• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಟಿಎಂಸಿ ಎಂಬ ಆಧುನಿಕ ಭಸ್ಮಾಸುರನಿಗೆ ಬಲಿಯಾಗುತ್ತಿದೆಯಾ ಬಂಗಾಲ?

Vishwa Samvada Kendra by Vishwa Samvada Kendra
March 28, 2022
in Blog
254
0
499
SHARES
1.4k
VIEWS
Share on FacebookShare on Twitter

ಹಿಂಸೆ ಇತ್ತೀಚಿಗೆ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗದ ರೀತಿಯಲ್ಲಿ ಬಂಗಾಲದ ಮುಖ್ಯ ಅಂಗವೇ ಆಗಿ ಹೋಗಿದೆ.ಅದು ಚುನಾವಣಾ ನಂತರದ ರಾಷ್ಟ್ರೀಯವಾದಿಗಳ ಮೇಲೆ ನಡೆದ ದೌರ್ಜನ್ಯ ಇರಬಹುದು,ಅಥವಾ ನವರಾತ್ರಿ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆಯಿರಬಹುದು ಅಥವಾ ಇತ್ತೀಚೆಗಿನ ಬಿರ್‌ಭೂಮಿ ಹತ್ಯಾಕಾಂಡವಿರಬಹುದು. ಬಂಗಾಲದಲ್ಲಿ ಹಿಂಸೆಯ ತಾಂಡವ ನೃತ್ಯ ನಡೆಯುತ್ತಿದೆ.

ಹಿಂಸೆ ಒಂದೆಡೆಯಾದರೆ ಇಡೀ ಆಡಳಿತ ವ್ಯವಸ್ಥೆ ಲಡ್ಡು ಹಿಡಿದು ಕೂತಿದೆ‌.ಸ್ವತಃ ಮಮತಾ ಬ್ಯಾನರ್ಜಿ ಘನತೆವೆತ್ತ ರಾಜ್ಯಪಾಲರ ವಿರುದ್ಧ ದಿನಬೆಳಗಾದರೆ ಬೈದುಕೊಂಡು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿಕೊಂಡು ಕೂರುವ ಚಿಲ್ಲರೆ ಕೆಲಸಗಳ ಹಿಂದೆ ಹೋಗಿ ಆಡಳಿತ ಹಳ್ಳ ಹಿಡಿದಿದೆ‌.ಅತ್ತ ಟಿಎಂಸಿ ಕಾರ್ಯಕರ್ತರು ದಿನನಿತ್ಯ ಬರಿ ಹಿಂಸಾಚಾರ ದೌರ್ಜನ್ಯ ದಬ್ಬಾಳಿಕೆಯಲ್ಲಿ ತೊಡಗಿದ್ದಾರೆ. ಅದೆಷ್ಟರ ಮಟ್ಟಿಗೆ ಆಗಿ ಹೋಗಿದೆಯೆಂದರೆ ಅದೇನೋ ದಿನಂಪ್ರತಿ ನಡೆಯುವ ಆಚರಣೆಯೋ ಎಂಬಷ್ಟು ಸತತವಾಗಿ ನಡೆಯುತ್ತಿದೆ.

READ ALSO

ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ

भारतस्य प्रतिष्ठे द्वे संस्कृतं संस्कृतिश्च

ಅಪರಾಧ ಪ್ರಕರಣಗಳು ಮತ್ತು ಭ್ರಷ್ಟಾಚಾರ ಇವರೆಡೂ ಸರಕಾರದ ಎರಡು ಗಾಲಿಗಳಾಗಿ ಹೋಗಿದೆ.ಹಿಂಸಾಚಾರ ಅದೆಷ್ಟರಮಟ್ಟಿಗೆ ಮುಟ್ಟಿದೆಯೆಂದರೆ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುವ ಮಟ್ಟಿಗೆ.ಟಿ.ಎಂ.ಸಿ ಈಗ ಆಧುನಿಕ ಭಸ್ಮಾಸುರನ ಸ್ಥಾನ ತುಂಬುತ್ತಿದೆ.

ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಪಶ್ಚಿಮ ಬಂಗಾಳದ ಬಿರ್ಭೂಮಿ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ 8 ಜನರನ್ನು ಸಜೀವ ದಹನ ಮಾಡಲಾಗಿದೆ. ಕಳೆದ ಮಂಗಳವಾರ ಮುಂಜಾನೆ ಅಪರಿಚಿತರು ಮನೆಗೆ ಬೆಂಕಿ ಹಚ್ಚಿದ್ದರು. ಪರಿಣಾಮ ಸುಟ್ಟು ಕರಕಲಾದ ಶವಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಮೃತಪಟ್ಟವರನ್ನು ಮೊದಲು ಕೆಟ್ಟದಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಗಿದೆ.

ಈ ಆಘಾತಕಾರಿ ಮಾಹಿತಿಯನ್ನು ರಾಮಪುರಹತ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ನಡೆದಿದ್ದ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಿಂದಾಗಿ ಈ ಪ್ರತೀಕಾರ ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದ್ದು ಧೃಡ ಪಟ್ಟಿದೆ. ನಿರ್ಲಕ್ಷ್ಯದ ಆಧಾರದ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ದಹನವಾದ ವ್ಯಕ್ತಿಗಳು ಮತ್ತು ಹಿಂದಿನ ದಿನ ಹತ್ಯೆಯಾದ ಟಿಎಂಸಿ ನಾಯಕ ಭಾದು ಶೇಖ್‌ನ ಕೊಲೆಗೂ ಸಂಬಂಧವಿದೆ. ಸ್ಥಳೀಯ ಟಿಎಮಸಿಯಲ್ಲಿ ನಡೆದ ಕೆಲವು ಭಿನ್ನಾಭಿಪ್ರಾಯಗಳ ದೆಸೆಯಿಂದ ಈ ಜಗಳ ನಡೆದಿದ್ದು ತಾರಕಕ್ಕೇರಿದೆ.ನಂತರ ಟಿಎಂಸಿಯ ಒಂದು ಬಣದ ಕಾರ್ಯಕರ್ತ ಕೊಲೆಯಾಗಿದ್ದು ಆ ಕೊಲೆಗೆ ಕಾರಣರಾದರೆಂದ ಇನ್ನೊಂದು ಬಣದ ವ್ಯಕ್ತಿಗಳನ್ನು ಸಜೀವವಾಗಿ ದಹಿಸಿದ್ದಾರೆ ಎನ್ನಲಾಗುತ್ತಿದೆ‌.

ಈ ಘಟನೆ ನಡೆದ ಮೂರು ದಿನಗಳ ಬಳಿಕ ಬಂಗಾಲದಾದ್ಯಂತ 40ಕ್ಕೂ ಅಧಿಕ ದೇಶಿ ಬಾಂಬುಗಳು ದೊರೆತಿರುವುದು ಬೆಚ್ಚಿ ಬೀಳಿಸಿದೆ.ಈ ವೇಳೆ ಬಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ 40ಕ್ಕೂ ಅಧಿಕ ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಇವುಗಳನ್ನು ಬಕೆಟ್​ಗಳಲ್ಲಿ ಅಡಗಿಸಿಡಲಾಗಿತ್ತು.

