• Samvada
Monday, May 16, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others ABPS

ಪತ್ರಕರ್ತರೊಂದಿಗೆ ಭಯ್ಯಾಜಿ – ಆರೆಸ್ಸೆಸ್ ಸರಕಾರ್ಯವಾಹ

Vishwa Samvada Kendra by Vishwa Samvada Kendra
March 13, 2011
in ABPS
250
0
ಪತ್ರಕರ್ತರೊಂದಿಗೆ ಭಯ್ಯಾಜಿ – ಆರೆಸ್ಸೆಸ್ ಸರಕಾರ್ಯವಾಹ
491
SHARES
1.4k
VIEWS
Share on FacebookShare on Twitter

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ಇಂದು ಆರೆಸ್ಸೆಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಭಯ್ಯಾಜಿ ಜೋಶಿ ಅವರು ಮೂರು ದಿನಗಳ ಕಲಾಪಗಳ ಬಗ್ಗೆ ಪತ್ರಕರ್ತರಿಗೆ ವಿವರ ಮಾಹಿತಿ ನೀಡಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಪರಿಸರದ ಎಬಿಪಿಎಸ್ ಮಾಧ್ಯಮ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಅವರು ದೇಶ, ಸಮಾಜ, ಹಿಂದು ಸಂಘಟನೆ, ರಾಜಕಾರಣ ಹೀಗೆ ಹತ್ತಾರು ವಿಷಯಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

READ ALSO

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

ಕಳೆದ ಒಂದು ವರ್ಷದ ಪ್ರಮುಖ ವಿದ್ಯಮಾನಗಳನ್ನು ನೆನಪಿಸಿಕೊಂಡ ಅವರು, ” ಭಯೋತ್ಪಾದನೆಯ ಪಟ್ಟವನ್ನು ಮೊದಲು ಹಿಂದು ಸಂಘಟನೆಗಳ ಮೇಲೆ ನಂತರ ಅದನ್ನು ಒಟ್ಟಾರೆ ಹಿಂದು ಸಮಾಜದ ಮೇಲೆ ಹೋರಿಸಲಾಯಿತು. ‘ಕೇಸರಿ ಭಯೋತ್ಪಾದನೆ’,  ‘ಭಗವಾ ಭಯೋತ್ಪಾದನೆ’ ಮುಂತಾದ ರೂಪದಲ್ಲಿ ಸಂಪೂರ್ಣ ಹಿಂದು ಸಮಾಜವನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಯಿತು. ಇದು ಕೇವಲ ಹಿಂದು ಸಮಾಜವನ್ನು ಅಪಮಾನಗೊಳಿಸುವ ಷಡ್ಯಂತ್ರವಿದು. ಹಿಂದು ಉಗ್ರವಾದಿಯಾದರೆ ಯಾರೂ ಉಳಿಯಲಾರರು. ಇದನ್ನು ಹಿಂದು ಭಯೋತ್ಪಾದನೆ ಎಂದು ಆರೋಪಿಸುವವರು ಯೋಚಿಸಬೇಕಿತ್ತು” ಎಂದರು.

“ಇಂದು ಭ್ರಷ್ಟಾಚಾರ ಪೆಡಂಭೂತದಂತೆ ಪ್ರತಿಯೊಬ್ಬರನ್ನು ಆವರಿಸಿದೆ.  ಕೆಲವರು ಪರಿಸ್ಥಿತಿಯ ಕಾರಣದಿಂದ ಇನ್ನು ಕೆಲವೊಮ್ಮೆ ಒತ್ತಡದಿಂದ ಭ್ರಷ್ಟಾಚಾರದ ಬಲೆಗೆ ಬಿದ್ದಿದ್ದಾರೆ. ಈ ದೃಷ್ಟಿಯಿಂದ ಸರಕಾರದ ನೀತಿಗಳು, ಒಟ್ಟು ಸಾಮಾಜಿಕ ವಾತಾವರಣ, ಶಿಕ್ಷಣ ಪದ್ಧತಿ, ಸುತ್ತುವರಿದು ಬರುವ ಆಡಳಿತ ರೀತಿ ಇವೆಲ್ಲವೂ ಇಂದಿನ ಭ್ರಷ್ಟಾಚಾರಕ್ಕೆ ಕಾರಣವಾಗಿವೆ. ಇದರಲ್ಲಿ ಹಿರಿಯ ಸರಕಾರಿ ಅಧಿಕಾರಿಗಳ ಪಾತ್ರವೂ ಇದೆ. ಮಂತ್ರಿ ರಾಜಕಾರಣಿಗಳು, ಹೀಗೆ ಮೇಲಿನಿಂದ ಕೆಳಗಿನವರೆಗೆ ನೈತಿಕ ಕುಸಿತವಾಗಿರುವುದು ಚಿಂತೆಯ ವಿಷಯವಾಗಿದೆ.

