• Samvada
  • Videos
  • Categories
  • Events
  • About Us
  • Contact Us
Thursday, March 30, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಲೇಖನ : ನಿಜ ಶ್ರಮಿಕ ರೈಲಿನ ಜಾಡಿನಲ್ಲಿ..

Vishwa Samvada Kendra by Vishwa Samvada Kendra
May 29, 2020
in Articles
250
0
ಲೇಖನ : ನಿಜ ಶ್ರಮಿಕ ರೈಲಿನ ಜಾಡಿನಲ್ಲಿ..
491
SHARES
1.4k
VIEWS
Share on FacebookShare on Twitter

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ನಿಜ ಶ್ರಮಿಕ ರೈಲಿನ ಜಾಡಿನಲ್ಲಿ…..

ಇಂದಿನ ಪ್ರಜಾವಾಣಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜರ ಲೇಖನ

ಅನೇಕಲ್ ಪೋಲಿಸ್ ಠಾಣೆಯ ವ್ಯವಸ್ಥೆಯಲ್ಲಿ ಬಿ ಎಮ್ ಟಿ ಸಿ ಬಸ್ಸು ಹತ್ತಿ , ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಹೊರಡಲು ಕಾಯುತ್ತಿದ್ದ ಜಾರ್ಖಂಡ್ ನ ರಂಜಿತ್ ಸಾಹು ಎಂಬ 22ವರ್ಷದ ಯುವಕನ ಹೆಗಲುಚೀಲದ ಜೊತೆಗೆ ಕೈಯಲ್ಲಿ ಇದ್ದದ್ದು ಕ್ರಿಕೆಟ್ ಬ್ಯಾಟು . ಸಿಮೆಂಟು – ಕಾಂಕ್ರೀಟ್ ಧೂಳಿನ ನಡುವೆಯೂ ರಂಜಿತನಲ್ಲೊಬ್ಬ ಧೋನಿ ಜೀವಿಸುತ್ತಿದ್ದನೇನೋ ?

ಅತ್ತಿಬೆಲೆಯ ಸಮೀಪ ಅರ್ಧಕ್ಕೆ ನಿಂತ ಬೃಹತ್ ವಸತಿ ಸಮುಚ್ಛಯದ ಹಿಂಭಾಗದಲ್ಲಿ 40ಕ್ಕೂ ಹೆಚ್ಚು ಶೆಡ್ ಗಳು . ಚಂಡಮಾರುತದ ಸುದ್ದಿ ಕೇಳಿ ಪಶ್ಚಿಮ ಬಂಗಾಳದ ಮಾಂಡ್ಲಾ ತಲುಪುವ ಆಸೆ ಕೈ ಬಿಟ್ಟಿರುವ ಪೂರ್ಣಶೇಷ ಮಂಡಲ್ ಅಲ್ಲೇ ಇದ್ದಬದ್ದ ವ್ಯವಸ್ಥೆಯಲ್ಲೇ ತನ್ನ ಜೊತೆಗಿರುವ ಹೆಂಡತಿಗೊಂದು ಶೌಚಾಲಯ ಕಟ್ಟಿದ್ದಾನೆ .

ಮಂಗಳೂರಿನಿಂದ ಉತ್ತರಪ್ರದೇಶಕ್ಕೆ ಹೊರಡುವ ರೈಲು ಎರಡು ತಾಸು ಕಾಯಬೇಕಾಯಿತು . ಏಕೆಂದರೆ ಬೆಳ್ತಂಗಡಿ ಸಮೀಪದ ಉಜಿರೆಯಿಂದ ವಿನೋದ್ ಮಸ್ಕರೇನ್ಸ್ ಎಂಬ ಕೃಷಿಕ ತಮ್ಮ ಜೀಪಿನಲ್ಲಿ ಸುರೇಂದ್ರ ಯಾದವ್ , ಅಖಿಲೇಶ್ ಸಹಾನಿ , ಸುನೀಲ್ ಸಹಾನಿ , ಶಂಭು ಸಹಾನಿರವರನ್ನು ಕರೆತರುತ್ತಿದ್ದರು .

