• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ನಾನು ಭಾಗವಹಿಸಿದ ಮೊದಲ ಸಂಘದ  ಸಭೆಯು ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆಯನ್ನು ಶಾಶ್ವತವಾಗಿ ಬದಲಾಯಿಸಿತು: ಅಂಕಿತ್ ಜೈನ್

Vishwa Samvada Kendra by Vishwa Samvada Kendra
June 24, 2016
in Articles
250
0
ನಾನು ಭಾಗವಹಿಸಿದ ಮೊದಲ ಸಂಘದ  ಸಭೆಯು ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆಯನ್ನು ಶಾಶ್ವತವಾಗಿ ಬದಲಾಯಿಸಿತು: ಅಂಕಿತ್ ಜೈನ್
491
SHARES
1.4k
VIEWS
Share on FacebookShare on Twitter

ನಾನು ಭಾಗವಹಿಸಿದ ಮೊದಲ ಸಂಘದ  ಸಭೆ, ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆನ್ನು ಶಾಶ್ವತವಾಗಿ ಬದಲಾಯಿಸಿತು.

ಅಂಕಿತ್ ಜೈನ್

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

image

(Symbolic image)
ಕೆಲವು ದಿನಗಳ ಹಿಂದೆ ದೆಹಲಿ ರಾಜ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನನಗೆ ದೊರೆಯಿತು. ಈ ಹಿಂದೆ ಭಾಜಪ ಸಂಯೋಜಿಸದ್ದ  ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಆದರೆ ಇದರ ಮೊದಲು ಆರೆಸ್ಸೆಸ್ ಸಭೆಗಳಿಗೆ ಎಂದೂ ಹೋಗಿರಲಿಲ್ಲ. ಈ ಸಭೆಯನ್ನು ಒಂದು  ತೆರೆದ ಮೈದಾನದಲ್ಲಿ ಆಯೋಜಿಸಿದ್ದರು. ಮೈದಾನದ ಕೆಲವು ಭಾಗಗಳು ಡೇರೆಗಳಿಂದ ತುಂಬಿದ್ದವು.
ಇಪ್ಪತ್ತು ದಿನಗಳ ದೀರ್ಘ ಅವಧಿಯ ಶಿಬಿರದಲ್ಲಿ ಸ್ವಯಂಸೇವಕರು ತಾವು ಕಲಿತ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಇದರ ನಂತರ ಆರೆಸ್ಸೆಸ್ಸಿನ ಹಿರಿಯ ಅಧಿಕಾರಿಗಳಾದ ಶ್ರೀ ರಾಮೇಶ್ವರ್ ಅವರ ಭಾಷಣ ಇತ್ತು. ಶ್ರೀ ರಾಮೇಶ್ವರ್ ಅವರು ಭಾಷಣಕ್ಕೆ ಎದ್ದು ನಿಂತಾಗ ಬಲವಾದ ಗಾಳಿ ಬೀಸಲು ಪ್ರಾರಂಭವಾಯಿತು. ಡೇರೆಯನ್ನು ಎಲ್ಲೆಡೆಯಿಂದಲೂ ಕಬ್ಬಿಣದ ಕಂಬಗಳಿಂದ ಕಟ್ಟಲಾಗಿತ್ತು.  ಆದರೆ ಗಾಳಿಯ ಒತ್ತಡದಿಂದ ಮರದ ಎಲೆಗಳಂತೆ ಅದು ಕಂಪಿಸಲು ಪ್ರಾರಂಭವಾಯಿತು. ಆ ಎಲ್ಲ ಕಂಬಗಳೂ ಅಲ್ಲಾಡಲು ಶುರುವಾದವು.  