• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

‘ಸ್ವರ ಸಮರ್ಪಣ’ ಒಂದು ವಿಶೇಷ, ವಿನೂತನ, ವಿಭಿನ್ನ, ಘೋಷ್ ಪ್ರದರ್ಶನ

Vishwa Samvada Kendra by Vishwa Samvada Kendra
January 2, 2021
in Others
250
0
‘ಸ್ವರ ಸಮರ್ಪಣ’ ಒಂದು ವಿಶೇಷ, ವಿನೂತನ, ವಿಭಿನ್ನ, ಘೋಷ್ ಪ್ರದರ್ಶನ
491
SHARES
1.4k
VIEWS
Share on FacebookShare on Twitter

ಶಿವಮೊಗ್ಗ : ಜಿಲ್ಲೆಯ ಹೊಸಹಳ್ಳಿ ಗ್ರಾಮದಲ್ಲಿ 27/12/2020, ಭಾನುವಾರ ಸಂಜೆ 5.00 ಘಂಟೆಗೆ, ಹೊಸಹಳ್ಳಿ ಹಾಗೂ ಮತ್ತೂರು ಶಾಖೆಗಳ ಘೋಷ್ ವಾರ್ಷಿಕೋತ್ಸವ ‘ಸ್ವರ ಸಮರ್ಪಣ’ ನಡೆಯಿತು. ಅಖಿಲ ಭಾರತೀಯ ಸಹ ಶಾರೀರಿಕ ಪ್ರಮುಖರಾದ ಶ್ರೀ ಜಗದೀಶ್ ಪ್ರಸಾದ್ ರವರ ಸಮ್ಮುಖದಲ್ಲಿ 6 ರೀತಿಯ ಘೋಷ್ ಪ್ರದರ್ಶನ ನಡೆಯಿತು. ಪ್ರಖ್ಯಾತ ವಯೊಲಿನ್ ವಾದಕರಾದ ಶ್ರೀ ಹೊಸಹಳ್ಳಿ ಕೆ. ವೆಂಕಟರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೊದಲನೆಯದು,  ಘೋಷ್ ವಾದನ ಮಾಡುತ್ತಾ ವಜ್ರಾಕೃತಿ, ತ್ರಿಭುಜ, ಸಂಕಲನ ಚಿಹ್ನೆ, ಸ್ವಸ್ತಿಕ್, ವೃತ್ತ ಮೊದಲಾದ ವಿವಿಧ ರೀತಿಯ ವ್ಯೂಹ ರಚನೆ ಮಾಡುವ ಪ್ರದರ್ಶನ, ಎರಡನೇಯದು ವಯೊಲಿನ್, ಮೃದಂಗ, ಆನಕ, ಪಣವ ಮೊದಲಾದ  ವಿವಿಧ ವಾದ್ಯಗಳನ್ನು ಸಂಯೋಜಿಸಿ ಪ್ರದರ್ಶಿಸಿದ ವಾದ್ಯ ಸಮ್ಮೇಳನ, ಮೂರನೇಯದಾಗಿ, ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನಬಹುದಾದ ಗಣ ಸಮತಾ ಜೊತೆ ಘೋಷ್ ವಾದನ ಮತ್ತು ಅದರಲ್ಲಿ ವಿಶೇಷವಾಗಿ ಕ್ಲಿಷ್ಟಕರವಾದ ಕ್ಷಿಪ್ರಚಲ, ಮಂದಚಲ ಮತ್ತು ಪ್ರತಿಚಲದಲ್ಲಿ ಚತುರ್ವ್ಯೂಹ, ತತಿವ್ಯೂಹ ಕ್ರಿಯೆಗಳು, ನಾಲ್ಕನೇಯದು ತಾಳವಾದ್ಯ ಪ್ರದರ್ಶನ, ಐದನೇಯದು ವಿಭಿನ್ನ ರೀತಿಯ ವಿಶೇಷ ಪ್ರಯೋಗವಾದ ಗಣರಾಜ್ಯೋತ್ಸವದ ಮೂರನೆಯ ದಿನ ಸೈನ್ಯದವರು ತೋರಿಸುವ ಬೀಟಿಂಗ್ ದಿ ರಿಟ್ರೀಟ್ ಕಲ್ಪನೆಯ ಪ್ರದರ್ಶನ ಹಾಗೂ ಕೊನೆಯಲ್ಲಿ ಸ್ಥಿರ ವಾದನದ ಪ್ರದರ್ಶನ.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ಹೀಗೆ ಒಟ್ಟು ಸುಮಾರು 60 ನಿಮಿಷಗಳ  ಘೋಷ್ ಪ್ರದರ್ಶನ, ಗ್ರಾಮಾಂತರ ಶಾಖೆಯಿಂದ ನಡೆದದ್ದು ಅಭಿನಂದನಾರ್ಹ, ಅನುಕರಣೀಯ ಪ್ರಯತ್ನ. ಇದಕ್ಕಾಗಿ ಒಟ್ಟು ಸುಮಾರು 40 ಜನ ಘೋಷ್ ವಾದಕರು 30 ದಿನಗಳು ಬೆಳಗ್ಗೆ ಮತ್ತು ರಾತ್ರಿ ನಿರಂತರ ಅಭ್ಯಾಸ ನಡೆಸಿದ್ದರು. ಒಟ್ಟು ಪ್ರದರ್ಶನದಲ್ಲಿ 33 ಸ್ವಯಂಸೇವಕರು ಭಾಗವಹಿಸಿದ್ದರು. ಮಾತೆಯರೂ ಸೇರಿದಂತೆ ಸುಮಾರು 300 ಜನ ಸಾರ್ವಜನಿಕರು ಪ್ರಾರಂಭದಿಂದಲೇ ಇದ್ದು ಕಾರ್ಯಕ್ರಮ ವೀಕ್ಷಿಸಿದ್ದು ಕಾರ್ಯಕರ್ತರ ಉತ್ಸಾಹ ವೃದ್ಧಿಸಿತು. ಸಂಘಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು.

