• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಧರಂಪಾಲರನ್ನು ಓದಿಕೊಳ್ಳಬೇಕು : ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ

Vishwa Samvada Kendra by Vishwa Samvada Kendra
February 19, 2021
in Others
250
0
ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಧರಂಪಾಲರನ್ನು ಓದಿಕೊಳ್ಳಬೇಕು : ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ
491
SHARES
1.4k
VIEWS
Share on FacebookShare on Twitter

ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಪ್ರಕಟಿಸಿರುವ, ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ನ 5 ಪುಸ್ತಕಗಳು ಇಂದು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾದ ಶ್ರೀ ಸುರೇಶ ಸೋನಿ ಲೋಕಾರ್ಪಣೆಗೊಳಿಸಿದರು. ಸರಣಿ ಸಂಪಾದಕರಾದ ಡಾ.ಜೆ.ಕೆ.ಬಜಾಜ್, ಡಾ. ಎಂ.ಡಿ.ಶ್ರೀನಿವಾಸ್ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾದ ನಾಡೋಜ ಎಸ್ ಆರ್ ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಉಪಸ್ಥಿತರಿದ್ದರು.

ಶ್ರೀ ಎಂ ಪಿ ಕುಮಾರ್, ಡಾ.ಜೆ.ಕೆ.ಬಜಾಜ್, ಶ್ರೀ ಸುರೇಶ ಸೋನಿ, ನಾಡೋಜ ಎಸ್ ಆರ್ ರಾಮಸ್ವಾಮಿ, ಡಾ. ಎಂ.ಡಿ.ಶ್ರೀನಿವಾಸ್

2021-22 ಪ್ರಖ್ಯಾತ ಚಿಂತಕ, ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸಿ, ತನ್ಮೂಲಕ ಗಾಂಧೀ ವಿಚಾರವನ್ನು ಹಾಗೂ ಭಾರತದ ನೈಜ ಇತಿಹಾಸವನ್ನು ತಿಳಿಸುವ ವಿನೂತನ ಯೋಜನೆಗೆ ರಾಷ್ಟ್ರೋತ್ಥಾನ ಸಾಹಿತ್ಯ ಕೈ ಹಾಕಿದೆ. ಬ್ರಿಟಿಷ್ ಪೂರ್ವ ಭಾರತದಲ್ಲಿನ ಉನ್ನತ ಗುಣಮಟ್ಟದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಗಳ ಬಗ್ಗೆ ದಾಖಲೆ ಸಹಿತವಾಗಿ ವಿವರಿಸುವ ಈ ಗ್ರಂಥಗಳು ಪ್ರಾಚೀನ ಭಾರತದ ಬಗ್ಗೆ ಹೆಮ್ಮೆ ಮೂಡಿಸುತ್ತವೆ. ಧರಂಪಾಲ್ ಅವರ ಚಿಂತನೆಗಳು ಆಧುನಿಕ ಭಾರತದ ನಿರ್ಮಾಣಕ್ಕೆ ಬೇಕಾದ ಅತ್ಯಂತ ಮಹತ್ತ್ವದ ಅಂಶಗಳನ್ನು ಒದಗಿಸುತ್ತವೆ ಎಂದು ಎಲ್ಲ ವಿದ್ವಾಂಸರು ಒಪ್ಪುತ್ತಾರೆ. ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ಮೂಲಕ ಅವರ ಸಾಹಿತ್ಯವನ್ನು ಭಾರತೀಯರಿಗೆ ನೀಡುವ ದೃಷ್ಟಿಯಿಂದ, ಇಂದು ಕ್ಲಾಸಿಕ್ ಸಿರೀಸ್ ನ ಒಟ್ಟು ಹತ್ತು ಪುಸ್ತಕಗಳ ಸರಣಿಯಲ್ಲಿ ಐದು ಪುಸ್ತಕಗಳು ಲೋಕಾರ್ಪಣೆಗೊಂಡವು. ಇಂದು ಬಿಡುಗಡೆಗೊಂಡ ಐದು ಪುಸ್ತಕಗಳು:

