• Samvada
Friday, August 12, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ವಿವೇಕಾನಂದರು ಮೌಲ್ಯಗಳಿಂದ ಸಮಾಜಕ್ಕೆ ಮಾದರಿ, ಮೂಢನಂಬಿಕೆಗಳ ಸಂಕೇತಲ್ಲ : ಸಂತೋಷ್

Vishwa Samvada Kendra by Vishwa Samvada Kendra
September 2, 2013
in News Digest
250
0
ವಿವೇಕಾನಂದರು ಮೌಲ್ಯಗಳಿಂದ ಸಮಾಜಕ್ಕೆ ಮಾದರಿ, ಮೂಢನಂಬಿಕೆಗಳ ಸಂಕೇತಲ್ಲ : ಸಂತೋಷ್

BL Santhosh, RSS Pracharak

491
SHARES
1.4k
VIEWS
Share on FacebookShare on Twitter

ಚಿಕ್ಕಮಗಳೂರು Sept 1 : ನಾವಿಂದು ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ. ನಮ್ಮ ಧನ ಸಂಪತ್ತು ಏರಿಕೆಯಾಗುತ್ತಿದೆ. ಖರ್ಚು ಮಾಡುವ ಸಾಮರ್ಥ್ಯ ಹಾಗೂ ಆರ್ಥಿಕ ಬೆಳವಣಿಗೆ ಏರುಮುಖವಾಗಿದ್ದರೂ ಒಪ್ಪೊತ್ತಿಗೂ ಊಟಕ್ಕೆ ಗತಿಯಿಲ್ಲದವರನ್ನು ಕಾಣಬಹುದು ಎಂದು ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಸಂತೋಷ್ ಅಭಿಪ್ರಾಯಿಸಿದರು.

BL Santhosh
BL Santhosh

ಅವರು ಭಾನುವಾರ ನಗರದ ಎಐಟಿ ಕಾಲೇಜಿನಲ್ಲಿ ಯುರೇಕಾ ಅಕಾಡೆಮಿಯ ಜಿಲ್ಲಾ ಸಂಯೋಜನಾ ಸಮಿತಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ ತಮ್ಮ ಆದರ್ಶ, ಮೌಲ್ಯಗಳ ಆಕರ್ಷಣೆಯಿಂದ ಸಮಾಜಕ್ಕೆ ಮಾದರಿಯಾದರೆ ವಿನಃ ವಿವೇಕಾನಂದರು ಮೂಢನಂಬಿಕೆಗಳ ಸಂಕೇತವಾಗಲಿಲ್ಲ ಎಂದು ಹೇಳಿದರು.

READ ALSO

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Swaraj@75 – Refrain from politics over Amrit Mahotsava

ಸಮಾಜವಾದಿ ನೆಲಗಟ್ಟಿನಿಂದ ಬಂದ ಕುವೆಂಪು ಸಹ ರಾಮಕೃಷ್ಣ ಪರಮ ಹಂಸರು ಹಾಗೂ ವಿವೇಕಾನಂದರ ಬಗ್ಗೆ ಬರೆದಿದ್ದು, ವಿವೇಕಾನಂದರ ಕುರಿತು ಇಂದು ಸಾಕಷ್ಟು ಕೃತಿಗಳು ಪ್ರಕಟವಾಗಿದ್ದರೂ, ಇದೀಗ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಹ ಅವರ ಕುರಿತು ನೂರಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಳ್ಳುತ್ತಿವೆ. ಅವರು ಬದುಕಿಲ್ಲದಿದ್ದರೂ ಅವರ ನುಡಿಗಳು ಪ್ರಸ್ತುತವೆನಿಸಿವೆ ಎಂದರು.

ಜಗದ್ಗುರು ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳದೆಯೇ ತಮ್ಮ ವಿಚಾರಧಾರೆಗಳಿಂದ ಸ್ವಾಮಿ ವಿವೇಕಾನಂದರು ಜಗದ್ಗುರುವಾದರೆ, ಇಂದಿನ ಕೆಲವರು ಜಗದ್ಗುರುಗಳಲ್ಲದೆ ತಮ್ಮ ಸೀಮಿತ ಕ್ಷೇತ್ರಗಳಲ್ಲಿ ಜಗದ್ಗುರುಗಳೆಂದು ಹೆಸರಿಟ್ಟುಕೊಂಡು ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ವಿವೇಕಾನಂದರನ್ನು ಅತ್ತ ಎಡಪಂಥೀಯರು, ಇತ್ತ ಬಲಪಂಥೀಯರು, ಅವರು ನಡುವಿನ ಸೌಮ್ಯವಾದಿಗಳು ಸಹ ಒಪ್ಪಿಕೊಂಡಿದ್ದಾರೆ ಎಂದರು ಭಾರತೀಯರಲ್ಲಿ ಕೊರತೆಯಾಗಿ ಪರಿಣಮಿಸಿದ್ದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸದ ಶಕ್ತಿಯನ್ನು ತುಂಬಿ ಎತ್ತರಕ್ಕೆ ಕೊಂಡೊಯ್ದವರು ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ, ನಿಲ್ಲದಿರಿ ಗುರಿ ಮುಟ್ಟುವ ತನಕ ಎನ್ನುವ ತಮ್ಮ ಘೋಷದ ಮೂಲಕ ಸರ್ವರಿಗೂ ಸಲ್ಲುವ ಸಂದೇಶ ನೀಡಿದ್ದಾರೆ ಎಂದರು.

