• Samvada
Thursday, August 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Organisation Profiles

BHARATIYA KISAN SANGHA

Vishwa Samvada Kendra by Vishwa Samvada Kendra
September 1, 2010
in Organisation Profiles
245
0
491
SHARES
1.4k
VIEWS
Share on FacebookShare on Twitter

READ ALSO

Reaching the Unreached : Vanavasi Kalyana Karnataka’s seva to tribal community during #Covid19 lockdown

Applications invited for TAPAS and SAADHANA projects

ರೈತರಿಂದ, ರೈತರಿಗಾಗಿ… -‘ಭಾರತೀಯ ಕಿಸಾನ್ ಸಂಘ’

ನಮ್ಮದು ಕೃಷಿ ಪ್ರಧಾನ ದೇಶ. ರೈತ ದೇಶದ ಬೆನ್ನೆಲುಬು. ‘ರೈತರ ಏಳಿಗೆಯೇ ದೇಶದ ಏಳಿಗೆ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು, ರೈತರ ಹಿತವನ್ನು ಸಾಧಿಸುವ ಜೊತೆಯಲ್ಲಿಯೇ ರಾಷ್ಟ್ರದ ಸಂಪೂರ್ಣ ಹಿತವನ್ನು ಸಾಧಿಸಬೇಕೆಂಬ ಛಲದೊಂದಿಗೆ ರೈತರಿಂದ ರೈತರಿಗಾಗಿಯೇ ರೈತರೇ ಸಂಘಟಿಸಿ ಈಗ ಹೆಮ್ಮರವಾಗಿ ಬೆಳೆದು ನಿಂತಿರುವ ಸಾಮಾಜಿಕ ಚಳವಳಿಯ ಸಂಘಟನೆ ಭಾರತೀಯ ಕಿಸಾನ್ ಸಂಘ.        ೧೯೭೯ ಮಾರ್ಚ್ ೪ರಂದು ರಾಜಸ್ಥಾನ ಪ್ರಾಂತದ ಕೋಟದಲ್ಲಿ ಭಾ.ಕಿ.ಸಂಘ ಸ್ಥಾಪಿಸಲ್ಪಟ್ಟಿತು. ರಾಷ್ಟ್ರದ ಮೂಲಭೂತ ಸಮಸ್ಯೆಗಳನ್ನು ಭಾರತೀಯ ಜೀವನ ಪದ್ಧತಿಯ ಮೂಲಕವೇ ಅರಿತುಕೊಂಡು, ಸಮಗ್ರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ
ದಿ|| ದತ್ತೋಪಂತ ಠೇಂಗಡಿಯವರು ಈ ಸಂಘಟನೆಯ ಸಂಸ್ಥಾಪಕರು.
ರಾಜಕೀಯ ಚಟುವಟಿಕೆಗಳಿಂದ ದೂರ ನಿಂತು, ರೈತ ಜನಮಾನಸದಲ್ಲಿ ತನ್ನ ಶಕ್ತಿಯ ಜಾಗೃತಿ ಮೂಡಿಸಿ, ಆ ಮೂಲಕ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಮತ್ತೊಮ್ಮೆ ಸಂಸ್ಥಾಪಿಸುವ ಉದ್ದೇಶದಿಂದ ‘ಭಾರತೀಯ ಕಿಸಾನ್ ಸಂಘ’ ಕಾರ್ಯಪ್ರವೃತ್ತವಾಗಿದೆ. ರೈತ ಎಂದರೆ ಕೇವಲ ಜಮೀನು ಉಳುಮೆ ಮಾಡಿ, ಆಹಾರ ಧಾನ್ಯಗಳನ್ನು ಬೆಳೆಯುವ ವ್ಯಕ್ತಿಯಲ್ಲ. ಬದಲಾಗಿ ರೈತ ಒಂದು ರಾಷ್ಟ್ರದ ನಿಜವಾದ ಶಕ್ತಿ! ರೈತರ ಎತ್ತಿನಗಾಡಿಯನ್ನು ತಯಾರಿಸಿ ಕೊಡುವ ಬಡಗಿ, ಆ ಗಾಡಿಯ ಚಕ್ರಕ್ಕೆ ಬೇಕಾಗುವ ಕಬ್ಬಿಣದ ಪಟ್ಟಿಯನ್ನು ತಯಾರಿಸುವ ಕಮ್ಮಾರ ಕೃಷಿಕಾರ್ಯಗಳನ್ನು ಮಾಡುವ ಅಸಂಘಟಿತ ಕೃಷಿಕಾರ್ಮಿಕರು; ಎತ್ತು, ದನ, ಕೋಣ, ಎಮ್ಮೆಗಳನ್ನು ಮೇಯಿಸುವ ಗೋಪಾಲಕರು; ತಮ್ಮ ಜೀವನಕ್ಕೆ ರೈತರ ಮೇಲೆ ಅವಲಂಬಿಸಿದಂತೆ, ರೈತರೂ ಈ ಎಲ್ಲ ವ್ಯಕ್ತಿಗಳನ್ನು ಅವಲಂಬಿಸಬೇಕಲ್ಲವೇ? ಆದ್ದರಿಂದ ಇವರೆಲ್ಲರನ್ನೂ ಒಂದುಗೂಡಿಸಿ, ಇವರೆಲ್ಲರ ನಡುವೆ ಮಧುರ ಬಾಂಧವ್ಯಗಳನ್ನು ನಿರ್ಮಿಸಿ ಜಾಗೃತಿ ಮೂಡಿಸಲು ಭಾ.ಕಿ.ಸಂಘ ಶ್ರಮಿಸುತ್ತಿದೆ.
ಆರ್ಥಿಕವಾಗಿ ರೈತರನ್ನು ಸಬಲರಾಗಿ ಸುವುದರ ಜೊತೆಗೆ ರೈತ ಪಂಗಡಗಳ ಮಧ್ಯೆ ಸಾಮರಸ್ಯ ಮೂಡಿಸುವುದು ಅಗತ್ಯ ಎಂಬುದು ಈ ಸಂಘದ ನಿಲುವು. ಇದಕ್ಕಾಗಿ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು, ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಒದಗಿಸಿಕೊಳ್ಳಲು, ಮಧ್ಯವರ್ತಿ ಪಡೆಗಳನ್ನು ನಿವಾರಿಸಲು ಭಾರತೀಯ ಕಿಸಾನ್ ಸಂಘ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಈಗಾಗಲೇ ಹೆಚ್ಚಿನ ರಾಜ್ಯಗಳಲ್ಲಿ ಶಕ್ತಿಯುತವಾಗಿ ಈ ಸಂಘಟನೆ ಮುಂದೆ ಹೆಜ್ಜೆಯೂರಿದೆ.
ಗ್ರಾಮೀಣ ಮತ್ತು ನಗರದ ನಡುವಿನ ಅಭಿವೃದ್ಧಿಯ ಅಂತರವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಸಮಾಜವನ್ನು ವಿಭಜಿಸುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ತ್ಯಜಿಸಿ ಸಮಾಜವನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಮಾಡುವುದು ಭಾರತೀಯ ಕಿಸಾನ್ ಸಂಘದ ಉದ್ದೇಶವೂ ಕೂಡ.
ಕರ್ನಾಟಕದಲ್ಲಿ ಹಲವಾರು ರೈತ ಆಂದೋಲನ, ರೈತಪರ ಹೋರಾಟ, ವಿದ್ಯುತ್ ದರ ಚಳವಳಿಗಳ ಮೂಲಕ ಸಹಸ್ರಾರು ರೈತರು ಭಾ.ಕಿ.ಸಂ. ಸಂಪರ್ಕದಲ್ಲಿದ್ದಾರೆ. ಒಬ್ಬ ರೈತನಿಗೆ ಸಿಗಬೇಕಾದ ನ್ಯಾಯವನ್ನು ಶಾಂತ ಪ್ರಯತ್ನದಿಂದ ದೊರಕಿಸಿಕೊಂಡು ಕೃಷಿಯಲ್ಲಿ ರಚನಾತ್ಮಕ ಕಾರ‍್ಯಗಳಿಂದ ರೈತ ಸಮಾಜಕ್ಕೆ ಹೊಸ ಶಕ್ತಿಯನ್ನು ನೀಡುವತ್ತ ಭಾ.ಕಿ.ಸಂ. ಶ್ರಮಿಸುತ್ತಿದೆ. ರೈತ ನಿಜವಾಗಿಯೂ ಆರ್ಥಿಕ ಸ್ವಾವಲಂಬಿ ಯಾಗಬೇಕು. ಜಾತಿ-ಪಂಗಡ, ಮೇಲು-ಕೀಳು, ಬಡವ-ಬಲ್ಲಿದ ಇತ್ಯಾದಿ ತಾರತಮ್ಯಗಳಿಂದ ಹೊರಬಂದು ಏಕಚಿಂತನೆಯಲ್ಲಿ ತೊಡಗಬೇಕೆಂಬುದು ‘ಭಾರತೀಯ ಕಿಸಾನ್ ಸಂಘ’ದ ಮೂಲ ನಿಲುವಾಗಿದೆ.
ಹೆಚ್ಚಿನ ವಿವರಗಳಿಗಾಗಿ:
‘ಭಾರತೀಯ ಕಿಸಾನ್ ಸಂಘ’
ಯಾದವಸ್ಮೃತಿ, #೫೫, ೧ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು-೫೬೦೦೨೦
ಪುಟ್ಟಸ್ವಾಮಿ – ೯೪೪೮೧ ೫೬೪೪೮

