• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನಾವು, ಹಿಂದೂ ಜೀವನ ದೃಷ್ಟಿಕೋನದ ಅತ್ಯುತ್ತಮ ಉದಾಹರಣೆಯಾಗಬೇಕು : ಸರಸಂಘಚಾಲಕರು

Vishwa Samvada Kendra by Vishwa Samvada Kendra
October 15, 2021
in Articles, Others
253
0
Erect a stellar example of Hindu view-of-life through conduct : RSS Sarsanghachalak
496
SHARES
1.4k
VIEWS
Share on FacebookShare on Twitter

ಈ ವರ್ಷ ನಮ್ಮ ಸ್ವಾತಂತ್ರ್ಯದ 75 ನೇ ವರ್ಷ. ನಾವು 15 ಆಗಸ್ಟ್ 1947 ರಂದು ಸ್ವತಂತ್ರರಾದೆವು. ದೇಶವನ್ನು ಮುನ್ನಡೆಸಲು ನಾವು ನಮ್ಮ ದೇಶದ ಸೂತ್ರಗಳನ್ನು ನಮ್ಮ ಕೈಯಲ್ಲಿ ತೆಗೆದುಕೊಂಡಿದ್ದೇವೆ. ಅದು ಸ್ವಾಧೀನತೆಯಿಂದ ಸ್ವಾತಂತ್ರ್ಯದೆಡೆಗಿನ ನಮ್ಮ ಪ್ರಯಾಣದ ಆರಂಭದ ಒಂದು ಬಿಂದುವಾಗಿತ್ತು. ಈ ಸ್ವಾತಂತ್ರ್ಯ ನಮಗೆ ರಾತ್ರೋರಾತ್ರಿ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸ್ವತಂತ್ರ ಭಾರತದ ಚಿತ್ರಣ ಹೇಗಿರಬೇಕು, ಭಾರತೀಯ ಪರಂಪರೆಯ ಅನುಸಾರವಾಗಿ, ನಾವೆಲ್ಲಾ ಸಮಾನರು ಎಂಬು ಮನೋಭಿಲಾಷೆಯೊಂದಿಗೆ ದೇಶದ ವಿವಿಧ ಪ್ರದೇಶಗಳಿಂದ, ಎಲ್ಲ ಜಾತಿಗಳಿಗೆ ಸೇರಿದ ವೀರರ ತಪ್ಪಸ್ಸು ತ್ಯಾಗ ಮತ್ತು ಬಲಿದಾನಗಳು ಹಿಮಾಲಯ ಪರ್ವತದಂತೆ ನಮ್ಮ ಮುಂದಿದೆ.; ಗುಲಾಮಗಿರಿಯ ಭಾರವನ್ನು ಎದುರಿಸುತ್ತಿದ್ದ ಸಮಾಜವೂ ಅವರೊಂದಿಗೆ ಜೊತೆಯಾಗಿ ನಿಂತಿತು; ನಂತರ ಶಾಂತಿಯುತ ಸತ್ಯಾಗ್ರಹದಿಂದ ಹಿಡಿದು ಸಶಸ್ತ್ರ ಹೋರಾಟದವರೆಗಿನ ಎಲ್ಲಾ ಮಾರ್ಗಗಳು ಸ್ವಾತಂತ್ರ್ಯದ ಹೊಸ್ತಿಲಿಗೆ ತಂದು ನಿಲಿಸಿದವು. ಆದರೆ ನಮ್ಮ ತಾರತಮ್ಯದ ಮನಸ್ಥಿತಿ, ಸ್ವಧರ್ಮದ, ಸ್ವರಾಷ್ಟ್ರ, ಸ್ವತಂತ್ರ್ಯದ ಬಗೆಗಿನ ಅರಿವಿನ ಅಜ್ಞಾನ, ಅಸ್ಪಷ್ಠತೆ, ಅನಿಶ್ಚಿತ ನೀತಿ ಮತ್ತು ಅದರೊಂದಿಗೆ ಆಟವಾಡುವ ಬ್ರಿಟಿಷರ ಕುಟಿಲತಂತ್ರಗಳ ಕಾರಣ, ಎಂದಿಗೂ ಮರೆಯಲಾಗದ ದೇಶ ವಿಭಜನೆಯ ನೋವು ಪ್ರತಿ ಭಾರತೀಯನ ಹೃದಯದಲ್ಲಿ ನೆಲೆಗೊಂಡಿತು. ನಮ್ಮ ಇಡೀ ಸಮಾಜ, ವಿಶೇಷವಾಗಿ ಹೊಸ ತಲೆಮಾರಿನವರು ಈ ಇತಿಹಾಸವನ್ನು ತಿಳಿದುಕೊಳ್ಳಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ನೆನಪಿಟ್ಟುಕೊಳ್ಳಬೇಕು. ಯಾರೊಂದಿಗೋ ದ್ವೇಷವನ್ನು ಹೊಂದಲು ಈ ಕಾರ್ಯ ಮಾಡಬಾರದು. ಕಳೆದುಹೋದ ಏಕತೆ ಮತ್ತು ಸಮಗ್ರತೆಯನ್ನು ಮರಳಿ ಪಡೆಯಲು ಆ ಸ್ಮರಣೆಯು ಅವಶ್ಯಕವಾಗಿದೆ, ಪರಸ್ಪರ ದ್ವೇಷವನ್ನು ಹೆಚ್ಚಿಸುವ ಮೂಲಕ ಆ ಇತಿಹಾಸವನ್ನು ಪುನರಾವರ್ತಿಸುವ ಪ್ರಯತ್ನಗಳನ್ನು ಸಂಪೂರ್ಣವಾಗಿ ವಿಫಲಗೊಳಿಸುತ್ತದೆ.

ಸಾಮಾಜಿಕ ಸಾಮರಸ್ಯ

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

            ಸಮಾನದೃಷ್ಠಿಯ ಭೇಧರಹಿತ ಸಮಾಜವು, ಒಂದು ಏಕೀಕೃತ ಮತ್ತು ಅಖಂಡ ರಾಷ್ಟ್ರದ ಪೂರ್ವಭಾವಿ ಶರತ್ತಾಗಿದೆ. ಇದಕ್ಕೆ ಜಾತಿಯಾದಾರಿತ ಅಸಮಾನತೆ ಅಡ್ಡಿಯಾಗಿದೆ, ಇದು ನಮ್ಮ ದೇಶದ ಹಳೆಯ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಹಲವು ಕಡೆಯಿಂದ, ಹಲವು ರೀತಿಯಲ್ಲಿ ಪ್ರಯತ್ನಗಳು ನಡೆದಿವೆ. ಆದಾಗ್ಯೂ, ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿಲ್ಲ. ಸಮಾಜದ ಮನಸ್ಸು ಇನ್ನೂ ಜಾತಿ ಅಸಮಾನತೆಯ ಭಾವನೆಗಳಿಂದ ಕೂಡಿದೆ. ದೇಶದ ಬೌದ್ಧಿಕ ಪರಿಸರದಲ್ಲಿ ಈ ಅಂತರವನ್ನು ಕಡಿಮೆ ಮಾಡುವ ಮೂಲಕ, ಪರಸ್ಪರ ಅನ್ಯೋನ್ಯತೆ ಮತ್ತು ಸೌಹಾರ್ದತೆ ಸೃಷ್ಟಿಸುವ ಧ್ವನಿಗಳು ಕಡಿಮೆ, ಹಾಳುಗೆಡವುವರೇ ಹೆಚ್ಚು. ನಮ್ಮ ಮಾತುಕಥೆಗಳು ಸಕಾರಾತ್ಮಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಗಮನವಹಿಸಬೇಕು. ಸಮಾಜವನ್ನು ಅನ್ಯೋನ್ಯತೆ ಮತ್ತು ಸಮಾನತೆಯ ಆಧಾರದ ಮೇಲೆ ಕಟ್ಟ ಬಯಸುವವರೆಲ್ಲರೂ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಾಮಾಜಿಕ ಮತ್ತು ಕೌಟುಂಬಿಕ ಮಟ್ಟದಲ್ಲಿ ಪರಸ್ಪರ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಪರಸ್ಪರ ಸ್ನೇಹ ಮತ್ತು ಕುಟುಂಬಗಳ ನಡುವಣ ಬಾಂಧವ್ಯಗಳು ಸಾಮಾಜಿಕ ಸಮಾನತೆ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ. ಸಂಘದ ಸ್ವಯಂಸೇವಕರು ಸಾಮಾಜಿಕ ಸಾಮರಸ್ಯದ ಚಟುವಟಿಕೆಗಳ ಮೂಲಕ ಸಾಮಾಜಿಕ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಮತ್ತು ಏಕತೆ

