• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಪ್ರೊ. ಕೆ ಎಸ್ ನಾರಾಯಣಾಚಾರ್ಯ ಹಾಗೂ ಡಾ. ರೋಹಿಣಾಕ್ಷ ಶಿರ್ಲಾಲು ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪುರಸ್ಕಾರ

Vishwa Samvada Kendra by Vishwa Samvada Kendra
November 9, 2019
in News Digest
250
0
ಎಲ್ಲೆಲ್ಲೂ ಎಂಜಲು ! ಎಲ್ಲೆಲ್ಲೂ ಉರುಳಾಟ : ಡಾ|| ಕೆ. ಎಸ್. ನಾರಾಯಣಾಚಾರ‍್ಯ

ಡಾ|| ಕೆ. ಎಸ್. ನಾರಾಯಣಾಚಾರ‍್ಯ

491
SHARES
1.4k
VIEWS
Share on FacebookShare on Twitter

೮ ನವೆಂಬರ್ ೨೦೧೯, ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇಂದು ನಗರದ ರಾಷ್ಟ್ರೊತ್ಥಾನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ತಾವು ಕೊಡಬಯಸುವ ಎರಡು ಪುರಸ್ಕಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿತು.

“ಭಾರತದ ಭಾಷಾ ಸಮೃದ್ಧಿ, ಸಾಹಿತ್ಯ ಸಂಪತ್ತು ಅತ್ಯಂತ ವಿಶಿಷ್ಟವಾದುದು. ಭಾರತದ ನೆಲದಲ್ಲಿ ಬೆಳೆದ ಸಂಸ್ಕೃತಿಯಂತೂ ಬಹು ವೈವಿಧ್ಯಮಯವಾಗಿ,ವರ್ಣರಂಜಿತವಾಗಿದೆ. ನುಡಿಯ ಆಂತರ್ಯವನ್ನು ಸಾಹಿತ್ಯದ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ನಿರಂತರ ಪ್ರಯತ್ನಶೀಲವಾಗಿರುವ ಭಾರತೀಯ ಶಬ್ದ ಸತ್ತ್ವ, ಹೊಸ ಹೊಸ ಆಯಾಮಗಳನ್ನು ಶೋಧಿಸಿದೆ. ಇದರ ಫಲವಾಗಿಯೆ ಮಾತು ಮಂತ್ರವಾಗುವುದಿದ್ದರೆ ಅದು ಭಾರತದಲ್ಲಿ ಎನ್ನುವಷ್ಟರ ಮಟ್ಟಿಗೆ ಮಾಗಿದೆ. ಈ ಶೋಧಬೋಧದಲ್ಲಿ ಸಾಧಕರನ್ನು ಕೈ ಹಿಡಿದದ್ದು ಭಾಷೆ. ಭಾರತೀಯ ಬಾಷೆಗಳಲ್ಲಿಯ ಸಾಹಿತ್ಯ ಶ್ರೀಮಂತಿಕೆಯ ಪರಿಚಯ, ಪೋಷಣೆ ಮತ್ತು ರಕ್ಷಣೆ ಮಾಡುವ ಸ್ತುತ್ಯ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೈಗೊಂಡಿದೆ. ದೇಶವೊಂದು ಪ್ರಬುದ್ಧವಾಗಲು ಎಲ್ಲ ವಲಯಗಳಲ್ಲೂ ಸ್ವಂತಿಕೆಯನ್ನು ಕಂಡುಕೊಳ್ಳಬೇಕು. ಸಾಹಿತ್ಯ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಭಾರತೀಯ ದೃಷ್ಟಿ ಸೃಷ್ಟಿಗಳನ್ನು ಪುನ:ಸ್ಥಾಪಿಸುವ, ಅದರೊಂದಿಗೆ ದೇಶದ ಬೌದ್ಧಿಕ ವಾತಾವರಣವನ್ನು ಬೆಸೆಯುವ ದೊಡ್ಡ ಗುರಿಯೊಂದಿಗೆ ಪರಿಷತ್ತು ಸ್ಥಾಪಿತವಾಗಿದೆ. 

 1966ರಲ್ಲಿ ಹುಟ್ಟಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ), ಕರ್ನಾಟಕದಲ್ಲಿ 2015ರಿಂದ ಬಹುಮುಖವಾದ ಚಟುವಟಿಕೆಗಳಲ್ಲಿ ತೊಡಗಿದೆ. ರಾಜ್ಯ ಸಮ್ಮೇಳನ, ದಕ್ಷಿಣ ಭಾರತ ಮಟ್ಟದ ಬೃಹತ್ ಭಾಷಾ ಕವಿಗೋಷ್ಠಿ, ಮಹಾಮಹೋಪಾಧ್ಯಾಯ ದಿವಂಗತ ರಂಗನಾಥ ಶರ್ಮರ ಜನ್ಮಶತಮಾನೋತ್ಸವ ಮುಂತಾದವು ಮುಖ್ಯವಾಗಿವೆ. ಪರಿಷತ್ತಿನ ಸಂಘಟನೆ ಇಡೀ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬಿದೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೊಳಗೊಂಡ ಬರಹಗಾರರ/ಮಾತುಗಾರರ, ವಿಷಯತಜ್ಞರ ತಂಡ ಕಟ್ಟುವ ಗುರಿ ಪರಿಷತ್ತಿಗಿದೆ. ಸಮರ್ಥರನ್ನು ಗುರುತಿಸಿ, ಪುರಸ್ಕರಿಸುವ ಸಾರ್ಥಕ ಕಾರ್ಯಕ್ಕೂ ಪರಿಷತ್ತು ಮುಂದಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ), ಕರ್ನಾಟಕ ಈ ವರ್ಷದಿಂದ ಎರಡು ಪುರಸ್ಕಾರಗಳನ್ನು ಪರಿಷತ್ತು ನೀಡಬಯಸುತ್ತದೆ” ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

1. ಆದಿಕವಿ ಪುರಸ್ಕಾರ.