“ವಾಸ್ತವಿಕವಾಗಿ ನಮ್ಮ ನೆರೆಯ ದೇಶವಾದ ಚೀನಾ ನಮ್ಮ ಮಿತ್ರನಾಗಬೇಕಿತ್ತು. ಆದರೆ ಇತಿಹಾಸವನ್ನು ನೋಡಿದಾಗ ಯಾವುದೇ ದೇಶ ಚೀನಾದ ಮಿತ್ರನಾಗಿ ಉಳಿದಿಲ್ಲ. ಸ್ನೇಹದ ಮೂಲಕ ಸಣ್ಣ ಸಣ್ಣ ದೇಶಗಳನ್ನು ಆಕ್ರಮಿಸಿಕೊಂಡು ಇದೀಗ ಸವಾಲಿನ ರೂಪದಲ್ಲಿ ಬೆಳೆದು ನಿಂತಿದೆ.

“ಚೀನಾ ಸವಾಲನ್ನು ಎದುರಿಸುವ ದೃಷ್ಟಿಯಿಂದ ಅನೇಕ ಪರಿಹಾರರೂಪೀ ಸಲಹೆಗಳಲ್ಲಿ ಪೂರ್ವೋತ್ತರ ಗಡಿ ಪ್ರದೇಶದಲ್ಲಿ ಸಂವಹನ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಬೆಳೆಸುವ ದೃಷ್ಟಿಯಿಂದ ಒಂದು ಕೇಂದ್ರ ಸರಕಾರದ ನಿಗಮದ ರಚನೆಯಾಗಬೇಕು. ಗಡಿ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದಲೂ ಇದರ ಬಳಕೆಯಾಗಬೇಕು.

“ಧನಾತ್ಮಕ ಸಂಗತಿಗಳ ದೃಷ್ಟಿಯಿಂದ ನೋಡಿದಾಗ ದೇಶದೆಲ್ಲೆಡೆ ಹಿಂದುತ್ವದ ಬಗ್ಗೆ ಜಾಗೃತಿಯ ವಾತಾವರಣ ಕಾಣುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ  ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಅತ್ಯಂತ ಸಾಮಾನ್ಯ ಜನರು ಭಾಗವಹಿಸಿದ್ದು, ಪ್ರಕಾಶಕರು ತಾವು ತಂದ ಎಲ್ಲ ಪುಸ್ತಕಗಳು ಮಾರಾಟವಾದವು. 4-5 ಲಕ್ಷ ಜನ ಈ ಮೇಳಕ್ಕೆ ಭೇಟಿ ನೀಡಿದ್ದರು.” ಎಂದು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

“ಭ್ರಷ್ಟಾಚಾರದ ಆರೋಪ ಸಾಬಿತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಂಘದ ಕಡೆಯಿಂದ ಒತ್ತಡ ಹೇರಲಾಗುತ್ತದೆಯೇ ?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಭಯ್ಯಾಜಿ ಅವರು “ಇಲ್ಲ, ಆ ಕೆಲಸವನ್ನು ಆ ಪಕ್ಷವೇ ನೋಡಿಕೊಳ್ಳಬೇಕು. ಅವರ ವಿಶ್ವಾಸಾರ್ಹತೆಯನ್ನು ಅವರೇ ಉಳಿಸಿಕೊಳ್ಳಬೇಕು” ಎಂದರು.

“ಭಾಜಪವು ಸಂಘದ ಅಂಗ ಸಂಸ್ಥೆಯಲ್ಲವೇ ?” ಎಂಬ ಪ್ರಶ್ನೆಗೆ, ಅವರು “35ಕ್ಕಿಂತ ಹೆಚ್ಚು ಸಂಸ್ಥೆಗಳು ಅಖಿಲ ಭಾರತೀಯ ಸ್ತರದಲ್ಲಿ ಕೆಲಸ ಮಾಡುತ್ತಿವೆ. ಆದರೆ ಅವು ಯಾವೂ ಸಂಘದ ಅಂಗ ಸಂಸ್ಥೆಗಳಲ್ಲ. ಅವು ಸ್ವತಂತ್ರ ಸಂಘಟನೆಗಳು. ಸ್ವಯಂಸೇವಕರ ನೆಲೆಯಲ್ಲಿ ಅವರು ಇಲ್ಲಿಗೆ (ಪ್ರತಿನಿಧಿ ಸಭೆಗೆ) ಬಂದು ಕಾರ್ಯದ ವರದಿ ಮಾಡುತ್ತಾರೆ ಅಷ್ಟೆ.” ಎಂದರು.

  • email
  • facebook
  • twitter
  • google+
  • WhatsApp

Related Posts

ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022
ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

March 12, 2022
ABPS

ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತಾಗಿ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು.

March 9, 2022
Changes in Responsibilities and the new RSS team #RSSABPS #RSSABPS2021
ABPS

Changes in Responsibilities and the new RSS team #RSSABPS #RSSABPS2021

March 20, 2021
Next Post
Sarasanghachalak honors KN Bhat

Sarasanghachalak honors KN Bhat

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Corruption biggest challenge before nation: RSS chief Mohan Bhagwat at Jaipur

Corruption biggest challenge before nation: RSS chief Mohan Bhagwat at Jaipur

September 30, 2012
RSS Swayamsevaks cleaned the premises of Sri Kambada Ganapati Temple at Anekal

RSS Swayamsevaks cleaned the premises of Sri Kambada Ganapati Temple at Anekal

July 14, 2015
#REDTROCITY : Untold story of Communist Violence in Kerala

#REDTROCITY : Untold story of Communist Violence in Kerala

August 5, 2016
Mandya district

Mandya district

November 11, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In