• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಪ್ರತಿನಿಧಿ ಸಭಾ: ಆರೆಸ್ಸೆಸ್ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪತ್ರಿಕಾಗೋಷ್ಠಿ

Vishwa Samvada Kendra by Vishwa Samvada Kendra
March 7, 2014
in News Digest, RSS ABPS Baitak-2014
250
0
Sarasanghachalak Mohan Bhagwat inaugurates RSS National Meet ABPS in Bangalore
491
SHARES
1.4k
VIEWS
Share on FacebookShare on Twitter

ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಪ್ರಥಮ ದಿವಸ:

ಮಾಧ್ಯಮಗಳಿಗೆ ಸಂಘಕಾರ್ಯದ ವಿವರಣೆ ನೀಡಿದ ದತ್ತಾತ್ರೇಯ ಹೊಸಬಾಳೆ

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

BKR_7283

ಬೆಂಗಳೂರು ಮಾರ್ಚ ೦೭: ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ’ಇಂದು ಪ. ಪೂ. ಸರಸಂಘಚಾಲಕರು ದೀಪ ಬೆಳಗಿ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಮೂರು ಬಾರಿ ಪ್ರತಿನಿಧಿ ಸಭಾ ನಡೆದಿದೆ. ಇತ್ತೀಚಿನ ವರ್ಷಗಳಲ್ಲ ಕರ್ನಾಟಕದಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿಯೂ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಜರುಗಿತ್ತು. ಸುಮಾರಿ ೧೩೮೦ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿರುವ ಆರೆಸ್ಸೆಸ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ಕಳೆದ ಒಂದು ವರ್ಷಗಳ ಸಂಘಕಾರ್ಯದ ಬೆಳವಣಿಗೆ, ಕಾರ್ಯಕ್ರಮಗಳು, ರಾಷ್ಟ್ರೀಯ ಜೀವನದಲ್ಲಿ ಸಂಘಕಾರ್ಯದ ಪರಿಣಾಮಗಳ ಮೂಲ್ಯಾಂಕನ ಜೊತೆಗೆ ಪ್ರಸಕ್ತ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಗುತ್ತದೆ. ಹಾಗೂ ಮುಂದಿನ ಒಂದು ವರ್ಷದ ಕಾರ್ಯಕ್ರಮಗಳ ಯೋಜನೆ ನಡೆಯಲಿದೆ. ಸಂWಕಾರ್ಯದ ಜೊತೆಗೆ ಸೇವಾ, ಗ್ರಾಮವಿಕಾಸ, ಸಮರಸತಾ, ರಾಷ್ಟ್ರೀಯ ಸುರಕ್ಷೆ ಮೊದಲಾದ ಅನೇಕ ಕಾರ್ಯಗಳಲ್ಲಿ ಸಂಘದ ಸ್ವಯಂಸೇವಕರು ಕೈಗೊಂಡಿರುವ ಕೆಲಸಗಳ ಕುರಿತೂ ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

’ಸಂಘಕಾರ್ಯದ ಬೆಳವಣಿಗೆಯನ್ನು ನೋಡಿದರೆ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ೨೦೦೦-೨೫೦೦ ಶಾಖೆಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಹಂತಗಳಲ್ಲಿ ಸಂಘಕಾರ್ಯ ವಿಸ್ತರಣಾ ಯೋಜನೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ, ೨೦೧೫ರವರೆಗೆ ಮೊದಲ ಹಂತ, ೨೦೧೮ರ ವರೆಗೆ ೨ನೇ ಹಂತ ಮತ್ತು ೨೦೨೫ರವರೆಗೆ ಮೂರನೇ ಹಂತದ ವಿಸ್ತರಣೆಯ ಯೋಜನೆ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ ೨೦೧೫ರ ಹೊತ್ತಿಗೆ ನಮ್ಮ ಎಲ್ಲ ಕಾರ್ಯದಲ್ಲಿ ೧೦-೧೨% ವಿಸ್ತರಣೆಯಾಗಬಹುದೆಂದು ಅನ್ನಿಸುತ್ತದೆ. ಸಂಘಕಾರ್ಯದ ಎಲ್ಲ ಆಯಾಮಗಳಲ್ಲಿ, ವಿಶೇಷವಾಗಿ ಸೇವಾ ಸಂಭಂಧಿತ ಚಟುವಟಿಕೆಗಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.’ ಎಂದು ಅವರು ಅಭಿಪ್ರಾಯಪಟ್ಟರು.

