• Samvada
Friday, August 12, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್‌ಕುಮಾರ್

Vishwa Samvada Kendra by Vishwa Samvada Kendra
April 12, 2022
in Blog
252
0
495
SHARES
1.4k
VIEWS
Share on FacebookShare on Twitter

ರಾಜ್‌ಕುಮಾರ್ ಈ ಹೆಸರನ್ನು ಕೇಳದ ಕರ್ನಾಟಕದ ಜನ ಯಾರಾದರೂ ಇರಲು ಸಾಧ್ಯವೆ? ರಾಜ್‌ಕುಮಾರ್ ಕನ್ನಡ ಚಲನಚಿತ್ರಗಳ ಮೇರು ನಟ, ನೂರಾರು ದಾಖಲೆಗಳ ಸರದಾರ, ಚಲನಚಿತ್ರಗಳ ಮೂಲಕ ಕನ್ನಡಿಗರ ಮನೆ ಮನ ಗೆದ್ದು ಮನೆಮಗನೆನಿಸಿಕೊಂಡವರು.ಕನ್ನಡ ಚಲನಚಿತ್ರಗಳಿಗೆ ಸಾಂಸ್ಕೃತಿಕ ಅಡಿಪಾಯ ಹಾಕಿಕೊಟ್ಟವರು ಡಾ.ರಾಜ್‌ಕುಮಾರ್.

ಅಷ್ಟಕ್ಕೂ ರಾಜ್‌ಕುಮಾರ್ ಅವರ ವ್ಯಕ್ತಿತ್ವ, ಅವರ ಸಾತ್ವಿಕತೆ, ಸಜ್ಜನಿಕೆ ಇಡೀ ಕನ್ನಡನಾಡಿಗೆ ಮಾತ್ರವಲ್ಲ ಕಲಾರಂಗದಲ್ಲಿ ಎಂದಿಗೂ ಅಮರವಾದ ಮಾದರಿ.ಕೇವಲ ವೈಯಕ್ತಿಕ ಮಟ್ಟದಲ್ಲಿ, ಅಥವಾ ಕಲೆಯ ವಿಚಾರದಲ್ಲಿ ಮಾತ್ರವಲ್ಲ ನಮ್ಮೆಲ್ಲರಿಗೂ ಸುಳ್ಳು ಇತಿಹಾಸದಿಂದ ದೂರವಿಡುವ,ನಮ್ಮ ಮಣ್ಣಿನ ಬಗೆಗೆ ಹೆಮ್ಮೆಯೆನಿಸುವ,ಸಮಾಜಕ್ಕೆ ಹಿತವೆನಿಸುವ ಕಾರ್ಯವನ್ನು ಮಾಡಲು ಪ್ರೇರಣೆ ನೀಡುವ, ಈ ನೆಲದ ದೇವರು ಧರ್ಮಗಳ ಕುರಿತು ಶ್ರದ್ಧೆಯನ್ನು ರೂಪಿಸುವ ಮಾದರಿಗಳನ್ನು ಅಭಿವ್ಯಕ್ತಿಸುತ್ತಾ ನಮ್ಮ ಮೇಲೆ ಸಾತ್ವಿಕವಾದ ಪ್ರಭಾವ ಬೀರಿದವರು ಡಾ.ರಾಜ್‌ಕುಮಾರ್.

READ ALSO

Amrit Mahotsav – Over 200 tons sea coast garbage removed in 20 days

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ಬಾಲಿವುಡ್ಡಿನ ಬಹುತೇಕ ಸಿನೇಮಾಗಳು ದಾಳಿ ಮಾಡಿದ ಮೊಘಲರ ಕುರಿತಾದ ವೈಭವೀಕರಣ,ಧರ್ಮದ ಕುರಿತಾಗಿ ದೇವರ ಕುರಿತಾಗಿ ಅವಹೇಳನ, ಸಾಹಸ ಆಚರಣೆಗಳ ಪರಂಪರೆಗಳ ಕುರಿತಾಗಿ ತುಚ್ಛವಾಗಿ ತೋರಿಸುವಂತಹ ಸಂದರ್ಭದಲ್ಲಿ ರಾಜ‌ಕುಮಾರ್ ಅವರ ಸಿನೇಮಾಗಳಲ್ಲಿ ಈ ರೀತಿಯೆಂದೂ ತೋರಿಸಲಿಲ್ಲ.

