• Samvada
  • Videos
  • Categories
  • Events
  • About Us
  • Contact Us
Saturday, January 28, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ

Vishwa Samvada Kendra by Vishwa Samvada Kendra
May 9, 2020
in Articles, News Digest
250
1
ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ
491
SHARES
1.4k
VIEWS
Share on FacebookShare on Twitter

ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ

ಕೊರೊನಾ ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಅನುಭವ

ಬೆಂಗಳೂರು 9 ಮೇ 2020:

ಆದ್ಯಪತ್ರಕರ್ತ ಮಹರ್ಷಿ ನಾರದ ಜಯಂತಿಯ ಅಂಗವಾಗಿ “ಕೊರೊನಾ (ಕೊವಿಡ್‌-19) ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ” ಎನ್ನುವ ವಿಷಯದ ಬಗ್ಗೆ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಆನ್‌ಲೈನ್‌ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಈ ಗೋಷ್ಠಿಯಲ್ಲಿ ಸುವರ್ಣ ನ್ಯೂಸ್‌ ಸುದ್ದಿ ಮತ್ತು ಕಾರ್ಯಕ್ರಮಗಳ ಮುಖ್ಯಸ್ಥ ಶ್ರೀ ಅಜಿತ್‌ ಹನಮಕ್ಕನವರ್‌, ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ಹರಿಪ್ರಕಾಶ್‌ ಕೋಣೆಮನೆ, ಮೈಸೂರು ಮೂಲದ “ಸಾಧ್ವಿ” ಸಂಜೆ ದಿನಪತ್ರಿಕೆಯ ಸಂಪಾದಕ ಶ್ರೀ ಸಿ ಮಹೇಶ್ವರನ್‌. ಇಂಗ್ಲೀಷ್‌ ದಿನಪತ್ರಿಕೆ ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಬೆಂಗಳೂರು ಬ್ಯುರೋ ಮುಖ್ಯಸ್ಥರಾದ ಶ್ರೀ ರಾಮು ಪಾಟೀಲ್‌ ಪಾಲ್ಗೊಂಡು ವಿಚಾರಗಳನ್ನು ಮಂಡಿಸಿದರು. ವಿಜಯವಾಣಿ ದಿನಪತ್ರಿಕೆ ಉಪ ಮುಖ್ಯ ವರಿದಿಗಾರ ಶ್ರೀ ರಮೇಶ್‌ ದೊಡ್ಡಪುರ ಚರ್ಚೆಯನ್ನು ನಿರ್ವಹಿಸಿದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

“ಕೊರೊನಾ ಸಂದರ್ಭದಲ್ಲಿ ಮಾಧ್ಯಮದವರು ಕಲಿತಿರುವ ಪಾಠ ಒಂದು ಐತಿಹಾಸಿಕವಾದ ಅನುಭವವನ್ನು ನೀಡಿದೆ. ಹಿಂದೆಲ್ಲ ಯುದ್ಧ ಕಾಲದಲ್ಲಿ ಪತ್ರಕರ್ತರು ವರದಿ ಮಾಡುತ್ತಿದ್ದರು ಆದರೆ ಪ್ರತ್ಯಕ್ಷ ಭಾಗವಹಿಸುವುದ ಕಡಿಮೆ ಇತ್ತು. ನಾವು ಪ್ರತ್ಯಕ್ಷ ಮುಂದೆ ನಿಂತು ಒಗ್ಗಟ್ಟಿನಿಂದ ಕೆಲಸ ಮಾಡುವುದು ಹೇಗೆ ಎನ್ನುವುದನ್ನು ಈ ಸಂದರ್ಭ ಕಲಿಸಿದೆ.” ಎಂದು ವಿಜಯಕರ್ನಾಟಕದ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.

