• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಮಹಿಳಾ ಸುರಕ್ಷತೆಯ ಸವಾಲುಗಳು ವಿಶ್ವದ ಸಮಸ್ಯೆ- ತುಮಕೂರು ABVP ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ| ಎ. ಎಚ್. ರಾಜಾಸಾಬ್.

Vishwa Samvada Kendra by Vishwa Samvada Kendra
October 13, 2014
in Others
247
0
ಮಹಿಳಾ ಸುರಕ್ಷತೆಯ ಸವಾಲುಗಳು ವಿಶ್ವದ ಸಮಸ್ಯೆ-  ತುಮಕೂರು ABVP ವಿಚಾರ ಸಂಕಿರಣದಲ್ಲಿ  ಕುಲಪತಿ ಪ್ರೊ| ಎ. ಎಚ್. ರಾಜಾಸಾಬ್.
491
SHARES
1.4k
VIEWS
Share on FacebookShare on Twitter

ತುಮಕೂರು October 13: ಮಹಿಳಾ ಸುರಕ್ಷತೆಯ ಸವಾಲುಗಳು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ ವಿಶ್ವದ ಸಮಸ್ಯೆ. ಪಿತೃ ಪ್ರಧಾನ ಸಮಾಜ ಪ್ರಾರಂಭವಾದಗಿನಿಂದ ಈ ಸಮಸ್ಯೆ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಾರಂಭದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. ಆದರೆ ಪಾಶ್ಚ್ಯಾತ್ಯ ಸಂಸ್ಕೃತಿ ಪ್ರಭಾವದ ಪರಿಣಾಮದಿಂದ ನಮ್ಮ ಮೌಲ್ಯ ಹಾಳಾಯಿತು. ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಾವಿಪದ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ| ಎ. ಎಚ್ ರಾಜಾಸಾಬ್ ಅವರು ಹೇಳಿದರು.

1

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಅವರು ಅಭಾವಿಪದಿಂದ ದಿನಾಂಕ 11 ಅಕ್ಟೋಬರ್ 2014 ರಂದು ಸಿದ್ದಗಂಗಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ’ಮಹಿಳಾ ಸುರಕ್ಷತೆಯ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.