            ಭಾರತದ ಸಮಗ್ರತೆ ಮತ್ತು ಏಕತೆಯ ನಂಬಿಕೆಗಳು ಮತ್ತು ಮಾನವರ ಸ್ವಾತಂತ್ರ್ಯದ ಕಲ್ಪನೆಯು ಶತಶತಮಾನಗಳಿಂದ ಇಲ್ಲಿಯವರೆಗೆ ನಮ್ಮಲ್ಲಿ ನಡೆದುಕೊಂಡು ಬರುತ್ತಿದೆ. ಅದಕ್ಕಾಗಿ ನಿರಂತರ ರಕ್ತ ಮತ್ತು ಬೆವರು ಸುರಿಸುವ ಕೆಲಸವೂ ಸಾಗುತ್ತಲೇ ಇದೆ. ಈ ವರ್ಷ ಶ್ರೀ ಗುರು ತೇಗ್ ಬಹದ್ದೂರ್ ಜೀ ಮಹಾರಾಜರ 400ನೇ ಪ್ರಕಾಶ ಪರ್ವವಾಗಿದೆ (400ನೇ ಜನ್ಮ ವರ್ಷಾಚರಣೆ).  ಆಗ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಧಾರ್ಮಿಕ ಮತಾಂಧತೆಯ ವಿರುದ್ಧ ನಿಂತಿದ್ದಕ್ಕಾಗಿ ಅವರು ಹುತಾತ್ಮರಾದರು.  ಅವರು ಈ ನೆಲದ ಸಂಸ್ಕೃತಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಷ್ಟ ದೈವ ಪೂಜೆ ಅಥವ ಕಿರುಕುಳದ ಭಯವಿಲ್ಲದೆ ಒಬ್ಬರ ನಂಬಿಕೆಗಳ ಆಚರಣೆಯನ್ನು ಅನುಷ್ಟಾನಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದರಿಂದ ಅವರನ್ನು ಗುರಿಯಾಗಿಸಿಕೊಂಡಿದ್ದರು. ಅವರನ್ನು ‘ಚಾದರ್ ಆಫ್ ಹಿಂದ್’ (ಹಿಂದ್‌ನ ಗುರಾಣಿ) ಎಂದು ಕರೆಯಲಾಗುತ್ತದೆ. ಅವರು ಶತಮಾನಗಳ ಕಾಲ, ಕಾಲದ ಪ್ರವಾಹಗಳನ್ನು ಧೈರ್ಯದಿಂದ ಎದುರಿಸಿದ ಯೋಧರ ನಕ್ಷತ್ರಪುಂಜದಲ್ಲಿ ಸೂರ್ಯರಾಗಿದ್ದರು ಮತ್ತು ಭವ್ಯವಾದ ಮತ್ತು ಎಲ್ಲವನ್ನು ಒಳಗೊಂಡ ಧಾರ್ಮಿಕ ಸ್ವಾತಂತ್ರ್ಯದ ಭಾರತದ ಪರಂಪರೆಯ ನಿರಂತರತೆಯನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ಸಮರ್ಪಿಸಿದರು. ಇಂತಹಾ ಮಹಾನ್ ಪೂರ್ವಜರ ಮನದಲ್ಲಿದ್ದ ಗೌರವ, ಅವರ ಮಾತೃಭೂಮಿಗಾಗಿನ ಧೃಡವಾದ ಸಮರ್ಪಣಾ ಭಾವ, ತಮ್ಮ ಜೀವವನ್ನು ಪಣಕಿಟ್ಟಾ ತಾಯ್ನಾಡಿನ ಮೇಲಿನ ಅಚಲವಾದ ಭಕ್ತಿ, ಮತ್ತು ಅವರಿಂದ ಸಂರಕ್ಷಿಸಲ್ಪಟ್ಟ ಹಾಗೂ ವರ್ಧಿಸಿದ ನಮ್ಮ ಉದಾರವಾದ ಸರ್ವಸಮ್ಮತವಾದ ಸಂಸ್ಕೃತಿ ನಮ್ಮ ರಾಷ್ಟ್ರದ ಜೀವನದ ಆಧಾರವಾಗಿದೆ.

      ‘ಸ್ವತಂತ್ರ ಜೀವನ’ ಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ. ಮಹಾರಾಷ್ಟ್ರದ ಸಂತ ಜ್ಞಾನೇಶ್ವರ ಮಹಾರಾಜ್ ಜೀ ಪ್ರಾರ್ಥನೆಯಲ್ಲಿ ಬರೆಯುತ್ತಾರೆ “ದುಷ್ಟರ ದುಷ್ಟತನವು ಕೊನೆಗೊಳ್ಳಲಿ ಮತ್ತು ಅವರ ಕಾರ್ಯಗಳು ಸದ್ಗುಣವಾಗಿ ಬದಲಾಗಲಿ. ಪ್ರತಿಯೊಬ್ಬರ ಎಲ್ಲ ಆಸೆಗಳನ್ನು ಈಡೇರಿಸುವಾಗ ಎಲ್ಲರಲ್ಲಿಯೂ ಸದಾಚಾರದ ಪ್ರಜ್ಞೆಯನ್ನು ಬೆಳಗಿಸುವ, ಸಂಕಟದ ಕರಾಳ ಮೋಡಗಳು ದೂರವಾಗಲಿ.” 

       ಆಧುನಿಕ ಕಾಲದಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರ್ ರವರು ರಚಿಸಿದ ಪ್ರಸಿದ್ಧ ಕವಿತೆಯಲ್ಲಿ ಅದೇ ಮಾತನ್ನು ಬೇರೆ ರೀತಿಯಲ್ಲಿ ಹೇಳಲಾಗಿದೆ-


“ಎಲ್ಲಿ ಮನಸ್ಸು ಭಯದಿಂದ ಮುಕ್ತವಾಗಿರುತ್ತದೆಯೋ, ಅಲ್ಲಿ ನಾವು ಹೆಮ್ಮೆಯಿಂದ ತಲೆ ಎತ್ತಿ ನಡೆಯಬಹುದು, ಅಲ್ಲಿ ಜ್ಞಾನ ಮುಕ್ತವಾಗಿರುತ್ತದೆ.

ಎಲ್ಲಿ ವಿಶಾಲವಾದ ವಿಶ್ವವನ್ನು ಸಂಕುಚಿತತೆಯಿಂದಾಗಿ ತುಂಡರಿಸಿದ ಗೋಡೆಗಳನ್ನು ಕಟ್ಟಲಾಗಿಲ್ಲ ಅಲ್ಲಿ ಪ್ರತಿಯೊಂದು ವಾಕ್ಯವೂ ಹೃದಯಾಳದಿಂದ ಬರುತ್ತದೆ.

ಎಲ್ಲಿ ದಣಿವರಿಯದ ಶ್ರಮವು ತನ್ನ ತೋಳುಗಳನ್ನು ಪರಿಪೂರ್ಣತೆಯ ಕಡೆಗೆ ಚಾಚುತ್ತದೋ;

ಎಲ್ಲಿ ಸತ್ಯ ಧಾರೆಯ ಹರಿವು ತನ್ನ ದಾರಿಯನ್ನು ಸತ್ತ ಮರುಭೂಮಿಯಲಿ ಕಳೆದುಹೋಗುವುದಿಲ್ಲವೋ;

ಎಲ್ಲಿ ಮನಸ್ಸು ಸದಾ ಉದಾತ್ತ ವಿಶಾಲ ಚಿಂತನೆ ಮತ್ತು ಕ್ರಮಕದತ್ತ ಮುನ್ನುಗುತ್ತದೋ.

ನಿದ್ರಿಸುತ್ತಿರುವ ಈ ಭಾರತವನ್ನು ಅದೇ ಸ್ವಾತಂತ್ರ್ಯ ಸ್ವರ್ಗದಲ್ಲಿ ಎಚ್ಚರಗೊಳಿಸಿ.”