ಇವೆಲ್ಲ ವೇಗದ ಗತಿಯಲ್ಲಿ ಆದವು. ಆ ನುರಿತ ವ್ಯವಸ್ಥಾಪಕರಿಗೂ ಕೂಡ ಇದನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ. ಮತ್ತು ಹೆಚ್ಚಿನ ಸಂಖ್ಯೆಯ ಈ ಸ್ವಯಂಸೇವಕರು ತರಬೇತಿ ಪಡೆಯದ ಯುವಕರು !  ದೃಶ್ಯದ ಹೆದರಿಕೆಯಿಂದ ಈ ಪೆಂಡಾಲಿನಿಂದ ಓಡಿಹೋಗುವ ಯೋಚನೆಯೂ ಒಂದು ಬಾರಿ ಮೂಡಿತು.
ಪ್ರಬಲವಾದ ಗಾಳಿಯಿಂದಾಗಿ ಮುಖ್ಯ ಭಾಷಣಕಾರರು ಮಾತನಾಡಬೇಕಿದ್ದ ವೇದಿಕೆ ತುಂಬ ಅದುರುತ್ತಿತ್ತು. ಭಾಷಣಕಾರರು ತಮ್ಮ ಭಾಷಣವನ್ನು ಬಿಟ್ಟು ಸ್ಥಳದಿಂದ ಹೊರಟು ಹೋಗುವರು ಎಂದು ನನಗೆ ಖಾತ್ರಿಯಾಯಿತು.  ಯಾರು ಒಂದು ಕಾರ್ಯಕ್ರಮಕ್ಕೋಸ್ಕರ ತಮ್ಮ ಜೀವವನ್ನು ಒತ್ತೆ ಇಡುತ್ತಾರೆ  ? 
ಮುಂದಿನ ಕೆಲವು ಕ್ಷಣಗಳಲ್ಲಿ ನಡೆದ ವಿದ್ಯಮಾನಗಳು ನನಗೆ ಆರೆಸ್ಸೆಸ್ ಬಗ್ಗೆ ಇದ್ದ ಗ್ರಹಿಕೆನ್ನು ಶಾಶ್ವತವಾಗಿ ಬದಲಾಯಿಸಿತು.
ಸ್ವಯಂಸೇವಕರು ತ್ವರಿತವಾಗಿ ತಮ್ಮ ತಮ್ಮ ಸ್ಥಾನಗಳನ್ನು ತೆಗೆದುಕೊಂಡರು. ಕಂಬಗಳ ಹತ್ತಿರವಿದ್ದವರು  ಕಂಬಗಳನ್ನು ಬಿಗಿಯಾಗಿ ಹಿಡಿದುಕೊಂಡರು.  ಮತ್ತು  ಅವರು ಗಾಳಿಯ ಒತ್ತಡ ಕಡಿಮೆ ಮಾಡಲು ಎಲ್ಲ ಡೇರೆಗಳನ್ನು ಕಂಬಗಳಿಂದ ಒಂದುಗೂಡಿಸಿದರು. ವೇದಿಕೆ ಮತ್ತೆ ಅಲ್ಲಾಡಲಾಗದಂತೆ ದೃಢಪಡಿಸಲು ಸುಮಾರು 20 – 25 ಮಂದಿ ಸ್ವಯಂಸೇವಕರು ವೇದಿಕೆಗೆ ಧಾವಿಸಿ ಅಲ್ಲಿನ ಪ್ರತಿ ಕಂಬಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಸಮಾರಂಭ  ಸುಸೂತ್ರವಾಗಿ ನೆರವೇರುವಂತೆ ಆರೇಳು ಸ್ವಯಂಸೇವಕರು ವೇದಿಕೆಗೆ ಹೊಂದಿಕೊಂಡಿರುವ ಕಂಬಗಳನ್ನು ಹಿಡಿದುಕೊಂಡರು.  ಡೇರೆಗಳನ್ನು ಮೈದಾನಕ್ಕೆ ತಂದ ಸಿಬ್ಬಂದಿಯವರು  ಅಲ್ಲಿ ಯಾರೊಬ್ಬರೂ ಇರಲಿಲ್ಲ. ಸ್ವಯಂಸೇವಕರೇ ಅಲ್ಲಿದ್ದ ಎಲ್ಲ ಕಂಬಗಳನ್ನು ಹಿಡಿದುಕೊಂಡು ಕಾರ್ಯಕ್ರಮವು ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು. ಇವೆಲ್ಲವೂ ಕೆಲವು ನಿಮಿಷಗಳಲ್ಲೇ ನಡೆದುಹೋದವು.
