• Samvada
  • Videos
  • Categories
  • Events
  • About Us
  • Contact Us
Friday, March 24, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ

Vishwa Samvada Kendra by Vishwa Samvada Kendra
May 21, 2022
in Blog
269
0
528
SHARES
1.5k
VIEWS
Share on FacebookShare on Twitter


ನೀಲಕಂಠ ಪಿಳ್ಳೈ ತಿರುವನಂತಪುರದ ರಾಜಾ ಮಾರ್ತಾಂಡ ವರ್ಮನ ಆಸ್ಥಾನದಲ್ಲಿ ವಿಶೇಷ ಸ್ಥಾನ ಹೊಂದಿದ್ದ ಯುವಕ. ತಂದೆ ವಾಸುದೇವ ನಂಬೂದರಿ ಮತ್ತು ತಾಯಿ ದೇವಕಿ ಅಮ್ಮ. ಕೇರಳದ ಹಿಂದೂ ಸಮಾಜದ ಪದ್ಧತಿಯಲ್ಲಿ ಸ್ವೀಕೃತವಾಗಿದ್ದ ‘ಸಂಬಂಧ’ ವಿವಾಹವಾಗಿದ್ದ ವಾಸುದೇವ-ದೇವಕಿಯರ ಪುತ್ರ ನೀಲಕಂಠ ತನ್ನ ಸೋದರಮಾವನ ಆಶ್ರಯದಲ್ಲಿ ಬೆಳೆದ. ತಿರುವನಂತಪುರ ರಾಜ್ಯದ ರಾಜ ಮಾರ್ತಾಂಡ ವರ್ಮನ ದಿವಾನ್ ರಾಮಯ್ಯನ್ ದಲವಾಯಿಯ ಸಹಾಯಕನಾಗಿ ಗಮನ ಸೆಳೆದ.


