• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಕೋವಿಡ್ ಸಂಕಷ್ಟದಲ್ಲಿ ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆರೆಸ್ಸೆಸ್ ಸ್ವಯಂಸೇವಕರು

Vishwa Samvada Kendra by Vishwa Samvada Kendra
May 15, 2021
in Others
250
0
ಕೋವಿಡ್ ಸಂಕಷ್ಟದಲ್ಲಿ ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆರೆಸ್ಸೆಸ್ ಸ್ವಯಂಸೇವಕರು
491
SHARES
1.4k
VIEWS
Share on FacebookShare on Twitter

ಸುದ್ದಿಯಾಗದ್ದು… ಆಗಬೇಕಾದ್ದು!
– ಹರ್ಷವರ್ಧನ್ ಶೀಲವಂತ, ಪತ್ರಕರ್ತರು, ಪತ್ರಿಕೋದ್ಯಮ ಪ್ರಾಧ್ಯಾಪಕರು, ಧಾರವಾಡ.

ವ್ಯವಸ್ಥೆ ಬಗ್ಗೆ ರೇಜಿಗೆ ಹುಟ್ಟಿ, ಇದ್ದವರಿಗೆ, ಉಳ್ಳವರಿಗೆ ಎಲ್ಲ ಇದೆ ಎಂಬ ಖಾತ್ರಿ ಅಣಕವಾಡುತ್ತಿರುವಾಗ, ಧಾರವಾಡದಲ್ಲಿ ನನ್ನ ಕೆಲ ಮಿತ್ರರು ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಸುದ್ದಿ, ಜೀವನ ಒರತೆಯನ್ನು ಜೀವಂತವಾಗಿಟ್ಟ ಸಮಾಧಾನ ನಾನು ಅನುಭವಿಸಿದೆ.
ಮಿತ್ರರಾದ ಸಂತೋಷ ಪೂಜಾರಿ, ಸೋಮೇಶ ಪಟ್ಟಣಕೋಡಿ, ಮಂಜುನಾಥ ಮಕ್ಕಳಗೇರಿ, ಗಣೇಶ್ ಭೋಸ್ಲೆ, ಲಿಂಗರಾಜ ನಾಯ್ಕರ್, ನಾಗರಾಜ ಬೈಲ್ ಗಾಣಗೇರ, ಹನುಮಂತ ಕಡೇಮನಿ ಹಾಗೂ ಗುರುಶಾಂತಯ್ಯ ಹಿರೇಮಠ ಸೇರಿ, ಸಂಗೊಳ್ಳಿ ರಾಯಣ್ಣನಗರದಲ್ಲಿ ೬೧ ವರ್ಷದ ನಾಗರಾಜ ಸಜ್ಜನ ಎಂಬ ವ್ಯಕ್ತಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟು, ೩ ದಿನಗಳಾಗಿವೆ! ಎಂಬ ಹೃದಯವಿದ್ರಾವಕ ಮಾಹಿತಿ ಬೆನ್ನು ಹತ್ತಿ ಖಾತ್ರಿ ಪಡಿಸಿಕೊಳ್ಳಲು ಅಲ್ಲಿಗೆ ತೆರಳುತ್ತಾರೆ.

ಅಕ್ಕಪಕ್ಕದವರ ಪ್ರಕಾರ, ಪಾಳು ಬಿದ್ದ ಶೆಡ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಬದುಕುತ್ತಿರುವ ನಾಗರಾಜ್, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಕ್ಕಪಕ್ಕದವರು ನೀಡುವ ತಿಂಡಿ, ಊಟ ಉಂಡು ತನ್ನ ಪಾಡಿಗೆ ತಾನು ಇದ್ದವರು. ಇತ್ತೀಚೆಗೆ ಚಿತ್ತ ಭ್ರಮಣೆ ಆದಂತೆ ವರ್ತಿಸಲು ಆರಂಭಿಸಿದ್ದರಂತೆ. ಮನೆಯಿಂದ ಆಚೆ ಬರದೇ ಇದ್ದುದರಿಂದ, ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆ, ‘ಸತ್ತೇ ಹೋದ’ ಎಂದು ಮಾಹಿತಿ ನೀಡಿದ್ದರು!

