• Samvada
Wednesday, August 10, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!

Vishwa Samvada Kendra by Vishwa Samvada Kendra
July 22, 2022
in Blog
252
0
ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!
495
SHARES
1.4k
VIEWS
Share on FacebookShare on Twitter

ನಿನ್ನೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ಅವರನ್ನು ಎನ್ ಡಿ ಎ ಮೈತ್ರಿಕೂಟ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅನೇಕ ಮಾಧ್ಯಮಗಳಲ್ಲಿ ಇದೊಂದು ಪೊಲಿಟಿಕಲ್‌ ಮಾಸ್ಟರ್‌ ಸ್ಟ್ರೋಕ್‌ ಎಂಬ ಚರ್ಚೆ ಆರಂಭವಾಯಿತು. ಆದರೆ ಇದೆಲ್ಲದರ ಆಚೆಗೆ ಮೆರಿಟ್‌ನ ದೃಷ್ಟಿಯಿಂದ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ದ್ರೌಪದಿ ಮುರ್ಮು ಅವರ ಆಯ್ಕೆ ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ವಿಶೇಷವಾದ ಸ್ಥಾನಮಾನವನ್ನು ದೊರಕಿಸಿಕೊಡುತ್ತಾ ನಿಜಾರ್ಥದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕಾರ್ಯರೂಪಕ್ಕೊಂದು ರೂಪುರೇಷೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಅನೇಕ ಬಾರಿ ರಾಷ್ಟ್ರಪತಿಗಳೆಂದರೆ ರಾಜಕಾರಣಿಗಳ ಸನ್ನೆಗೆ ಕುಣಿಯುವ ಬೊಂಬೆಗಳು, ರಬ್ಬರ್‌ ಸ್ಟಾಂಪ್‌, ನಾಂ ಕೆ ವಾಸ್ಥೆ ಎನ್ನುವ ಸಂದರ್ಭಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದುಹೋಗಿವೆ. ಆದರೆ ಇವೆಲ್ಲಕ್ಕೂ ಅಪಚಾರವೆಂಬಂತೆ ಡಾ.ಎಪಿಜೆ ಅಬ್ದುಲ್‌ ಕಲಾಮ್‌, ಪ್ರಣಬ್‌ ಮುಖರ್ಜಿ ಮುಂತಾದವರು ಆ ಖುರ್ಚಿಯಲ್ಲಿ ಕೂತು ದೇಶವನ್ನು ಸರಿಯಾದ ದಿಸೆಯಲ್ಲಿ ಮುನ್ನಡೆಸುವ ಪ್ರಯತ್ನವನ್ನು ಮಾಡಿದ್ದಾರೆ,ಮಾತ್ರವಲ್ಲದೆ ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹಿಗ್ಗಿಸಿದ್ದಾರೆ.

READ ALSO

Amrit Mahotsav – Over 200 tons sea coast garbage removed in 20 days

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದ ಕೋಳಿ ಸಮುದಾಯದ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂಧಿದ್ದ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದ್ದರು.

 ಇದೀಗ ಪಶ್ಚಿಮೀ ಓಡಿಸ್ಸಾದ ವನವಾಸಿ ಸಮುದಾಯವಾದ ಸಂಥಾಲ್‌ ಸಮಾಜದಿಂದ ಅತ್ಯಂತ ತಳಮಟ್ಟದಿಂದ ಹೋರಾ ನಡೆಸಿ ಬದುಕನ್ನು ಕಟ್ಟಿಕೊಂಡು ತನ್ನ ಸಮಾಜವನ್ನು ಮುನ್ನಡೆಸಿಕೊಂಡು ಅಭಿವೃದ್ದೀಯೆಡೆಗೆ, ಸಮಾಜದ ಮುಖ್ಯ ವಾಹಿನಿಯ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ ದಕ್ಷ ಮಹಿಳೆ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಒಂದರ್ಥದಲ್ಲಿ ಉಪೇಕ್ಷಿತ, ಅಲಕ್ಷಿತ ಸಮುದಾಯದಿಂದ ಬಂದು, ತಮ್ಮ ಸಾಮರ್ಥ್ಯದ ಬಲದ ಆಧಾರದ ಮೇಲೆ ಅನ್ಯನ್ಯ ಜವಾಬ್ದಾರಿ ನಿರ್ವಹಿಸಿದ ಮುರ್ಮು ಅವರ ಆಯ್ಕೆ ದೇಶದ ಎಲ್ಲ ವನವಾಸಿಗಳ ಅನೇಕ ಶತಮಾನಗಳ ಹೋರಾಟಕ್ಕೆ, ಅವರ ಕೊಡುಗೆಗೆ ಸಂದ ಗೌರವ.

ನ್ಯಾಯವಾಗಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನವಾಗಿ ಸಿಗಬೇಕಾದ ಅಧಿಕಾರದ ಹಕ್ಕು ಕೆಲವೇ ಕೆಲವು ಕುಟುಂಬಗಳ, ಪಕ್ಷಗಳ, ಕೆನೆಪದರದಲ್ಲಿದ್ದ ಮಂದಿಯ ಕಪಿಮುಷ್ಠಿಯಿಂದ ಹೊರಬಂದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತನ್ನ ಕೌಟುಂಬಿಕ ಹಿನ್ನೆಲೆ, ಹಣಕಾಸು ಪರಿಸ್ಥಿತಿ, ಸಾಮಾಜಿಕ ಅಸಮಾನತೆಯ ಪ್ರವಾಹದ ವಿರುದ್ಧ ಈಜುತ್ತಾ ಮೇಲೇರಿ ಬರುವ ಅವಕಾಶವನ್ನು ಪ್ರಜಾತಂತ್ರ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿ ನೀಡಿದೆ. ಆದರೆ ನಿಜ ಪ್ರಜಾಪ್ರಭುತ್ವದ ಬಗೆಗೆ ದೂರದೃಷ್ಟಿಯುಳ್ಳ ವ್ಯಕ್ತಿಗಳು, ಮತ್ತು ಸ್ವಾರ್ಥ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ಚಿಂತನೆಯಿರುವ ವ್ಯಕ್ತಿಗಳ ಕೈಯಲ್ಲಿ ಈ ರೀತಿಯ ವ್ಯವಸ್ಥೆಯ ಚುಕ್ಕಾಣಿ ಬಂದಾಗ ಮಾತ್ರವೇ ಅದು ಕಾರ್ಯರೂಪಕ್ಕೆ ಬರಲು ಸಾಧ್ಯ ಎಂಬುದು ಗೋಚರವಾಗುತ್ತದೆ.

ಸ್ವಾತಂತ್ರ್ಯಾ ನಂತರದಲ್ಲಿ ಪರಿಶಿಷ್ಟ ಜಾತಿ, ಪಂಗಡ, ವನವಾಸೀ, ಆದಿವಾಸಿ, ಹಿಂದುಳಿದ ವರ್ಗಗಳು ಹೀಗೆ ತಳ ಸಮುದಾಯವನ್ನು ಕೇವಲ ಅದರ ಅಭ್ಯುದಯದ ಹೆಸರಿನ ರಾಜಕೀಯದಲ್ಲೇ ಕಳೆದುಹೋಯಿತೇ ವಿನಃ ಸಮಾಜದ ಮುಖ್ಯವಾಹಿನಿಗೆ ಅವರನ್ನು ಜೋಡಿಸುವ ಕೆಲಸ ಆಗದೆ ಹೋದದ್ದು ವಿಷಾದನೀಯ. ಪ್ರಜಾಪ್ರಭುತ್ವದ ಪರಿಕಲ್ಪನೆ ಭಾರತಕ್ಕೇನೂ ಹೊಸದಲ್ಲ. ಗುಪ್ತ ಮೌರ್ಯರ ಕಾಲದಲ್ಲಿದ್ದ ಜನಪದಗಳು, ನಂತರ ಬಂದ ಬೌದ್ಧ ಭಿಕ್ಷುಗಳ ನಡುವಣ ಪ್ರಜಾಪ್ರಭುತ್ವದ ಅಂಶಗಳು, ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಪ್ರಜಾಪ್ರಭುತ್ವದ ವ್ಯವಸ್ಥೆ ಇವೆಲ್ಲವನ್ನೂ ಗಮನಿಸಿದರೆ ಇಲ್ಲೆಲ್ಲೂ ಸಹ ಯಾವುದೇ ಪಂಗಡವನ್ನೂ ಸಮುದಾಯವನ್ನೂ ಹೊರಗಿಟ್ಟ ಪ್ರಕರಣಗಳು ಕಾಣುವುದಿಲ್ಲ. ಈ ಸನಾತನ ಇತಿಹಾಸದ ನೆಲೆಗಟ್ಟಿನಲ್ಲಿ ರೂಪುಗೊಂಡ ಮೌಲ್ಯಗಳನ್ನು ಪುನರ್‌ ಪ್ರತಿಷ್ಠಾಪಿಸುವ ಅತ್ಯಂತ ಸಮರ್ಥವಾದ ಪ್ರಯೋಗಗಳು ಸದ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎನ್ನುವುದು ಸಮಾಧಾನಕರವಾದ ಅಂಶ.