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

• Panchayat Raj as the basis of Indian Polity
• Indian Science and Technology in the Eighteenth century
• Civil Disobedience and Indian Tradition
• The Beautiful Tree
• Bharatiya Chitta Manas and Kala

ಪುಸ್ತಕಗಳು https://www.sahityabooks.com/ ನಲ್ಲಿ ಲಭ್ಯವಿವೆ

ಈ ಸಂದರ್ಭದಲ್ಲಿ ಪುಸ್ತಕಗಳ ಸಂಪಾದಕರಾದ ಡಾ.ಜೆ.ಕೆ. ಬಜಾಜ್ ಮತ್ತು ಡಾ.ಎಂ.ಡಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಆರೆಸ್ಸೆಸ್ ಸಹ ಸರಕಾರ್ಯವಾಹರಾದ ಸುರೇಶ್ ಸೋನಿ ಮಾತನಾಡಿ ಧರ್ಮಪಾಲ್ ಅವರು ಅಧ್ಯಯನ ನಡೆಸಿದ ಮತ್ತು ಅನುಭವಕ್ಕೆ ತಂದುಕೊಂಡದ್ದನ್ನು ಅನುಷ್ಠಾನಗೊಳಿಸುವುದು ಬಹಳ ಕಠಿಣ. ಏನನ್ನು ಕಲಿಸಲಾಗುತ್ತಿದೆಯೋ ಅದಕ್ಕೂ ಹಿಂದೆ ಇದ್ದದ್ದಕ್ಕೂ ಬಹಳ‌ ವ್ಯತ್ಯಾಸವಿರುವುದನ್ನು ಧರ್ಮಪಾಲ್ ಗ್ರಹಿಸಿದರು. ಬ್ರಿಟಿಷ್ ಭಾರತಕ್ಕೆ ಬಂದಾಗ ಭಾರತ ಹೇಗಿತ್ತು ಎಂಬುದನ್ನು ಬ್ರಿಟಿಷರೇ ತಮ್ಮ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ಧರ್ಮಪಾಲ್ ಅಧ್ಯಯನ ಕೃತಿಗಳನ್ನು ರಚಿಸಿದರು. ಅದನ್ನು ಓದುವಾಗ ಹೆಮ್ಮೆ ಮತ್ತು ದುಃಖ ಎರಡೂ ಏಕಕಾಲಕ್ಕಾಗುತ್ತದೆ‌. ಹಾಗಾಗಿಯೇ ಭಾರತವನ್ನು ಪುನರ್ ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಬೇಕು ಎಂದು ಧರ್ಮಪಾಲ್ ಹೇಳುತ್ತಿದ್ದರು ಎಂದು ಸುರೇಶ ಸೋನಿ ನೆನಪಿಸಿಕೊಂಡರು.

ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ್ ಸೋನಿ

ಪ್ರಾಚೀನ ಭಾರತದಲ್ಲಿ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಎಲ್ಲ ಸಮಸ್ಯೆಗಳನ್ನೂ ಗ್ರಾಮಸ್ಥರೇ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟಿಷರು ಬಂದ ನಂತರ ಪೊಲೀಸ್, ನ್ಯಾಯಾಲಯಗಳನ್ನು ಸ್ಥಾಪಿಸಿದರು. ಇಂದು ಮನುಷ್ಯನ ಜೀವನ‌ ಬ್ರಿಟಿಷರ ವ್ಯವಸ್ಥೆಯ ಸುತ್ತವೇ ಸುತ್ತುತ್ತಿದೆ. ಭಾರತೀಯ ಸಮಾಜ ಕ್ರಾಂತಿಯ ಬದಲಿಗೆ ವಿಕಾಸವನ್ನು ತನ್ನದಾಗಿಸಿಕೊಂಡಿದೆ‌. ಏಕೆಂದರೆ ಕ್ರಾಂತಿಯಿಂದ ಹಿಂದಿನದ್ದು ನಾಶವಾಗುತ್ತದೆ. ಪ್ರಾಚೀನ ಭಾರತದಲ್ಲಿ ಜಾತಿ‌ ಆಧಾರಿತ ಬೇಧಭಾವ ಇತ್ತು, ಮಹಿಳೆಯರಿಗೆ ಸ್ವಾತಂತ್ರ ಇರಲಿಲ್ಲ ಎಂಬ ಆರೋಪವಿದೆ. ಆದರೆ ದಾಖಲೆಗಳು ಬೇರೆಯದನ್ನೇ ಹೇಳುತ್ತದೆ ಎಂಬುದನ್ನು ಧರ್ಮಪಾಲ್ ಸಾಬೀತುಪಡಿಸಿದ್ದಾರೆ ಎಂದು ಸುರೇಶ ಸೋನಿ ಅಭಿಪ್ರಾಯಪಟ್ಟರು.

ಗೀತಾ ಧರ್ಮಪಾಲ್ ವಿಡಿಯೋ ಸಂದೇಶದ ಮೂಲಕ ಮಾತನಾಡಿ, ಧರ್ಮಪಾಲ್ ಅವರ ಕೃತಿಗಳು ಭಾರತವನ್ನು ಮರುಹುಡುಕುವಲ್ಲಿ ಮಹತ್ವದ್ದಾಗಿದೆ. ಪ್ರತಿಯೊಂದು ಜನಾಂಗಕ್ಕೆ ಅದರದ್ದೇ ಆದ ಉದ್ದೇಶವಿರುತ್ತದೆ ಎಂಬುದು ಧರ್ಮಪಾಲ್ ಅವರ ಬಲವಾದ ನಂಬಿಕೆಯಾಗಿತ್ತು. ಭಾರತೀಯ ಜನಾಂಗದ ಉದ್ದೇಶವೇನು ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ.

ಧರ್ಮಪಾಲ್ ಅವರು ತಮ್ಮ 7ನೇ ವಯಸ್ಸಿನಲ್ಲೇ ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದರು. ಮನೆಯವರ ತೀವ್ರ ವಿರೋಧದ ನಡುವೆ ತಮ್ಮ ಬಿಎಸ್‌ಸಿ ಪದವಿಯನ್ನು ಮೊಟಕುಕೊಳಿಸಿ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದರು. ಆ ವೇಳೆ ಸೆರೆಮನೆವಾಸವಾಯಿತು. ಸೆರೆಯಿಂದ ಹೊರಬಂದ ನಂತರ ಚುಳುಚಳಿಯಲ್ಲಿ ಸಕ್ರಿಯವಾಗದೆ ಉತ್ತರಾಖಂಡದ ಹಳ್ಳಿಯೊಂದರ ಉತ್ಥಾನಕ್ಕೆ ಕೆಲಸ ಮಾಡಿದರು. ಏಕೆಂದರೆ ಉತ್ತಮ ಭಾರತದ ನಿರ್ಮಾಣಕ್ಕೆ ಗ್ರಾಮೀಣ ಸಮುದಾಯ ಸಶಕ್ತವಾಗಬೇಕೆಂದು ಅರಿತಿದ್ದರು.
ಭಾರತದ ವಿಭಜನೆ ವೇಳೆ ಪಾಕಿಸ್ಥಾನದಿಂದ ಬಂದಿದ್ದ ನಿರಾಶ್ರಿತರಿಗಾಗಿ ದುಡಿದರು.
ಚೀನಾ ಜೊತೆಗಿನ ಸಂಬಂಧವನ್ನು ನಿಭಾಯಿಸುವಲ್ಲಿ ಅಂದಿನ ಪ್ರಧಾನಮಂತ್ರಿ ನೆಹರು ಅವರು ವಿಫಲರಾಗಿದ್ದಾರೆ, ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು 1962ರಲ್ಲಿ ಧರ್ಮಪಾಲ್ ಸಂಸತ್ತಿಗೆ ಓಪನ್ ಲೆಟರ್ ಬರೆದಿದ್ದರು. ಪತ್ರ ಬರೆದ ಕಾರಣಕ್ಕಾಗಿ ಧರ್ಮಪಾಲ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದರು. ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾದ ಅವಮಾನವದು ಎಂದು ಗೀತಾ ಧರ್ಮಪಾಲ್ ನೆನಪಿಸಿಕೊಂಡರು.

