹೊಸ ಹಾದಿಗೆ ನಾಂದಿಯಾಗಲಿ..

  • email
  • facebook
  • twitter
  • google+
  • WhatsApp

Related Posts

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
BOOK REVIEW

Conflict resolution : The RSS way

April 21, 2022
BOOK REVIEW

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

February 28, 2022
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

April 28, 2021
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
BOOK REVIEW

ಹುತಾತ್ಮ ಕುಯಿಲಿ, ಹೇಗಾದಾಳು ಎಲ್ಟಿಟಿಇ?

April 9, 2021
ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..
Articles

ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..

March 25, 2021
Next Post
ಪದ್ಮಶ್ರೀಗೆ ಮೆರಗು ತಂದ ಸಾಧಕರು

ಪದ್ಮಶ್ರೀಗೆ ಮೆರಗು ತಂದ ಸಾಧಕರು

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Day 69: Bharat Parikrama Yatra reaches remote Village Dharmatthadka of Kasaragod

Day 69: Bharat Parikrama Yatra reaches remote Village Dharmatthadka of Kasaragod

October 16, 2012

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
ಸಾವಯವ ಎನ್ನುವುದು ಜೀವನ ಧರ್ಮ -ವಿ. ನಾಗರಾಜ್

ಸಾವಯವ ಎನ್ನುವುದು ಜೀವನ ಧರ್ಮ -ವಿ. ನಾಗರಾಜ್

April 13, 2012
‘The report that RSS supports Dadri incident is blatantly false and baseless’: Dr Manmohan Vaidya

‘The report that RSS supports Dadri incident is blatantly false and baseless’: Dr Manmohan Vaidya

October 18, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In