’ಇತ್ತೀಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾದಂತೆ ಕಾಣುತ್ತಿದೆ. ಮಹಿಳೆಯರು ಜಾಗೃತರಾಗಿರುವುದರಿಂದ  ಇಂದು ಪ್ರಕರಣಗಳು ದಾಖಲಾಗುವುದು ಮತ್ತು ಸುದ್ಧಿಯಾಗುವುದು ಸಾಧ್ಯವಾಗಿದೆ. ಆದರೆ ಮಾಧ್ಯಮಗಳು ಒಂದೇ ವಿಷಯವನ್ನು ದಿನಪೂರ್ತಿ ಅಗತ್ಯಕ್ಕಿಂತ ಹೆಚ್ಚು ವೈಭವಿಕರಿಸಿ ಪ್ರಚಾರ ಮಾಡುವುದರಿಂದ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಮೊದಲೇ ಕುಗ್ಗಿರುವ ಮಹಿಳೆ ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಾರೆ. ದೆಹಲಿಯ ನಿರ್ಭಯ ಪ್ರಕರಣದಲ್ಲಿ ಒಬ್ಬ ಅಪರಾಧಿ ಮೇಲೆ ಅಪ್ರಾಪ್ತ ಅನ್ನುವ ಕಾರಣಕ್ಕೆ ಕಠಿಣ ಶಿಕ್ಷೆಯಾಗಿಲ್ಲ. ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾಗುವ ಅಪ್ರಾಪ್ತರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದರು. ತಮ್ಮ ಪ್ರವಾಸದ ಸಂದರ್ಭದಲ್ಲಿ ಗಮನಿಸಿದ ಆಫ್ರಿಕಾದಲ್ಲಿರುವ ಮಹಿಳೆಯರಿಗೆ ಸಂಬಂಧಿಸಿದಂತೆ ಕ್ರೂರ ಆಚರಣೆಯನ್ನು ಸಭೆಯ ಮುಂದೆ ತೆರೆದಿಟ್ಟರು. ಜಪಾನ್ ಮತ್ತು ಚೀನಾದಲ್ಲಿ ಮಹಿಳೆಯರ ಸೌಂದರ‍್ಯ ಚೆನ್ನಾಗಿರಬೇಕೆಂದು ಚಿಕ್ಕಂದಿನಲ್ಲಿ ಕಾಲುಗಳನ್ನು ಬಿಗಿಯಾಗಿ ಕಟ್ಟಿರುತ್ತಾರೆ. ಉಗಾಂಡದಲ್ಲಿ ಸೌಂದರ್ಯ ವರ್ಧನೆಯ ಹೆಸರಿನಲ್ಲಿ ಕೆಟ್ಟ ಆಚರಣೆಗಳು ಜಾರಿಯಲ್ಲಿವೆ ಎಂದರು. ಇಡಿ ವಿಶ್ವದಲ್ಲಿ ಯಾವುದೇ ಒಂದು ಸತ್ಯ ಎಲ್ಲಾ ಸಂದರ್ಭ ಮತ್ತು ಎಲ್ಲಾ ಸ್ಥಳಗಳಲ್ಲಿ ಅನ್ವಯಿಸುವುದಿಲ್ಲ. ಆದರೆ ಸ್ತ್ರೀ ದೌರ್ಜನ್ಯ ಎಲ್ಲಾ ಕಡೆಗಳಲ್ಲು ಸಮಾನವಾಗಿದೆ ಎಂಬ ಒಬ್ಬ ಕವಿಯ ವಾಣಿಯನ್ನು ನೆನಪಿಸಿಕೊಂಡರು. ಇಂತಹ ಸಂದರ್ಭದಲ್ಲಿ ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಾವಿಪದ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾವಿಪ ಸಂಚಾಲಿತ ’ಮಹಿಳಾ ಸುರಕ್ಷಾ ಕಾರ್ಯಪಡೆ’ (ಒSಏP)ಯ ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಲತಾ ಭೈರಪ್ಪ ವಹಿಸಿದ್ದರು. ಅಭಾವಿಪ ರಾಜ್ಯ ಸಹಕಾರ್ಯದರ್ಶಿ ಕು. ಶ್ರೀದೇವಿ ಸೂಡಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ನಗರ ಕಾರ್ಯದರ್ಶಿ ಕು. ಕಾವ್ಯ ಸ್ವಾಗತಿಸಿ ನಗರ ಅಧ್ಯಕ್ಷರಾದ ವೇಣುಗೋಪಾಲ್ ರೆಡ್ಡಿ ವಂದಿಸಿದರು. ಶ್ರೀ ಸಿದ್ದಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಮಲ್ಲೇಶಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯ ಸ್ನಾತಕ್ಕೋತರ ಕೇಂದ್ರದ ಉಪನ್ಯಾಸಕ ಶ್ರೀ ರಮೇಶ್ ಸಾಲಿಯನ್, ಉದ್ಯಮಿ ಎನ್. ಎಸ್. ನಾಗೇಂದ್ರ ಪ್ರಸಾದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಚಾರ ಗೋಷ್ಠಿಯಲ್ಲಿ ಮಾಜಿ ಸಂಸದೆ ಮತ್ತು ಹೆಸರಾಂತ ಪತ್ರಕರ್ತರಾದ ಶ್ರೀಮತಿ ತೇಜಶ್ವಿನಿ ರಮೇಶ್ ಮಾತನಾಡಿ  ’ಮಹಿಳಾ ಸುರಕ್ಷತೆ ಮತ್ತು ಮಾಧ್ಯಮ’, ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಂಶೋಧನಾ ಸಲಹೆಗಾರರಾದ ಶ್ರೀಮತಿ ಸುಮಿತ್ರಾ ಆಚಾರ್ಯರವರು ಮಹಿಳಾ ಸುರಕ್ಷತೆ ಮತ್ತು ಕಾನೂನು ಕುರಿತು ವಿಚಾರ ಮಂಡಿಸಿದರು. ತುಮಕೂರಿನ ವಕೀಲರು ಹಾಗೂ ಅಭಾವಿಪ ಸಂಚಾಲಿತ ’ಮಹಿಳಾ ಸುರಕ್ಷಾ ಕಾರ್ಯಪಡೆ’ (ಒSಏP)ಯ ತುಮಕೂರು ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ನಿವೇದಿತಾ ಅಧ್ಯಕ್ಷತೆ ವಹಿಸಿದ್ದರು.