ನಂತರ ಶ್ರೀ ಜಗದೀಶ್ ಪ್ರಸಾದ್ ರವರು ಬೌದ್ಧಿಕ್ ನಡೆಸಿಕೊಟ್ಟರು. ಶ್ರೀ ವೆಂಕಟರಾಮ್ ಅವರು ಸ್ವತಃ ಸಂಗೀತ ವಿದ್ವಾಂಸರಾಗಿರುವುದರಿಂದ ಒಟ್ಟು ಪ್ರದರ್ಶನವನ್ನು ಕೂಲಂಕಷವಾಗಿ ಗಮನಿಸಿ, ಸ್ವಯಂಸೇವಕರ ಪ್ರದರ್ಶನವನ್ನು ಮತ್ತು ಅದೇ ಗ್ರಾಮದವರೂ ಆಗಿರುವುದರಿಂದ ಪ್ರತಿನಿತ್ಯ ತಯಾರಿ ಮಾಡುತ್ತಿದ್ದುದ್ದನ್ನೂ ನೋಡಿದ್ದಿದ್ದರಿಂದ ಸ್ವಯಂಸೇವಕರ ಸತತ ಪ್ರಯತ್ನವನ್ನು ಹಾಗೂ ಶ್ರದ್ಧೆ ಮತ್ತು ಬದ್ಧತೆಗಳನ್ನು ಮುಕ್ತವಾಗಿ ಶ್ಲಾಘಿಸಿದರು.

 ವೇದಿಕೆಯ ಮೇಲೆ ಜಿಲ್ಲಾ ಸಂಘಚಾಲಕರಾದ ಶ್ರೀ ವೆಂಕಟೇಶ ಸಾಗರ್ ಇದ್ದರು. ಕಾರ್ಯಕ್ರಮದಲ್ಲಿ ಪ್ರಾಂತ ಸಹ ಕಾರ್ಯವಾಹರಾದ ಶ್ರೀ ಪಟ್ಟಾಭಿರಾಮ, ಪ್ರಾಂತ ಪ್ರಚಾರಕರಾದ ಶ್ರೀ ಗುರುಪ್ರಸಾದ್, ಮೊದಲಾದ ಸಂಘದ ಹಿರಿಯರು, ಸಚಿವರಾದ ಶ್ರೀ ಕೆಎಸ್ ಈಶ್ವರಪ್ಪನವರು ಹಾಗೂ ಸಂಸದರಾದ ಶ್ರೀ ಬಿವೈ ರಾಘವೇಂದ್ರ ಉಪಸ್ಥಿತರಿದ್ದರು.

ಒಟ್ಟಿನಲ್ಲಿ, ಅಂದು ಒಂದು ವಿಶೇಷ, ವಿನೂತನ, ವಿಭಿನ್ನ, ಕೇವಲ ಘೋಷ್ ಪ್ರದರ್ಶನದ ಶಾಖಾ ವಾರ್ಷಿಕೋತ್ಸವಕ್ಕೆ ಹೊಸಹಳ್ಳಿ ಜನತೆ ಸಾಕ್ಷಿಯಾಯಿತು.

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

How to greet Happy Deepawali or Happy Diwali in various languages?

How to greet Happy Deepawali or Happy Diwali in various languages?

November 14, 2012
Day 1701: Bharat Parikrama Yatra reaches Karur in Tamilnadu covering 22000 KM of Walk, to conclude on July 9 at Kanyakumari

Day 1701: Bharat Parikrama Yatra reaches Karur in Tamilnadu covering 22000 KM of Walk, to conclude on July 9 at Kanyakumari

April 4, 2017
RSS leader Dr Prabhakar Bhat greets Congress Leader Janardhan Poojary at Mangalore

RSS leader Dr Prabhakar Bhat greets Congress Leader Janardhan Poojary at Mangalore

August 25, 2019
New Karyalaya Building for Seva Bharati, Samskrit Bharati, ABVP inaugurated in Chennai

New Karyalaya Building for Seva Bharati, Samskrit Bharati, ABVP inaugurated in Chennai

June 8, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In