ಕೆಲ ದಿನಗಳ ಹಿಂದೆ ಪುಲ್ವಾಮಾದಲ್ಲಿ ಜೈಶ್ ಏ ಮೊಹಮ್ಮದ್ ಸಂಘಟನೆಯಿಂದ ನಡೆಸಲಾಗಿದ್ದ ಭಯೋತ್ಪಾನ ಕೃತ್ಯದಿಂದಾಗಿ ಇಡಿಯ ದೇಶದಲ್ಲಿ ಕೋಪ ಹಾಗೂ ಅಸಮಾಧಾನ ಮನೆಮಾಡಿತ್ತು. ಇಂದು ಪಾಕಿಸ್ತಾನದಲ್ಲಿ ನೆಲೆಸಿದ್ದ ಜೈಶ್ ಎ ಮೊಹಮ್ಮದ್ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ನಡೆಸಿರುವ ವೈಮಾನಿಕ ದಾಳಿಯಲ್ಲಿ ಆತಂಕವಾದಿಗಳ ಶಿಬಿರಗಳು ನುಚ್ಚುನೂರಾಗಿವೆ.
ಕೋಟಿ ಕೋಟಿ ಭಾರತೀಯರ ಭಾವನೆಗಳನ್ನು ಕಾರ್ಯಗತಿಗೆ ತರುವ ಕೆಲಸ ಇದಾಗಿದೆ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ವಾಯುಪಡೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತದೆ.
ಪಾಕಿಸ್ತಾನದ ಸೇನೆಗಾಗಲಿ, ಅಲ್ಲಿಯ ನಾಗರಿಕರಿಗಾಗಲಿ ಹಾನಿಯಾಗದಂತೆ ಎಚ್ಚರವಹಿಸಿ ನಡೆಸಿದ ಈ ದಾಳಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.
–
ಸುರೇಶ ಭಯ್ಯಾಜಿ ಜೋಶಿ,
ಸರಕಾರ್ಯವಾಹ,
ರಾಷ್ಟ್ರೀಯ ಸ್ವಯಂಸೇವಕ ಸಂಘ
Next Post
ಸಂಪಾದಕೀಯ: ಭಾರತದ ಸುರಕ್ಷತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ನಡೆದ ವೈಮಾನಿಕ ದಾಳಿ
Tue Feb 26 , 2019
ಪಾಕಿಸ್ತಾನವು ಭಾರತದೊಡನೆ ನಡೆಸಿದ ಯುದ್ಧಗಳೆಲ್ಲದರಲ್ಲೂ ಸೋತಿದ್ದರೂ, ಭಾರತವು ತನ್ನ ಭೂಮಿಯನ್ನು ಕಳೆದುಕೊಂಡಿರುವುದು ಒಂದು ವಿಪರ್ಯಾಸ. ಇತರ ದೇಶಗಳನ್ನು ಅತಿಕ್ರಮಿಸದ, ಇತರರ ತಂಟೆಗೆ ಹೋಗದ ಭಾರತದ ಸ್ವಭಾವವನ್ನು ಪಾಕ್ ಮತ್ತು ಚೀನಾ ದೇಶಗಳು ದುರುಪಯೋಗಪಡಿಸಿಕೊಂಡಿವೆ. ಮತ್ತೂ ಮುಂದುವರೆದ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಾ ಭಾರತವನ್ನು ಕಟ್ಟಿಹಾಕುವ ಯತ್ನ ನಡೆಸಿದೆ. ಭಾರತವನ್ನು ನೇರ ಯುದ್ಧದಲ್ಲಿ ಎದುರಿಸಲಾಗದ ವಾಸ್ತವತೆ ಮತ್ತು ಭಾರತವು ಗಡಿದಾಟಲಾರದೆಂಬ ವಿಶ್ವಾಸದಿಂದ ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ಅಘೋಷಿತ ನೀತಿಯನ್ನಾಗಿಸಿಕೊಂಡಿರುವುದು ಬಹಿರಂಗ ಸತ್ಯ. ಉರಿ […]

You May Like
-
9 years ago
UDUPI: Advani says ‘Enough is Enough’ to PM