4

ಸಂವಾದ  ಮತ್ತು ಸಮಾರೋಪ ಅವಧಿಯಲ್ಲಿ ಅಭಾವಿಪ ನಗರ ಉಪಾಧ್ಯಕ್ಷರು ಹಾಗೂ ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನ ವಸ್ತ್ರ ವಿನ್ಯಾಸ (ಂಆಈಖಿ) ಡಿಪ್ಲೋಮಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಂಜುಳಾ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಅಭಾವಿಪ ಸಂಚಾಲಿತ ಮಹಿಳಾ ಸುರಕ್ಷಾ ಕಾರ್ಯಪಡೆಯ ತುಮಕೂರು ಜಿಲ್ಲಾ ಘಟಕವನ್ನು ಘೋಷಿಸಲಾಯಿತು. ಅಭಾವಿಪದ ಪ್ರಾಂತ ಉಪಾಧ್ಯಕ್ಷರು ಹಾಗೂ ಬೆಂಗಳೂರು ಸರಕಾರಿ ಕಲಾ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ವನಜಾ ಶ್ರೀರಾಮ್‌ರವರು ಸಮರೋಪ ಭಾಷಣ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅಭಾವಿಪದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್.ಕೆ. ಮುದೂರು, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಕು. ಪವಿತ್ರ, ಜಿಲ್ಲಾ ಸಂಚಾಲಕ್ ರವಿಕುಮಾರ್, ರಾಜ್ಯ ಸಹಕಾರ್ಯದರ್ಶಿ ಅಮರೇಶ್, ನಗರ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಸಹ ಪ್ರಮುಖ್ ಶ್ರೀನಿವಾಸ, ಜಿಲ್ಲಾ ಸಹ ಸಂಚಾಲಕ್ ತೇಜಮೂರ್ತಿ, ವಿದ್ಯಾರ್ಥಿನಿ ಮುಖಂಡರಾದ ಕು. ಧನಲಕ್ಷ್ಮೀ, ಕು. ನಳೀನಾ, ಕು. ಮೀನಾಕ್ಷಿ, ಕು. ಚೈತ್ರಾ, ಕು. ಮೇಕಲಾ, ಕು. ಪ್ರಿಯಾಂಕ, ಕು. ರಾಜೇಶ್ವರಿ, ಕು. ಅಮೂಲ್ಯ ಮುಂತಾದವರು ಉಪಸ್ಥಿತರಿದ್ದರು.

6

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು RSS ವಿರೋಧಿಸುತ್ತದೆ: ಚನ್ನಗಿರಿ ITC ಸಮಾರೋಪದಲ್ಲಿ ಚಂದ್ರಶೇಖರ ಜಹಗೀರದಾರ

ಹಿಂಸೆಯನ್ನು ಪ್ರಚೋದಿಸುವ ಮಾನಸಿಕತೆಯನ್ನು RSS ವಿರೋಧಿಸುತ್ತದೆ: ಚನ್ನಗಿರಿ ITC ಸಮಾರೋಪದಲ್ಲಿ ಚಂದ್ರಶೇಖರ ಜಹಗೀರದಾರ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS 3rd Year Sangha Shiksh Varg Concludes at Nagpur; Nirmalanandanath Swamiji, Bhagwat addressed

Sri Sri SNirmalanandaNATH Swamiji offerering tributes to Guruji Golwalkar Samadhi at Nagpur June-6-2013

June 11, 2013
ಸಂಘಂ ಶರಣಂ ಗಚ್ಛಾಮಿ – ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

ಸಂಘಂ ಶರಣಂ ಗಚ್ಛಾಮಿ – ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

February 2, 2021
Rohith Chakratirtha, Santosh Thammaiah to be felicitated by VSK, Karnataka for their service to journalism

Rohith Chakratirtha, Santosh Thammaiah to be felicitated by VSK, Karnataka for their service to journalism

June 14, 2019
RSS’s Ram Madhav welcomes SC verdict

RSS’s Ram Madhav welcomes SC verdict

September 12, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In