• Samvada
  • Videos
  • Categories
  • Events
  • About Us
  • Contact Us
Wednesday, June 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others ABPS

2 ದಿನಗಳ ಎಬಿಪಿಎಸ್ ನಲ್ಲಿ ಹಿಂದಿನ ಮೂರು ವರ್ಷದ ಸಂಘಕಾರ್ಯದ ಪ್ರಗತಿ, ಮುಂದಿನ ಮೂರು ವರ್ಷದ ಸಂಘಕಾರ್ಯದ ವಿಸ್ತಾರದ ಬಗ್ಗೆ ಚರ್ಚೆ, ಯೋಜನೆ.

Vishwa Samvada Kendra by Vishwa Samvada Kendra
March 17, 2021
in ABPS, News in Brief
250
0
2 ದಿನಗಳ ಎಬಿಪಿಎಸ್ ನಲ್ಲಿ  ಹಿಂದಿನ ಮೂರು ವರ್ಷದ ಸಂಘಕಾರ್ಯದ ಪ್ರಗತಿ, ಮುಂದಿನ ಮೂರು ವರ್ಷದ ಸಂಘಕಾರ್ಯದ ವಿಸ್ತಾರದ ಬಗ್ಗೆ ಚರ್ಚೆ, ಯೋಜನೆ.
491
SHARES
1.4k
VIEWS
Share on FacebookShare on Twitter

17 ಮಾರ್ಚ್ 2021, ಬೆಂಗಳೂರು: ನಗರದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದ ಶಾಲೆಯ ಆವರಣದಲ್ಲಿ ಮಾರ್ಚ್ 19 ರಿಂದ ಮಾರ್ಚ್ 20ರ ವರೆಗೆ ನಡೆಯುವ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪತ್ರಿಕಾ ಗೋಷ್ಠಿಯಲ್ಲಿ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಅರುಣ್ ಕುಮಾರ್ ಮಾತನಾಡಿದರು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಒಳಗೊಂಡಿರುವ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಉಪಸ್ಥಿತರಿದ್ದರು.

ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಅರುಣ್ ಕುಮಾರ್, ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ.ತಿಪ್ಪೇಸ್ವಾಮಿ

ಕಳೆದ ಬಾರಿಯ ಎಬಿಪಿಎಸ್ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. ಕಳೆದ ನವೆಂಬರ್ ನಲ್ಲಿ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ (ಎಬಿಕೆಎಂ) ಕೂಡಾ ಕೋವಿಡ್ ಕಾರಣದಿಂದಾಗಿಯೇ 11 ಸ್ಥಳಗಳಲ್ಲಿ ನಡೆಯಿತು. ಕಳೆದ ವರ್ಷ ಕೆಲವು ಕಾಲ ಶಾಖೆಗಳು ಕೂಡಾ ನಡೆಯಲಿಲ್ಲ. ಸಾಮಾನ್ಯವಾಗಿ ಎಬಿಪಿಎಸ್ ನಲ್ಲಿ 1,500 ಪ್ರತಿನಿಧಿಗಳು ಪ್ರತಿ ವರ್ಷ ಭಾಗವಹಿಸುತ್ತಾರೆ. ಆದರೆ ಈ ವರ್ಷ 450 ಜನರು ಮಾತ್ರ ಇರುತ್ತಾರೆ. ಪ್ರತಿಬಾರಿಯಂತೆ ಮೂರು ದಿನಗಳ ಬದಲಾಗಿ ಈ ಬಾರಿಯ ಅಧಿವೇಶನ ಎರಡು ದಿನಗಳ ಕಾಲ ಮಾತ್ರ ನಡೆಯುತ್ತದೆ. ಮಾರ್ಚ್ 19 ರ ಬೆಳಗ್ಗೆ 8.30 ಕ್ಕೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಉದ್ಘಾಟನೆಯಾಗುತ್ತದೆ. 9 ಗಂಟೆಗೆ ಪತ್ರಿಕಾಗೋಷ್ಠಿ ಇರುತ್ತದೆ. ಅದರಲ್ಲಿ ಸಂಘದ ವಿವಿಧ ಕಾರ್ಯ ಚಟುವಟಿಕೆಗಳ ವರದಿ ಕೂಡಾ ಇರಲಿದೆ. ಈ ವರ್ಷ ಸಂಘ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆಯೂ 19 ರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