  • email
  • facebook
  • twitter
  • google+
  • WhatsApp

Related Posts

Reaching the Unreached : Vanavasi Kalyana Karnataka’s seva to tribal community during #Covid19 lockdown
Organisation Profiles

Reaching the Unreached : Vanavasi Kalyana Karnataka’s seva to tribal community during #Covid19 lockdown

January 7, 2021
Applications invited for TAPAS and SAADHANA projects
News Digest

Applications invited for TAPAS and SAADHANA projects

August 29, 2018
ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌
News Digest

ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಗುರುಕುಲಗಳು ಹೆಚ್ಚಾಗಬೇಕಿದೆ: ವಿ. ನಾಗರಾಜ್‌

August 19, 2018
VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ
Organisation Profiles

VANAVASI KALYAN ASHRAMA – ವನವಾಸಿ ಕಲ್ಯಾಣ ಆಶ್ರಮ

April 11, 2011
Organisation Profiles

KRUSHI PRAYOG PARIVAR – ಕೃಷಿ ಪ್ರಯೋಗ ಪರಿವಾರ

April 11, 2011
VISHWA HINDU PARISHAD – ವಿಶ್ವ ಹಿಂದು ಪರಿಷತ್
Organisation Profiles

VISHWA HINDU PARISHAD – ವಿಶ್ವ ಹಿಂದು ಪರಿಷತ್

April 1, 2011
Next Post

ABVP -AKHIL BHARATIYA VIDYARTHI PARISHAT

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

RSS Press Conference by Dr Manmohan Vaidya, ahead of Pranth Pracharak Baitak at Kanpur

RSS Press Conference by Dr Manmohan Vaidya, ahead of Pranth Pracharak Baitak at Kanpur

July 11, 2016
The grit of the mothers of Bhagat Singh, Rajguru, Sukhdev #23MarchBalidandiwas

The grit of the mothers of Bhagat Singh, Rajguru, Sukhdev #23MarchBalidandiwas

March 23, 2019
ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ

ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ

September 25, 2021
RSS Chief Bhagwat celebrates Raksha Bandhan at Bhubaneshwar; says ‘Rakhi Inspires to Promote Universal Brotherhood’

RSS Chief Bhagwat celebrates Raksha Bandhan at Bhubaneshwar; says ‘Rakhi Inspires to Promote Universal Brotherhood’

August 11, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In