ಉದಾಹರಣೆಗೆ 1982ರಲ್ಲಿ ಬಿಡುಗಡೆಯಾದ ಬೆಮಿಸಾಲ್ ಎನ್ನುವ ಅಮಿತಾಭ್ ಬಚ್ಚನ್‌ರ ಸಿನೇಮಾದಲ್ಲಿ ಕಾಶ್ಮೀರವನ್ನು ಮೊಘಲರು ಕಂಡು ಹಿಡಿದರು ಎನ್ನುತ್ತಾ ಮೊಘಲರನ್ನು ಕೊಂಡಾಡುತ್ತಾರೆ‌. ಸಾವಿರಾರು ವರ್ಷಗಳಿಂದ ಜ್ಞಾನದ ಬಂಡಾರವಾಗಿದ್ದ ಕಾಶ್ಮೀರವನ್ನು ನಾಶ ಮಾಡಿ, ಅಲ್ಲಿ ಜಿಹಾದ್ ನಡೆಸಿದ ಮೊಘಲರು ಕಾಶ್ಮೀರವನ್ನು ಹುಡುಕಿದರು ಎಂಬ ಸುಳ್ಳು ನರೇಟಿವ್ ಅನ್ನು ತುಂಬುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ 1983ರಲ್ಲಿ ಬಿಡುಗಡೆಯಾದ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನನ್ನ, ಅವನ ವಿದ್ವತ್ ಪ್ರತಿಭೆಗಳೇ ತುಂಬಿದ ಆಸ್ಥಾನವನ್ನ, ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ, ಅದರ ಪ್ರತಿಭೆಯನ್ನು ಜಗತ್ತಿನೆದುರು ತೆರೆದಿಡುವ ಚಿತ್ರವನ್ನು ತೆರೆಯುತ್ತಾರೆ.ಕನ್ನಡ ನಾಡಿನ ಅನೇಕ ಪೀಳಿಗೆಗಳು ಹೀಗೆ ತಿರುಚಿದ ಇತಿಹಾಸವನ್ನು ನಂಬಿಕೊಂಡು, ತಮ್ಮನ್ನು ಹೀಗಳೆದುಕೊಳ್ಳುವುದಕ್ಕಿಂತ ಶ್ರೇಷ್ಠ ಜ್ಞಾನಪರಂಪರೆಯ ವಾರಸುದಾರರು ನಾವು ಎಂದು ಹೆಮ್ಮೆ ಪಡುವಂತಹ ಕಥೆಗಳನ್ನು ಆರಿಸುತ್ತಾರೆ.ಭಾರತೀಯ ಮೂಲದ ರಾಮಾಯಾಣ ಮಹಾಭಾರತದ ಕಥೆಗಳನ್ನು ಆರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕವಾಗಿಯೂ ಮತ್ತು ನೆಲಮೂಲದ ಸಂಸ್ಕೃತಿಯನ್ನು ಎರಡನ್ನೂ ಸಮರ್ಥವಾಗಿ ತೂಗಿಸಿಕೊಂಡು ಕರ್ನಾಟಕದ ಸಾಂಸ್ಕೃತಿಕ ಪಲ್ಲಟಗಳನ್ನು ನಿಭಾಯಿಸಿದವರು ಡಾ.ರಾಜ್‌ಕುಮಾರ್.

