• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ವ್ಯಂಗ್ಯ ಹೀಗಿರಲಿ : ಕಾಲು ತುಳಿಸಿಕೊಂಡವನಿಗೆ ಅದು ಗೊತ್ತಾಗಿರುತ್ತದೆ, ಆದರೆ ಉಳುಕಿರುವುದಿಲ್ಲ!

Vishwa Samvada Kendra by Vishwa Samvada Kendra
March 2, 2021
in Articles
250
0
ವ್ಯಂಗ್ಯ ಹೀಗಿರಲಿ : ಕಾಲು ತುಳಿಸಿಕೊಂಡವನಿಗೆ ಅದು ಗೊತ್ತಾಗಿರುತ್ತದೆ, ಆದರೆ ಉಳುಕಿರುವುದಿಲ್ಲ!
491
SHARES
1.4k
VIEWS
Share on FacebookShare on Twitter
Cartoon by Sajith Kumar in Deccan Herald. 

ಇಂದು ಸಾಂಸಾರಿಕ ಹಾಗೂ ಸಾಮಾಜಿಕ ಜೀವನದಲ್ಲಿ ವ್ಯಂಗ್ಯ ವೆನ್ನುವುದು ಕಾಣೆಯಾಗುತ್ತಿದೆ. ಇದು ಸಂವೇದನಾಶೀಲತೆ ನಷ್ಟವಾಗುತ್ತಿರುವುದರ ದ್ಯೋತಕ. ವ್ಯಂಗ್ಯವಿದ್ದಲ್ಲಿ ವಿರೋಧಿಯೂ ಮೆಚ್ಚುಗೆ ವ್ಯಕ್ತಪಡಿಸಬೇಕು ಆಗ ಮಾತ್ರ ಆತ ಪ್ರಬುದ್ಧ, ಇಲ್ಲದಿದ್ದರೆ ಇನ್ನೂ ಅರ್ಥಮಾಡಿಕೊಳ್ಳುವುದು ಬಹಳ ಇದೆ ಎಂದರ್ಥ.

ಸಾವರ್ಕರ್ ಜೀವನ ಓದಿದವರಿಗೆ ಅವರ ಮಾತುಗಳು ತೀಕ್ಷ್ಣವಾದ ವ್ಯಂಗ್ಯ ವನ್ನು ಹೊಂದಿರುತ್ತಿದ್ದವು ಎಂದು ತಿಳಿಯುತ್ತದೆ. ದಿವಂಗತ ಜಗನ್ನಾಥರಾವ್ ಜೋಶಿ, ಅಟಲ್ ಜಿ, ಪ್ರಮೋದ್ ಮಹಾಜನ್ ರಂತಹ ನಾಯಕರು ಸಹ ವ್ಯಂಗ್ಯದ ಭಾಷೆಯನ್ನು ಸಮರ್ಥವಾಗಿ ಬಳಸಿದವರೆ. ನರೇಂದ್ರಮೋದಿಯವರಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಬಳಸಿಕೊಳ್ಳುವ ಕಲೆ ಇದೆ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಆದರೆ ನೆಹರೂವಿನಿಂದ ರಾಹುಲ್‌ ‌ವರೆಗಿನ ಆ ಕುಟುಂಬಕ್ಕೆ ವ್ಯಂಗ್ಯವನ್ನು ಅರ್ಥಮಾಡಿಕೊಳ್ಳುವ, ಅರಗಿಸಿಕೊಳ್ಳುವ ಸ್ವಭಾವ ಇಲ್ಲ. ಈಗಿನ ಯುವನಾಯಕನಂತೂ ತಾನೂ ಪರಿಣಾಮಕಾರಿಯಾಗಿ ಹಾಸ್ಯಮಾಡಲು ಹೋಗಿ ಸ್ವತಃ ಹಾಸ್ಯದ ವಸ್ತುವಾಗುತ್ತಿದ್ದಾನೆ. ಗಬ್ಬರ್ ಸಿಂಗ್ ಟ್ಯಾಕ್ಸ್, ಬಬ್ಬರ್ ಶೇರ್, ಆಲೂ ಸೋನಾ ಮಿಷನ್ ಇತ್ಯಾದಿ ಹೇಳಿಕೆ ನೋಡಿದರೆ ಗೊತ್ತಾದೀತು. ಒಳಗೆ ಮೊಳಕೆಯ ಬೀಜವಿಲ್ಲದಿದ್ದರೆ ಗಿಡ ಬಂದೀತೆ?