ಆದರೆ, ನನಗೆ ಅನಿಸಿದ ಅತಿ ಚಮತ್ಕಾರದ ಸಂಗತಿಯೆಂದರೆ ಮುಖ್ಯ ಭಾಷಣಕಾರರ  ನಡವಳಿಕೆ. ನದಿಯಲ್ಲಿ ಅಲ್ಲಾಡುವ ದೋಣಿಯಂತೆ ವೇದಿಕೆಯು ಕಂಪನಗೊಂಡಿತ್ತು. ವೇದಿಕೆಯ ಮೇಲಿದ್ದ ಒಂದು ಕಂಬವು ಬದಿಗೆ ಬಂದಿದ್ದು , ಭಾಷಣಕಾರರ ಜೀವಕ್ಕೇ ಅಪಾಯಕರವಾಗಿತ್ತು.  ಆದರೆ ಅವರು ಏನೂ ಆಗದಿರುವಂತೆ ನಿಶ್ಚಲವಾಗಿದ್ದರು. ಅವರ ಮುಖದಲ್ಲಿ ಮತ್ತು ಅವರ ಮಾತಿನಲ್ಲಿ ಯಾವ ಭಯದ ಸುಳಿವೂ ಇರಲಿಲ್ಲ. ಗಾಳಿಯ ಆರ್ಭಟದ ಬಗ್ಗೆ ಒಂದುಸಲವೂ ಉಲ್ಲೇಖಿಸದೆ,  ನೀಡಿದ ಅವಧಿಯಂತೆ ಪೂರ್ಣ 40 ನಿಮಿಷಗಳ ಕಾಲ ಮಾತನಾಡಿದರು.
ಸಭೆಯು ಸುಗಮವಾಗಿ ನಡೆಯಲೆಂದು ಈ ಯುವ ಸ್ವಯಂಸೇವಕರು ತೆಗೆದುಕೊಂಡ ಕ್ರಮಗಳು ನಿಜಕ್ಕೂ ಮೂಕವಿಸ್ಮಿತವಾಗಿತ್ತು. ಇಬ್ಬರು ಮೂವರು ಸ್ವಯಂಸೇವಕರು ಕಂಬಗಳಿಗೆ ಸುತ್ತುಹಾಕಿಕೊಂಡಿದ್ದರು.  ಕೆಲವರು ಕಂಬಗಳನ್ನೂ ಹತ್ತಿ ಅವು ಮತ್ತೆ ಅಲ್ಲಾಡದಂತೆ ಮಾಡಿದ್ದರು. ಮುಖ್ಯ ಭಾಷಣಕಾರರ ಹಿಂಬದಿಯಲ್ಲಿದ್ದ ಹಿರಿಯ ಸ್ವಯಂಸೇವಕರೂಬ್ಬರು ಭಾಷಣಕಾರರ ಮೇಲೆ ಉರುಳಿ ಅಪಾಯವಾಗದಂತೆ ಮಾಡಲು ಸತತವಾಗಿ ಮೇಲೆಯೇ ದೃಷ್ಟಿಯಿಟ್ಟಿದ್ದರು. ಅವರು ನಿಂತಿದ್ದ ವೇದಿಕೆಯೇ ಜೋರು ಗಾಳಿಯಿದಾಗಿ ಅಲ್ಲಾಡುತಿತ್ತು. 20-25 ಸ್ವಯಂಸೇವಕರು ಅದನ್ನು ಹಿಡಿದಿದ್ದರು. ಭಾಷಣಕಾರರು ಹಿಂದೆ ಇದ್ದ ಕಾರ್ಯಕರ್ತರ ಮೇಲೆ ಭರವಸೆ ಇಟ್ಟಿದ್ದರು. ಹಿಂದೆ ಇದ್ದ ಕಾರ್ಯಕರ್ತ ಯುವ ಸ್ವಯಂಸೇವಕರ ಮೇಲೆ ಭರವಸೆ ಇಟ್ಟಿದ್ದರು.  ಎಂತಹ ಪರಸ್ಪರ ನಂಬಿಕೆ !!
ಇಂತಹ ಗಾಳಿಯ ಆರ್ಭಟದಲ್ಲಿ ಮುಖ್ಯ ಭಾಷಣಕಾರರು ಹೇಳಿದರು, ” ಸಂಘ ಒಂದು ಮನುಷ್ಯರನ್ನು ನಿರ್ಮಾಣ ಮಾಡುವ  ಒಕ್ಕೂಟ ” ಎಂದು. ಇದನ್ನು ನಾನು ಹಲವಾರು ಬಾರಿ ಕೇಳಿದ್ದೆ.  ಆದರೆ,  ಎತೆಂತಹ ವ್ಯಕ್ತಿಗಳನ್ನು ಸಂಘ ಸೃಷ್ಟಿ ಮಾಡುತ್ತದೆ ಎಂದು ನನಗೆ ಆ ದಿನ ಮನದಟ್ಟಾಯಿತು.  ಭಾಷಣಕಾರರು ದೊಡ್ಡ ಆರೆಸ್ಸೆಸ್ ಅಧಿಕಾರಿಗಳು. ಅವರಿಗೆ ಯಾರು ಯಾರು ವೇದಿಕೆಯನ್ನು ರಕ್ಷಿಸುತ್ತಿದ್ದಾರೆ ಎಂಬುದು ತಿಳಿದಿರುವದಿಲ್ಲ ಎಂಬುದು ನನಗೆ ಗೊತ್ತು. ಆದರೆ ಅವರ ಮೇಲೆ ಪೂರ್ಣ ಭರವಸೆ ಇಟ್ಟಿದ್ದರು, ತಮ್ಮ ಜೀವವನ್ನೇ ಅವರ ಕೈಯಲ್ಲಿ ಇಟ್ಟಂತೆ.