            ದೇಶದ ಸ್ವಾತಂತ್ರ್ಯೋತ್ತರ ಜೀವನದ ಈ ಕಲ್ಪಿತ ಚಿತ್ರದ ಸಂದರ್ಭದಲ್ಲಿ, ನಾವು ಸನ್ನಿವೇಶಗಳನ್ನು ನೋಡಿದಾಗ, ಸ್ವಾಧೀನತೆಯಿಂದ ಸ್ವಾತಂತ್ರ್ಯದತ್ತ ನಮ್ಮ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ ಎಂದು ಮನಸ್ಸಿಗೆ ಬರುತ್ತದೆ. ಭಾರತದ ಪ್ರಗತಿಗೆ ಮತ್ತು ವಿಶ್ವದಲ್ಲಿ ಭಾರತ ಗೌರವಾನ್ವಿತ ಸ್ಥಾನವನ್ನು ಪಡೆಯುವುದು ಕೆಲವು ವಿಷಿದ್ಧಕಾರಿ ಚಿಂತನೆಗಳುಳ್ಳವರಿಗೆ ಬೇಡವಾಗಿದೆ. ಕೆಲವು ದೇಶಗಳಲ್ಲಿ ಅವರಿಗೆ ಅಧಿಕಾರವಿದೆ.  ಸನಾತನ ಮೌಲ್ಯಾಧಾರಿತ-ವ್ಯವಸ್ಥೆಯನ್ನು ಅನುಸರಿಸುವ ಬಗ್ಗೆ ಆಲೋಚಿಸುವ ಧರ್ಮವು ಭಾರತದಲ್ಲಿ ಮೇಲುಗೈ ಸಾಧಿಸಿದರೆ, ಸ್ವಾರ್ಥಿ ಶಕ್ತಿಗಳ ದುಷ್ಟ ಆಟವು ತಟಸ್ಥಗೊಳ್ಳುತ್ತದೆ. ಭಾರತವು ವಿಶ್ವವನ್ನು ತನ್ನ ಮೌಲ್ಯಾಧಾರಿತ-ಧಾರ್ವಿುಕ ದೃಷ್ಟಿಕೋನದಿಂದ ನೋಡುತ್ತದೆ, ಅದು ಜಗತ್ತಿನಲ್ಲಿ ಕಳೆದುಹೋದ ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಪರಸ್ಪರ ಸಹಕಾರ ಮತ್ತು ಸ್ನೇಹಪರತೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ತಡೆಯಲು ವ್ಯವಸ್ಥಿತವಾದ ಷಡ್ಯಂತರಗಳು ನಿರಂತರವಾಗಿ ನಡೆಯುತ್ತಿದೆ. ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರಿಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಈ ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಈ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು.

      ಸಂಕ್ಷಿಪ್ತವಾಗಿ ಹೇಳುವುದಾದರೆ, ವಕ್ರ ಮನಸ್ಸುಗಳು ತಮ್ಮ ಹಳೆಯ ತಂತ್ರಗಳನ್ನು ಅನುಸರಿಸುತ್ತವೆ ಮತ್ತು ಅವರ ದುಷ್ಕೃತ್ಯಗಳನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಹುಡುಕುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಹಂಕಾರದ ಮತಾಂಧರಿಂದಾಗಿ ಕೆಲವು ಬೆಂಬಲವನ್ನು ಗಳಿಸಲು, ಜನರ ಅಜ್ಞಾನದ ಲಾಭವನ್ನು ಪಡೆದು ಅಸತ್ಯದ ಆಧಾರದ ಮೇಲೆ ಅವರನ್ನು ದಾರಿ ತಪ್ಪಿಸಲು, ಅವರ ಪ್ರಸ್ತುತ ಅಥವಾ ಕಾಲ್ಪನಿಕ ಸಮಸ್ಯೆಗಳನ್ನು ಉತ್ಪ್ರೇಕ್ಷಿಸುವ ಮೂಲಕ ಜನರನ್ನು ಕೆರಳಿಸುವುದು, ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಮತ್ತು ಯಾವುದೇ ಬೆಲೆಯನ್ನು ತೆತ್ತು ಅತೃಪ್ತಿ, ಪರಸ್ಪರ ಸಂಘರ್ಷ, ಭಿನ್ನಾಭಿಪ್ರಾಯ, ಭಯೋತ್ಪಾದನೆ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಮೂಲಕ ಅವರ ಕ್ಷೀಣಿಸುತ್ತಿರುವ ಪ್ರಭಾವವನ್ನು ಪುನಃ ಸಮಾಜದಲ್ಲಿ ಹೇರುವ ದುರುದ್ದೇಶ ಈಗಾಗಲೇ ಬಹಿರಂಗವಾಗಿದೆ.

            ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ “ಸ್ವಯಂ” ಬಗೆಗಿನ ಅಜ್ಞಾನ, ಅಸ್ಪಷ್ಟತೆ ಮತ್ತು ಅಪನಂಬಿಕೆಯ ಜೊತೆ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ಹೆಚ್ಚಿನ ವೇಗದಲ್ಲಿ ಪ್ರಚಾರಗೊಳ್ಳುತ್ತಿರುವ ಕೆಲವು ಹೊಸ ವಿಷಯಗಳು ಈ ಸ್ವಾರ್ಥಿ ಶಕ್ತಿಗಳ ಕೆಟ್ಟ ಆಟಗಳಿಗೆ ಅನುಕೂಲಕರವಾಗಿವೆ. ಬಿಟ್‌ಕಾಯಿನ್‌ನಂತಹ ಅನಿಯಂತ್ರಿತ ಪ್ರವೃತ್ತಿಯು ಎಲ್ಲಾ ದೇಶಗಳ ಆರ್ಥಿಕತೆಗೆ ಸವಾಲಾಗಿ ಪರಿಣಮಿಸುವ ಆರ್ಥಿಕ ಅಸ್ಪಷ್ಟತೆಯ ಮಾಧ್ಯಮವಾಗಿ ಪರಿಣಮಿಸುತ್ತದೆ. ಯಾವುದೇ ನಿಭಂದನೆಗಳಿಗೆ ಒಳ ಪಡದ ಒ.ಟಿ.ಟಿ ವೇದಿಕೆಗಳಲ್ಲಿ ಏನನ್ನು ಬೇಕಾದರೂ ಪ್ರದರ್ಶಿಸಲಾಗುತ್ತದೆ ಮತ್ತು ಅಂತಹನ್ನು ಯಾರು ಬೇಕಾದರೂ ವೀಕ್ಷಿಸಬಹುದಾಗಿದೆ. ಕೇವಲ ಆನ್‌ಲೈನ್ ಶಿಕ್ಷಣವನ್ನು ನಡೆಸಬೇಕಾಗಿತ್ತು.  ಆದರೆ ಮಕ್ಕಳು ಮೊಬೈಲ್ ಗಳಿಗೆ ಅಂಟಿಕೊಳ್ಲಳುವುದು ಈಗ ನಿಯಮವಾಗಿಬಿಟ್ಟಿದೆ. ವಿವೇಚನೆ ಮತ್ತು ಸರಿಯಾದ ನಿಯಂತ್ರಣದ ಕೊರತೆಯು ಸಮಾಜವನ್ನು ಈ ಎಲ್ಲ ಹೊಸ ಒಳಿತು ಕೆಡುಕುಗಳಿಂದ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ಹೇಳುವುದು ಕಷ್ಟ, ಆದರೆ ದೇಶದ ವಿರೋಧಿ ಘಟಕಗಳು ಈ ವಿಧಾನಗಳನ್ನು ಬಳಸಲು ಬಯಸುತ್ತಾರೆ ಎಂದು ತಿಳಿದಿದೆ. ಆದ್ದರಿಂದ, ಸರ್ಕಾರವು ಸಮಯಕ್ಕೆ ಸರಿಯಾಗಿ ಇಂತಹ ಎಲ್ಲ ವಿಷಯಗಳ ಮೇಲೆ ಸರಿಯಾದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕು.

ಕುಟುಂಬ ಪ್ರಭೋಧನ್‌

      ಇದೇ ಸಮಯದಲ್ಲಿ, ಇಂತಹ ಬೆದರಿಕೆಗಳ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಣವನ್ನು ಹೊಂದಲು ಸರಿ ತಪ್ಪುಗಳನ್ನು ವಿವೇಚಿಸುವ ಮತ್ತು ನೈತಿಕತೆ-ಅನೈತಿಕತೆಯನ್ನು ಸ್ಪಷ್ಟವಾಗಿ ಗುರುತಿಸುವ ವಾತಾವರಣವನ್ನು ನಮ್ಮ ಮನೆಗಳಲ್ಲಿ ನಿರ್ಮಿಸಬೇಕು. ಅನೇಕ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂತರು ಈ ಕಾರ್ಯಕದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ. ನಾವು ಕೂಡ ನಮ್ಮ ಕುಟುಂಬ ಸದಸ್ಯರೊಂದಿಗೆ ಈ ವಿಷಯಗಳ ಬಗ್ಗೆ ಚರ್ಚಿಸಿ ನಮ್ಮ ನಡವಳಿಕೆಗಳನ್ನು ರೂಪಿಸಿಕೊಳ್ಳಬಹುದು. ಸಂಘದ ಸ್ವಯಂಸೇವಕರು ಕೂಡ ‘ಕುಟುಂಬ ಪ್ರಬೋಧನ್’ (ಕೌಟುಂಬಿಕ ಸಂವಾದ) ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಉದ್ದೇಶಕ್ಕಾಗಿ ಕೊಡುಗೆ ನೀಡುತ್ತಿದ್ದಾರೆ. ನೀವು “ಮನ್ ಕಾ ಬ್ರೇಕ್ ಉತ್ತಮ್ ಬ್ರೇಕ್” ಎನ್ನುವುದನ್ನು ಕೇಳಿರಬಹುದು ಅಥವಾ ಓದಿರಬಹುದು (ಮನಸ್ಸಿನ ಮೇಲೆ ನಿಯಂತ್ರಣ ಹೊಂದುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ನಿಯಂತ್ರಣವಾಗಿದೆ). ಈ ಬುದ್ಧಿವಂತಿಕೆಯ ಆಲೋಚನೆಯೊಂದೇ ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುತ್ತಿರುವ ಮತ್ತು ಅಜಾಗರೂಕತೆಯನ್ನು ಉತ್ತೇಜಿಸುತ್ತಿರುವ ಭಾರತೀಯ ಮೌಲ್ಯ ವ್ಯವಸ್ಥೆಯ ಮೇಲಿನ ಬಹುಮುಖಿ ದಾಳಿಗಳ ಸವಾಲುಗಳಿಗೆ ಪರಿಹಾರವಾಗಿದೆ.