“ದೈನಂದಿನ ವರದಿಗಳನ್ನು ಬಿಟ್ಟು ಕೊರೊನಾದ ವರದಿಯನ್ನೇ ಮಾಡಿ ಜನರನ್ನು ಮಾಧ್ಯಮಗಳು ಜನರನ್ನು ಹಿಡಿದಿಟ್ಟಿಕೊಂಡಿವೆ ಅಂದರೆ ನಮ್ಮ ಕೆಲಸದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಬಹುದು.” ಮಹಾರಾಷ್ಟ್ರ, ದೆಹಲಿ ಮೊದಲೆಡೆ ಪತ್ರಿಕೆ ವಿತರಣೆ ನಿಂತುಹೋಗಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೇಗೆ ದಿನಪತ್ರಿಕೆಗಳ ಮುದ್ರಣ ಮತ್ತು ವಿತರಣೆ ಒಂದೇ ದಿನವೂ ತಪ್ಪದಂತೆ ನಡೆಸಿದ ಕುರಿತು ವಿಚಾರವನ್ನು ಹಂಚಿಕೊಂಡರು. “ಇದು ಪತ್ರಿಕೆಗಳಿಗೆ ಅಗ್ನಿಪರೀಕ್ಷೆಯ ಕಾಲ, ಈ ಕಾಲದಲ್ಲಿ ಸಮಾಜದಲ್ಲಿ ವಿಶ್ವಾಸವನ್ನು ತುಂಬುವ ಕೆಲಸವನ್ನು ಮತ್ತು ಸರ್ಕಾರ ಮತ್ತು ಸಮಾಜವನ್ನು ಬೆಸೆಯುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ” ಎಂದು ಹರಿಪ್ರಕಾಶ ಕೋಣೆಮನೆ ಹೇಳಿದರು.

ಕೊರೋನಾ ಸಂದರ್ಭದಲ್ಲಿ ಟಿವಿ ಮೀಡಿಯಾದ ವರಿಗಾರರು, ಕ್ಯಾಮೆರಾಮೆನ್‌ಗಳು ಸ್ಥಳಗಳಿಗೆ ಪ್ರತ್ಯಕ್ಷ ಹೋಗಿ ವರದಿ ಮಾಡುವಾಗ ಆದ ಅನುಭವಗಳನ್ನು ಮತ್ತು ಸವಾಲುಗಳನ್ನು ಅಜಿತ್‌ ಹನಮಕ್ಕನವರ್‌ ಹಂಚಿಕೊಂಡರು. ‘ಕೊರೊನಾ ಅನುಭವದ ನಂತರ ಮುಂದಿನ ದಿನಗಳಲ್ಲಿಯೂ ಮಾಧ್ಯಮ ಕಡಿಮೆ ಸಿಬ್ಬಂದಿಯೊಂದಿಗೆ ವರ್ಕ್‌ ಫ್ರಮ್ ಹೋಮ್‌ಗೆ ಬದಲಾಗುವಂತರ ಪರಿಸ್ಥಿತಿ ಬರಬಹುದು ಎಂದು” ಅಜಿತ್‌ ಹನಮಕ್ಕನವರ ಹೇಳಿದರು.

ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಬ್ಯುರೋ ಮುಖ್ಯಸ್ಥರಾದ ರಾಮು ಪಾಟಿಲ್‌ ಮಾತನಾಡುತ್ತ “ಕೊರೊನಾ ಕಾರಣದಿಂದ ಸರ್ಕಾರ ಲಾಕ್‌ಡೌನ್‌ ಜಾರಿಮಾಡಬೇಕಾದ ಸಂದರ್ಭ ಬಂದಾಗ ಜನರಿಗೆ ವಾಸ್ತವ ಸಂಗತಿಗಳನ್ನು ತಲುಪಿಸಿ ಸಮಾಜದಲ್ಲಿ ಗಾಬರಿ ಆಗದ ಹಾಗೆ, ಎಲ್ಲರೂ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ದ ಮಾಡಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದವು, ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬುವ ಸುಳ್ಳು ಸುದ್ದಿಗಳ ಸವಾಲು ಎದುರಿಸುವಲ್ಲಿಯೂ ಮಾಧ್ಯಗಳ ಪಾತ್ರ ಹಿರಿದು” ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ಪತ್ರಿಕೆಗಳು ಈ ಸಂದರ್ಭದಲ್ಲಿ ನಿರ್ವಹಿಸಿದ ಪಾತ್ರ ಮತ್ತು ಎದುರಿಸಿದ ಸವಾಲುಗಳನ್ನು ಮೈಸೂರು ಮೂಲದ “ಸಾಧ್ವಿ” ಪತ್ರಿಕೆಯ ಸಂಪಾದಕ ಮಹೇಶ್ವರನ್‌ ಹಂಚಿಕೊಂಡರು. “ಈ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಕೆಲಸವನ್ನು ಮಾಡಿವೆ. ದೇಶವನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯವನ್ನು ಮಾಡಬೇಕು ಎನ್ನುವ ಭಾವನೆ ಎಲ್ಲರಲ್ಲಿ ಬೆಳೆಸಲು ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿದವು” ಎಂದು ಅವರು ಅನಿಸಿಕೆ ವ್ಯಕ್ತ ಪಡಿಸಿದರು.