ನಾನು  ಕೆಲವು ಆರೆಸ್ಸೆಸ್ ವ್ಯಕ್ತಿಗಳಿಂದ ಕೇಳಿದ್ದ  ಚಾರಿತ್ರ್ಯ ನಿರ್ಮಾಣ ಎಂಬುದು ಬಹುಷಃ ಇದೇ.  ನನ್ನ ಪ್ರಕಾರ ಇಂತಹ ಸಣ್ಣ ವಿಷಯಗಳು ಈ ಸಂಘವನ್ನು ಉಚ್ಚ  ಸ್ಥಾನಕ್ಕೇರಿಸುತ್ತದೆ.  ಸಂಘದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ಮೊದಲು ನಾವು ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಹೋಗಬೇಕು. ಅವರ ಸಮರ್ಪಣೆ ನಿಮಗೆ ಹಿಡಿಸುವದೆಂಬ ನಂಬಿಕೆ ನನಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ  ನನ್ನ ಅಭಿನಂದನೆಗಳು.
Translation of Ankit Jain’s English article on his first experience at an RSS Event (Original – http://www.opindia.com/2016/06/my-first-visit-to-an-rss-event-changed-my-perception-about-rss/) Translated by Krishna Ravi Kumar.

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
VHP’s annual National Meet to be held on June 25, 26 at Patna

VHP's annual National Meet to be held on June 25, 26 at Patna

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Mauritius passes bill on Spoken Sanskrit

Mauritius passes bill on Spoken Sanskrit

December 21, 2011
‘ಕರ್ಣನ್‌’ ಇತ್ತೀಚಿನ ದಲಿತ ಒಡಲಳಾದ ದನಿ ಭೋರ್ಗರಿಸುವ ಚಲನಚಿತ್ರ

‘ಕರ್ಣನ್‌’ ಇತ್ತೀಚಿನ ದಲಿತ ಒಡಲಳಾದ ದನಿ ಭೋರ್ಗರಿಸುವ ಚಲನಚಿತ್ರ

May 26, 2021
Hindu Help Line to Help People at Tourist / Religious Destinations this Holiday Season

Hindu Help Line to Help People at Tourist / Religious Destinations this Holiday Season

August 25, 2019
Yoga for Harmony and Peace; thousands joined Rashtrotthana organised Yoga Day Celebrations in Bengaluru

Yoga for Harmony and Peace; thousands joined Rashtrotthana organised Yoga Day Celebrations in Bengaluru

June 21, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In