ಮಂಗಳೂರಿನಿಂದ ಜಾರ್ಖಂಡ್ ಗೆ ಹೊರಟಿದ್ದ ರೈಲು ಹತ್ತಿಸಲು ದೂರದ ಶಿರಸಿ , ಮುಂಡಗೋಡಿನಿಂದ ಮೂವರು ಕಾರ್ಮಿಕರನ್ನು ಪೋಲಿಸರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದರು .

ತಮಿಳುನಾಡಿನ ವೆಲ್ಲೂರಿನ ಹತ್ತಿರ ಉತ್ತರಪ್ರದೇಶಕ್ಕೆ ನೆಡೆದು ಹೋಗುತ್ತಿದ್ದ 7 ವಲಸೆ ಕಾರ್ಮಿಕರನ್ನು ರಸ್ತೆಯಲ್ಲಿ ಕಂಡ ಗಿರಿಧರ್ ಗೋಪಾಲ್ ಬೆಂಗಳೂರಿಗೆ ಕರೆತಂದು ಪ್ರಯಾಗರಾಜ್ ರೈಲು ಹತ್ತಿಸಿ ನಿಟ್ಟುಸಿರು ಬಿಟ್ಟರು .

ಹರಸಹಾಸದಿಂದ ಉತ್ತರಪ್ರದೇಶದ ತನ್ನ ಹಳ್ಳಿ ತಲುಪಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದ ತ್ರಿಭುವನ್ ಕಳುಹಿಸಿದ್ದ ಮನೆಯಂಗಳದ ಫೋಟೊವನ್ನು ಗೆಳೆಯರೊಬ್ಬರು ಫೇಸ್ ಬುಕ್ ನಲ್ಲಿ ಹಂಚಿದ್ದರು . ‘ ದಟ್ಟ ಹಸಿರಿನ ಪರಿಸರ ಬಿಟ್ಟು ಕಾಂಕ್ರೀಟ್ ಕಾಡಿಗೆ ದುಡಿಯಲು ಬರುವವರ ಸಂಕಟ ಏನಿದ್ದೀತು ? ‘ – ಇದು ಅಲ್ಲಿಯೆ ಕೆಳಗಿದ್ದ ಕಾಮೆಂಟು .

ಇವು ವಲಸೆ ಕಾರ್ಮಿಕರ ಪ್ರಪಂಚದ ಕಳೆದ ವಾರದ ಕೆಲ ಚಿತ್ರಗಳು .