ಒಟ್ಟಾರೆಯಾಗಿ ಕೊವಿಡ್‌-19ರ ಕಾರಣದಿಂದ ದೇಶ ಎದುರಿಸುತ್ತಿರುವ ಸನ್ನಿವೇಶದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆಯು ಹೆಚ್ಚಿದೆ ಎನ್ನುವುದು ಮಾತನಾಡಿದ ಹಿರಿಯ ಪತ್ರಕರ್ತರ ಅನುಭವವಾಗಿದೆ ಹಾಗೆಯೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೊಸರೀತಿಯ ಅಭಿವ್ಯಕ್ತಿ ಕೊಟ್ಟ ಸಾಮಾಜಿಕ ಜಾಲ ಮಾಧ್ಯಮಗಳ ನಡುವೆ ಈ ವಿಶ್ವಾಸಾರ್ಹತೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮಾಧ್ಯಮಗಳ ಮೇಲೆ ಇದೆ ಎನ್ನುವ ಅನಿಸಿಕೆಯೂ ಈ ಸಂದರ್ಭದಲ್ಲಿ ವ್ಯಕ್ತವಾಯಿತು.

ವೈಶಾಖ ಕೃಷ್ಣ ಪಕ್ಷ ದಿವಸ ಪರಬ್ರಹ್ಮನ ಮಾನಸ ಪುತ್ರ ಮಹರ್ಷಿ ನಾರದರು ಜನಿಸಿದರು ಎಂದು ಹೇಳಲಾಗುತ್ತದೆ. ತ್ರಿಲೋಕ ಸಂಚಾರಿಯಾದ ನಾರದ ಮಹರ್ಷಿಗಳು ಆದ್ಯಪತ್ರಕರ್ತ ಎಂದೇ ಗೌರವಿಸಲಾಗುತ್ತದೆ.

ವರದಿ: ಸತ್ಯನಾರಾಯಣ ಶಾನುಭಾಗ್

  • email
  • facebook
  • twitter
  • google+
  • WhatsApp
Tags: Narada Jayanti 2020

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
Next Post
‘God Bless You and the RSS!’. A heartwarming story from Maharashtra

'God Bless You and the RSS!'. A heartwarming story from Maharashtra

Comments 1

  1. shivakumar says:
    3 years ago

    ತುಂಬಾ ಉತ್ತಮವಾದ ಸಂವಾದ ನಡೆಯಿತು .ಅನೆಕ ಹೊಸ ವಿಷಯಗಳು ತಿಳಿದವು. ನಾರದ ಜಯಂತಿ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS leader Bhaiyaji Joshi speaks Hindu Terror stigma

February 20, 2011
ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಅವರ ಸಮುದಾಯಕ್ಕೆ ಕಾಂಗ್ರೆಸ್ ಕೊಟ್ಟ ಸಂದೇಶವಾದರೂ ಏನು?

ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಅವರ ಸಮುದಾಯಕ್ಕೆ ಕಾಂಗ್ರೆಸ್ ಕೊಟ್ಟ ಸಂದೇಶವಾದರೂ ಏನು?

November 28, 2021
CHICAGO: Dharma Bee National Finale Concluded

CHICAGO: Dharma Bee National Finale Concluded

July 2, 2013
PM Naendra Modi, RSS – Sanghparivar leaders paid tributes to Ashok Singhal; final rites held at Nigambodh Ghat

PM Naendra Modi, RSS – Sanghparivar leaders paid tributes to Ashok Singhal; final rites held at Nigambodh Ghat

November 18, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In