’ಈ ಸಂದರ್ಭದಲ್ಲಿ ಒಂದು ಉದಾಹರಣೆಯನ್ನು ನೀಡುವುದಾದರೆ, ೨೦೧೩ರ ಜನವರಿಯಿಂದ ಒಂದು ವರ್ಷಗಳ ಕಾಲ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷಾಚರಣೆಯನ್ನು ದೇಶದಾದ್ಯಂತ ಆಚರಿಸಲಾಯಿತು. ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರು ಸಂಪೂರ್ಣ ತೊಡಗಿಕೊಂಡರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಸ್ತುತತೆ ಮತ್ತು ಸಂದೇಶಗಳನ್ನು ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ಸ್ವಯಂಸೇವಕರು ಮಾಡಿದರು. ಈ ಕಾರ್ಯಕ್ರಮಗಳ ಆಯೋಜನೆಯಲ್ಲಿ ಯುವಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದರು.  ನಾಗಪುರದಲ್ಲಿ ನಡೆದ ಇಂತಹ ಒಂದು ಕಾರ್ಯಕ್ರಮದಲ್ಲಿ ಸುಮಾರು ೧೫೦೦೦ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಮತ್ತು ತದನಂತರ ಗ್ರಾಮವಿಕಾಸ, ಸಮರಸತೆ, ಸೇವೆ ಮೊದಲಾದ ಸಮಾಜಹಿತ ಕೆಲಸಗಳಲ್ಲಿ ತೊಡಗಿಕೊಳ್ಳುವ ಶಪಥ ಸ್ವೀಕರಿಸಿದರು’ ಎಂದು ಶ್ರೀ ಹೊಸಬಾಳೆ ನುಡಿದರು.

’ವಿವೇಕಾನಂದರ ೧೫೦ನೇ ಜನ್ಮ ವರ್ಷಾಚರಣೆಯ ನಿಮಿತ್ತ ಕಳೆದ ನವೆಂಬರಿನಲ್ಲಿ ನಡೆದ ಇನ್ನೊಂದು ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ೧೦೫ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗವಹಿಸಿದರು. ಪರಿಣಾಮವಾಗಿ ಶೈಕ್ಷಣಿಕ ಪಠ್ಯಕ್ರಮದಲ್ಲಿ ವಿವೇಕಾನಂದರ ವಿಚಾರಗಳನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿಸುವ ಯೋಜನೆ ಮಾಡಿದರು.’ ಎಂದು ಅವರು ಹೇಳಿದರು.

’ರಾಷ್ಟ್ರದೆಲ್ಲಡೆ ಪರಿವರ್ತನೆಯ ವಾತಾವರಣ ಸ್ಟಷ್ಟವಾಗಿ ಗೋಚರವಾಗುತ್ತಿದೆ. ಪ್ರಜಾಪ್ರಭುತ್ವದ ಮಹತ್ವದ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಸಮಾಜಹಿತ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ.  ಪ್ರಜಾಪ್ರಭುತ್ವವನ್ನು ಸಧೃಢಗೊಳಿಸುವ ಕಾರ್ಯದಲ್ಲಿ ಸಂಘದ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿದ್ದಾರೆ. ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

’ಹದಿನಾರು ವರ್ಷದ ಸಣ್ಣ ಆಯುವಿನಲ್ಲೇ ಬ್ರಿಟಿಷ ಆಳ್ವಿಕೆಯ ವಿರುದ್ಧ ಹೋರಾಡಿ ಜೈಲು ಶಿಕ್ಷೆಗೂ ಗುರಿಯಾದ ನಾಗಾಲ್ಯಾಂಡಿನ ಕ್ವೀನ್ ಗೇಡಿನ್‌ಲಿಯುಳ ಜನ್ಮ ಶತಮಾನವನ್ನು ಸಂಘ ಈ ವರ್ಷ ಆಚರಿಸುತ್ತಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಆಕೆ ಮತಾಂತರದ ವಿರುದ್ಧವೂ ಹೋರಾಡಿದಳು. ಕಳೆದ ೬೫ ವರ್ಷಗಳಿಂದ ಪೂರ್ವೋತ್ತರ ರಾಜ್ಯಗಳಲ್ಲಿ ಸಂಘದ ಚಟುವಟಿಕೆಗಳು ನಡೆದಿವೆ’ ಎಂದು ಶ್ರೀ ಹೊಸಬಾಳೆ ನುಡಿದರು.

ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ದತ್ತಾತ್ರೇಯ ಹೊಸಬಾಳೆ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ಸಂಘದ ನಿಲುವನ್ನು ಸ್ಪಷ್ಟಪಡಿಸಿದರು.

ಪ್ರ. ದೇಶದಲ್ಲಿ ಬದಲಾವಣೆಯ ಅಲೆ ಇದೆ ಎಂದು ಹೇಳಿದಿರಿ. ಇದರಲ್ಲಿ ಸಂಘದ ಪಾತ್ರವೇನು ? ಮೋದಿಯವರ ಬಗ್ಗೆ ಸಂಘದ ಅಭಿಪ್ರಾಯವೇನು?

ಉ: ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಯುವಕರು ಪ್ರೇರಣೆ ಪಡೆಯಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳ ಪ್ರಯತ್ನ ನಡೆದಿದೆ, ಇದು ನಮ್ಮ ಶಕ್ತಿ ಕೂಡ ಹೌದು. ಉತ್ತಮ ಆಡಳಿತ ಕಾರ್ಯನಿರ್ವಹಣೆ ಸರ್ಕಾರದ ಕರ್ತವ್ಯವಾಗಿದೆ. ಈ ದಿಕ್ಕಿನಲ್ಲಿ ಬದಲಾವಣೆಯ ವಾತಾವರಣ ಕಂಡುಬರುತ್ತಿದೆ. ನರೇಂದ್ರ ಮೋದಿ ಒಬ್ಬ ಸ್ವಯಂಸೇವಕರಾಗಿದ್ದು ಅವರು ಸಮರ್ಥ ಆಡಳಿತಗಾರ ಎಂದು ನಿರೂಪಿಸಿದ್ದಾರೆ.

ಪ್ರ: ಆಮ್ ಆದಮಿ ಪಾರ್ಟಿಯ ಪ್ರಚಾರ ಪಡೆದುಕೊಳ್ಳುತ್ತಿದೆ. ಆಪ್ ಬಗ್ಗೆ ಸಂಘದ ಅಭಿಪ್ರಾಯವೇನು?

ಉ: ಪ್ರಜಾಪ್ರಭುತ್ವದಲ್ಲಿ ಅನೇಕ ಪಕ್ಷಗಳು ಹುಟ್ಟುತ್ತವೆ, ಕೆಲವು ನಿಲ್ಲುತ್ತವೆ ಇನ್ನು ಕೆಲವು ಅಳಿಯುತ್ತವೆ. ಆದರೆ ಅವರ ಕಾರ್ಯವನ್ನು ನಾವು ಅಳೆಯಬೇಕು. ದೆಹಲಿಯಲ್ಲಿ ೪೯ ದಿನಗಳು ಆಪ್ ಪಕ್ಷ ಹೇಗೆ ಆಡಳಿತ ನಡೆಸಿತು ಎನ್ನುವುದು ನಮ್ಮ ಕಣ್ಣ ಮುಂದಿದೆ ಮಾಧ್ಯಮಗಳು ಇದಕ್ಕೆ ಸಾಕ್ಷಿಯಾಗಿವೆ. ಆದ್ದರಿಂದ ಆಪ್ ಆಗಲಿ ಅಥವಾ ಅನ್ಯ ಯಾವುದೇ ಪಕ್ಷವಾಗಲಿ ಜನರು ಅವರ ಕಾರ್ಯವನ್ನು ಸರಿಯಾಗಿ ಅಳೆಯಬೇಕು. ಈ ವಿಷಯದಲ್ಲಿ ಯಾರು ಚೆನ್ನಾಗಿ ಆಡಳಿತ ನಡೆಸಬಲ್ಲರು? ಎಂದು ಜನತೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಎಂದು ನಮಗೆ ವಿಶ್ವಾಸವಿದೆ.