* * * * *

ಅಜ್ಞಾತವಾಗಿ ಕಳೆದು ಹೋಗಿದ್ದ ವಲಸೆ ಕಾರ್ಮಿಕರ ಜಗತ್ತೊಂದು ಕರೋನಾ ಪೀಡೆಯಿಂದಾಗಿ ಬಯಲಿಗೆ ಬಂದಿದೆ . ಸಣ್ಣ ಸಂಬಳ ಕೊಟ್ಟು ಮತ್ಯಾವ ಸೌಲಭ್ಯವೂ ಕೊಡದೆ ಅವರನ್ನು ದುಡಿಸಿಕೊಳ್ಳುತ್ತಿದ್ದ ನಾಗರಿಕ ಸಮಾಜ ಕಟಕಟೆಯಲ್ಲಿ ನಿಂತಿದೆ . ನೈತಿಕ ಪ್ರಜ್ಞೆ , ಅಪರಾಧಿಭಾವ ಹಲವರನ್ನು ಕಾಡಿದೆ . ಸರ್ಕಾರಗಳ ನಿರಂತರ ನಿರ್ಲಕ್ಷ್ಯ , ದೊಡ್ಡ, ದೊಡ್ಡ ಸಿದ್ಧಾಂತಗಳ ಟೊಳ್ಳೂ ಬೀದಿಗೆ ಬಂದಿದೆ .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 50 ಸಾವಿರ ಜನಸಂಖ್ಯೆಯ ಪುಟ್ಟ ಪಟ್ಟಣ . ಬೃಹತ್‌ ನಗರ , ಮಹಾನಗರ , ಬೆಳೆಯುತ್ತಿರುವ ನಗರ ಇಂತಹ ಯಾವ ವಿಶೇಷಣಗಳೂ ಈ ತಣ್ಣನೆಯ ಪಟ್ಟಣಕ್ಕೆ ತಾಗುವುದಿಲ್ಲ . ಆಂತಹ ಪುತ್ತೂರಿನಿಂದ ಮೇ 12 ರಂದು ಬಿಹಾರದ ಮೋತಿಹಾರಿಗೆ 1428 ವಲಸೆ ಕಾರ್ಮಿಕರಿದ್ದ ಶ್ರಮಿಕ್ ವಿಶೇಷ ರೈಲು ಹೊರಟಿತು . ಇನ್ನೂ ಸಾವಿರದಷ್ಟು ಬಿಹಾರ , ಬಂಗಾಳ ಮೂಲದ ಕಾರ್ಮಿಕರು ರೈಲಿನಲ್ಲಿ ಜಾಗ ಸಿಗದೆ ಉಳಿದರು . ಅವರನ್ನು ಮಂಗಳೂರು , ಹಾಸನಕ್ಕೆ ಕರೆದೊಯ್ದು ರೈಲು ಹತ್ತಿಸಲಾಯಿತು . ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು . 8 – 10 ಸಾವಿರದಿಂದ ಇಪ್ಪತ್ತು ಸಾವಿರ ಮೀರಿದ ತಿಂಗಳ ದುಡಿಮೆಯವರೂ ಇದ್ದರು .
ದೊಡ್ಡ ನಗರಗಳು ಮಾತ್ರ ವಲಸೆ ಕಾರ್ಮಿಕರನ್ನು ಸಲಹುತ್ತವೆ ಎಂದು ನಂಬಿದ್ದವರಿಗೆ ಪುತ್ತೂರಿಂದ ರೈಲು ಹೊರಟಾಗಲೇ ಸಮಸ್ಯೆ ಯಾವ ಮೂಲೆಯವರಗೆ ಹರಡಿ ನಿಂತಿದೆ ಎಂದು ಗೊತ್ತಾದದ್ದು .

‌ಕರ್ನಾಟಕದಲ್ಲಿ ಬಿಹಾರ , ಉತ್ತರಪ್ರದೇಶದಿಂದ ವಲಸೆ ಬಂದ ಕಾರ್ಮಿಕರ ಸಂಖ್ಯೆ ಲಕ್ಷ ದಾಟಿದೆ . ಪಶ್ಚಿಮ ಬಂಗಾಳ , ಒರಿಸ್ಸಾ , ಜಾರ್ಖಂಡ್ ರಾಜ್ಯದವರದ್ದು 50 ಸಾವಿರ ಮೀರಿದೆ . ಲಾಕ್ ಡೌನ್ ಸ್ವಲ್ಪ ಸಡಿಲಗೊಳ್ಳುತ್ತಿದ್ದಂತೆಯೇ ವಲಸೆ ಕಾರ್ಮಿಕರು ವಾಪಸ್ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಕೊಳ್ಳಲು ಸರ್ಕಾರ ಸೇವಾಸಿಂಧು app ಬಿಡುಗಡೆ ಮಾಡಿತು . ಸೇವಾಸಿಂಧುವಿನಲ್ಲಿ ದಾಖಲಾದ ಅಂಕೆ – ಸಂಖ್ಯೆಗಳ ಆಧಾರದಲ್ಲೇ ಶ್ರಮಿಕ್ ರೈಲುಗಳು ನಿಯೋಜನೆ ಆಗುತ್ತಿದೆ .

ಬೆಂಗಳೂರಿನಲ್ಲಿ 3.14 ಲಕ್ಷ , ಬೆಂಗಳೂರಿನ ಸುತ್ತಮುತ್ತ 79 ಸಾವಿರ ಹೊರರಾಜ್ಯಗಳ ವಲಸೆ ಕಾರ್ಮಿಕರಿದ್ದಾರೆ .
ಮಂಗಳೂರು 40510 , ಬಳ್ಳಾರಿ14136 , ಬೆಳಗಾವಿ 15693 , ಹುಬ್ಬಳ್ಳಿ 9643, ಮೈಸೂರು12158 , ಉಡುಪಿ 10442 , ಹಾಸನ 8894 ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ಸಲಹುತ್ತಿದೆ .