ನಿಮ್ಮ ದೇವರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆದು 25 ವರ್ಷಗಳ ಕಾಲ ಭಾರತ ಮಾತೆಯನ್ನು ಪೂಜಿಸಿ ಎಂದುದು ಎಡಪಂಥೀಯರಿಗೆ ಇಷ್ಟವಾದರೆ, ಜಗತ್ತಿನ ಮೂಲವನ್ನು ತಿಳಿದುಕೊಳ್ಳಲು ಉಪನಿಷತ್ತುಗಳಿಗೆ ಮರಳಿ ಎನ್ನುವ ನುಡಿಗಳು ಬಲಪಂಥೀಯರಿಗೆ ಇಷ್ಟವಾಯಿತು. ಇವೆರಡನ್ನೂ ಹೊರತಾಗಿ ಬದುಕಿನ ಬಗ್ಗೆ ಹೇಳಿದ್ದು ಸೌಮ್ಯವಾದಿಗಳಿಗೆ ಹಿತವೆನಿಸಿತು ಎಂದು ಹೇಳಿದರು.

ಇಂದು ಸನ್ಯಾಸ, ಶಿಕ್ಷಣ ಸೇರಿದಂತೆ ಯಾವುದೇ ರಂಗಗಳಲ್ಲೂ ಜಾತಿ ಪರಿಗಣಿತವಾಗುತ್ತದೆ. ಆದರೆ ವಿವೇಕಾನಂದರ ವಿಚಾರಕ್ಕೆ ಬಂದಾಗ ಅವರ ಮಾತುಗಳು ಮುಖ್ಯವಾಯಿತೇ ವಿನಃ ಜಾತಿ ಗೊತ್ತೇ ಆಗಲಿಲ್ಲ. ಶಿಕ್ಷಣ ತಜ್ಞರಿಂದ ಹಿಡಿದು ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ಅವರು ಆದರ್ಶರಾಗಿದ್ದಾರೆ ಎಂದು ತಿಳಿಸಿದರು.

  • email
  • facebook
  • twitter
  • google+
  • WhatsApp

Related Posts

News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
News Digest

ಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ – ದತ್ತಾತ್ರೇಯ ಹೊಸಬಾಳೆ

July 25, 2022
Next Post
Dehradun: Seema Tamta conferred with Ph.D for her Studies on RSS’s Guruji MS Golwalkar

Dehradun: Seema Tamta conferred with Ph.D for her Studies on RSS's Guruji MS Golwalkar

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಜನ ಲೋಕಪಾಲ್ : ನಾವೇನು ಮಾಡಬೇಕು?

ಜನ ಲೋಕಪಾಲ್ : ನಾವೇನು ಮಾಡಬೇಕು?

September 11, 2011
CHIKKODI RSS Samavesh ನಮ್ಮ ಸಂಸ್ಕೃತಿ-ಪರಂಪರೆಗಳು ಜಗತ್ತಿಗೆ ಮಾದರಿ: ಚಿಕ್ಕೋಡಿ ತಾಲೂಕು ಸಮಾವೇಶದಲ್ಲಿ ಸಂತೋಷ್

CHIKKODI RSS Samavesh ನಮ್ಮ ಸಂಸ್ಕೃತಿ-ಪರಂಪರೆಗಳು ಜಗತ್ತಿಗೆ ಮಾದರಿ: ಚಿಕ್ಕೋಡಿ ತಾಲೂಕು ಸಮಾವೇಶದಲ್ಲಿ ಸಂತೋಷ್

January 21, 2015

NEWS IN BRIEF – FEB 08, 2013

February 12, 2013

Sushma Swaraj speech on Lokpal Bill in the Lok Sabha

December 24, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ
  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In