ಅನೇಕ ಬಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಆದಿವಾಸಿಗಳಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಕಮ್ಯೂನಿಸ್ಟ್‌ ವಿಚಾರಧಾರೆಯನ್ನು ತುಂಬಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸುವ, ಮುಗ್ಧ ಯುವಜನರ ಕೈಗೆ ಹಕ್ಕುಗಳ ನೆಪದಲ್ಲಿ ಬಂದೂಕುಗಳನ್ನು ಕೊಟ್ಟು ನಕ್ಸಲ್‌ ಆಂದೋಲನವನ್ನು ನಡೆಸುವ, ಮತ್ತು ಆ ಮೂಲಕ ಸಮಾಜವನ್ನು, ದೇಶವನ್ನು ಒಡೆಯುವ ಸಂಚು ರೂಪಿಸಿ, ಇದ್ಯಾವುದರ ಅರಿವಿಲ್ಲದ ಬಡ, ಆದಿವಾಸಿ, ಹಿಂದುಳಿದ ವರ್ಗದ ಮಕ್ಕಳನ್ನು ಸಮಾನತೆಯ ಹೆಸರಿನಲ್ಲಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುವುದಕ್ಕಿಂತ ಸಂವಿಧಾನಬದ್ಧವಾಗಿ ಶಿಕ್ಷಣದ ಮೂಲಕ ಮೇಲೆತ್ತಿ ಬೆಳೆಯುವ ವ್ಯವಸ್ಥೆ ರೂಪಿಸಿ ರಾಷ್ಟ್ರದ ಅತ್ಯುನ್ನತ ಸ್ಥಾನದಲ್ಲಿ ನೋಡುವುದು ಭಾರತದ ಆರೋಗ್ಯಕರವಾದ ಪ್ರಜಾಪ್ರಭುತ್ವಕ್ಕೊಂದು ಮಾದರಿ.  ಈ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾಪ್ರಭುತ್ವದ ಆರೋಗ್ಯಕರವಾದ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯೆಂದರೆ ತಪ್ಪಾಗಲಿಕ್ಕಿಲ್ಲ.

  • email
  • facebook
  • twitter
  • google+
  • WhatsApp
Tags: Draupadi MurmuNational PresidentPresident of IndiaPresidential Election

Related Posts

Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Blog

ಸೋತದ್ದು ಪಾಕಿಸ್ತಾನವಲ್ಲ ಕಪಟತನ..! ಗೆದ್ದದು ಭಾರತವಲ್ಲ, ಭರವಸೆ..!

July 26, 2022
Blog

ವ್ಯಾಸಪೂರ್ಣಿಮವೂ… ಪೂರ್ಣತಮ ಬದುಕೂ..

July 13, 2022
Blog

ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ

July 9, 2022
Blog

ಮಹರ್ಷಿ ಅರವಿಂದರ ಕುರಿತು ಶ್ಯಾಮಾಪ್ರಸಾದ್ ಮುಖರ್ಜಿಯವರ ಭಾಷಣ!

July 6, 2022
Next Post

ವಿಕ್ರಮ ವಾರಪತ್ರಿಕೆಗೆ 75 ವಸಂತಗಳು - ಶುಭಕೋರಿದ ಮುಖ್ಯಮಂತ್ರಿ ಬೊಮ್ಮಾಯಿ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Founded by Dattopant Thengadi on July 23, 1955 BMS observes Foundation Day today

Founded by Dattopant Thengadi on July 23, 1955 BMS observes Foundation Day today

July 23, 2014
RSS Functionaries congratulated Jnanapith winner Dr Chandrashekara Kambara at Bangalore.

RSS Functionaries congratulated Jnanapith winner Dr Chandrashekara Kambara at Bangalore.

September 22, 2011
Lets have a debate on Article 370, says RSS senior functionary Arun Kumar

Lets have a debate on Article 370, says RSS senior functionary Arun Kumar

December 26, 2013

DRDO successfully flight-tests Solid Fuel Ducted Ramjet technology off Odisha coast

April 9, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In