೧೭೪೧ ರಲ್ಲಿ ಡಚ್ ಕ್ಯಾಪ್ಟನ್ ಯುಸ್ಟಾಚಿಯಸ್ ಡಿ ಲಾನ್ನಾಯ್ ನ ಸೈನ್ಯವು ತಿರುವನಂತಪುರ ರಾಜ್ಯದ ಮೇಲೆ ವಿಫಲ ಆಕ್ರಮಣ ನಡೆಸಿ ಸೆರೆಯಾಯಿತು. ಲಾನ್ನಾಯ್ ಸೆರೆಮನೆ ಸೇರಿದ. ಸೆರೆಮನೆಯಲ್ಲಿದ್ದ ಲಾನ್ನಾಯ್ ಮತ್ತಿತರನ್ನು ಸೆರೆಯಲ್ಲಿಯೂ ಚೆನ್ನಾಗಿ ನೋಡಿಕೊಳ್ಳಲಾಯಿತು. ಮತ್ತು ಸೆರೆಯಾಗಿದ್ದ ಡಚ್ ಸೇನಾಧಿಪತಿಗಳ ಭವಿಷ್ಯವೂ ಅನಿಶ್ಚಿತವಾಗಿತ್ತು. ಈ ಯುದ್ಧವು ಡಚ್ ಪ್ರಭಾವವನ್ನು ಭಾರತದಲ್ಲಿ ಶಾಶ್ವತವಾಗಿ ಕಡಿಮೆಗೊಳಿಸಿತು. ಅದೇ ಸಮಯದಲ್ಲಿ ಬ್ರಿಟಿಷರ ಪ್ರಾಬಲ್ಯ ಹೆಚ್ಚುತ್ತಿತ್ತು. ರಾಜಾ ಮಾರ್ತಾಂಡವರ್ಮರ ಸೈನ್ಯಕ್ಕೆ ಯುರೋಪ್ ಯುದ್ಧಕೌಶಲ್ಯದ ಅಗತ್ಯವಿತ್ತು. ಈ ಸಂದರ್ಭದಲ್ಲಿ ತಿರುವನಂತಪುರದ ರಾಜರು ಲಾನ್ನಾಯ್ ನನ್ನು ಕ್ಷಮಿಸಿದರು ಮತ್ತು ಅವನಿಗೆ ತಮ್ಮ ಸೈನ್ಯದಲ್ಲಿ ಸೇವೆ ಮಾಡಲು ಅವಕಾಶಮಾಡಿಕೊಟ್ಟರು. ಮುಂದಿನ ಮೂವತ್ತಕ್ಕೂ ಹೆಚ್ಚು ವರ್ಷಗಳು ಲಾನ್ನಾಯ್ ತಿರುವನಂತಪುರದ ಇಬ್ಬರು ರಾಜರ ಸೈನ್ಯಗಳಲ್ಲಿ ಸೇವೆ ಸಲ್ಲಿಸಿದ. ಈ ಸೇವೆ ಅತ್ಯಂತ ನಿಷ್ಠೆಯಿಂದ ಕೂಡಿತ್ತು ಎಂಬುದು ಆಸ್ಥಾನದ ಅಭಿಪ್ರಾಯವಾಗಿತ್ತು. ಕ್ರೈಸ್ತನಾಗಿದ್ದ ಲಾನ್ನಾಯ್ ಗೆ ರಾಜರ ಅರಮನೆಗೆ ಪ್ರವೇಶ ಇರಲಿಲ್ಲ ಎಂದು ಪ್ರತೀತಿ ಇದೆ. ರಾಜರ ಸೈನ್ಯದಲ್ಲಿ ಪ್ರಮುಖ ಸ್ಥಾನಗಳಿಸಿದ್ದ ಲಾನ್ನಾಯ್ ಬೇರೆ ಅರಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಒಂದು ಚರ್ಚ್ ಅನ್ನೂ ಸ್ಥಾಪಿಸಿಕೊಂಡಿದ್ದ. ಈ ವರುಷಗಳಲ್ಲಿ ಲಾನ್ನಾಯ್ ತನ್ನ ಹುದ್ದೆ ಮತ್ತು ಪ್ರಭಾವವನ್ನು ಹಿಂದೂ ರಾಜ್ಯದಲ್ಲಿ ಕ್ರೈಸ್ತ ಮತವನ್ನು ಹರಡಲು ಮತ್ತು ಯುರೋಪಿಯನ್ ಸಾಮ್ರಾಜ್ಯಗಳು ಇಲ್ಲಿ ಬೇರೂರುವಂತೆ ಮಾಡಲು ಬಳಸಿಕೊಂಡಂತೆ ಕಾಣುತ್ತದೆ. ಪೋಪ್ ಕ್ಲೆಮೆಂಟ್ ೧೪ – ಇವರ ಅವಧಿಯಲ್ಲಿ ಲಾನ್ನಾಯ್ ಮೂಲಗಳಿಂದ ವ್ಯಾಟಿಕನ್ ಗೆ ಕ್ರೈಸ್ತಮತವಿಸ್ತರಣೆಗೆ ಅನುಕೂಲವಾಗುವ ಮಾಹಿತಿ-ಮತವಿಸ್ತರಣೆಯ ಪ್ರಯತ್ನಗಳ ಪ್ರಗತಿಯ ವಿವರಗಳು ನಿಯಮಿತವಾಗಿ ತಲುಪುತ್ತಿದ್ದವು ಎನ್ನಲು ಸಾಕ್ಷಿಗಳಿವೆ. ಇವುಗಳ ಫಲವಾಗಿಯೇ, ರಾಜರಿಗೆ ಪೋಪರಿಂದ ಪ್ರಶಂಸೆ – ಅಭಿನಂದನೆ – ಕೃತಜ್ಞತಾ ಪತ್ರವೂ ಸಹ ಬಂದಿದ್ದಿರಬಹುದು. ವ್ಯಾಟಿಕನ್ ನ ರಹಸ್ಯ ದಾಖಲೆಗಳಲ್ಲೂ ಇವುಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳಿರಲೇ ಬೇಕು . ಲಾನ್ನಾಯ್ ನ ಜೀವನವು ಬದ್ಧತೆಯ, ಗೂಢಚಾರಿಕೆಯ ಮತ್ತು ಕ್ರೈಸ್ತ-ಯೂರೋಪ್ ನ ಹಿತಾಸಕ್ತಿಗಳಿಗೆ ಸಮರ್ಪಿತ ಜೀವನವಾಗಿತ್ತು ಎಂಬುದನ್ನು ಊಹಿಸಬಹುದಾದರೂ ಇತಿಹಾಸಕಾರರೇ ಇದನ್ನು ಖಚಿತಪಡಿಸಬೇಕು.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ತನ್ನ ಸಹಾಯಕನಾಗಿದ್ದ ನೀಲಕಂಠ ಪಿಳ್ಳೈಯನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವನನ್ನು ಲಾನ್ನಾಯ್ ಪ್ರಭಾವಿಸಿದನು. ಸ್ವತಃ ಕ್ರೈಸ್ತಧರ್ಮೀಯನಾಗಿದ್ದ ಲಾನ್ನಾಯ್ ಹಿಂದೂ ರಾಜನ ಸೇವೆಯಲ್ಲಿದ್ದರೂ, ತನ್ನ ಮತಪ್ರಸಾರದ ಕಾರ್ಯಗಳನ್ನು ಎದ್ದು ಕಾಣುವಂತೆ ಅಲ್ಲದಿದ್ದರೂ, ನಡೆಸುತ್ತಲೇ ಇದ್ದ ಅಥವಾ ನಡೆಯುತ್ತಿದ್ದ ಮತಾಂತರಕ್ಕೆ ತನ್ನ ಬೆಂಬಲ ನೀಡುತ್ತಿದ್ದ. ಭಾರ್ಗವಿ ಅಮ್ಮಾಳ್ ಎಂಬ ಹಿಂದೂ ಕನ್ಯೆ ಇದೇ ವೇಳೆಗೆ ಮತಾಂತರಗೊಂಡು ಸ್ಥಳಾಂತರಗೊಂಡಿದ್ದಳು. ಬಹುಶಃ ನೀಲಕಂಠನು ಈ ಕನ್ಯೆಯಲ್ಲಿ ಆಕರ್ಷಿತನಾಗಿದ್ದ. ಮತ್ತು ಈ ಸಂಗತಿಯನ್ನು ಉಪಯೋಗಿಸಿಕೊಂಡು ಲಾನ್ನಾಯ್ ನೀಲಕಂಠನನ್ನು ಮತಾಂತರಿಸಿದ. ಬಹು ಬೇಗನೇ, ಮತಾಂತರಿತ ನೀಲಕಂಠನು ಯುರೋಪಿಯನ್ನರಿಗೆ ತಿರುವನಂತಪುರದ ರಹಸ್ಯಗಳನ್ನು ನೀಡಲು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಿದ್ಧನಾಗಿದ್ದ. ಮತ್ತು ಈ ಬಗ್ಗೆ ನೀಲಕಂಠನ ಮೇಲೆ ಆರೋಪಗಳು ಬರಲಾರಂಭಿಸಿದವು. ವಿಶ್ವಾಸಘಾತಕ ಆರೋಪಗಳು ಪ್ರಬಲವಾದಂತೆ, ನೀಲಕಂಠ ಪಿಳ್ಳೈ ಪದಚ್ಯುತನಾದ. ಸೆರೆಮನೆ ಸೇರಿದ. ಮತ್ತು ಶಿಕ್ಷೆಗೆ ಒಳಪಟ್ಟ. ರಾಜ-ರಾಜ್ಯದಿಂದ ದೂರಸರಿದ ನೀಲಕಂಠ ಪಿಳ್ಳೈ ಅರಣ್ಯಸೇರಿದ. ಆದರೆ, ತನ್ನ ರೀತಿ-ನೀತಿಗಳನ್ನು ಮುಂದುವರೆಸಿದಂತೆ ಕಾಣುತ್ತದೆ. ಇದರಿಂದ ಉಂಟಾದ ಕಲಹವೊಂದರಲ್ಲಿ ಗಾಯಗೊಂಡ. ನಂತರ ಅನಾಮಧೇಯನಾಗಿ ಮರಣಹೊಂದಿದ. ಅವನ ಮರಣದ ವಿವರಗಳು ಆಗಲೇ ವ್ಯಾಟಿಕನ್ ತಲುಪಿದವು. ಆದರೆ, ಈ ಇಡೀ ಘಟನಾವಳಿಗಳಲ್ಲಿ ಲಾನ್ನಾಯ್ ಭಾಗಿಯಾಗಿದ್ದ ಪ್ರಸ್ತಾಪಗಳಿಲ್ಲ. ನೀಲಕಂಠನ ವ್ಯವಹಾರಗಳಿಂದ ಲಾನ್ನಾಯ್ ಸಾಕಷ್ಟು ದೂರ ಕಾಯ್ದು ಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಯುರೋಪಿಯನ್ ಸೈನ್ಯಗಳು ನೀಲಕಂಠನ ಬಂಧನ ವಿಮೋಚನೆಗೆ ಸತತವಾಗಿ ಪ್ರಯತ್ನಿಸುತ್ತಾ ರಾಜಾ ಮಾರ್ತಾಂಡ ವರ್ಮರ ಮೇಲೆ ಅಗಾಧ ಒತ್ತಡ ತಂದಿದ್ದರೆಂದು ಇತಿಹಾಸದಲ್ಲಿ ದಾಖಲಾಗಿದೆ.

