• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಟಿಎಂಸಿ ಎಂಬ ಆಧುನಿಕ ಭಸ್ಮಾಸುರನಿಗೆ ಬಲಿಯಾಗುತ್ತಿದೆಯಾ ಬಂಗಾಲ?

Vishwa Samvada Kendra by Vishwa Samvada Kendra
March 28, 2022
in Blog
255
0
501
SHARES
1.4k
VIEWS
Share on FacebookShare on Twitter

ಹಿಂಸೆ ಇತ್ತೀಚಿಗೆ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗದ ರೀತಿಯಲ್ಲಿ ಬಂಗಾಲದ ಮುಖ್ಯ ಅಂಗವೇ ಆಗಿ ಹೋಗಿದೆ.ಅದು ಚುನಾವಣಾ ನಂತರದ ರಾಷ್ಟ್ರೀಯವಾದಿಗಳ ಮೇಲೆ ನಡೆದ ದೌರ್ಜನ್ಯ ಇರಬಹುದು,ಅಥವಾ ನವರಾತ್ರಿ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆಯಿರಬಹುದು ಅಥವಾ ಇತ್ತೀಚೆಗಿನ ಬಿರ್‌ಭೂಮಿ ಹತ್ಯಾಕಾಂಡವಿರಬಹುದು. ಬಂಗಾಲದಲ್ಲಿ ಹಿಂಸೆಯ ತಾಂಡವ ನೃತ್ಯ ನಡೆಯುತ್ತಿದೆ.

ಹಿಂಸೆ ಒಂದೆಡೆಯಾದರೆ ಇಡೀ ಆಡಳಿತ ವ್ಯವಸ್ಥೆ ಲಡ್ಡು ಹಿಡಿದು ಕೂತಿದೆ‌.ಸ್ವತಃ ಮಮತಾ ಬ್ಯಾನರ್ಜಿ ಘನತೆವೆತ್ತ ರಾಜ್ಯಪಾಲರ ವಿರುದ್ಧ ದಿನಬೆಳಗಾದರೆ ಬೈದುಕೊಂಡು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿಕೊಂಡು ಕೂರುವ ಚಿಲ್ಲರೆ ಕೆಲಸಗಳ ಹಿಂದೆ ಹೋಗಿ ಆಡಳಿತ ಹಳ್ಳ ಹಿಡಿದಿದೆ‌.ಅತ್ತ ಟಿಎಂಸಿ ಕಾರ್ಯಕರ್ತರು ದಿನನಿತ್ಯ ಬರಿ ಹಿಂಸಾಚಾರ ದೌರ್ಜನ್ಯ ದಬ್ಬಾಳಿಕೆಯಲ್ಲಿ ತೊಡಗಿದ್ದಾರೆ. ಅದೆಷ್ಟರ ಮಟ್ಟಿಗೆ ಆಗಿ ಹೋಗಿದೆಯೆಂದರೆ ಅದೇನೋ ದಿನಂಪ್ರತಿ ನಡೆಯುವ ಆಚರಣೆಯೋ ಎಂಬಷ್ಟು ಸತತವಾಗಿ ನಡೆಯುತ್ತಿದೆ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಅಪರಾಧ ಪ್ರಕರಣಗಳು ಮತ್ತು ಭ್ರಷ್ಟಾಚಾರ ಇವರೆಡೂ ಸರಕಾರದ ಎರಡು ಗಾಲಿಗಳಾಗಿ ಹೋಗಿದೆ.ಹಿಂಸಾಚಾರ ಅದೆಷ್ಟರಮಟ್ಟಿಗೆ ಮುಟ್ಟಿದೆಯೆಂದರೆ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುವ ಮಟ್ಟಿಗೆ.ಟಿ.ಎಂ.ಸಿ ಈಗ ಆಧುನಿಕ ಭಸ್ಮಾಸುರನ ಸ್ಥಾನ ತುಂಬುತ್ತಿದೆ.

ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಪಶ್ಚಿಮ ಬಂಗಾಳದ ಬಿರ್ಭೂಮಿ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ 8 ಜನರನ್ನು ಸಜೀವ ದಹನ ಮಾಡಲಾಗಿದೆ. ಕಳೆದ ಮಂಗಳವಾರ ಮುಂಜಾನೆ ಅಪರಿಚಿತರು ಮನೆಗೆ ಬೆಂಕಿ ಹಚ್ಚಿದ್ದರು. ಪರಿಣಾಮ ಸುಟ್ಟು ಕರಕಲಾದ ಶವಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಮೃತಪಟ್ಟವರನ್ನು ಮೊದಲು ಕೆಟ್ಟದಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಗಿದೆ.