ಕರೋನ ವಿರುದ್ಧದ ಹೋರಾಟ

       ಕೊರೊನಾ ವೈರಸ್‌ನ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಿದ್ದು, ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ, ಸಮಾಜವು ಮತ್ತೊಮ್ಮೆ ತನ್ನ ಸಾಮೂಹಿಕ ಪ್ರಯತ್ನಗಳ ಮೂಲಕ ಮತ್ತೆ ಮತ್ತೆ ಪುಟುದೇಳುವಿಕೆಯನ್ನು ನಿರೂಪಿಸಿತು. ಎರಡನೇ ಅಲೆಯು ಹೆಚ್ಚು ವಿನಾಶಕಾರಿಯಾಗಿತ್ತು ಮತ್ತು ಅನೇಕ ಯುವಕರನ್ನು ಸಹ ಬಲಿತೆಗೆತುಕೊಂಡಿತು. ಆದರೂ ರೋಗದಿಂದ ಗಂಭೀರವಾದ ಆರೋಗ್ಯದ ಅಪಾಯಗಳ ಹೊರತಾಗಿಯೂ ಮಾನುಕುಲದ ಸೇವೆಯಲ್ಲಿ ನಿಸ್ವಾರ್ಥವಾಗಿ ಸಮರ್ಪಿಸಿದ ಪುರುಷರು ಮತ್ತು ಮಹಿಳೆಯರ ಪ್ರಯತ್ನಗಳು ಶ್ಲಾಘನೀಯ. ಸಂಕಟದ ಕಾರ್ಮೋಡಗಳು ಇನ್ನೂ ನಮ್ಮನ್ನ ಕಾಡುತ್ತಿದೆ. ಕೊರೊನಾ ವೈರಸ್ ವಿರುದ್ಧದ ನಮ್ಮ ಹೋರಾಟ ಇನ್ನೂ ಮಕ್ತಾಯಗಂಡಿಲ್ಲ; ಇದರ ನಡುವೆಯೂ ನಾವು ಮೂರನೆಯ ಅಲೆಯನ್ನು ಎದುರಿಸಲು ಹೆಚ್ಚು ಕಡಿಮೆ ತಯಾರಾಗಿದ್ದೇವೆ. ಲಸಿಕೆಗಳನ್ನು ಸಾಮೂಹಿಕವಾಗಿ ನೀಡಲಾಗುತತ್ತಿದೆ ಮತ್ತು ಅದನ್ನು ಪೂರ್ಣಗೊಳಿಸಬೇಕು. ಸಮಾಜವು ಜಾಗರೂಕವಾಗಿದೆ ಮತ್ತು ಸಂಘದ ಸ್ವಯಂಸೇವಕರು ಮತ್ತು ಹಲವಾರು ಇತರ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಗ್ರಾಮ ಮಟ್ಟದವರೆಗೂ ಕಾರ್ಯಕರ್ತರಿಗೆ ತರಬೇತಿ ನೀಡಿವೆ, ಅವರು ಜಾಗರೂಕತೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ತುರ್ತು ಸಂದರ್ಭಗಳಲ್ಲಿ ಸ್ಥಳೀಯರ ಬೆಂಬಲವನ್ನು ಪಡೆಯುತ್ತಾರೆ. ಒಂದು ಕಡೆ ಮುಂಬರುವ ಅಲೆಯನ್ನು ಎದುರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೆ, ಮತ್ತೊಂದೆಡೆ, ಅಂತಿಮ ಹಂತಗಳ ಆಕ್ರಮಣವು ಹಿಂದನ ಆಕ್ರಮಣಕ್ಕೆ ಹೋಲಿಸಿದರೆ ಕಡಿಮೆ ತೀವ್ರತೆಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆಯೂ, ನಾವು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರಯತ್ನಿಸಬೇಕು ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು. 

            ಕೋವಿಡ್‌ನ ಬೆದರಿಕೆಯಿಂದಾಗಿ ಸರ್ಕಾರ ಅಥವಾ ಸಮಾಜವು ದಿನನಿತ್ಯದ ಚಟುವಟಿಕೆಗಳನ್ನು ನಿರ್ಬಂಧಿಸುವ ಮನಸ್ಸು ಹೊಂದಿಲ್ಲ ಎಂದು ತೋರುತ್ತದೆ. ಕೋವಿಡ್‌ನ ಕೇವಲ ಎರಡು ಅಲೆಗಳಲ್ಲಿ, ಲಾಕ್‌ಡೌನ್‌ಗಳು ಆರ್ಥಿಕತೆಯನ್ನು ಗಣನೀಯವಾಗಿ ಹಾಳುಗೆಡವಿದೆ. ಹಿಂದಿನ ನಷ್ಟಗಳನ್ನು ತೂಗಿಸುವ ಮತ್ತು ಆರ್ಥಿಕತೆಗೆ ಇನ್ನೂ ವೇಗ ನೀಡುವ ಸವಾಲು ನಮ್ಮ ಮುಂದಿದೆ. ಅದನ್ನು ಸಾಧಿಸುವ ವಿಧಾನಗಳನ್ನು ಆಲೋಚಿಸಲಾಗುತ್ತಿದೆ ಮತ್ತು ಪ್ರಯತ್ನಿಸಲಾಗುತ್ತಿದೆ. ಇಂತಹ ಪ್ರಯತ್ನಗಳು ನಿರಂತರವಾಗಿರಬೇಕು. ಕೋವಿಡ್ ಸಾಂಕ್ರಾಮಿಕ ರೋಗ ಬೆದರಿಕೆಯಿದ್ದರೂ, ನಮ್ಮ ಭಾರತೀಯ ಆರ್ಥಿಕತೆಯು ಪುಟಿದೇಳುವ ಸಾಮರ್ಥ್ಯ ಮತ್ತು ವಿಶ್ವಾಸವನ್ನು ತೋರಿಸುತ್ತಿದೆ. ಅನೇಕ ಕಡೆಗಳಿಂದ ತ್ವರಿತ ಸ್ಥಿರೀಕರಣ ಮತ್ತು ವ್ಯಾಪಾರದ ಮರುಸ್ಥಾಪನೆಯ ಸುದ್ದಿಯೂ ಕೇಳಿ ಬರುತ್ತಿದೆ. ಎಲ್ಲಾ ಪಾಲುದಾರರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಲ್ಲಿ ಸರ್ಕಾರ ಯಶಸ್ವಿಯಾದರೆ ದೇಶವು ತೊಂದರೆಯ ಅಲೆಯನ್ನು ಸರಾಗವಾಗಿ ದಾಟಬಹುದೆಂಬ ವಿಶ್ವಾಸ ಬೆಳೆಯುತ್ತಿದೆ. ಜೊತೆಯಲ್ಲಿ, ಈ ಸನ್ನಿವೇಶವು ನಮಗೆ ಪುನರುತ್ಥಾನ ಮತ್ತು ಒಂದು ಮಾದರಿಯನ್ನು ಸೃಷ್ಟಿಸುವ ಅವಕಾಶವನ್ನು ಒದಗಿಸಬಲ್ಲದು, ಅದು “ಸ್ವಾ” ತತ್ವದ ಮೇಲೆ ಆಧಾರಿತವಾಗಿದೆ.