ಮನೆ ಬಾಗಿಲು ತೆರೆದು ಒಳ ಹೋದ ನನ್ನ ಗೆಳೆಯಂದಿರಿಗೆ ಕಂಡದ್ದು, ಜೀವಂತ ವ್ಯಕ್ತಿಯ ಪಶು ಸದೃಷ ಜೀವನ. ಬೆತ್ತಲೆಯಾಗಿ ಮಲಗಿ, ಅನ್ನ-ನೀರಿಲ್ಲದೇ ಸಾವಿನ ಮನೆಯ ಕದ ಹಂತಹಂತವಾಗಿ ತಟ್ಟುತ್ತ ಬಂದಿದ್ದ ನಾಗರಾಜ ಸಜ್ಜನ ಕಂಡರು.

ಕೂಡಲೇ ಅವರನ್ನು ಉಪಚರಿಸಿ, ಬಟ್ಟೆ ತೊಡಿಸಿ, ಸಂಬಂಧಿಕರ ಮಾಹಿತಿ ಪಡೆದು ಸಂಪರ್ಕಿಸಿದರೆ, ಹುಬ್ಬಳ್ಳಿಯಲ್ಲಿರುವ ಅವರ ತಮ್ಮ ಸಿಕ್ಕರು. ಸಂಬಂಧಿಕರ ಆಸ್ತಿಯಲ್ಲಿ ಬದುಕುತ್ತಿರುವ ಅಣ್ಣನ ವೃತ್ತಾಂತ ಅವರೇ ವಿವರಿಸಿದರು. ಕೂಡಲೇ ಆಂಬುಲೆನ್ಸ್ ತಂದು, ಅವರನ್ನು ಹತ್ತಿಸಿಕೊಂಡು, ಸಿವಿಲ್ ಆಸ್ಪತ್ರೆಗೆ ತಂದು ಕೋವಿಡ್ ಸೋಂಕು ಖಾತ್ರಿ ಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಿ, ಸಕಾಲಿಕ ಔಷಧಿ, ಗ್ಲುಕೋಸ್, ಸಲೈನ್ ಒದಗಿಸಿದರು.
ಬಳಿಕ ಧಾರವಾಡದ ಮಾನಸಿಕ ಆರೋಗ್ಯ ಚಿಕಿತ್ಸೆ ಆಸ್ಪತ್ರೆಗೆ ಕರೆ ತಂದು, ದಾಖಲಿಸಿ, ಸಂಬಂಧಿಕರಿಗೆ ಮಾಹಿತಿ ನೀಡಿ, ಚಿಕಿತ್ಸೆ, ಆಪ್ತ ಸಮಾಲೋಚನೆ ಫಾಲೋ ಅಪ್ ವ್ಯವಸ್ಥೆ ಮಾಡುವಂತೆ ತಿಳಿಸಿ, ನಿತ್ಯ ಒಂದು ಬಾರಿ ತಾವೂ ಸ್ವತಃ ಅವರ ಆರೋಗ್ಯದ ಸ್ಥಿತಿ-ಗತಿ ಮೇಲೆ ನಿಗಾವಹಿಸಿದ್ದಾರೆ.

ಎರಡನೇ ದಿನವಾದ ಇಂದು ನಾಗರಾಜ ಅವರ ಆರೋಗ್ಯ ಸ್ಥಿರವಾಗಿದೆ. ಚೇತರಿಸಿಕೊಂಡಿದ್ದಾರೆ. ಕೋವಿಡ್ -೧೯ ಮ್ಯೂಟೇಷನ್ ವೈರಸ್ ಮತ್ತು ಬ್ಲ್ಯಾಕ್ ಮ್ಯೂಕಸ್ ಕೂಡ ಹಬ್ಬಿ, ಹರಡುತ್ತಿರುವ ಈ ಕಾಲ ಘಟ್ಟದಲ್ಲಿ ತಮ್ಮ ವಯಕ್ತಿಕ ಆರೋಗ್ಯ, ಕುಟುಂಬದ ಭವಿಷ್ಯ ಕೂಡ ಲೆಕ್ಕಿಸದೇ ಮನುಷ್ಯತ್ವ ಬದುಕಿಸುವ ಕೆಲಸ ಮಾಡುತ್ತಿದ್ದಾರೆ. “ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ” ಎಂಬ ಮಾತನ್ನು ಚರ್ಮವಾಗಿಸಿಕೊಂಡವರು, ಇವರು ಧಾರವಾಡದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು.