ಈ ಆಘಾತಕಾರಿ ಮಾಹಿತಿಯನ್ನು ರಾಮಪುರಹತ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ನಡೆದಿದ್ದ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಿಂದಾಗಿ ಈ ಪ್ರತೀಕಾರ ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದ್ದು ಧೃಡ ಪಟ್ಟಿದೆ. ನಿರ್ಲಕ್ಷ್ಯದ ಆಧಾರದ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ದಹನವಾದ ವ್ಯಕ್ತಿಗಳು ಮತ್ತು ಹಿಂದಿನ ದಿನ ಹತ್ಯೆಯಾದ ಟಿಎಂಸಿ ನಾಯಕ ಭಾದು ಶೇಖ್‌ನ ಕೊಲೆಗೂ ಸಂಬಂಧವಿದೆ. ಸ್ಥಳೀಯ ಟಿಎಮಸಿಯಲ್ಲಿ ನಡೆದ ಕೆಲವು ಭಿನ್ನಾಭಿಪ್ರಾಯಗಳ ದೆಸೆಯಿಂದ ಈ ಜಗಳ ನಡೆದಿದ್ದು ತಾರಕಕ್ಕೇರಿದೆ.ನಂತರ ಟಿಎಂಸಿಯ ಒಂದು ಬಣದ ಕಾರ್ಯಕರ್ತ ಕೊಲೆಯಾಗಿದ್ದು ಆ ಕೊಲೆಗೆ ಕಾರಣರಾದರೆಂದ ಇನ್ನೊಂದು ಬಣದ ವ್ಯಕ್ತಿಗಳನ್ನು ಸಜೀವವಾಗಿ ದಹಿಸಿದ್ದಾರೆ ಎನ್ನಲಾಗುತ್ತಿದೆ‌.

ಈ ಘಟನೆ ನಡೆದ ಮೂರು ದಿನಗಳ ಬಳಿಕ ಬಂಗಾಲದಾದ್ಯಂತ 40ಕ್ಕೂ ಅಧಿಕ ದೇಶಿ ಬಾಂಬುಗಳು ದೊರೆತಿರುವುದು ಬೆಚ್ಚಿ ಬೀಳಿಸಿದೆ.ಈ ವೇಳೆ ಬಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ 40ಕ್ಕೂ ಅಧಿಕ ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಇವುಗಳನ್ನು ಬಕೆಟ್​ಗಳಲ್ಲಿ ಅಡಗಿಸಿಡಲಾಗಿತ್ತು.

ಇನ್ನು ಸಿಬಿಐ ಎಫ್‌ಐಆರ್ ಕಾಪಿಯಲ್ಲಿ 22ಮಂದಿಯ ಹೆಸರನ್ನು ಬರೆದಿದ್ದು ಅಲ್ಲಿನ ಬ್ಲಾಕ್ ಟಿಎಂಸಿ ಅಧ್ಯಕ್ಷ ಅನಾರುಲ್ ಹೊಸೈನ್‌ರನ್ನು ಮತ್ತು ಇನ್ನು 10ಜನ ಟಿಎಂಸಿ ಕಾರ್ಯಕರ್ತರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ 70-80ಜನರ ಗುಂಪು ಈ ಕೃತ್ಯ ಎಸಗಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಬಂಗಾಲದ ವಿಧಾನ ಪರಿಷತ್ತಿನಲ್ಲಿ ಪ್ರತಿಭಟನೆ ನಡೆಸಿದಾಗ ಚೀಫ್ ವಿಪ್ ಮನೋಜ್ ಟಿಗ್ಗಾರನ್ನೂ ಸೇರಿದಂತೆ ಶಾಸಕರನ್ನು ಎಳೆದಾಡಿ ದೈಹಿಕ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಸಾಂವಿಧಾನಿಕವಾಗಿ ನಡೆಯಬೇಕಿದ್ದ ಕಾರ್ಯಕಲಾಪಗಳು ಒತ್ತಟ್ಟಿಗಿರಲಿ ಶಾಸಕರು, ಸಂಸದರಿಗೇ ಭದ್ರತೆಯಿಲ್ಲದಿರುವ ಬಂಗಾಲದಲ್ಲಿ ಸಾಮಾನ್ಯ ಜನ ಸುರಕ್ಷತೆಯಿಂದ ಬದುಕುವುದು ಸಾಧ್ಯವಿದೆಯೆ? ಅದರಲ್ಲಿಯೂ ರಾಜ್ಯಪಾಲರನ್ನು ಅಗೌರವದಿಂದ ಕಾಣುವ,ಆಡಳಿತವನ್ನು ಲೆಕ್ಕಕ್ಕೇ ಇಡದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ಹೊತ್ತೂ ಅಸಂಬದ್ಧವಾಗಿ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ಕಲ್ಲು ಹೊಡೆಯುತ್ತಾರೆ.