ಪೌರಾಣಿಕ ಐತಿಹಾಸಿಕ ಕಥೆಗಳ ಆಯ್ಕೆಯಲ್ಲಿರಬಹುದು ಅಥವಾ ಸಾಮಾಜಿಕ ಸಿನೆಮಾಗಳ ಕಥಾಹಂದರದಲ್ಲಿರಬಹುದು ಎಲ್ಲೆಡೆಯೂ ಅತ್ಯಂತ ಸಾತ್ವಿಕವಾದ ಸಂದೇಶ ನೀಡುತ್ತಾ ಮತ್ತು ಪ್ರಸ್ತುತಿಯಲ್ಲೂ ಕೂಡ ಸಮಾಜಕ್ಕೆ ಮೌಲ್ಯಗಳನ್ನು ನೀಡುತ್ತಾ,ಲೋಕ ಶಿಕ್ಷಣದ ರಹದಾರಿಯಾಗಿ ಕೆಲಸ ಮಾಡಿದ್ದವು ಅವರ ಸಿನೇಮಾಗಳು.ಆ ರೀತಿಯ ಮಾದರಿಯಲ್ಲಿ ರಾಜ್‌ಕುಮಾರ್‌ರವರ ಸಿನೇಮಾಗಳು ಅದ್ಭುತವಾದ ಪರಿಣಾಮ ಬೀರಿದ್ದವೆಂದೇ ಹೇಳಬಹುದು.ಬಂಗಾರದ ಮನುಷ್ಯ ಸಿನೆಮಾದಿಂದ ಕೃಷಿ ಕಡೆಗೆ ಮುಖ ಮಾಡಿದವರು ಅದೆಷ್ಟೋ ಮಂದಿ.ಅಥವಾ ಬಾಳುವಂತೆ ಹೂವೆ ಹಾಡಿನಿಂದ ಪ್ರೇರಣೆ ಪಡೆದು ಕುಡಿತ ಬಿಟ್ಟವರು ಅದೆಷ್ಟೋ ಮಂದಿ.

ಇನ್ನು ಅವರ ಪಾತ್ರದ ಪೋಷಣೆಯೂ ಅತ್ಯಂತ ಸಹಜವಾದ ಜನಸಾಮಾನ್ಯರಿಗೆ ನಿಲುಕುವಂತಿತ್ತು.ಕಾರ್ಮಿಕ,ರೈತ,ಮೇಷ್ಟ್ರು,ಕೂಲಿ,ಬ್ಯಾಂಕಿನ ನೌಕರ ಹೀಗಿನ ಪಾತ್ರಗಳಲ್ಲಿ ನಟಿಸುತ್ತಾ ಸಮಾಜದ ದನಿಯಾಗುವ ಅವರೊಳಗೆ ಒಬ್ಬರಾಗುತ್ತಾ ಮಾದರಿಯನ್ನ ನಿರ್ಮಾಣ ಮಾಡಿಕೊಟ್ಟು ಬದುಕಿದವರು ಡಾ.ರಾಜ್‌ಕುಮಾರರು.

ಅವರ ಸಿನೆಮಾಗಳಲ್ಲಿ ಹೊಯ್ಸಳರ ಶಿಲ್ಪಕಲೆ, ದೇಗುಲಗಳು, ಭಾರತೀಯ ಆಚಾರ ವಿಚಾರಗಳ ಕುರಿತಾದ ಶ್ರದ್ಧೆ ಯಥೇಚ್ಛವಾಗಿ ದೊರೆಯುತ್ತದೆ.ಕನ್ನಡ ನಾಡು ನುಡಿ,ಹೆಣ್ಣುಮಕ್ಕಳ ಕುರಿತಾದ ಗೌರವ ಭಾವ,ಸಾಮರಸ್ಯದ ಹೊಳೆಯೂ ಹರಿಯುತ್ತದೆ.ಇದೇ ಇವತ್ತಿಗೂ ಕನ್ನಡ ಚಿತ್ರರಂಗದ ಅಡಿಪಾಯವಾಗಿ ಮುಂದುವರೆದಿದೆ.