ನೀಲಕಂಠನ ಮತಾಂತರ-ಆರೋಪ-ಶಿಕ್ಷೆ-ಮರಣ ಇವುಗಳ ವಿವರಗಳನ್ನು ಕಾಲಕ್ರಮದಲ್ಲಿ ವ್ಯವಸ್ಥಿತವಾಗಿ ತಿದ್ದಿ ದಾಖಲಿಸಿರುವಂತೆ ಕಾಣುತ್ತದೆ. ಹಲವು ಅನಾನುಕೂಲವಾಗಿದ್ದ ವಿವರಗಳನ್ನು ಕೈಬಿಡಲಾಗಿದೆ. ದಿವಾನರ ಸಹಾಯಕನನ್ನು ಸಾಮಾನ್ಯನನ್ನಾಗಿ, ನಂಬೂದರಿಯ ಮಗನನ್ನು ದಲಿತನನ್ನಾಗಿ, ಮತಾಂತರ ಚಟುವಟಿಕೆಗಳನ್ನು ಜಾತಿವಿರೋಧೀ ಹೋರಾಟವನ್ನಾಗಿ, ಮತ್ತು ರಾಜದ್ರೋಹದ ಅಪಾದನೆಗಳನ್ನು ಮೇಲ್ಜಾತಿಯವರ ಪಿತೂರಿಯೆಂದೂ ಚಿತ್ರಿಸಲಾಯಿತು. ರಾಜಾ ಮಾರ್ತಾಂಡ ವರ್ಮರು ಯುದ್ಧಕೈದಿಗಳನ್ನು ಕ್ರೂರವಾಗಿ ನಡೆಸಿಕೊಂಡರೆಂದೂ, ನೀಲಕಂಠನನ್ನು ಅನ್ಯಾಯವಾಗಿ ಶಿಕ್ಷಿಸಿದರೆಂದೂ ಹೇಳಲಾಗುತ್ತಿದೆ. ಭಾರತದಲ್ಲಿ ಕ್ರೈಸ್ತಮತ ಪ್ರಸಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ನೀಲಕಂಠನ ಕಥಾನಕವನ್ನು ಬಳಸಿಕೊಳ್ಳಲಾಗಿದೆ. ಕಳೆದ ಹತ್ತಾರು ದಶಕಗಳಲ್ಲಿ ನೀಲಕಂಠ ಪಿಳ್ಳೈನನ್ನು ಸಂತಪದವಿಗೇರಿಸಲು ಸಿದ್ಧತೆಗಳಾಗಿವೆ. ಹಲವಾರು ಪವಾಡಗಳನ್ನು ನೀಲಕಂಠನ ಹೆಸರಿನಲ್ಲಿ ದಾಖಲಿಸಲಾಗಿದೆ. ಮತ್ತು ನಂತರದಲ್ಲಿ ಈ ಪವಾಡಗಳ ಆಧಾರದಲ್ಲಿ ನೀಲಕಂಠನನ್ನು ಸಂತಪದವಿಗೆ ಏರಿಸಲಾಯಿತು. ಇವುಗಳಿಗಾಗಿ ೩೫೦ ವರ್ಷಗಳ ಅವಧಿ ಬೇಕಾಯಿತು.