ಕರ್ನಾಟಕದಲ್ಲಿ ಬಾಗಲಕೋಟೆ , ವಿಜಾಪುರ , ಕಲಬುರ್ಗಿ , ರಾಯಚೂರು , ಯಾದಗಿರಿ ಜಿಲ್ಲೆಗಳಿಂದ ಅತ್ಯಂತ ಹೆಚ್ಚು ಕಾರ್ಮಿಕರು ಮು‌ಂಬೈ , ಗೋವಾ , ಮಂಗಳೂರು , ಬೆಂಗಳೂರಿನತ್ತ ವಲಸೆ ಹೋಗುತ್ತಾರೆ . ಆದರೆ ಇದೇ ಜಿಲ್ಲೆಗಳಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಹೊರ ರಾಜ್ಯದ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ .

ಶ್ರಮಿಕ ರೈಲುಗಳು ಎಲ್ಲಿಂದ ಎಲ್ಲಿಗೆ ಹೊರಟವು ಎಂಬುದು ಈ ಅಂಕೆ- ಸಂಖ್ಯೆಗಳನ್ನು ಧೃಢ ಪಡಿಸುತ್ತವೆ . ಮಂಗಳೂರು 18 , ಹುಬ್ಬಳ್ಳಿ 9 , ಮೈಸೂರು 5 , ಬಳ್ಳಾರಿ 4 ,ಹಾಸನ 2, ಪುತ್ತೂರಿಂದ 1 ಶ್ರಮಿಕ್ ರೈಲು ಹೊರಟಿದೆ .ಬೆಂಗಳೂರಿನಿಂದಲೇ 220 ರೈಲುಗಳು ಹೊರಟಿವೆ .

ಕರ್ನಾಟಕದಿಂದ ಬಿಹಾರಕ್ಕೆ 62 , ಉತ್ತಪ್ರದೇಶಕ್ಕೆ 52 , ಜಾರ್ಖಂಡಕ್ಕೆ 25 ರೈಲುಗಳು ಹೊರಟಿವೆ . ಹಾಗೆ ನೋಡಿದರೆ ಊರು ಕಾಣುವುದು ದುಸ್ತರವಾಗಿರುವುದು ಪಶ್ಚಿಮ ಬಂಗಾಳ , ಒರಿಸ್ಸಾ ರಾಜ್ಯಗಳ ಕಾರ್ಮಿಕರಿಗೆ . ಪಶ್ಚಿಮ ಬಂಗಾಳದವರು 73 ಸಾವಿರ , ಒರಿಸ್ಸಾದವರು 40 ಸಾವಿರಕ್ಕೂ ಮಿಕ್ಕು ಕಾರ್ಮಿಕರಿದ್ದಾರೆ . ಬಂಗಾಳಕ್ಕೆ 7 , ಒರಿಸ್ಸಾಕ್ಕೆ 9 ರೈಲುಗಳಿಗಷ್ಟೆ ಚಾಲನೆ ಸಿಕ್ಕಿದೆ . ರೈಲುಗಳ ನಿಯೋಜನೆಯಲ್ಲಿ ಮೊದಲೇ ಹಿಂದಿದ್ದ ಈ ಎರಡು ರಾಜ್ಯಗಳಲ್ಲಿ ಚಂಡಮಾರುತದ ಹಾವಳಿಯಿಂದ ಶ್ರಮಿಕ್ ರೈಲಿನ ವ್ಯವಸ್ಥೆ ಕುಸಿದಿದೆ .

ಇಲ್ಲಿಂದ ಹೊದವರನ್ನು ಅಲ್ಲಿನ ರಾಜ್ಯ ಸರ್ಕಾರಗಳು ಸುಧಾರಿಸ ಬೇಕಿರುವುದರಿಂದ ಅವಸರದಲ್ಲಿ ಹೆಚ್ಚು ರೈಲುಗಳನ್ನು ಓಡಿಸಲೂ ಬರುವುದಿಲ್ಲ . ಹೀಗಾಗಿ ಶ್ರಮಿಕ್ ರೈಲುಗಳ ಸಂಚಾರ ಜೂನ್ ಕೊನೆವರೆಗೂ ಮುಂದುವರೆದೀತು . ಆನಂತರ ಮುಂದೇನು ಎಂಬುದು ದೊಡ್ಡ ಪ್ರಶ್ನೆಯಾಗಿ ಎಲ್ಲರ ಮುಂದಿದೆ .