ಅಷ್ಟಕ್ಕೂ ಟಿಎಂಸಿಯ ಈ ಗೂಂಡಾರಾಜ್ಯ ಅದರ ಮಿದಲ ಅವಧಿಯ ಅಧಿಕಾರದಲ್ಲಿಯೂ ಮುಂದುವರೆದಿತ್ತು.ಈಗ ಹಾರುವ ರೆಕ್ಕೆಗೆ ಬಲಬಂದಂತೆ ಮತ್ತೂ ಬಲಹೆಚ್ಚಿಸಿಕೊಳ್ಳುತ್ತಾ ದೌರ್ಜನ್ಯ ಹೆಚ್ಚು ಮಾಡಲಾಗುತ್ತಿದೆ‌.

ಹಿಂದಿನ ಕಾಲದಲ್ಲಿ ಭಸ್ಮಾಸುರ ತನ್ನ ತಲೆಯ ಮೇಲೆ ಕೈಇಟ್ಟುಕೊಂಡು ತಾನೇ ನಾಶವಾಗುವ ರೀತಿಯಲ್ಲಿ ಟಿಎಂಸಿಯೂ ತನ್ನ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ.ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಬೀದಿಗೆ ಬಂದು ನಿಂತಿದೆ.ಹಿಂಸಾಚಾರ ಮುಗಿಲು ಮುಟ್ಟಿದೆ.

  • email
  • facebook
  • twitter
  • google+
  • WhatsApp
Tags: BengalMamata banerjeeTMCWest Bengal

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

After 31 years,Trial against Bitta Karate begins in Shrinagar

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಮಾ ಕೃ. ರುಕ್ಮಿಣಿ  ಕುರಿತಾದ “ಚೈತನ್ಯ ಮಯೀ” ಪುಸ್ತಕ ಬೆಂಗಳೂರಿನಲ್ಲಿ ನ ೨೭ರಂದು ಬಿಡುಗಡೆ

ರುಕ್ಮಿಣಕ್ಕ ಅವರ ವ್ಯಕ್ತಿತ್ವ ಚಿತ್ರಣದ “ಚೈತನ್ಯ ಮಯಿ” ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರೇರಣಾದಾಯಿ : ವಿ ನಾಗರಾಜ್

November 24, 2021
Seva Sunday: Swayamsevaks cleaned premises footpath at Uppala of Kasaragod Rajarajeshwarinagar, Bengaluru

Seva Sunday: Swayamsevaks cleaned premises footpath at Uppala of Kasaragod Rajarajeshwarinagar, Bengaluru

November 23, 2014
‘ಘರ್‌ವಾಪಾಸಿ ಮಾಡಿಯೇ ಸಿದ್ದ ; ಹಿಂದೂ ಸಂವಿಧಾನ ಜಾರಿಗೆ ಬರಲಿ’: ಪುತ್ತೂರಿನಲ್ಲಿ ವಿರಾಟ್ ಹಿಂದೂ ಹೃದಯ ಸಂಗಮದಲ್ಲಿ  ಪ್ರವೀಣ್ ತೊಗಾಡಿಯಾ

‘Ghar Vaapasi will continue’: Dr Pravin Togadia at Virat Hindu Sangama, Puttur

January 17, 2015
RSS Karnataka’s MouthPiece VIKRAMA’s new office Inaugurated at Bangalore

ಪತ್ರಿಕೆಗಳು ಸಮಾಜದಲ್ಲಿ ನೈತಿಕತೆ ಎತ್ತಿ ಹಿಡಿಯಬೇಕು : ಮಂಗೇಶ್ ಭೆಂಢೇ

July 8, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In