• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others ABPS

ಭಾರತೀಯ ಭಾಷೆಗಳನ್ನು ಉಳಿಸುವ ಹಾಗೂ ಬೆಳೆಸುವ ಅವಶ್ಯಕತೆ ಇಂದು ನಮ್ಮ ಮುಂದಿದೆ : ಎಬಿಪಿಎಸ್ ನಿರ್ಣಯ

Vishwa Samvada Kendra by Vishwa Samvada Kendra
March 15, 2018
in ABPS, News Digest, RSS ABPS 2018
250
0
Day 1 ABPS, National RSS meet at Nagpur : Shakhas increasing year on year
491
SHARES
1.4k
VIEWS
Share on FacebookShare on Twitter

ಎಬಿಪಿಎಸ್ ನಲ್ಲಿ ಇಂದು ತೆಗೆದುಕೊಂಡಿರುವ ನಿರ್ಣಯ: 

ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯವಿದೆ.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

’ಭಾಷೆ ಎಂಬುದು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು, ಸಂಸ್ಕೃತಿಯನ್ನು ಗುರುತಿಸುವ ಬಹು ಮುಖ್ಯ ಅಂಶವಾಗಿದೆ’ ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭೆಯ  ಸ್ಪಷ್ಟ ನಿಲುವಾಗಿದೆ. ನಮ್ಮ ಸಂಸ್ಕೃತಿ, ಉದಾತ್ತ ಸಂಪ್ರದಾಯಗಳು, ಅತ್ಯುತ್ತಮ ಜ್ಞಾನ, ವ್ಯಾಪಕವಾದ ಸಾಹಿತ್ಯ ಇವುಗಳನ್ನು ಪಸರಿಸಲು, ಉಳಿಸಲು, ಸೃಜನಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸಲು ನಮ್ಮ ದೇಶದ ವಿವಿಧ ಭಾಷೆಗಳು ಮತ್ತು ಉಪಭಾಷೆಗಳು ಅತ್ಯಗತ್ಯವಾಗುತ್ತವೆ. ನಮ್ಮ ಭಾರತೀಯ ಭಾಷೆಗಳಲ್ಲಿ ಮೌಖಿಕವಾಗಿ ಹರಿದು ಬಂದ ಜನಪದ ಸಾಹಿತ್ಯ, ಹಾಡು, ನುಡಿಗಟ್ಟು, ಗಾದೆಗಳ ಸಂಖ್ಯೆಯು ಬರಹದ ಮೂಲಕ ಹರಡಿರುವ ಸಾಹಿತ್ಯಕ್ಕಿಂತಲೂ ಹೆಚ್ಚು. ಇಂದು ಭಾರತೀಯ ಭಾಷೆಗಳನ್ನು ಬಳಸದೇ ವಿದೇಶೀ ಶಬ್ದಗಳನ್ನು ಬಳಸುತ್ತಾ ಹೋದಂತೆ ಭಾರತೀಯ ಭಾಷೆಗಳಿಗೆ ಅಪಾಯ‌ ಎದುರಾಗಿದೆ. ದೇಶದ ಎಷ್ಟೋ ಭಾಷೆಗಳು, ಉಪಭಾಷೆಗಳು ಅಳಿವಿನ ಅಂಚಿಗೆ ಇಂದು ಬಂದಿವೆ. ಸರಕಾರಗಳು, ನೀತಿ ನಿರೂಪಕರು, ಸ್ವಯಂಸೇವಾ ಸಂಸ್ಥೆಗಳು, ಹಾಗೂ ಬಹು ಮುಖ್ಯವಾಗಿ ಸಮಾಜವೂ ಈ ವಿಷಯದಲ್ಲಿ ಜಾಗರೂಕರಾಗುವುದಲ್ಲದೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಭಾರತೀಯ ಭಾಷೆಗಳನ್ನು ಉಳಿಸುವ ಹಾಗೂ ಬೆಳೆಸುವ ಕೆಲಸವನ್ನು ಮಾಡಬೇಕಿರುವ ಅಗತ್ಯವಿದೆ.

ಈ ಕೆಳಕಂಡ ಪ್ರಯತ್ನಗಳನ್ನು ಮಾಡಬೇಕೆಂಬುದು ಪ್ರತಿನಿಧಿ ಸಭೆಯ ಅಭಿಮತ :

