• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಹಿಜಾಬ್ ವಿವಾದ – ಕೇರಳದ ತೀರ್ಪಿನ ಪರಿಹಾರ

Vishwa Samvada Kendra by Vishwa Samvada Kendra
February 14, 2022
in Articles, Blog, News Digest
250
0
ಹಿಜಾಬ್ ವಿವಾದ – ಕೇರಳದ ತೀರ್ಪಿನ ಪರಿಹಾರ
492
SHARES
1.4k
VIEWS
Share on FacebookShare on Twitter

ಎರ್ನಾಕುಲಮ್ ನಲ್ಲಿರುವ ಕೇರಳ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ಟಾಕ್ ಅವರ ಪೀಠವು ಮಂಗಳವಾರ, 4ನೇ ಡಿಸೆಂಬರ್ 2018 ರಂದು ಅದೇ ದಿನ ಸಲ್ಲಿಕೆಯಾದ ಸಿವಿಲ್ ರಿಟ್ ದಾವೆಯ ಸಂಬಂಧ ನೀಡಿದ ತೀರ್ಪು ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಪರಿಹಾರ ನೀಡುವ ದಿಕ್ಕಿನಲ್ಲಿದ್ದು ಅದರ ವಿವರಗಳು ಇಲ್ಲಿವೆ.

READ ALSO

ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ

भारतस्य प्रतिष्ठे द्वे संस्कृतं संस्कृतिश्च

ಈ ರಿಟ್ ದಾವೆಯು ಖಾಸಗೀ ಶಿಕ್ಷಣ ಸಂಸ್ಥೆಯಲ್ಲಿ ಮತೀಯ ವಸ್ತ್ರದ ಉಪಯೋಗದ ಕುರಿತಾಗಿದೆ. ಫಿರ್ಯಾದಿದಾರರು ಸಿ.ಎಂ.ಐ ಶಿಕ್ಷಣ ಸಂಸ್ಥೆಯಾದ ಕ್ರೈಸ್ತ್ ನಗರ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದು ಅವರು ತಮ್ಮ ಪಾಲಕರ ಮೂಲಕ ಈ ದಾವೆಯನ್ನು ಸಲ್ಲಿಸಿದ್ದಾರೆ.

ಶಾಲೆಯು ಸಮವಸ್ತ್ರವನ್ನು ಅಳವಡಿಸಿಕೊಂಡಿದ್ದು, ಮಹಮದೀಯ ಮತಕ್ಕೆ ಸೇರಿದ ಬಾಲಕಿಯರು ಪೂರ್ಣ ತೋಳು ಮುಚ್ಚುವ ಮೇಲ್ವಸ್ತ್ರ ಮತ್ತು ತಲೆ-ಕತ್ತು-ಮತ್ತು ಸ್ವಲ್ಪ ಮುಖ ಮುಚ್ಚುವ ವಸ್ತ್ರಗಳನ್ನು ಧರಿಸಲು ಬಯಸಿದ್ದರು. ಆದರೆ, ಶಾಲಾ ಅಧಿಕಾರಿಗಳು ಸಮವಸ್ತ್ರಕ್ಕೆ ಅನುಗುಣವಾಗಿಲ್ಲದ ಕಾರಣ ಆ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕನುಗುಣವಾದ ಸೂಕ್ತ ವಸ್ತ್ರಗಳನ್ನು ಧರಿಸಲು ನಿರ್ದೇಶಿಸಿದ್ದರು. ಆದರೆ, ವಿದ್ಯಾರ್ಥಿನಿಯರು ಈ ನಿರ್ದೇಶನವನ್ನು ಪಾಲಿಸಲು ಒಪ್ಪದೇ ನ್ಯಾಯಾಲಯದ ಮೊರೆ ಹೊಕ್ಕಿದ್ದರು.

ವಸ್ತ್ರಸಂಹಿತೆಯ ವಿಚಾರದಲ್ಲಿ ತಮ್ಮದೇ ಆದ ಕಲ್ಪನೆ, ನಂಬಿಕೆಗಳ ಪ್ರಕಾರ ನಿರ್ಧಾರವನ್ನು ವ್ಯಕ್ತಿಯು ತೆಗೆದುಕೊಳ್ಳಬಹುದಾದರೂ, ಆ ನಿರ್ಧಾರವು ಅದೇ ರೀತಿಯ ಹಕ್ಕುಗಳನ್ನು ಹೊಂದಿರುವ ಖಾಸಗೀ ವ್ಯಕ್ತಿ/ಸಂಸ್ಥೆಯ ವಿರುದ್ಧ ತೆಗೆದುಕೊಳ್ಳುವ ಸಂದರ್ಭದಲ್ಲಿ ನ್ಯಾಯಾಲಯವು ಮೂಲಭೂತ ಹಕ್ಕುಗಳ ತಾಕಲಾಟವನ್ನು ಪರಿಹರಿಸಬೇಕಾಗುತ್ತದೆ.