ಇನ್ನು ಕರ್ನಾಟಕ ರಾಜಕಾರಣಿಗಳ ಮಾತೋ ಪಕ್ಷಾತೀತವಾಗಿ ಸಂವೇದನಾಶೀಲತೆಯನ್ನು ಕಳೆದು ಕೊಂಡಿದೆ. ಸಿದ್ಧರಾಮಯ್ಯನವರು ಉಡಾಫೆಯ ನುಡಿಗಳನ್ನೇ ವ್ಯಂಗ್ಯದ ಟೀಕೆ ಎಂದು ತಿಳಿದಂತಿದೆ. ಅವರು ಮಾತನಾಡುವಾಗ ಸುತ್ತಲೂ ಸೇರಿದವರ ಕೇಕೆ, ಚಪ್ಪಾಳೆ ಅವರ ಮಾತಿನ ಹದ ತಪ್ಪಿಸುತ್ತಿದೆ. ದೇಗೌ, ಕುಮಾರ ಸ್ವಾಮಿಗಳು ಹಾಸ್ಯ ಮತ್ತು ವ್ಯಂಗ್ಯದ ಮನೆ ತಲುಪಲು ಕನಿಷ್ಟ ಹತ್ತು ಜನ್ಮ ದೂರವಿದ್ದಾರೆ. ಯಡಿಯೂರಪ್ಪನವರ ಮುಖದಿಂದ ನಗೆಹನಿ ಎಂದಾದರೂ ಸಿಡಿದೇತೆ?

ಆದರೆ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞರಿಂದ ದಿನಕರ ದೇಸಾಯಿಯವರೆಗೆ ನಮ್ಮ ಚುಟುಕು ಪ್ರವೀಣರು ಇದನ್ನು ಪರಿಣಾಮಕಾರಿಯಾಗಿ ಬಳಸಿದವರು. ನನ್ನ ಬಾಲ್ಯದಲ್ಲಿ ಪಾವೆಂರ ಲಾಂಗೂಲಾಚಾರ್ಯ, ಟೆಯೆಸ್ಸಾರ್ ಅವರ ಛೂಬಾಣ, ಹಲಪತ್ರಿಕೆಗಳ ಪುರವಣಿಗಳಲ್ಲಿ ಅಥವಾ ಸಂಪಾದಕೀಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಡಂಬನೆಗಳು ಬಹು ಮೊನಚಿನದಾಗಿರುತ್ತಿದ್ದವು. ಆದರೆ ಈಗ ಅವು ಕಾಣೆಯಾಗಿವೆ.

ಈಗಿನ ಹಲ ವ್ಯಂಗ್ಯಚಿತ್ರಕಾರರೂ ಸಹ ರೇಖೆಗಳ ಮೇಲೆ ಹಿಡಿತವಿದೆಯೇ ಹೊರತು ವ್ಯಂಗ್ಯವೆಂಬ ರುಚಿಯನ್ನು ಅರಿತವರಲ್ಲ ಎನಿಸುವಷ್ಟು ನೇರ ವಾಕ್ಯಗಳನ್ನುಳ್ಳ ಚಿತ್ರರಚಿಸುತ್ತಿದ್ದಾರೆ. ಹಿಂದೆ ದಿನಪತ್ರಿಕೆಯ ಮುಖಪುಟದಲ್ಲಿ ದೊಡ್ಡವ್ಯಂಗ್ಯಚಿತ್ರ ಖಾಯಂ ಆಗಿರುತ್ತಿತ್ತು, ಈಗ ಬರೇ ಪೋಟೋಗಳು ತುಂಬಿ ರಸಹೀನವಾಗಿದೆ.