      ಆತ್ಮವಿಶ್ವಾಸದ ನವೀಕರಣ ಮತ್ತು ನಮ್ಮ ಸಮಾಜದಲ್ಲಿ ನಮ್ಮ ‘ಸ್ವಾಭಿಮಾನ’ದ ಜಾಗೃತಿಯ ಕಾರ್ಯನಡೆಯುತ್ತೆದೆ. ಶ್ರೀ ರಾಮ ಜನ್ಮಭೂಮಿ ದೇವಾಲಯದ ನಿಧಿ ಸಮರ್ಪಣಾ ಅಭಿಯಾನವು ಅಗಾಧವಾದ ಮತ್ತು ಭಕ್ತಿಪೂರ್ವಕ ಪ್ರತಿಕ್ರಿಯೆಯನ್ನು ಕಂಡಿದ್ದು ಈ ಜಾಗೃತಿಗೆ ಸಾಕ್ಷಿಯಾಗಿದೆ. ಜೀವನದ ವಿವಿಧ ಹಂತಗಳಲ್ಲಿನ ಸಾಮಾಜಿಕ ಪ್ರಯತ್ನಗಳ ಅಭಿವ್ಯಕ್ತಿಯ ನೈಸರ್ಗಿಕ ಫಲಿತಾಂಶ ಇದಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗಳಿಸುವ ಮೂಲಕ ನಮ್ಮ ಕ್ರೀಡಾಪಟುಗಳು ಉತ್ತಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ, ಇದನ್ನು ಅಭಿನಂದಿಸಬೇಕು. ನಾವೆಲ್ಲರೂ ಅವರಿಗೆ ನೀಡಲಾದ ರಾಷ್ಟ್ರವ್ಯಾಪಿ ಅಭಿನಂದನೆಗಳ ಭಾಗವಾಗಿದ್ದೇವೆ.  

ಭಾರತೀಯ ದೃಷ್ಠಿಕೋನದಲ್ಲಿ ಆರೋಗ್ಯ

            ನಮ್ಮದೇ ಆದ ಸಂಪ್ರದಾಯದಿಂದ ನಾವು ಹೊಂದಿರುವ ದೃಷ್ಟಿ ಮತ್ತು ಜ್ಞಾನವು ಇಂದಿಗೂ ಉಪಯುಕ್ತವಾಗಿದೆ, ಈ ಕರೋನಾದ ಪರಿಸ್ಥಿತಿಯು ಅದನ್ನು ತೋರಿಸಿದೆ. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ. ಭೌಗೋಳಿಕವಾಗಿ ವಿಶಾಲವಾದ ಮತ್ತು ಜನನಿಬಿಡತೆ ಇರುವ ನಮ್ಮ ದೇಶದಲ್ಲಿ ನಮಗೆಲ್ಲರಿಗೂ ತಿಳಿದಿದೆ, ಇಂತಹ ವೈದ್ಯಕೀಯ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೂ ಸುಲಭವಾಗಿ ಲಭ್ಯವಾಗುವುದು ಮತ್ತು ಅಗ್ಗದ ದರದಲ್ಲಿ ಲಭ್ಯವಾಗುಬೇಕೆನ್ನುವುದು ಅಗತ್ಯ ಎಂದು ನಮ್ಮ ಅನುಭವಕ್ಕೆ ಬರುತ್ತದೆ. ನಾವು ರೋಗಗಳನ್ನು ಗುಣಪಡಿಸುವ ಜೊತೆಗೆ ಆಯುರ್ವೇದದ ಆರೋಗ್ಯದ ಬಗ್ಗೆ ಯೋಚಿಸಬೇಕು.

ಆಹಾರ, ಮನರಂಜನೆ, ವ್ಯಾಯಾಮ ಮತ್ತು ಧ್ಯಾನದ ಸಮತೋಲನದ ನಮ್ಮ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಜೀವನವು ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ ಮತ್ತು ದೇಹಗಳನ್ನು ಸೋಂಕುಗಳಿಗೆ ನಿರೋಧಕವಾಗುವಂತೆ ಬಲಪಡಿಸುವ ವಾತಾವರಣವನ್ನು ಬೆಳೆಸಬಹುದು. ನಮ್ಮ ಈ ಜೀವನಶೈಲಿ ಪರಿಸರದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ಸಂಯಮದಂತಹ ದೈವಿಕ ಗುಣಗಳನ್ನು ನೀಡುತ್ತದೆ. ಕರೋನಾ ರೋಗದ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಸರಳತೆಯಿಂದ ಮಾಡಬೇಕಿತ್ತು. ನಮ್ಮ ಕಣ್ಣಿಗೆ ಗೋಚರಿಸುವ ಉತ್ಸಾಹಗಳಲ್ಲಿ ಇಳಿಕೆ ಕಂಡುಬಂದಿತು, ಆದರೆ ನಾವು ಹಣ, ಶಕ್ತಿ ಮತ್ತು ಇತರ ಸಂಪನ್ಮೂಲಗಳ ತ್ಯಾಜ್ಯದಿಂದ ರಕ್ಷಿಸಲ್ಪಟ್ಟಿದ್ದೇವೆ ಮತ್ತು ಪರಿಸರದ ಮೇಲೆ ಅದರ ನೇರ ಅನುಕೂಲಕರ ಪರಿಣಾಮಗಳನ್ನು ನಾವು ಅನುಭವಿಸಿದ್ದೇವೆ. ಸನ್ನಿವೇಶಗಳನ್ನು ರದ್ದುಗೊಳಿಸಿದಾಗ ಈ ಅನುಭವದಿಂದ ಈಗ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತಾ, ನಾವು ನಮ್ಮ ಮೂಲ ಜೀವನಶೈಲಿಗೆ ಅನುಗುಣವಾಗಿ ಪರಿಸರ ಹೊಂದಾಣಿಕೆಯ ಜೀವನಶೈಲಿಗೆ ಅಂಟಿಕೊಳ್ಳಬೇಕು, ದುಂದುವೆಚ್ಚ ಮತ್ತು ಕುಂದುಕೊರತೆಗಳನ್ನು ತಪ್ಪಿಸಬೇಕು. ಈ ಅನುಭವಗಳಿಂದ ಕಲಿಯುವುದು ಮತ್ತು ಸಾಮಾನ್ಯ ಜೀವನವು ಪುನಃಸ್ಥಾಪನೆಯಾದಾಗ ವ್ಯರ್ಥವಾದ ಖರ್ಚುಗಳನ್ನು ತಡೆಯಲು ಮತ್ತು ಪರಿಸರಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದು ಜಾಣತನ.  ಪ್ರಕೃತಿ ಸ್ನೇಹಿ ಜೀವನಶೈಲಿಯನ್ನು ಪ್ರತಿಪಾದಿಸುವ ವ್ಯಾಪಕ ಚಳುವಳಿ ಬಲವಾಗಿ ಬೆಳೆಯುತ್ತಿದೆ. ಪರಿಸರ ಸಂರಕ್ಷಣೆ ಚಟುವಟಿಕೆಗಳ ಭಾಗವಾಗಿ ಸಂಘದ ಸ್ವಯಂ ಸೇವಕರು ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಮತ್ತು ಮರ ನೆಡುವಿಕೆ ಕುರಿತು ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ.       

            ಪ್ರಸ್ತುತ, ಆಯುರ್ವೇದ ಮತ್ತು ಇತರ ಚಿಕಿತ್ಸಾ ವಿಧಾನಗಳ ಬಳಕೆಯಿಂದ, ಪ್ರಾಥಮಿಕ ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಸ್ಥಳೀಯ ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪರಿಹರಿಸಬಹುದು. ನಾವು ವಲಯ ಮಟ್ಟದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಆಯೋಜಿಸಲು ಯೋಜಿಸಿದರೆ ಜಿಲ್ಲಾ ಮಟ್ಟದಲ್ಲಿ ತೃತೀಯ ಆರೋಗ್ಯ ಕೇಂದ್ರಗಳ ಲಭ್ಯತೆ ಮತ್ತು ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಔಷಧದ ಒಂದು ವಿಧಾನದ ಮೇಲುಗೈಗಾಗಿ ಸಂಘರ್ಷಕ್ಕೆ ಇಳಿಯುವ ಬದಲು, ಎಲ್ಲಾ ಚಿಕಿತ್ಸಾ ವಿಧಾನಗಳ ತರ್ಕಬದ್ಧ ಬಳಕೆಯು ಎಲ್ಲರಿಗೂ ಕೈಗೆಟುಕುವ, ಲಭ್ಯವಿರುವ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತದೆ.  