ಹಾಗೆ ನೋಡಿದರೆ ಕಾರ್ಮಿಕ ಇಲಾಖೆ ಜಾಗತಿಕರಣದ ಹೊಡೆತದಲ್ಲಿ ಅಪ್ರಸ್ತುತವಾಗಿ ಹೋಗಿತ್ತು . ಈಗಲೂ ಕೇಂದ್ರದ್ದೋ , ರಾಜ್ಯದ್ದೋ ಕಾರ್ಮಿಕ ಸಚಿವರು ಯಾರು ಎಂದು ಥಟ್ಟನೆ ಕಣ್ಣ ಮುಂದೆ ಬಾರದಷ್ಟು ಇಲಾಖೆ ಮಸುಕಾಗಿದೆ . ವಲಸೆ ಕಾರ್ಮಿಕರನ್ನು ಈಗಲೂ ನಿಭಾಯಿಸುತ್ತಿರುವುದು ಪೋಲಿಸ್ ಇಲಾಖೆ ! ಲಕ್ಷಾಂತರ ಕಾರ್ಮಿಕರನ್ನು ನಿಭಾಯಿಸುವಷ್ಟು ಇಲಾಖೆಯನ್ನು ಎಲ್ಲ ಮುಖಗಳಲ್ಲಿ ಬಲಪಡಿಸಬೇಕು . ಗೃಹ , ರಕ್ಷಣೆ , ವಿದೇಶಾಂಗ , ವಿತ್ತ ಖಾತೆಗಳಿಗಿದ್ದಷ್ಟೇ ಮಹತ್ವ – ಹಣಕಾಸಿನ ನೆರವು ಕಾರ್ಮಿಕ ಖಾತೆಗೆ ಸಿಗಬೇಕು . ಡಾ ಬಾಬಾಸಾಹೇಬ್ ಅಂಬೇಡ್ಕರ್ 1937 ರಲ್ಲಿ ಕಾರ್ಮಿಕ ಸಚಿವರಾದಾಗ ‘ ಕಾರ್ಮಿಕ ಕಲ್ಯಾಣ ‘ ಖಾತೆ ಎಂದು ಬದಲಾಯಿಸಿದ್ದರು . ಅದು ಈಗಲೂ ನಮಗೆ ಮಾದರಿಯಾಗಬೇಕು .

ಉದ್ಯೋಗಾವಕಾಶಗಳಿಗಾಗಿ ವಲಸೆ ಅನಿವಾರ್ಯ , ನಿಜ . ಈಗ ವಲಸೆ ವಿದ್ಯಾಭ್ಯಾಸಕ್ಕೂ ಅಂಟಿಕೊಂಡಿದೆ . ಕರ್ನಾಟಕದತ್ತ ಬಿಹಾರ , ಬಂಗಾಳದವರು ಉದ್ಯೋಗ ಅರಸಿ ಬಂದರೆ ಈಶಾನ್ಯ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೇ ಬಂದು ಇಲ್ಲಿಯೇ ನೆಲೆ ಹುಡುಕಿಕೊಳ್ಳುತ್ತಿದ್ದಾರೆ . ಅನಿವಾರ್ಯವೆನಿಸಿದ್ದು ಮಿತಿ ಮೀರಿದರೆ ಅಪಾಯ ತೆರೆದುಕೊಳ್ಳುತ್ತದೆ . ಅನಿವಾರ್ಯತೆಯ ಮಿತಿಯನ್ನು ಗುರುತಿಸಲು , ಅರ್ಥಮಾಡಿಕೊಳ್ಳಲು ಈ ಸಂಕಟ ಅವಕಾಶವೂ ಆಗಬೇಕು .