ಇಲ್ಲಿಯ ವರೆಗೆ ಧಾರವಾಡ ನಗರ ಮತ್ತು ಗ್ರಾಮೀಣ ಸೇರಿ ಕಳೆದ ೭ ದಿನಗಳಲ್ಲಿ, ೧೭ ಶವಗಳಿಗೆ ಈ ತಂಡ ಮುಕ್ತಿ ದೊರಕಿಸಿದೆ. ಆ ಪೈಕಿ, ೪ ಜನ ಕೋವಿಡ್ ಸೋಂಕಿತರು. ಇವರು, ತಮ್ಮ ನಡೆಯಿಂದ ಸಾವಿಗೊಂದು ಘನತೆ ಇದೆ ಎಂದು ತೋರಿಸಿದವರು. ಇಹದ ವ್ಯಾಪಾರ ಮುಗಿಸಿದ ಆತ್ಮಗಳಿಗೆ ಸದ್ಗತಿ, ಅವರ ಕುಟುಂಬಕ್ಕೆ ನೆಮ್ಮದಿ ಕರುಣಿಸಿದ, ಕೋವಿಡ್ ಕೋವಿದರು. ತಮ್ಮ ವೃತ್ತಿ, ವ್ಯಾಪಾರ, ವ್ಯವಸಾಯ ಎಲ್ಲ ಬದಿಗೊತ್ತಿ, ಜೀವ ಒತ್ತೆ ಇಟ್ಟು, ಈ ಮಿತ್ರರು ಮನುಷ್ಯತ್ವದಲ್ಲಿ ನಮ್ಮ ನಂಬಿಕೆ ಉಳಿಸಿದ್ದಾರೆ. ಅವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಅಕ್ಷಯವಾಗಿಸಲಿ..
ನಮ್ಮ ಲೋಕ ಸಂಸಾರವನ್ನು ಬೆಳಗಿಸುವ ಇಂತಹ ಸಮಾಜವೊಂದಿಗರಾದ ಹನುಮನ ನಿಷ್ಠೆಯ ದೀಪಗಳೇ ನಮ್ಮ ನಾಳೆಗಳ ಭರವಸೆ. ಭಗವಂತನ ಸ್ವಂತದ ಜನ!

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
Bharat of Future: An RSS Perspective. Lecture series of Sarsanghachalak Dr. Mohan Bhagwat : Lecture 1.

ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆ ದಿನ ೫: ಮನಸ್ಸನ್ನು ಪಾಸಿಟಿವ್‌ ಆಗಿಟ್ಟು ಶರೀರವನ್ನು ಕೊರೊನಾದಿಂದ ನೆಗೆಟಿವ್‌ ಆಗಿರಿಸೋಣ - ಡಾ. ಮೋಹನ್‌ ಭಾಗವತ್‌ #PositivityUnlimited

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

VHP’s Dharma Samsad at Udupi on Nov 24, 25, 26 2017

VHP’s Dharma Samsad at Udupi on Nov 24, 25, 26 2017

November 21, 2017
Actress Nayanthara converted to Hinduism at Arya Samaj

Actress Nayanthara converted to Hinduism at Arya Samaj

August 8, 2011
RAMLILA MAIDAN: New Delhi

RAMLILA MAIDAN: New Delhi

December 14, 2010
RSS Ideologue Parameshwaran demands to prosecute everyone behind conspiracy against Kanchi Seer

RSS Ideologue Parameshwaran demands to prosecute everyone behind conspiracy against Kanchi Seer

November 28, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In