ನಮ್ಮ ಆರ್ಥಿಕ ದೃಷ್ಠಿಕೋನ

            ಪ್ರಚಲಿತ ಜಾಗತಿಕ ಆರ್ಥಿಕ ಮಾದರಿಯು ಹೊಸ ಸವಾಲುಗಳಿಂದ ಅಲುಗಾಡುತ್ತಿದೆ ಅದು ಇತರ ರಾಷ್ಟ್ರಗಳ ಗ್ರಹಿಕೆಗೆ ಮೀರಿದೆ. ಯಾಂತ್ರೀಕರಣ ಮತ್ತು ನಿರುದ್ಯೋಗದ ಹೆಚ್ಚಳ, ಅನೈತಿಕ ತಂತ್ರಜ್ಞಾನದಿಂದಾಗಿ ಮಾನವ ಮೌಲ್ಯ ವ್ಯವಸ್ಥೆಯಲ್ಲಿ ಕುಸಿತ ಮತ್ತು ಹೊಣೆಗಾರಿಕೆ ಇಲ್ಲದ ಶಕ್ತಿ ಕೆಲವು ಉದಾಹರಣೆಗಳಾಗಿವೆ. ಇಡೀ ವಿಶ್ವವು ಈಗ ಭಾರತದತ್ತ ನೋಡುತ್ತಿದೆ, ಆರ್ಥಿಕ ವ್ಯವಸ್ಥೆ ಮತ್ತು ಅಭಿವೃದ್ಧಿಯ ಹೊಸ ಮಾನದಂಡಗಳನ್ನು ನಿರೀಕ್ಷಿಸುತ್ತಿದೆ.  ನಮ್ಮ ರಾಷ್ಟ್ರದ ಸುದೀರ್ಘ ಜೀವನ ಅನುಭವ ಮತ್ತು ದೇಶ ಮತ್ತು ವಿದೇಶಗಳಲ್ಲಿ ಮಾಡಿದ ಆರ್ಥಿಕ ಪ್ರಯತ್ನಗಳಿಂದ ನಮ್ಮ ವಿಭಿನ್ನ ಆರ್ಥಿಕ ದೃಷ್ಟಿಕೋನವನ್ನು ಪಡೆಯಲಾಗಿದೆ. ಅದರಲ್ಲಿ, ಸಂತೋಷದ ಮೂಲವು ಮನುಷ್ಯನ ಒಳಗಿದೆ ಎಂದು ನಂಬಲಾಗಿದೆ. ಸಂತೋಷವು ವಸ್ತುಗಳಲ್ಲಿ ಕಂಡುಬರುವುದಿಲ್ಲ. ಸಂತೋಷವು ಕೇವಲ ದೇಹದಿಂದ ಮಾತ್ರವಲ್ಲ. ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮ ಈ ನಾಲ್ಕಕ್ಕೂ ಸಂತೋಷವನ್ನು ನೀಡುವ ಮಾನವನು, ಸೃಷ್ಟಿ ಮತ್ತು ಸಮಷ್ಠಿಯನ್ನು ಒಟ್ಟಾಗಿ ಅಭಿವೃದ್ಧಿಪಡಿಸಿ, ಅದನ್ನು ಪರಮೇಷ್ಠಿಯ ಕಡೆಗೆ ಕೊಡೊಯ್ಯುತ್ತಾನೆ; ಅರ್ಥ-ಕಾಮವನ್ನು ಧರ್ಮದ ಶಿಸ್ತಿನ ಅಡಿಯಲ್ಲಿ ನಡೆಸುವ ಮೂಲಕ ಮಾನವರ ನಿಜವಾದ ಸ್ವಾತಂತ್ರ್ಯವನ್ನು ಉತ್ತೇಜಿಸುವ ಆರ್ಥಿಕತೆಯನ್ನು ಇಲ್ಲಿ ಉತ್ತಮವೆಂದು ಪರಿಗಣಿಸಲಾಗಿದೆ. ನಮ್ಮ ಆರ್ಥಿಕ ದೃಷ್ಟಿಕೋನದಲ್ಲಿ ಉಪಭೋಗದಲ್ಲಿಯಲ್ಲ ಸಂಯಮಕ್ಕೆ ಮಹತ್ವವಿದೆ. ಮಾನವ ಭೌತ್ತಿಕ ಸಂಪತ್ತಿನ ವಸ್ತು ಮತ್ತು ಸಾಧನಗಳ ವಿಶ್ವಸ್ತನೇ ಹೊರತು ಅದರ ಮಾಲೀಕನಲ್ಲ. ಇದು ಬ್ರಹ್ಮಾಂಡದ ಒಂದು ಭಾಗವಾಗಿದೆ, ವಿಶ್ವವನ್ನು ತನ್ನ ಜೀವನೋಪಾಯಕ್ಕಾಗಿ ಬಳಸಿಕೊಳ್ಳುವುದರೊಂದಿಗೆ, ಅದನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಅದರ ಕರ್ತವ್ಯವಾಗಿದೆ, ಇದು ನಮ್ಮ ನಂಬಿಕೆ. ಈ ದೃಷ್ಟಿ ಪ್ರತ್ಯೇಕವಾದುದಲ್ಲ. ಇದು ಬಂಡವಾಳಶಾಹಿ ಅಥವಾ ವ್ಯಾಪಾರಿ ಅಥವಾ ಉತ್ಪಾದಕ ಅಥವಾ ಕಾರ್ಮಿಕರ ಏಕಪಕ್ಷೀಯ ಹಿತಾಸಕ್ತಿಗಾಗಿ ಮಾತ್ರವಲ್ಲ. ಇದನ್ನೆಲ್ಲ ಗ್ರಾಹಕರೊಂದಿಗೆ ಕುಟುಂಬವಾಗಿ ನೋಡಿದರೆ, ಎಲ್ಲರಿಗೂ ಸಮತೋಲಿತ, ಪರಸ್ಪರ ಸಂಬಂಧದ ಆಧಾರದ ಮೇಲೆ ಸಂತೋಷದ ಕೂಡಿರುವ ದೃಷ್ಟಿ. ಈ ದೃಷ್ಟಿಕೋನವನ್ನು ಆಧರಿಸಿ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಸ್ಥಾಪಿಸುವುದು, ಪ್ರಪಂಚದಾದ್ಯಂತದ ಮೌಲ್ಯಯುತವಾದ ನಮ್ಮ ಕಲಿಕೆಗಳನ್ನು ಕ್ರೂಡಿಕರಿಸುವುದು ಮತ್ತು ಅದನ್ನು ನಮ್ಮ ಪ್ರಸ್ತುತ ರಾಷ್ಟ್ರೀಯ ಸನ್ನಿವೇಶದೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ. ಸಮಗ್ರ ಮತ್ತು ಏಕೀಕೃತ ಅಭಿವೃದ್ಧಿಯ ಹೊಸ ಪರಿಕಲ್ಪನೆಯ ಮಾದರಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಾಭಾವಿಕ ಫಲಿತಾಂಶ, “ಸ್ವಯಂ” ದ ದೃಷ್ಟಿಕೋನದ ಬಹುನಿರೀಕ್ಷಿತ ಆವಿಷ್ಕಾರ.   

ಜನ ಸಂಖ್ಯಾ ನೀತಿ

      ದೇಶದ ಅಭಿವೃದ್ಧಿಯನ್ನು ಪುನರ್ವಿಮರ್ಶಿಸುವಾಗ ಒಂದು ಸಂಕಷ್ಟವು ಮುನ್ನೆಲೆಗೆ ಬರುತ್ತದೆ, ಅದು ಅನೇಕರನ್ನು ಚಿಂತೆಗೀಡು ಮಾಡುತ್ತದೆ. ದೇಶದ ಜನಸಂಖ್ಯೆಯ ತ್ವರಿತ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ಸವಾಲನ್ನು ಸರಿಯಾಗಿ ಪರಿಗಣಿಸಬೇಕು. 2015 ರಲ್ಲಿ ರಾಂಚಿಯಲ್ಲಿ ನಡೆದ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ವಿಷಯದ ಕುರಿತು ನಿರ್ಣಯವನ್ನು ಅಂಗೀಕರಿಸಲಾಯಿತು.

ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ನಿರ್ಣಯ: ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿ ಅಸಮತೋಲನದ ಸವಾಲು

            ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ತೆಗೆದುಕೊಂಡ ಹಲವಾರು ಕ್ರಮಗಳಿಂದಾಗಿ, ಕಳೆದ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೆ, ಈ ನಿಟ್ಟಿನಲ್ಲಿ, 2011 ರ ಜನಗಣತಿಯ ಧಾರ್ಮಿಕ ಆಧಾರದ (Religious ground) ಮೇಲೆ ಮಾಡಿದ ವಿಶ್ಲೇಷಣೆಯಿಂದ ವಿವಿಧ ಸಮುದಾಯಗಳ ಜನಸಂಖ್ಯೆಯ ಅನುಪಾತದಲ್ಲಿನ ಬದಲಾವಣೆಯ ದೃಷ್ಟಿಯಿಂದ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಬೇಕಾಗಿದೆ ಎಂದು ಅಖಿಲ ಭಾರತ ಕಾರ್ಯಕಾರಿ ಮಂಡಳಿಯು ನಂಬಿದೆ. ವಿವಿಧ ಸಮುದಾಯಗಳ ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿನ ಭಾರೀ ವ್ಯತ್ಯಾಸದಿಂದಾಗಿ, ನಿರಂತರ ವಿದೇಶಿ ಒಳನುಸುಳುವಿಕೆ ಮತ್ತು ಮತಾಂತರದಿಂದಾಗಿ, ದೇಶದ ಒಟ್ಟಾರೆ ಜನಸಂಖ್ಯೆಯ ಅನುಪಾತದಲ್ಲಿ ಹೆಚ್ಚುತ್ತಿರುವ ಅಸಮತೋಲನ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ದೇಶದ ಏಕತೆ, ಸಮಗ್ರತೆ ಮತ್ತು ಸಾಂಸ್ಕೃತಿಕ ಗುರುತಗಳ ಮೇಲೆ ಗಂಭೀರ ಬಿಕ್ಕಟ್ಟನ್ನು ಉಂಟುಮಾಡಬಹುದು.