ವಾಲ್ಮೀಕಿ ಮಹರ್ಷಿಯನ್ನು ಆದಿಕವಿ ಎಂದು ಜಗತ್ತೇ ಕೊಂಡಾಡುತ್ತಿದೆ. ನಮ್ಮ ದೇಶದಲ್ಲಿ ಇದುವರೆಗೆಆದಿಕವಿಯ ಹೆಸರಿನಲ್ಲಿ ಯಾವ ಪ್ರಶಸ್ತಿಯೂ ಇಲ್ಲ.ಆದ್ದರಿಂದ ಆದಿಕವಿಯ ಹೆಸರಿನಲ್ಲಿ ಪ್ರಶಸ್ತಿ ನೀಡಲುನಿರ್ಧರಿಸಲಾಗಿದೆ.
ಸಾಹಿತ್ಯಾಸಕ್ತರೂ, ಸಮಾಜ ಸೇವಕರೂ, ಉದ್ಯಮಿಗಳೂ, ಸಜ್ಜನರೂ ಆದ ಶ್ರೀಮತಿ ವೀಣಾ ಮತ್ತು ಶ್ರೀ ಜಯರಾಮ್ ದಂಪತಿಗಳು ಈ ಪುರಸ್ಕಾರದ ದಾನಿಗಳು. ಈಗಾಗಲೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ
ಪ್ರಸಿದ್ಧರಾಗಿರುವ ಹಿರಿಯ ವಿದ್ವಾಂಸರಿಗೆ ಆದಿಕವಿ ಪುರಸ್ಕಾರ ನೀಡಬೇಕೆಂದು ಪರಿಷತ್ತು ನಿರ್ಣಯಿಸಿದೆ. ಈ ವರ್ಷ ಆದಿಕವಿ ಪುರಸ್ಕಾರವನ್ನು ನಾಡಿನ ಹಿರಿಯ ಸಾಹಿತಿ ಪ್ರೊ|| ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ನೀಡಿ ಗೌರವಿಸಲು ನಿಶ್ಚಯಿಸಿದೆ.’

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

2. ವಾಗ್ದೇವಿ ಪುರಸ್ಕಾರ.

ತಮ್ಮ ಬರವಣಿಗೆಯಿಂದ ಭರವಸೆ ಮೂಡಿಸುತ್ತ ಸಾಹಿತ್ಯ ಸೇವೆಯಲ್ಲಿ ನಿರತರಾಗಿರುವ ಕಿರಿಯ ವಯಸ್ಕರಿಗೆ ಈ ಪ್ರಶಸ್ತಿಯನ್ನು ಕೊಡ ಮಾಡಬೇಕೆಂದು ಪರಿಷತ್ತು ಅಪೇಕ್ಷಿಸುತ್ತದೆ. ಇಸ್ರೋದ ಮಾಜಿ ವಿಜ್ಞಾನಿಗಳೂ, ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರೂ, ಸ್ವತ: ಕವಿಗಳೂ, ಉತ್ಸಾಹಿಗಳೂ ಆದ ಶ್ರೀ ಕೆ. ಹರೀಶ್ ಅವರು ಈಪ್ರಶಸ್ತಿಯ ದಾನಿಗಳು. ಈ ವರ್ಷ ವಾಗ್ದೇವಿ ಪುರಸ್ಕಾರವನ್ನು ಡಾ. ರೋಹಿಣಾಕ್ಷ ಶಿರ್ಲಾಲು, ಪುತ್ತೂರು, ದ.ಕ ಅವರಿಗೆ ನೀಡಿ ಗೌರವಿಸಲು ನಿಶ್ಚಯಿಸಿದೆ.

ವಾಗ್ದೇವಿ ಪುರಸ್ಕಾರ : ಡಾ ರೋಹಿಣಾಕ್ಷ ಶಿರ್ಲಾಲು, 
  • email
  • facebook
  • twitter
  • google+
  • WhatsApp
Tags: Akhila Bharatiya sahitya parishad

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು : ಡಾ. ಮೋಹನ್ ಭಾಗವತ್

ಸಂಪೂರ್ಣ ಸಮಾಜದ ಏಕಾತ್ಮತೆ ಹಾಗೂ ಬಂಧುತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಬಂದ ತೀರ್ಪು : ಡಾ. ಮೋಹನ್ ಭಾಗವತ್

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Bharat of Future: An RSS Perspective. Lecture series of Sarsanghachalak Dr. Mohan Bhagwat : Lecture 1.

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆ ದಿನ ೫: ಮನಸ್ಸನ್ನು ಪಾಸಿಟಿವ್‌ ಆಗಿಟ್ಟು ಶರೀರವನ್ನು ಕೊರೊನಾದಿಂದ ನೆಗೆಟಿವ್‌ ಆಗಿರಿಸೋಣ – ಡಾ. ಮೋಹನ್‌ ಭಾಗವತ್‌ #PositivityUnlimited

May 15, 2021
ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು

ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು

November 10, 2021
RSS Tamilnadu: Sangh Shiksha Varg concludes at Hosur

RSS Tamilnadu: Sangh Shiksha Varg concludes at Hosur

May 27, 2012
ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಮಹಾಯಜ್ಞ

ಬೆಂಗಳೂರಿನ 88 ಸ್ಥಳಗಳಲ್ಲಿ ಶ್ರೀಭಗವದ್ಗೀತಾ ಪಾರಾಯಣ ಮಹಾಯಜ್ಞ

December 29, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In