READ ALSO

Inclusion of Bhagawatgeeta in school curriculum as Moral science – Education minister

ಸಮವಸ್ತ್ರವನ್ನು ಎತ್ತಿ ಹಿಡಿದ‌ ಹೈಕೋರ್ಟ್

ಸಾಮಾನ್ಯವಾಗಿ ಮೂರು ವರ್ಷಕ್ಕೊಮ್ಮೆ ಸರಕಾರ್ಯವಾಹರ ಚುನಾವಣೆ ನಡೆಯುತ್ತದೆ ಹಾಗೂ ಅದು ನಾಗಪುರದಲ್ಲಿ ನಡೆಯುತ್ತದೆ. ಈ ಬಾರಿ ಕೋವಿಡ್ ಕಾರಣದಿಂದಾಗಿ ನಾಗಪುರದಲ್ಲಿ ನಡೆಯಬೇಕಿದ್ದ ಎಬಿಪಿಎಸ್ ಅನ್ನು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಾರ್ಚ್ 20 ರಂದು ಬೆಳಗ್ಗೆ ಸರಕಾರ್ಯವಾಹರ ಚುನಾವಣೆ ನಡೆಯಲಿದೆ. ಅದೇ ದಿನ 12.30 ಕ್ಕೆ ಪತ್ರಿಕಾಗೋಷ್ಠಿ ಇರಲಿದೆ. ಇದರಲ್ಲಿ ಕಳೆದ ಒಂದು ವರ್ಷದ ವರದಿ ಹಾಗೂ ನಿರ್ಣಯಗಳ ಬಗ್ಗೆ ಸರಕಾರ್ಯವಾಹರು ಮಾಹಿತಿ ನೀಡಲಿದ್ದಾರೆ. ಕಳೆದ ಮೂರು ವರ್ಷಗಳ ಯೋಜನೆಗಳ ಬಗ್ಗೆ ಪರಿಶೀಲನೆ ಕೂಡಾ ನಡೆಯಲಿದೆ. ಕಳೆದ ಬಾರಿ ಜಲಸಂರಕ್ಷಣೆ, ವೃಕ್ಷಾರೋಪಣ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಗುರಿ ಇತ್ತು. ಈ ಬಾರಿ ಆ ದೃಷ್ಟಿಯಿಂದ ಎಷ್ಟು ಪ್ರಗತಿ ಆಗಿದೆ ಎಂಬ ಬಗ್ಗೆ ಕೂಡಾ ಪರಿಶೀಲನೆ ನಡೆಯಲಿದೆ. ಮುಂದಿನ ಮೂರು ವರ್ಷಗಳ ಯೋಜನೆ ಕೂಡಾ ಈ ಎರಡು ದಿನಗಳ ಸಭೆಯಲ್ಲಿ ನಡೆಯಲಿದೆ ಎಂದು ಅರುಣ್ ಕುಮಾರ್ ಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಕಳೆದ ಒಂದು ವರ್ಷದಲ್ಲಿ ಶಾಖೆ ಹಲವು ತಿಂಗಳ ಕಾಲ ನಡೆಯಲಿಲ್ಲವಾದರೂ ಸಮಾಜದ ಜೊತೆ ಸೇವಾಕಾರ್ಯ ಉತ್ತಮವಾಗಿ ನಡೆದಿದೆ. ಹೊಸಬರನ್ನು ಜೋಡಿಸುವ ಬಗ್ಗೆ, ಸಮಾಜದಲ್ಲಿ ಪರಿವರ್ತನೆ ತರುವ ಬಗ್ಗೆ ಚರ್ಚೆ ನಡೆಯಲಿದೆ. ಇಲ್ಲಿಗೆ ಬರಲು ಸಾಧ್ಯವಾಗದೇ ಇರುವವರಿಗೆ, 44 ಪ್ರಾಂತ ಕೇಂದ್ರಗಳಲ್ಲಿ ಆನ್ ಲೈನ್ ಬೈಠಕ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಆನ್ ಲೈನ್ ನಲ್ಲಿ ಸಿಗಲಿದೆ.ಸಂಘಕಾರ್ಯದ ವಿಸ್ತಾರದ ಬಗ್ಗೆ ಚರ್ಚೆ, ಯೋಜನೆ ನಡೆಯಲಿದೆ. ಪ್ರತಿ ಕುಟುಂಬವನ್ನು ತಲುಪುವ ಬಗ್ಗೆ ಯೋಜನೆ ನಡೆಯಲಿದೆ. ಸಮಾಜಕಾರ್ಯದಲ್ಲಿ ನಮ್ಮಂತೆ ಯೋಚಿಸುವ ಇತರ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುವ ಬಗ್ಗೆಯೂ ಯೋಜನೆ ಇದೆ. ನಮ್ಮ ಕೆಲಸ ಕಡಿಮೆಯಿರುವ ಕಡೆಗಳಲ್ಲಿ ಹೆಚ್ಚಿನ ಗಮನ ಕೊಟ್ಟು ಎಲ್ಲ ಕಡೆಯೂ ಸಂಘಕಾರ್ಯ ನಡೆಯುವಂತೆ ಮಾಡುವುದು ನಮ್ಮ ಗುರಿ.

ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖರಾದ ಶ್ರೀ ನರೇಂದ್ರ ಠಾಕುರ್, ಶ್ರೀ ಸುನಿಲ್ ಅಂಬೇಕರ್, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖರಾದ ಶ್ರೀ ಈ ಎಸ್ ಪ್ರದೀಪ್ ಉಪಸ್ಥಿತರಿದ್ದರು

  • email
  • facebook
  • twitter
  • google+
  • WhatsApp
Tags: #ABPS#ABPS2021RSS ABPS

Related Posts

News Digest

Inclusion of Bhagawatgeeta in school curriculum as Moral science – Education minister

March 19, 2022
News Digest

ಸಮವಸ್ತ್ರವನ್ನು ಎತ್ತಿ ಹಿಡಿದ‌ ಹೈಕೋರ್ಟ್

March 15, 2022
ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022
ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

March 12, 2022
Next Post
2 ದಿನಗಳ ಎಬಿಪಿಎಸ್ ನಲ್ಲಿ  ಹಿಂದಿನ ಮೂರು ವರ್ಷದ ಸಂಘಕಾರ್ಯದ ಪ್ರಗತಿ, ಮುಂದಿನ ಮೂರು ವರ್ಷದ ಸಂಘಕಾರ್ಯದ ವಿಸ್ತಾರದ ಬಗ್ಗೆ ಚರ್ಚೆ, ಯೋಜನೆ.

2 day ABPS to review Sanghakarya of last 3 years and chalk out plans for next 3 years

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

ನೇರನೋಟ: ಹಾಗಿದ್ದರೆ ಅಖಿಲೇಶ್ ಸಿಂಗ್ ‘ಸಾವಿನ ವ್ಯಾಪಾರಿ’ ಅಲ್ಲವೆ?

August 25, 2019
Mata Amrutanandamayi Devi inaugurates Seva Bharati’s 3-day “Rashtriya Seva Sangam” at New Delhi

Mata Amrutanandamayi Devi inaugurates Seva Bharati’s 3-day “Rashtriya Seva Sangam” at New Delhi

April 5, 2015

NEWS IN BRIEF – MARCH 31, 2012

March 31, 2012
ABVP organised Seminar on “Women’s Safety and Security’ at Bangalore on Sept 13, 14

ABVP organised Seminar on “Women’s Safety and Security’ at Bangalore on Sept 13, 14

September 10, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In