ಕನ್ನಡವೂ ಸೇರಿದಂತೆ ಭಾರತೀಯ ಚಲನಚಿತ್ರಗಳಲ್ಲೂ ಕೆಲವರ್ಗ, ಕಸುಬುಗಳನ್ನು ಹಾಸ್ಯ ಮಾಡಿದ್ದಿದೆ ಆದರೆ ಅದು ಈಗಿನಂತೆ ತೀರಾ ಒರಟಾಗಿ, ಕ್ರೂರವಾಗಿ ಪಾತ್ರವನ್ನು ನಡೆಸಿಕೊಂಡು ಅದೇ ಹಾಸ್ಯ ಎನ್ನುವಂತಹದ್ದಲ್ಲ. ಚಲನ ಚಿತ್ರವೊಂದರಲ್ಲಿ ವಿಮಾಏಜೆಂಟ್ ಮಾತನಾಡಲು ಶುರು ಮಾಡುತ್ತಿದ್ದಂತೆ ಆತನ ಧ್ವನಿಗೆ ಬದಲಾಗಿ ಗರಗಸದ ಧ್ವನಿಯನ್ನು ಹಾಕಿದ ದೃಶ್ಯ ವಾಸ್ತವದ ಹಾಸ್ಯ ಚಿತ್ರಣವೇ ಆದರೂ ಅತಿಯಲ್ಲ, ಬಹುಪಾಲು ಪಾಲಿಸಿದಾರರ ಅನುಭವ.

ನಾನೂ ಕೆಲವೊಮ್ಮೆ ಅಷ್ಟೋ ಇಷ್ಟೋ ವ್ಯಂಗ್ಯದ ಗಂಧವುಳ್ಳ ಪೋಸ್ಟ್, ಕಾಮೆಂಟುಗಳನ್ನು ಹಾಕಿದಾಗ ಅದರ ಪದಶಃ ಅರ್ಥದ ಮೇಲೆ ಪ್ರತಿಕ್ರಿಯಿಸುವರನ್ನು ಕಂಡಾಗ ಅಯ್ಯೋ ಎನಿಸುತ್ತದೆ. ಇನ್ನು ಅಂತಹವರು ಮೆಸೆಂಜರ್ ನಲ್ಲಿ ಕಳಿಸುವ ಮೆಸೇಜುಗಳು ದೇವರಿಗೇ ಪ್ರೀತಿ.

ವ್ಯಂಗ್ಯವೆಂದರೆ ಲತ್ತೆ ಕೊಡುವ ಕತ್ತೆ ಎಂದು ಶಿವರಾಮ ಕಾರಂತರು ಬಣ್ಣಿಸಿದ್ದಾರೆ. ಆತ ಒದೆಸಿಕೊಂಡದ್ದು ಹೇಳುವಂತಿಲ್ಲ, ಬಿಡುವಂತಿಲ್ಲ. ಅದು ಮತ್ತೊಬ್ಬರ ನೇರ ಅಣಕಿಸುವುದಲ್ಲ, ಆದರೆ ತಿವಿತ ಅರಿವಿಗೆ ಬರುತ್ತದೆ. ಕಾಲು ತುಳಿಸಿಕೊಂಡವನಿಗೆ ಅದು ಗೊತ್ತಾಗಿರುತ್ತದೆ ಆದರೆ ಉಳುಕಿರುವುದಿಲ್ಲ. ಸರಿಯಾದ ಪ್ರಹಾರವೇ ಆಗಿರುತ್ತದೆ ಆದರೆ ಬೊಬ್ಬಿಡುವಷ್ಟು ಪೆಟ್ಟಾಗಿರುವುದಿಲ್ಲ. ಮೇಲೆ ಶಾಲು ಒಳಗೇನೋ ಹಾಕಿಸಿಕೊಂಡವನಿಗೇ ಗೊತ್ತು.