ಪ್ರ: ಹಿರಿಯ ರಾಜಕಾರಣಿಗಳು ನಿವೃತ್ತಿ ಹೊಂದಿ ಕಿರಿಯರಿಗೆ ಅವಕಾಶ ಮಾಡಿಕೊಡಬೇಕೆಂಬುದು ಆರೆಸ್ಸೆಸ್ಸಿನ ವಾದವಾಗಿದೆ. ಈ ನಿಲುವಿಗೆ ಇಂದಿಗೂ ಸಂಘವು ಬದ್ಧವಾಗಿದೆಯೇ?

ಉ: ನಿವೃತ್ತಿಯ ಬಗ್ಗೆ ಸಂಘ ಎಂದೂ ಚರ್ಚೆಮಾಡಿಲ್ಲ. ನಿವೃತ್ತಿಯ ನಿರ್ಧಾರವನ್ನು ವೈಯಕ್ತಿಕ ನೆಲೆಯಲ್ಲಿ ಕೈಗೊಳ್ಳಬೇಕು. ಯುವಕರಿಗೆ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಅವಕಾಶಗಳು ಸಿಗಬೇಕು ಎನ್ನುವುದು ಸಂಘದ ನಿಲುವಾಗಿದೆ.

ಪ್ರ: ಪೂರ್ವೋತ್ತರ ರಾಜ್ಯಗಳಲ್ಲಿ ಸಂಘ ನಡೆಸುತ್ತಿರುವ ಕೆಲಸಗಳು ಬಿಜೆಪಿಯನ್ನು ಸದೃಢಗೊಳಿಸುವ ರಾಜಕೀಯ ಅನಿವಾರ್ಯತೆಯಿಂದಾಗಿ ನಡೆದಿದೆಯೇ?

ಉ:ಕಳೆದ ಐದು ದಶಕಗಳ ಹಿಂದಿನಿಂದಲೇ ಪೂರ್ವೋತ್ತರ ರಾಜ್ಯಗಳಲ್ಲಿ ಸಂಘಕಾರ್ಯ ನಡೆದಿದೆ. ಪೂರ್ವೋತ್ತರ ರಾಜ್ಯಗಳಲ್ಲಿ ಸಂಘದ ಸ್ವಯಂಸೇವಕರು ಅನೇಕ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಉದಾಹರಣೆಗೆ ಜನರ ಸ್ವಾಸ್ಥ್ಯ ಸಂವರ್ಧನೆಗಾಗಿ ’ಆರೋಗ್ಯ ಮಿತ್ರ’ ಎನ್ನುವ ಸೇವಾ ಪ್ರಕಲ್ಪ ನಡೆಯುತ್ತಿದೆ. ಅಲ್ಲದೇ ನೂರಾರು ಶಾಲೆಗಳನ್ನು ನಡೆಸಲಾಗುತ್ತಿದೆ, ಇವೆಲ್ಲ ಯಾವುದೇ ರಾಜಕೀಯ ಅನಿವಾರ್ಯತೆಯಿಂದ ನಡೆಸುತ್ತಿರುವ ಕಾರ್ಯಕ್ರಮಗಳಲ್ಲ. ಪೂರ್ವೋತ್ತರ ಪ್ರದೇಶಗಳು ಮತ್ತು ದೇಶದ ಇತರ ಭಾಗದ ನಡುವೆ ಒಂದು ತರಹದ ಮಾನಸಿಕ ಅಂತರವಿದೆ. ಅದನ್ನು ತೊಡೆದುಹಾಕಬೇಕಾಗಿದೆ, ಇದು ಯಾವದೇ ರಾಜಕೀಯದ ಉದ್ಧೇಶವಲ್ಲ, ಇದು ದೇಶವನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸುವ ಕಾರ್ಯ. ನಮ್ಮ ಕಾರ್ಯದ ಉದ್ಧೇಶ ಅನೇಕ ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾದ ಪೋರ್ವೋತ್ತರ ರಾಜ್ಯಗಳ ಅಭಿವೃದ್ಧಿ.