ಭಾರತವು 1952 ರಲ್ಲಿಯೇ ಜನಸಂಖ್ಯೆಯನ್ನು ನಿಯಂತ್ರಿಸುವ ಕ್ರಮಗಳನ್ನು ಘೋಷಿಸಿದ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿತ್ತು, ಆದರೆ 2000 ನೇ ಇಸವಿಯಲ್ಲಿ ಮಾತ್ರ ಅದು ಸಮಗ್ರ ಜನಸಂಖ್ಯಾ ನೀತಿಯನ್ನು ರೂಪಿಸಲು ಮತ್ತು ಜನಸಂಖ್ಯಾ ಆಯೋಗವನ್ನು ಸ್ಥಾಪಿಸಲು ಸಾಧ್ಯವಾಯಿತು. 2.1 ಫಲವತ್ತತೆಯ ಆದರ್ಶ ಸ್ಥಿತಿಯನ್ನು ಸಾಧಿಸುವ ಮೂಲಕ 2045 ರ ವೇಳೆಗೆ ಸ್ಥಿರ ಮತ್ತು ಆರೋಗ್ಯಕರ ಜನಸಂಖ್ಯೆಯ ಗುರಿಯನ್ನು ಸಾಧಿಸುವುದು ಈ ನೀತಿಯ ಉದ್ದೇಶವಾಗಿತ್ತು. ನಮ್ಮ ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಫಲವತ್ತತೆಯ ದರದ ಈ ಗುರಿ ಸಮಾಜದ ಎಲ್ಲಾ ವರ್ಗಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 2005-06ರ ರಾಷ್ಟ್ರೀಯ ಫಲವತ್ತತೆ ಮತ್ತು ಆರೋಗ್ಯ ಸಮೀಕ್ಷೆ ಮತ್ತು 2011 ರ ಜನಗಣತಿಯು 0-6 ವಯಸ್ಸಿನ ಗುಂಪಿನ ಜನಾಂಗೀಯ ಆಧಾರದ ಮೇಲೆ ಪಡೆಯಲಾಗಿದೆ, ಇದು ‘ಅಸಮಾನ‘ ಒಟ್ಟು ಫಲವತ್ತತೆ ದರ ಮತ್ತು ಮಕ್ಕಳ ಜನಸಂಖ್ಯೆಯ ಅನುಪಾತವನ್ನು ಸೂಚಿಸುತ್ತದೆ. 1951 ಮತ್ತು 2011 ರ ನಡುವಿನ ಜನಸಂಖ್ಯೆಯ ಬೆಳವಣಿಗೆಯ ದರದಲ್ಲಿನ ದೊಡ್ಡ ವ್ಯತ್ಯಾಸದಿಂದಾಗಿ, ಭಾರತದಲ್ಲಿ ಹುಟ್ಟಿಕೊಂಡ ಪಂಥಗಳ ಅನುಯಾಯಿಗಳ ಪ್ರಮಾಣವು ದೇಶದ ಜನಸಂಖ್ಯೆಯಲ್ಲಿ 88 ಪ್ರತಿಶತದಿಂದ 83.8 ಪ್ರತಿಶತಕ್ಕೆ ಇಳಿದಿದೆ, ಆದರೆ ಮುಸ್ಲಿಂ ಜನಸಂಖ್ಯೆಯು ಅನುಪಾತವು 9.8 ಶೇಕಡದಿಂದ 14.23 ಶೇಕಡಾಕ್ಕೆ ಹೆಚ್ಚಾಗಿದೆ.

            ಇದರ ಜೊತೆಗೆ, ದೇಶದ ಗಡಿ ಪ್ರದೇಶಗಳು ಹಾಗೂ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದರವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ, ಇದು ಬಾಂಗ್ಲಾದೇಶದಿಂದ ನಿರಂತರ ಒಳನುಸುಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ನೇಮಿಸಿದ ಉಪಮನ್ಯು ಹಜ್ರಿಕಾ ಆಯೋಗದ ವರದಿಯಲ್ಲಿ ಮತ್ತು ಕಾಲಕಾಲಕ್ಕೆ ನ್ಯಾಯಾಂಗ ನಿರ್ಧಾರಗಳಲ್ಲಿ ಈ ಸತ್ಯಾಂಶಗಳು ದೃಢಪಟ್ಟಿವೆ. ಅಕ್ರಮ ನುಸುಳುಕೋರರು ರಾಜ್ಯದ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಹಾಗೂ ಈ ರಾಜ್ಯಗಳ ಸೀಮಿತ ಸಂಪನ್ಮೂಲಗಳ ಮೇಲೆ ದೊಡ್ಡ ಹೊರೆಯಾಗುತ್ತಿದ್ದಾರೆ ಮತ್ತು ಸಾಮಾಜಿಕ–ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಾರೆ ಎಂಬುದು ಸಹ ಒಂದು ಸತ್ಯವಾಗಿದೆ.

            ಧರ್ಮದ ಆಧಾರದ ಮೇಲೆ ಈಶಾನ್ಯ ರಾಜ್ಯಗಳಲ್ಲಿನ ಜನಸಂಖ್ಯಾ ಅಸಮತೋಲನವು ಇನ್ನಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಅರುಣಾಚಲ ಪ್ರದೇಶದಲ್ಲಿ, 1951 ರಲ್ಲಿ 99.21 ರಷ್ಟಿದ್ದ ಭಾರತದಲ್ಲಿ ಹುಟ್ಟಿಕೊಂಡ ಪಂಥಗಳನ್ನು ನಂಬುವವರು 2001 ರಲ್ಲಿ ಕೇವಲ 81.3 ಶೇಕಡಾ ಮತ್ತು 2011 ರಲ್ಲಿ 67 ಪ್ರತಿಶತದಷ್ಟು ಉಳಿದಿದ್ದಾರೆ. ಕೇವಲ ಒಂದು ದಶಕದಲ್ಲಿ, ಅರುಣಾಚಲ ಪ್ರದೇಶದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು 13 ಪ್ರತಿಶತದಷ್ಟು ಹೆಚ್ಚಾಗಿದೆ. ಅದೇ ರೀತಿ, ಮಣಿಪುರದ ಜನಸಂಖ್ಯೆಯಲ್ಲಿ, 1951 ರಲ್ಲಿ ಅವರ ಪ್ರಮಾಣವು 80 ಪ್ರತಿಶತಕ್ಕಿಂತ ಹೆಚ್ಚಿತ್ತು, ಇದು 2011 ರ ಜನಗಣತಿಯಲ್ಲಿ ಕೇವಲ 50 ಪ್ರತಿಶತ ಮಾತ್ರ ಉಳಿದಿದೆ. ಮೇಲಿನ ಉದಾಹರಣೆ ಮತ್ತು ಕ್ರೈಸ್ತರ ಅಸಾಮಾನ್ಯ ಬೆಳವಣಿಗೆ ದರವು ದೇಶದ ಹಲವು ಜಿಲ್ಲೆಗಳಲ್ಲಿ ಕೆಲವು ಸ್ವಾರ್ಥಿ ಅಂಶಗಳಿಂದ ಸಂಘಟಿತ ಮತ್ತು ಉದ್ದೇಶಿತ ಮತಾಂತರ ಚಟುವಟಿಕೆಯನ್ನು ಮಾತ್ರ ಸೂಚಿಸುತ್ತದೆ.

ಈ ಎಲ್ಲಾ ಜನಸಂಖ್ಯಾ ಅಸಮತೋಲನಗಳ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿ, ಅಖಿಲ ಭಾರತ ಕಾರ್ಯಕಾರಿ ಮಂಡಳಿಯು ಸರ್ಕಾರವನ್ನು ಈ ರೀತಿಯಾಗಿ ಒತ್ತಾಯಿಸುತ್ತದೆ:

            ಲಭ್ಯವಿರುವ ಸಂಪನ್ಮೂಲಗಳು, ಭವಿಷ್ಯದ ಅಗತ್ಯತೆಗಳು ಮತ್ತು ದೇಶದ ಜನಸಂಖ್ಯಾ ಅಸಮತೋಲನದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ದೇಶದ ಜನಸಂಖ್ಯಾ ನೀತಿಯನ್ನು ಮರು–ನಿರ್ಧರಿಸಿ ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು.