ಸತಿಪತಿಗಳಲ್ಲಿಯಂತೂ ಒಬ್ಬರ ವ್ಯಂಗ್ಯ ಮತ್ತೊಬ್ಬರಿಗೆ ಅರ್ಥವಾಗದಿದ್ದರೆ ಪ್ರತಿನಿತ್ಯ ಮನೆಯಲ್ಲಿ ತಿಥಿ. ಹುಟ್ಟು ಸ್ವಭಾವ ಬದಲಾಗುವುದು ಕಷ್ಟ. ಮನಸಿನಲ್ಲಿ ತೋಚಿದ್ದನ್ನು ಹೇಳದೇ ಬಾಯ್ಮುಚ್ಚಿಕೊಂಡಿರಲು ಸಾಧ್ಯವೇ ಇಲ್ಲ. ಉಕ್ಕಿ ಬಂದ ವ್ಯಂಗ್ಯದ ಮಾತನ್ನು ಬಾಯ್ಬಿಟ್ಟು ಹೇಳದಿದ್ದರೆ ತಿಂದನ್ನ ಜೀರ್ಣವಾಗದು. ಆದರೆ ಮಾತಿನ ಒಳಚಾಟಿ ಸಂಗಾತಿಗೆ ಅರ್ಥವಾಗದಿದ್ದರೆ ನಿತ್ಯ ಸಂಗ್ರಾಮವೇ. ನನ್ನ ಸಾಧಾರಣ ಮಾತಿಗೆ ಇಷ್ಟು ವಿಪರೀತ ಪ್ರತಿಕ್ರಿಯೆ ಏಕೆ ನಾನೇನು ಅಂತಹ ತಪ್ಪು ಮಾತು ಹೇಳಿದೆ ಎಂದೇ ವ್ಯಂಗ್ಯ ಜೀವಿ ಪೇಚಾಡಬೇಕಾಗುತ್ತದೆ.

ಒಂದುವೇಳೆ ದಂಪತಿಗಳಲ್ಲಿ ಒಬ್ಬರ ವ್ಯಂಗ್ಯ ಮತ್ತೊಬ್ಬರಿಗೆ ಅರ್ಥವಾಗಿ ಪ್ರತ್ಯಸ್ತ್ರಗಳು ಬಂದರೆ ಅಡ್ಡಿಯಿಲ್ಲ, ಹಿತಮಿತವಾಗಿ ಮಾತಿನ ಕದನ ನಡೆಸುತ್ತಾ ಜೀವನವನ್ನು ರಸಮಯವಾಗಿ ಸಾಗಿಸಿಬಿಡಬಹುದು.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಶ್ರೀಕೃ​ಷ್ಣ​ದೇ​ವ​ರಾ​ಯ ನಿಧನವಾದ ದಿನವನ್ನು ಸ್ಪಷ್ಟ​ವಾಗಿ ತಿಳಿ​ಸು​ವ ಶಾಸನ ತುಮಕೂರಿನಲ್ಲಿ ಪತ್ತೆ

ಶ್ರೀಕೃ​ಷ್ಣ​ದೇ​ವ​ರಾ​ಯ ನಿಧನವಾದ ದಿನವನ್ನು ಸ್ಪಷ್ಟ​ವಾಗಿ ತಿಳಿ​ಸು​ವ ಶಾಸನ ತುಮಕೂರಿನಲ್ಲಿ ಪತ್ತೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Day 1164: Bharat Parikrama Yatra enters Jharkhand, to meet RSS National Team on Oct 31

Day 1164: Bharat Parikrama Yatra enters Jharkhand, to meet RSS National Team on Oct 31

October 17, 2015
‘Imbalance in the population growth rate is a cause of concern’: RSS functionary V Nagaraj

‘Imbalance in the population growth rate is a cause of concern’: RSS functionary V Nagaraj

November 6, 2015

ಮತಾಂತರ ತಡೆ: ಕಾನೂನಿಗೆ ಚಿಂತಕರ ಆಗ್ರಹ

March 11, 2011
Swadeshi Jagaran Manch National Conference begins at Nagpur

Swadeshi Jagaran Manch National Conference begins at Nagpur

October 5, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In