ಸರಣಿಯ ಸಂಪಾದಕರಾದ ಡಾ.ಜೆ.ಕೆ.ಬಜಾಜ್, ಭಾರತೀಯ ರಾಜಕಾರಣದ ಮೂಲ ಪಂಚಾಯ್ತಿಗಳು. ಭಾರತೀಯ ಸಂವಿಧಾನದಲ್ಲಿ ಗ್ರಾಮ ಹಾಗೂ ವ್ಯಕ್ತಿಯನ್ನು ಮುಖ್ಯವಾಗಿ ಪರಿಗಣಿಸಿಲ್ಲ. ಗಾಂಧಿ ಚಿಂತನೆಗೆ ಇದು ವಿರುದ್ಧವಾದದ್ದು ಎಂಬ ಅಭಿಪ್ರಾಯ ಕಾನ್‌ಸ್ಟಿಟ್ಯೂಟ್ ಅಸೆಂ ಚರ್ಚೆಗಳಲ್ಲಿ ವ್ಯಕ್ತವಾಗಿತ್ತು. ಪ್ರಾಚೀನ ಭಾರತದಲ್ಲಿ ಪಂಚಾಯತ್ ವ್ಯವಸ್ಥೆ ಹೇಗಿತ್ತು ಎಂಬುದು ಧರ್ಮಪಾಲ್ ಅವರ Panchayat Raj as the basis of Indian Polity ಪುಸ್ತಕದಲ್ಲಿ ಕಾಣಬರುತ್ತದೆ.

ಅದೇ ರೀತಿ ಅಸಹಕಾರ ಚಳುವಳಿಯ ಪ್ರಾರಂಭ ಗಾಂಧಿಗಿಂತ ಮುಂಚೆಯೇ ಆಗಿತ್ತು. 18ನೇ ಶತಮಾನದಲ್ಲೇ ಅದರ ಉದಾಹರಣೆಗಳು ಕಾಣಸಿಗುತ್ತವೆ. ಯಾವುದೇ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡಿದರೂ ಬ್ರಿಟಿಷ್ ಮತ್ತು ಬ್ರಿಟಿಷ್ ಪೂರ್ವದಲ್ಲಿ ಸಹಕಾರ ಚಳುವಳಿ ಇದ್ದ ಬಗ್ಗೆ ದಾಖಲೆಗಳಿವೆ. ಈ ಎಲ್ಲ ಮಾಹಿತಿಗಳು civil disobedience and Indian traditionನಲ್ಲಿ ಸಿಗುತ್ತದೆ. Indian science and technology in the eighteenth century ಪುಸ್ತಕವು ಬ್ರಿಟಿಷರು ಭಾರತಕ್ಕೆ ಬರುವ ಮುನ್ನವೇ ಇಲ್ಲಿನ ವಿಜ್ಞಾನ ಎಷ್ಟು ಮುಂದುವರೆದಿತ್ತು ಎಂಬುದನ್ನು ತಿಳಿಸುತ್ತದೆ.