  1. ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾರತೀಯ ಭಾಷೆಗಳಲ್ಲೇ ಆಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಸೂಕ್ತ ನೀತಿಗಳನ್ನು ರೂಪಿಸಬೇಕು, ಪೋಷಕರೂ ತಮ್ಮ ಮಕ್ಕಳನ್ನು ಭಾರತೀಯ ಭಾಷೆಯ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಹಕರಿಸಬೇಕು.
  2. ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೂ ಭಾರತೀಯ ಭಾಷೆಗಳಲ್ಲಿ ಪುಸ್ತಕಗಳು ಹೊರಬರಬೇಕು. ಪರೀಕ್ಷೆಗಳೂ ನಮ್ಮ ಭಾಷೆಗಳಲ್ಲಿಯೇ ನಡೆಯಬೇಕು.
  3. ನೀಟ್, ಯುಪಿಎಸ್ಸಿ ಪರೀಕ್ಷೆಗಳು ಭಾರತೀಯ ಭಾಷೆಗಳಲ್ಲಿ ನಡೆಯುವುದು ಸ್ವಾಗತಾರ್ಹ. ಅಂತೆಯೇ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಭಾರತೀಯ ಭಾಷೆಗಳಲ್ಲಿಯೇ ನಡೆಸಬೇಕು.
  4. ಸರಕಾರಿ ಸಂಸ್ಥೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡಬೇಕು. ಆಂಗ್ಲ ಭಾಷೆಗೆ ಆಧ್ಯತೆ ಕೊಡದೇ ಭಾರತೀಯ ಭಾಷೆಗಳನ್ನು ಉತ್ತೇಜೆಸುವ ಕೆಲಸ, ಸರಕಾರಿ, ಸರಕಾರೇತರ ಸಂಸ್ಥೆಗಳಲ್ಲಿ ಬಡ್ತಿಗಳಿಗೆ, ಅಲ್ಲಿಯ ಕಾರ್ಯಕ್ರಮಗಳಲ್ಲಿ, ಸಮರ್ಪಕವಾಗಿ ನೀಡಬೇಕು.
  5. ಸ್ವಯಂಸೇವಕರು ಸೇರಿದಂತೆ ಇಡೀ ಸಮಾಜ ತಮ್ಮ ದೈನಂದಿನ ಸಂವಹನಕ್ಕೆ ಮಾತೃ ಭಾಷೆಯನ್ನು ಬಳಸಲು ಮುಂದಾಗಬೇಕು. ಮಾತೃಭಾಷೆಯಲ್ಲಿನ ಸಾಹಿತ್ಯಗಳನ್ನು ಓದುವ ಸಂಸ್ಕಾರ ರೂಢಿಸಿಕೊಳ್ಳಬೇಕು. ಅಲ್ಲದೇ ಭಾರತೀಯ ಭಾಷೆಯ ನಾಟಕಗಳು, ಸಂಗೀತ, ಜಾನಪದ ಸಾಹಿತ್ಯವನ್ನು ಹೆಚ್ಚು ಉತ್ತೇಜಿಸಬೇಕು, ಪ್ರೋತ್ಸಾಹಿಸಬೇಕು.
  6. ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ, ಗೌರವವಿರಿಸಿಕೊಳ್ಳುವುದರ ಜೊತೆಗೆ, ಇತರೆ ಭಾರತೀಯ ಭಾಷೆಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಭಾಷೆಗಳು ಭಾರತೀಯ ಸಮಾಜವನ್ನು ಒಗ್ಗೂಡಿಸುವಲ್ಲಿ ಪಾತ್ರ ನಿರ್ವಹಿಸಿವೆ.
  7. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರತೀಯ ಭಾಷೆ, ಉಪಭಾಷೆ, ಲಿಪಿಗಳನ್ನು ಉಳಿಸಿ, ಬೆಳೆಸುವಲ್ಲಿ ಮಹತ್ವದ ಯೊಜನೆಗಳನ್ನು ರೂಪಿಸಬೇಕು.

ವಿವಿಧ ದೇಶಗಳ ಭಾಷೆಗಳನ್ನು ಜ್ಞಾನದ ವೃದ್ಧಿಗಾಗಿ ಕಲಿಯುವುದನ್ನು ಪ್ರತಿನಿಧಿ ಸಭೆಯು ಒಪ್ಪುತ್ತದೆ. ಭಾರತದಂತಹ ಬಹುಭಾಷಾ ದೇಶದಲ್ಲಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯವಿದೆ.  ಪ್ರತಿನಿಧಿ ಸಭೆಯು ಸರಕಾರಗಳಿಗೆ, ಸರಕಾರೇತರ ಸಂಸ್ಥೆಗಳಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ, ಮಾಧ್ಯಮಗಳಿಗೆ, ವಿವಿಧ ಸಮುದಾಯದ ಮುಖಂಡರಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ ಭಾರತೀಯ ಭಾಷೆಗಳನ್ನು ಅಸ್ಖಲಿತವಾಗಿ, ವ್ಯಾಕರಣ ಶುದ್ಧವಾಗಿ ಬಳಸಿ ಅದರಲ್ಲಿನ ವಿಶೇಷ ಪದಪುಂಜಗಳನ್ನು, ಸಾಹಿತ್ಯವನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುತ್ತದೆ.

 

  • email
  • facebook
  • twitter
  • google+
  • WhatsApp
Tags: 2018 ABPS3 day ABPSABPS ResolutionRSS ABPS

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
Day 1 ABPS, National RSS meet at Nagpur : Shakhas increasing year on year

Need to protect and promote Bharatiya languages : Resolution at ABPS, Nagpur

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

December 20, 2020
ಕೆ.ಎಫ್.ಡಿ ನೀಷೆಧಕ್ಕೆ ವಿಶ್ವ ಹಿಂದು ಪರಿಷತ್ ಒತ್ತಾಯ

ಕೆ.ಎಫ್.ಡಿ ನೀಷೆಧಕ್ಕೆ ವಿಶ್ವ ಹಿಂದು ಪರಿಷತ್ ಒತ್ತಾಯ

June 28, 2011
Video: Speech by Mohan Bhagwat, Sarasanghachalak of RSS at World Hindu Congress

Video: Speech by Mohan Bhagwat, Sarasanghachalak of RSS at World Hindu Congress

November 22, 2014
ಭೂಮಿಯ ಪೋಷಣೆ ಮತ್ತು ಸಂರಕ್ಷಣೆ ಕುರಿತ ಜನಜಾಗೃತಿಗಾಗಿ ಇದೇ ಯುಗಾದಿಯಿಂದ ದೇಶದಾದ್ಯಂತ ಅಭಿಯಾನ : ಆ. ಶ್ರೀ. ಆನಂದ್

ಭೂಮಿಯ ಪೋಷಣೆ ಮತ್ತು ಸಂರಕ್ಷಣೆ ಕುರಿತ ಜನಜಾಗೃತಿಗಾಗಿ ಇದೇ ಯುಗಾದಿಯಿಂದ ದೇಶದಾದ್ಯಂತ ಅಭಿಯಾನ : ಆ. ಶ್ರೀ. ಆನಂದ್

April 9, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In