ವಲಸಿಗರು ಎರಡು ರಾಜ್ಯಗಳ ಪ್ರಜೆಗಳು . ಹೀಗಾಗಿಯೇ ಅವರು ಎಲ್ಲಿಯೂ ಸಲ್ಲದೆ ಕಳೆದು ಹೋಗುತ್ತಿದ್ದಾರೆ . ದುಡಿಯುತ್ತಿರುವ ರಾಜ್ಯದ ಆಡಳಿತಕ್ಕೆ ಇವರು ಬೇಕಾಗಿಲ್ಲ , ಏಕೆಂದರೆ ಇವರು ಇಲ್ಲಿ ಮತದಾರರಲ್ಲ , ಹೊರಟು ಬಂದ ರಾಜ್ಯದ ಆಡಳಿತಕ್ಕೆ ಇವರು ಕಣ್ಣೆದುರಿಲ್ಲ .

ತಂತ್ರಜ್ಞಾನ , ಕೌಶಲಗಳು ಮೈಮುರಿದು , ಬೆವರು ಸುರಿಸಿ ದುಡಿಯುವವರ ಬದುಕನ್ನು ಸಹ್ಯವಾಗಿಸಬೇಕು . ಆ ದಿಕ್ಕಿನಲ್ಲಿ ಸಂಶೋಧನೆಗಳು ದೊಡ್ಡ ಹೆಜ್ಜೆ ಇಡಬೇಕು .

ನಮ್ಮೆದುರು ಕೇಂದ್ರ , ರಾಜ್ಯ ಎಂಬ ಎರಡೇ ಸರ್ಕಾರಗಳಿವೆ . ಪಂಚಾಯತ್ ರಾಜ್ಯದ ಮೂರನೇ ಸರಕಾರ ಪ್ರಬಲಗೊಳ್ಳಬೇಕು . 8 – 10 ಗ್ರಾಮ ಸಮುಚ್ಛಯಗಳು ಕೃಷಿ , ಗ್ರಾಮೀಣ ಉದ್ಯೋಗ , ಆರ್ಥಿಕತೆ , ಸಾಮಾಜಿಕ ನ್ಯಾಯದ ವಿಷಯದಲ್ಲಿ ನಿಜಾರ್ಥದಲ್ಲಿ ಸ್ವಾವಲಂಬನೆ ಸಾಧಿಸಬೇಕು .

ಈಗ ದಿಲ್ಲಿ , ಬೆಂಗಳೂರು , ಕೊಲ್ಕತ್ತಾ , ಪಾಟ್ನಾಗಳು ಇಂಜಿನ್ ಗಳಾಗಿವೆ . ಕಾರ್ಮಿಕರು , ಗ್ರಾಮೀಣರು ಬೋಗಿಗಳಾಗಿ ಅವರು ಎಳೆದೊಯ್ದಲ್ಲಿ ಹೋಗುವಂತಾಗಿದೆ . ಇದು ಬದಲಾಗಬೇಕು . ಕಾರ್ಮಿಕರು , ಗ್ರಾಮೀಣರು ಇಂಜಿನ್ ಆಗಬೇಕು . ಅದೇ ನಿಜವಾದ ಲೋಕಲ್ಲು . ಅದೇ ನಿಜವಾದ
ಶ್ರಮಿಕ್ ರೈಲು !

ವಾದಿರಾಜ್ , ಬೆಂಗಳೂರು ,
ಸಾಮಾಜಿಕ ಕಾರ್ಯಕರ್ತ .

  • email
  • facebook
  • twitter
  • google+
  • WhatsApp
Tags: migrant labourers plight

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ವೆಬಸೈಟ್ ಲೋಕಾರ್ಪಣೆ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ –  ಜೂನ್ ೫

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ವೆಬಸೈಟ್ ಲೋಕಾರ್ಪಣೆ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ - ಜೂನ್ ೫

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

MAFSU awards ‘Doctor of Science’ to RSS Sarasanghachalak Mohan Bhagwat at Nagpur

MAFSU awards ‘Doctor of Science’ to RSS Sarasanghachalak Mohan Bhagwat at Nagpur

March 9, 2017
Dr Ramachandra Bhat Kotemane will be new VC of S-VYASA University

Dr Ramachandra Bhat Kotemane will be new VC of S-VYASA University

January 19, 2013
‘The report that RSS supports Dadri incident is blatantly false and baseless’: Dr Manmohan Vaidya

ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ: ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ಹೋಲಿಕೆಯೆ?

September 24, 2018
Trail of Glory-Aero India2011: Inspiring air show at Bangalore

Trail of Glory-Aero India2011: Inspiring air show at Bangalore

February 10, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In