ಪ್ರ: ಸಂಘ ವ್ಯಕ್ತಿ ವೈಭವೀಕರಣ ಆಧರಿಸಿದ ಪ್ರಚಾರವನ್ನು ವಿರೋಧಿಸರುವ ತತ್ವದಿಂದ ದೂರ ಬಂದಿದೆಯೇ? ಮೋದಿ ಕೇಂದ್ರಿತ ಪ್ರಚಾರದ ಬಗ್ಗೆ ಸಂಘದ ನಿಲುವೇನು?

ಉ: ಅಭ್ಯರ್ಥಿಗಳ ಆಯ್ಕೆ ಪಕ್ಷದ ವಿಶೇಷಾಧಿಕಾರ. ದೇಶ ಮತ್ತು ಸಮಾಜದ ಕುರಿತು ಸಂಘ ಕೇವಲ ತನ್ನ ಅಭಿಪ್ರಾಯಗಳನ್ನು ತಿಳಿಸುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಪ್ರಣಾಳಿಕೆಯನ್ನು ನಿರ್ಧರಿಸುವುದು ಪಕ್ಷದ ಕೆಲಸವಾಗಿದೆ. ಅಭ್ಯರ್ಥಿಗಳನ್ನು ಆರಿಸುವ ಸಲುವಾಗಿ ಆರೆಸ್ಸೆಸ್ ಬಿಜೆಪಿಗೆ ಸಲಹೆಯನ್ನು ನೀಡುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮತದಾನದ ಪ್ರಮಾಣ ಹೆಚ್ಚಬೇಕು, ಜನತೆ ತಮ್ಮ ಅಧಿಕಾರವನ್ನು ಸಮಾಜದ ಹಿತದಲ್ಲಿ ಚಲಾಯಿಸಬೇಕು ಎನ್ನುವುದು ಸಂಘದ ಆಶಯವಾಗಿದೆ.

ಪತ್ರಿಕಾ ಸಂವಾದದ ಸಂದರ್ಭದಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ ಡಾ ಮನಮೋಹನ ವೈದ್ಯ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ ನಂದಕುಮಾರ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ವಾದಿರಾಜ, ವಿಶ್ವಸಂವಾದ ಕೇಂದ್ರ ಕರ್ನಾಟಕದ ಸಂಯೋಜಕ ರಾಜೇಶ ಪದ್ಮಾರ ಉಪಸ್ಥಿತರಿದ್ದರು. ಡಾ. ಗಿರಿಧರ ಉಪಾಧ್ಯಾಯ- ಅಸಿಸ್ಟಂಟ್ ಪ್ರೊಫೆಸರ್ ಕಿಮ್ಸ ಬೆಂಗಳೂರು, ಸ್ವಾಗತಿಸಿದರು.

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
RSS functionary Ram Madhav led delegation files complaint against Congress leader Rahul Gandhi

RSS functionary Ram Madhav led delegation files complaint against Congress leader Rahul Gandhi

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

‘Akhand Bharat Sankalp Diwas’ Program held across major cities of the nation

‘Akhand Bharat Sankalp Diwas’ Program held across major cities of the nation

August 15, 2014
BJP Chief Amit Shah visits Smruti Mandir, Samadhi of RSS founder Dr KB Hedgewar at Nagpur

BJP Chief Amit Shah visits Smruti Mandir, Samadhi of RSS founder Dr KB Hedgewar at Nagpur

July 22, 2014
Sarasanghachalak Mohan Bhagwat inaugurates RSS National Meet ABPS in Bangalore

RSS Annual Report by Sarakaryavah Bhaiyyaji Joshi at ABPS-2014

March 7, 2014
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಂದ  ಅರ್ಜಿ ಅಹ್ವಾನ ; ಪಿಯು, ಪದವಿ ಜೊತೆಗೆ ಭಾರತೀಯ ಆಡಳಿತ ಸೇವೆ IAS ಪ್ರವೇಶ ಪರೀಕ್ಷೆಗೆ ತರಬೇತಿ.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಂದ ಅರ್ಜಿ ಅಹ್ವಾನ ; ಪಿಯು, ಪದವಿ ಜೊತೆಗೆ ಭಾರತೀಯ ಆಡಳಿತ ಸೇವೆ IAS ಪ್ರವೇಶ ಪರೀಕ್ಷೆಗೆ ತರಬೇತಿ.

April 16, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In