ಅಮ್ನಾ ಬಿಂಟ್ ಬಶೀರ್ ಮತ್ತು ಸಿ.ಬಿ.ಎಸ್.ಇ ಮಧ್ಯೆ ಇದ್ದ ವ್ಯಾಜ್ಯವನ್ನು ತೀರ್ಮಾನಿಸಿದ ನ್ಯಾಯಾಲಯದ ತೀರ್ಪು ಸಂವಿಧಾನದ ಪರಿಚ್ಛೇದ 25(1) ಪ್ರಕಾರ ಮತೀಯ ನಿಯಮಾವಳಿಗಳ ಪ್ರಕಾರ ಸ್ತ್ರೀಯ ವಸ್ತ್ರಧಾರಣೆಯ ಸ್ವಾತಂತ್ರ್ಯ ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಅದೇ ರೀತಿ, ಸಂಸ್ಥೆಯೊಂದನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ಆಡಳಿತ ನಡೆಸುವ ಹಕ್ಕೂ ಸಹ ಪರಿಚ್ಛೇದ 19ದ ಪ್ರಕಾರ ಮೂಲಭೂತವಾದದ್ದೇ ಎಂಬ ತೀರ್ಪು ಟಿ.ಎಂ.ಎ ಪೈ ಮತ್ತು ಕರ್ನಾಟಕ ಸರ್ಕಾರ, ಪಿ.ಎ.ಇನಾಂದಾರ್ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯೆ ಇದ್ದ ವ್ಯಾಜ್ಯಗಳಲ್ಲಿ ದಾಖಲಾಗಿದೆ. ಈ ಹಕ್ಕುಗಳ ತಾಕಲಾಟವನ್ನು ಪ್ರಸ್ತುತ ತೀರ್ಮಾನ ಬಗೆಹರಿಸಿದೆ.

ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಕಾರ್ಯವಾಗಿದ್ದು, ಖಾಸಗೀ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಕಾರ್ಯದಲ್ಲಿ ತೊಡಗಿವೆ. ವಸ್ತ್ರ ಸಂಹಿತೆಯ ನಿರೂಪಣೆ ಸಾರ್ವಜನಿಕ ಜವಾಬ್ದಾರಿ ಎಂದು ಪರಿಗಣಿಸದಿದ್ದರೆ, ಮೂಲಭೂತ ಹಕ್ಕುಗಳನ್ನು ಸಮಾನಾಂತರ ಮಾರ್ಗವಾಗಿ ಸ್ಥಾಪಿಸಬಹುದಾಗಿದೆ. ಆದರೆ ಈ ಮಾರ್ಗವಾಗಿ ಪರಿಚ್ಛೇದ 25(1) ದ ಹಕ್ಕುಗಳನ್ನು ಸ್ಥಾಪಿಸಿದ ಉದಾಹರಣೆಗಳಿಲ್ಲ.

ಮೂಲಭೂತ ಹಕ್ಕುಗಳು ನಿರಪೇಕ್ಷ ಅಥವಾ ಸಾಪೇಕ್ಷ ಎಂಬ ಗುಣವಿಶೇಷಗಳನ್ನು ಪಡೆದಿವೆ. ನಿರಪೇಕ್ಷ ಹಕ್ಕುಗಳು ಯಾವುದೇ ಸನ್ನಿವೇಶದಲ್ಲಿ ಸ್ಥಾಪಿಸಬಹುದಾಗಿದ್ದರೆ, ಸಾಪೇಕ್ಷ ಹಕ್ಕುಗಳಿಗೆ ಕೆಲವು ಮಿತಿಗಳುಂಟು. ಪರಿಚ್ಛೇದ 25(1)ರ ಮತೀಯ ಹಕ್ಕುಗಳು ಸಾಪೇಕ್ಷಹಕ್ಕುಗಳು.

ಹಕ್ಕುಗಳ ತಾಕಲಾಟವಿದ್ದಾಗ, ಶಾಸಕಾಂಗವು ಪರಿಹರಿಸದಿದ್ದಲ್ಲಿ, ನ್ಯಾಯಾಲಯವು ಅದನ್ನು ಸಮತೋಲನಗೊಳಿಸಿ ತೀರ್ಮಾನಿಸಬೇಕಾಗುತ್ತದೆ. ಪ್ರಮುಖ ಹಿತಾಸಕ್ತಿಯನ್ನು ನ್ಯಾಯಾಲಯ ಎತ್ತಿಹಿಡಿಯಬೇಕಾಗಿದ್ದು ಇತರ ಅಪ್ರಮುಖ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದು ಸೂಕ್ತವಾಗಿರುತ್ತದೆ. ಅಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸಿದರೆ, ಅದು ಪ್ರಮುಖ ಹಿತಾಸಕ್ತಿಗಳನ್ನು ತುಳಿದು ಅರಾಜಕತೆ ಉಂಟಾಗುವುದು. ಈ ವಿವಾದದಲ್ಲಿ ಸಮಷ್ಟಿಯ ಹಿತವು ಪ್ರಮುಖ ಹಿತಾಸಕ್ತಿಯಾಗಿದ್ದು ವ್ಯಕ್ತಿಗತ ಹಿತವು ಅಪ್ರಮುಖವಾಗಿದೆ . ನ್ಯಾಯಾಲಯವು ಒಂದು ಹಕ್ಕನ್ನು ತುಳಿದು ಇನ್ನೊಂದು ಹಕ್ಕನ್ನು ರಕ್ಷಿಸುವುದಿಲ್ಲ. ಬದಲಾಗಿ, ಹಕ್ಕುಗಳನ್ನು ಸಮನ್ವಯಗೊಳಿಸುವ ಆಶಯ ಹೊಂದಿದೆ. ಆದರೂ, ಶಿಕ್ಷಣ ಸಂಸ್ಥೆಯ ಹಕ್ಕುಗಳು ಪ್ರಮುಖ ಹಿತಾಸಕ್ತಿಯಾಗಿದ್ದು ವ್ಯಕ್ತಿಗತ ಹಕ್ಕುಗಳು ಅದಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇದೇ ಸ್ವಾತಂತ್ರ್ಯದ ತಿರುಳಾಗಿದೆ.