ಭಾರತವು ಒಂದು ಸುಂದರ ವೃಕ್ಷವಾಗಿತ್ತು. ಅದನ್ನು ಮರುಅನ್ವೇಷಿಸಬೇಕೆಂಬುದು ಗಾಂಧಿ ಬಯಕೆಯಾಗಿತ್ತು. ಪ್ರಚೀನ ಭಾರತದ ಶಿಕ್ಷಣ ವ್ಯವಸ್ಥೆ, ಉದ್ಯೋಗ ಹಾಗೂ ಇತರ ಮೂಲಭೂತ ಅಂಶಗಳ ಬಗ್ಗೆ ಹಲವು ದಶಕಗಳ ಬಗ್ಗೆ ಅಧ್ಯಯನ ನಡೆಸಿ The Beautiful Tree ಎಂಬ ಪುಸ್ತಕ ಬರೆದರು. ಭಾರತದಲ್ಲಿದ್ದ ಉತ್ತಮ ವ್ಯವಸ್ಥೆಯನ್ನು ಬ್ರಿಟಿಷರು ಹೇಗೆ ನಾಶಪಡಿಸಿದರು ಎಂಬುದು ಇದರಲ್ಲಿ ತಿಳಿಯುತ್ತದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರು, ಶಿಕ್ಷಣ ಕ್ಷೇತ್ರದ ದಿಗ್ಗಜರು, ಸರ್ಕಾರದ ಉನ್ನತ ಅಧಿಕಾರಿಗಳು, ನೀತಿ ನಿರೂಪಕರು ಭಾಗವಹಿಸಿದರು.

  • email
  • facebook
  • twitter
  • google+
  • WhatsApp
Tags: Classic Series DharampalDharampal centenaryRashtrotthana ParishatRashtrotthana Sahitya

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ನಗರದಲ್ಲಿ ಮಿಯಾವಾಕಿ ಮಾದರಿಯ ‘ಅಮೃತವನ’ಕ್ಕೆ ಚಾಲನೆ

ನಗರದಲ್ಲಿ ಮಿಯಾವಾಕಿ ಮಾದರಿಯ 'ಅಮೃತವನ'ಕ್ಕೆ ಚಾಲನೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

VIDEO: ABPS-2014 Inauguration

VIDEO: ABPS-2014 Inauguration

March 8, 2014
‘ಮತಾಂತರಗೊಂಡ ಹಿಂದೂಗಳು ಮಾತೃಧರ್ಮಕ್ಕೆ ಹಿಂತಿರುಗಿ ಬನ್ನಿ’: ಚಿತ್ರದುರ್ಗ ಹಿಂದೂ ಸಮ್ಮೇಳನದಲ್ಲಿ ಪ್ರವೀಣ ತೊಗಾಡಿಯ

‘ಮತಾಂತರಗೊಂಡ ಹಿಂದೂಗಳು ಮಾತೃಧರ್ಮಕ್ಕೆ ಹಿಂತಿರುಗಿ ಬನ್ನಿ’: ಚಿತ್ರದುರ್ಗ ಹಿಂದೂ ಸಮ್ಮೇಳನದಲ್ಲಿ ಪ್ರವೀಣ ತೊಗಾಡಿಯ

August 16, 2015
Bengaluru: Pandit Deenadayal Memorial Lecture on Sept 25 ಸೆಪ್ಟೆಂಬರ್ 25: ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣೆ

Bengaluru: Pandit Deenadayal Memorial Lecture on Sept 25 ಸೆಪ್ಟೆಂಬರ್ 25: ಪಂಡಿತ್ ದೀನದಯಾಳ್ ಉಪಾಧ್ಯಾಯ ಸಂಸ್ಮರಣೆ

September 15, 2016
‘ಜಮ್ಮು ಮತ್ತು ಕಾಶ್ಮೀರದ ವಿಲೀನ ಸಂಪೂರ್ಣ, ಅಂತಿಮ ಮತ್ತು ಅಪರಿವರ್ತನೀಯ’: ಸತ್ಯನಾರಾಯಣ ಶಾನಭಾಗ

Jammu Kashmir Study Centre, Karnataka invites students to submit essays on the occasion of Sankalp divas

December 27, 2018

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In