ಇನ್ನು ಸಿಬಿಐ ಎಫ್‌ಐಆರ್ ಕಾಪಿಯಲ್ಲಿ 22ಮಂದಿಯ ಹೆಸರನ್ನು ಬರೆದಿದ್ದು ಅಲ್ಲಿನ ಬ್ಲಾಕ್ ಟಿಎಂಸಿ ಅಧ್ಯಕ್ಷ ಅನಾರುಲ್ ಹೊಸೈನ್‌ರನ್ನು ಮತ್ತು ಇನ್ನು 10ಜನ ಟಿಎಂಸಿ ಕಾರ್ಯಕರ್ತರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ 70-80ಜನರ ಗುಂಪು ಈ ಕೃತ್ಯ ಎಸಗಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಬಂಗಾಲದ ವಿಧಾನ ಪರಿಷತ್ತಿನಲ್ಲಿ ಪ್ರತಿಭಟನೆ ನಡೆಸಿದಾಗ ಚೀಫ್ ವಿಪ್ ಮನೋಜ್ ಟಿಗ್ಗಾರನ್ನೂ ಸೇರಿದಂತೆ ಶಾಸಕರನ್ನು ಎಳೆದಾಡಿ ದೈಹಿಕ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಸಾಂವಿಧಾನಿಕವಾಗಿ ನಡೆಯಬೇಕಿದ್ದ ಕಾರ್ಯಕಲಾಪಗಳು ಒತ್ತಟ್ಟಿಗಿರಲಿ ಶಾಸಕರು, ಸಂಸದರಿಗೇ ಭದ್ರತೆಯಿಲ್ಲದಿರುವ ಬಂಗಾಲದಲ್ಲಿ ಸಾಮಾನ್ಯ ಜನ ಸುರಕ್ಷತೆಯಿಂದ ಬದುಕುವುದು ಸಾಧ್ಯವಿದೆಯೆ? ಅದರಲ್ಲಿಯೂ ರಾಜ್ಯಪಾಲರನ್ನು ಅಗೌರವದಿಂದ ಕಾಣುವ,ಆಡಳಿತವನ್ನು ಲೆಕ್ಕಕ್ಕೇ ಇಡದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ಹೊತ್ತೂ ಅಸಂಬದ್ಧವಾಗಿ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ಕಲ್ಲು ಹೊಡೆಯುತ್ತಾರೆ.

ಅಷ್ಟಕ್ಕೂ ಟಿಎಂಸಿಯ ಈ ಗೂಂಡಾರಾಜ್ಯ ಅದರ ಮಿದಲ ಅವಧಿಯ ಅಧಿಕಾರದಲ್ಲಿಯೂ ಮುಂದುವರೆದಿತ್ತು.ಈಗ ಹಾರುವ ರೆಕ್ಕೆಗೆ ಬಲಬಂದಂತೆ ಮತ್ತೂ ಬಲಹೆಚ್ಚಿಸಿಕೊಳ್ಳುತ್ತಾ ದೌರ್ಜನ್ಯ ಹೆಚ್ಚು ಮಾಡಲಾಗುತ್ತಿದೆ‌.

ಹಿಂದಿನ ಕಾಲದಲ್ಲಿ ಭಸ್ಮಾಸುರ ತನ್ನ ತಲೆಯ ಮೇಲೆ ಕೈಇಟ್ಟುಕೊಂಡು ತಾನೇ ನಾಶವಾಗುವ ರೀತಿಯಲ್ಲಿ ಟಿಎಂಸಿಯೂ ತನ್ನ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ.ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಬೀದಿಗೆ ಬಂದು ನಿಂತಿದೆ.ಹಿಂಸಾಚಾರ ಮುಗಿಲು ಮುಟ್ಟಿದೆ.

  • email
  • facebook
  • twitter
  • google+
  • WhatsApp
Tags: BengalMamata banerjeeTMCWest Bengal

Related Posts

Blog

ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ

May 16, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Blog

ಸನಾತನ ಭಾರತದ ಶಿಕ್ಷಣ ವ್ಯವಸ್ಥೆ

April 26, 2022
Blog

ವಾಸ್ತವವಾದಿ ದೃಷ್ಟಿಕೋನದ ವಿದೇಶಾಂಗ ನೀತಿಯ ದೃಷ್ಟಾರ – ಬಾಬಾಸಾಹೇಬ್ ಅಂಬೇಡ್ಕರ್

April 14, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Blog

ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್‌ಕುಮಾರ್

April 12, 2022
Next Post

After 31 years,Trial against Bitta Karate begins in Shrinagar

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

In Kerala, Communist Movement plunging into deepest crisis since inception : S Chandrasekhar

In Kerala, Communist Movement plunging into deepest crisis since inception : S Chandrasekhar

June 11, 2012
Samartha Bharata’s statewide Vivek Band youth Campaign to start on Jan 12 2018

Samartha Bharata’s statewide Vivek Band youth Campaign to start on Jan 12 2018

January 5, 2018
Clarification by RSS Prachar Pramukh Dr Manmohan Vaidya on Organiser article

Clarification by RSS Prachar Pramukh Dr Manmohan Vaidya on Organiser article

February 4, 2015
Ram Madhav writes: ‘Chinese Machinations – India’s Response’

Ram Madhav writes: ‘Chinese Machinations – India’s Response’

May 6, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In