ಆಶಾ ರಂಜನ್ ಮತ್ತು ಬಿಹಾರ ರಾಜ್ಯದ ಮಧ್ಯದ ವ್ಯಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಕ್ಕುಗಳ ಸಮತೋಲನಗೊಳಿಸುವ ಪ್ರಕ್ರಿಯೆಯನ್ನು ಒಪ್ಪಿದೆ. ಹಾಗಾಗಿ, ಇಲ್ಲಿಯೂ ಸಹ ವೈಯುಕ್ತಿಕ ಹಕ್ಕುಗಳನ್ನು ತಿರಸ್ಕರಿಸದೇ, ಪ್ರಮುಖ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ, ಶಿಕ್ಷಣ ಸಂಸ್ಥೆಯ ಹಕ್ಕುಗಳನ್ನು ಎತ್ತಿಹಿಡಿದಾಗ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಂಬಂಧಗಳೂ ಸಹ ಉಳಿಸಿದಂತಾಗುತ್ತದೆ.

ಆದ್ದರಿಂದ, ಮತೀಯ ವಸ್ತ್ರದ ಹಕ್ಕುಗಳನ್ನು ವಿದ್ಯಾರ್ಥಿನಿಯರು ಅಪೇಕ್ಷಿಸುವಂತಿಲ್ಲ ಎಂಬುದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ಮತೀಯ ವಸ್ತ್ರಸಂಹಿತೆಗೆ ಸಮವಸ್ತ್ರದ ಬದಲು/ಜೊತೆಗೆ ಅನುಮತಿ ನೀಡಬೇಕೇ ಎಂಬುದು ಸಂಸ್ಥೆಯೇ ನಿರ್ಧರಿಸಬೇಕಾದ ಸಂಗತಿ. ಅದನ್ನು ನ್ಯಾಯಾಲಯವು ಸೂಚಿಸುವಂತೆಯೂ ಇಲ್ಲ. ಆದ್ದರಿಂದ ಈ ರಿಟ್ ಮನವಿಯನ್ನು ವಜಾ ಮಾಡಲಾಗಿದೆ. ಫಿರ್ಯಾದುದಾರರು ಟಿ.ಸಿ ಬಯಸಿದರೆ, ಶಿಕ್ಷಣ ಸಂಸ್ಥೆಯು ಯಾವುದೇ ಟಿಪ್ಪಣಿ ಇಲ್ಲದಂತೆ ನೀಡುವುದು. ಫಿರ್ಯಾದುದಾರರು ಸಮವಸ್ತ್ರವನ್ನು ಧರಿಸಿ ಶಿಕ್ಷಣವನ್ನು ಅದೇ ಸಂಸ್ಥೆಯಲ್ಲೇ ಮುಂದುವರೆಸಲು ಬಯಸಿದರೆ, ಅದಕ್ಕೆ ಅವರಿಗೆ ಅವಕಾಶವಿದ್ದೇ ಇದೆ.

ಸಂಗ್ರಹಾನುವಾದ – ಶ್ರೀಧರನ್

  • email
  • facebook
  • twitter
  • google+
  • WhatsApp

Related Posts

Blog

ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ

May 16, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post

Union ministry of IT to ban 54 Chinese apps stating security threat

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

53 madrassa students rescued from joining the Terror group and Talibaninstructors,

53 madrassa students rescued from joining the Terror group and Talibaninstructors,

December 14, 2011
ಕವಿಗಳಾದ ‘ಚಕ್ರಧಾರಿ’ ಡಾ. ಪಿ. ನಾರಾಯಣ ಭಟ್ ಇನ್ನಿಲ್ಲ

ಕವಿಗಳಾದ ‘ಚಕ್ರಧಾರಿ’ ಡಾ. ಪಿ. ನಾರಾಯಣ ಭಟ್ ಇನ್ನಿಲ್ಲ

October 25, 2021
Day-85: Matapady villagers welcomes Bharat Parikrama Yatra

Day-85: Matapady villagers welcomes Bharat Parikrama Yatra

November 1, 2012

VHP veteran Ashok Singhal's Statement on Ram Setu issue

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In