ಅಲ್ಲದೆ ಕನ್ನಡದ ಕವಿ, ಕಾದಂಬರಿಕಾರರು, ಕತೆಗಾರರನ್ನು ಸಾಮಾನ್ಯರಿಗೆ ಪರಿಚಯಿಸುವ ಅವರ ಕವಿತೆಗಳನ್ನು,ವಿಚಾರಗಳನ್ನು ಜನರ ಮುಂದಿಡುವ ಡಾ.ರಾಜ್‌ರ ಆ ಸಂಪ್ರದಾಯ ಸಾಮಾನ್ಯ ಜನರಿಗೂ ಕೂಡ ಅಪರೋಕ್ಷವಾಗಿ ಸಾಹಿತ್ಯದ ಔತಣವನ್ನು ಊಡಿಸಿತ್ತು ಎಂದರೆ ತಪ್ಪಾಗಲಾರದು.

ಅಲ್ಲದೆ ಮಲೆ ಮಹದೇಶ್ವರನ ಕುರಿತಾದ ಹಾಡುಗಳು, ಭಜನೆಗಳು ಇಂದಿಗೂ ಶ್ರಮ ಸಂಸ್ಕೃತಿಯ, ಗ್ರಾಮೀಣ ಸಂಸ್ಕೃತಿಗಳ ದ್ಯೋತಕವಾಗಿ ನಮ್ಮನ್ನು ಮುನ್ನಡೆಸುತ್ತಲೆ ಬಂದಿದೆ. ಹಾಗು ಅವರ ಯೋಗಾಭ್ಯಾಸ ಶಿಸ್ತಿನಿಂದ ಕೂಡಿದ್ದ ದಿನಚರಿಗಳು ಅವರ ಸಾತ್ವಿಕ ನಡತೆಗಳು ಮೇಲ್ಪಂಕ್ತಿಯೇ ಸೈ.

ಆ ಹಿನ್ನೆಲೆಯಲ್ಲಿ ಡಾ.ರಾಜ್‌ಅವರ ಚಿತ್ರಗಳು,ಅವರ ಗುಣ ನಡತೆಗಳು ಇಂದಿಗೂ ಪೀಳಿಗೆಗಳ ನಂತರವೂ ಪ್ರಸ್ತುತವೆನಿಸುತ್ತದೆ.ಇಂದಿಗೂ ಅವರೊಬ್ಬ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಕಾಣುತ್ತಾರೆ.

  • email
  • facebook
  • twitter
  • google+
  • WhatsApp
Tags: actorDr.RajkumarKannada cinemasinger

Related Posts

Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Blog

ಸೋತದ್ದು ಪಾಕಿಸ್ತಾನವಲ್ಲ ಕಪಟತನ..! ಗೆದ್ದದು ಭಾರತವಲ್ಲ, ಭರವಸೆ..!

July 26, 2022
ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!
Blog

ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!

July 22, 2022
Blog

ವ್ಯಾಸಪೂರ್ಣಿಮವೂ… ಪೂರ್ಣತಮ ಬದುಕೂ..

July 13, 2022
Blog

ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ

July 9, 2022
Next Post

ಬ್ರಿಟೀಷರ ಕ್ರೌರ್ಯದ ಪರಮಾವಧಿ - ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಅವರ ಸಮುದಾಯಕ್ಕೆ ಕಾಂಗ್ರೆಸ್ ಕೊಟ್ಟ ಸಂದೇಶವಾದರೂ ಏನು?

ಚುನಾವಣೆಯಲ್ಲಿ ಸೋಲಿಸಿ, ಅಂಬೇಡ್ಕರ್ ಅವರ ಸಮುದಾಯಕ್ಕೆ ಕಾಂಗ್ರೆಸ್ ಕೊಟ್ಟ ಸಂದೇಶವಾದರೂ ಏನು?

November 28, 2021
RSS delegation submitted Memorandum to Governor of Karnataka at Rajbhavavn

RSS delegation submitted Memorandum to Governor of Karnataka at Rajbhavavn

July 7, 2012
RSS North Karnataka announces a new team

RSS North Karnataka announces a new team

March 20, 2012
12,000 seed balls thrown in ‘SPARE A DAY FOR NATURE’ by Utthishta Bharata NGO, Bengaluru

12,000 seed balls thrown in ‘SPARE A DAY FOR NATURE’ by Utthishta Bharata NGO, Bengaluru

June 21, 2016

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ
  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In