ಇಂದು ಮತ್ತು ಮುಂದೆ, ನಾಯರ್ ಸಮುದಾಯವನ್ನು ಮತಾಂತರಿತಗೊಳಿಸಲು, ನಂಬೂದರಿಗಳನ್ನು ದೂಷಿಸಲು, ಹಿಂದೂ ರಾಜರನ್ನು ಹಿಂಸಕರೆಂದೂ, ಮತಾಂಧರೆಂದೂ ಬಿಂಬಿಸಲು – ಸಾಮಾನ್ಯನೆಂದು ಪರಿಗಣಿಸಲ್ಪಟ್ಟ ನೀಲಕಂಠ ಪಿಳ್ಳೈ ಅಂದರೆ ಕ್ರೈಸ್ತ ನಾಮಾಂಕಿತನಾಗಿ ಬದಲಾದ ದೇವಸಹಾಯಂ ಅಥವಾ ಲಾಜಾರಸ್, ಭಾರತದ ಮತಾಂತರಿಗಳಿಗೆ ಒಂದು ಅಸಾಮಾನ್ಯ ಸಂತನ ರೂಪಕದಲ್ಲಿ ಒದಗಿಬರುತ್ತಾರೆ.

ಶ್ರೀಧರನ್, ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ,ಕರ್ನಾಟಕ

  • email
  • facebook
  • twitter
  • google+
  • WhatsApp
Tags: Anti conversionChristian missionariesconversionConversionspopePOPE FRANCISsaintvatican

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

ಮತ್ತೂರಿನ ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಭಾಗಿ

ಮತ್ತೂರಿನ ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಭಾಗಿ

December 21, 2019
ಸಂಸ್ಕಾರ ಭಾರತೀಯ ‘ಅಮೃತ ಸ್ವಾತಂತ್ರ್ಯ ಸಂಸ್ಕೃತಿ ಉತ್ಸವ’

ಸಂಸ್ಕಾರ ಭಾರತೀಯ ‘ಅಮೃತ ಸ್ವಾತಂತ್ರ್ಯ ಸಂಸ್ಕೃತಿ ಉತ್ಸವ’

October 1, 2021
Samartha Bharata’s #BeGoodDoGood campaign launched

Samartha Bharata’s #BeGoodDoGood campaign launched

January 13, 2020
Seva Bharati and RSS volunteers involve vehicles to help farmers sell their produce.

Seva Bharati and RSS volunteers involve vehicles to help farmers sell their produce.

April 11, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In