            ಗಡಿಯಾಚೆಗಿನ ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಬೇಕು. ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (National Register of Citizens) ರಚಿಸುವ ಮೂಲಕ, ಈ ಒಳನುಸುಳುಕೋರರು ಪೌರತ್ವದ ಹಕ್ಕುಗಳನ್ನು ಮತ್ತು ಭೂಮಿಯನ್ನು ಖರೀದಿಸುವ ಹಕ್ಕಿನಿಂದ ವಂಚಿತರಾಗಬೇಕು.

ಅಖಿಲ ಭಾರತ ಕಾರ್ಯಕಾರಿ ಮಂಡಳಿಯು ಎಲ್ಲಾ ಸ್ವಯಂಸೇವಕರನ್ನು ಒಳಗೊಂಡಂತೆ ದೇಶವಾಸಿಗಳನ್ನು ಸಾರ್ವಜನಿಕ ಜಾಗೃತಿಯ ಮೂಲಕ ದೇಶವನ್ನು ಜನಸಂಖ್ಯಾ ಅಸಮತೋಲನದಿಂದ ರಕ್ಷಿಸಲು ಎಲ್ಲಾ ಕಾನೂನುಬದ್ಧ ಪ್ರಯತ್ನಗಳನ್ನು ಮಾಡಿ, ಜನಸಂಖ್ಯೆಯಲ್ಲಿ ಅಸಮತೋಲನ ಉಂಟುಮಾಡುವ ಎಲ್ಲಾ ಕಾರಣಗಳನ್ನು ಗುರುತಿಸಿ, ತಮ್ಮ ರಾಷ್ಟ್ರೀಯ ಕರ್ತವ್ಯವೆಂದು ಪರಿಗಣಿಸುತ್ತದೆ.

            ಈ ವಿಷಯಗಳಿಗೆ ಸಂಬಂಧಿಸಿದ ಸಂಬಂಧಿತ ನೀತಿಗಳ ಸರ್ವತ್ರ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ವ್ಯಾಪಕವಾದ ಸಾರ್ವಜನಿಕ ಸಂವೇದನೆ ಮತ್ತು ನಿಷ್ಪಕ್ಷಪಾತ ಕ್ರಮಗಳ ಅಗತ್ಯವಿರುತ್ತದೆ. ಪ್ರಸ್ತುತ ಸನ್ನಿವೇಶಗಳಲ್ಲಿ, ಸ್ಥಳೀಯ ಹಿಂದುಗಳ ಮೇಲೆ ಕಿರುಕುಳ, ಹೆಚ್ಚುತ್ತಿರುವ ಅಪರಾಧೀಕರಣ ಮತ್ತು ಅಸಮತೋಲಿತ ಜನಸಂಖ್ಯೆಯ ಬೆಳವಣಿಗೆ ಕಂಡುಬಂದು ತಮ್ಮ ಪ್ರದೇಶಗಳನ್ನು ತೊರೆಯುವಂತೆ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಪಶ್ಚಿಮ ಬಂಗಾಳದ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರ ಮತ್ತು ಅಲ್ಲಿನ ಹಿಂದೂ ಜನರ ಕರುಣಾಜನಕ ಸ್ಥಿತಿಯು ಸರ್ಕಾರದ ಅನಾಗರಿಕ ಓಲೈಕೆ ರಾಜಕಾರಣ ಮತ್ತು ಜನಸಂಖ್ಯೆಯ ಅಸಮತೋಲನಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ಎಲ್ಲರಿಗೂ ಸಮಾನವಾಗಿ ಅನ್ವಯಿಸಬಹುದಾದ ನೀತಿಯನ್ನು ಹೊಂದಿರುವುದು ಅವಶ್ಯಕ. ನಮ್ಮ ಸಣ್ಣ ಗುಂಪುಗಳ ಸಂಕುಚಿತ ಹಿತಾಸಕ್ತಿಗಳ ಹಿಡಿತದಿಂದ ಹೊರಬಂದು, ನಾವೆಲ್ಲರೂ ಇಡೀ ದೇಶದ ಹಿತಾಸಕ್ತಿಯನ್ನು ಪ್ರಧಾನವಾಗಿ ತೆಗೆದುಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.   

ವಾಯುವ್ಯ ಗಡಿಯಲ್ಲಿ….

            ಮತ್ತೊಂದು ಅನಿರೀಕ್ಷಿತವಲ್ಲದ, ಆದರೆ ನಿರೀಕ್ಷೆಗಿಂತ ಮುಂಚಿತವಾಗಿ ಬಂದಿರುವ ಒಂದು ಸನ್ನಿವೇಶವೆಂದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದೆ! ಅವರ ಪೂರ್ವಭಾವಿ – ಭಾವೋದ್ರಿಕ್ತ ಮತಾಂಧತೆ, ದೌರ್ಜನ್ಯ ಮತ್ತು ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ – ಪ್ರತಿಯೊಬ್ಬರೂ ತಾಲಿಬಾನ್ ಬಗ್ಗೆ ಭಯಭೀತರಾಗಲು ಇಷ್ಟು ಸಾಕು. ಆದರೆ ಈಗ ಚೀನಾ, ಪಾಕಿಸ್ತಾನ ಮತ್ತು ಟರ್ಕಿ ತಾಲಿಬಾನ್ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಅಬ್ದಾಲಿಯಿಂದ, ನಮ್ಮ ವಾಯುವ್ಯ ಗಡಿಗಳ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಚಿಂತಿಸುವಂತಾಗಿದೆ. ತಾಲಿಬಾನ್, ಕೆಲವೊಮ್ಮೆ ಶಾಂತಿ ಮತ್ತು ಕೆಲವೊಮ್ಮೆ ಕಾಶ್ಮೀರದ ಬಗ್ಗೆ ಜೊತೆಜೊತೆಯಲ್ಲೇ ಮಾತನಾಡಲಾರಂಭಿಸಿದೆ. ಇದು ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲವೆಂಬುದರ ಸೂಚಕವಾಗಿದೆ. ನಾವು ನಮ್ಮ ಕಾರ್ಯತಂತ್ರದ ಸನ್ನದ್ಧತೆಯನ್ನು ಸಂಪೂರ್ಣವಾಗಿ ಬಿಗಿಯಾಗಿ ಇಟ್ಟುಕೊಳ್ಳಬೇಕು ಮತ್ತು ಎಲ್ಲಾ ಗಡಿಗಳಲ್ಲಿ ಜಾಗರೂಕರಾಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ, ದೇಶದ ಆಂತರಿಕ ಭದ್ರತೆ ಮತ್ತು ಸ್ಥಿರತೆಯನ್ನು ಸರ್ಕಾರ ಮತ್ತು ಸಮಾಜವು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ರಕ್ಷಿಸಬೇಕು. ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಸೈಬರ್ ಭದ್ರತೆಯಂತಹ ಹೊಸ ಕಾಳಜಿಯೊಂದಿಗೆ ನವೀಕೃತವಾಗಲು ಪ್ರಯತ್ನಗಳನ್ನು ಹೆಚ್ಚಿಸಬೇಕು. ಭದ್ರತೆಯಂತಹ ಕ್ಷೇತ್ರಗಳಲ್ಲಿ ನಾವು ಆದಷ್ಟು ಬೇಗ ಸ್ವಾವಲಂಬಿಗಳಾಗಿರಬೇಕು. ಮಾತುಕಥೆಯ ಮಾರ್ಗಗಳನ್ನು‌ ತರೆದಿಟ್ಟುಕೊಂಡಿರಬೇಕು, ಹೃದಯ ಪರಿವರ್ತನೆ ಯಾವಾಗ ಬೇಕಾದರೂ ಆಗಬಹುದು ಎಂಬ ನಂಬೆಕೆಯನ್ನು ಜೀವಂತವಾಗಿರಿಸಿಕೊಳ್ಳುವುದರ ಜೊತೆಗೆ ಎಲ್ಲಾ ಸಂಭವಗಳನ್ನು ಎದುರಿಸುವ ತಯಾರಿಯನ್ನು ಮಾಡಿಕೊಂಡಿರಬೇಕು. ಈ ದುರಂತ ಸಮಯದಲ್ಲಿ, ಭಾರತದ ಉಳಿದ ಭಾಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಭಾವನಾತ್ಮಕ ಏಕೀಕರಣದ ಅಗತ್ಯವನ್ನು ಸಹ ಅರಿತುಕೊಳ್ಳಬೇಕು. ರಾಷ್ಟ್ರೀಯ ಮನೋಭಾವದ ನಾಗರಿಕರ ಮನೋಬಲವನ್ನು ಮುರಿಯಲು ಮತ್ತು ಅವರ ಭಯೋತ್ಪಾದನೆಯ ಸಾಮ್ರಾಜ್ಯವನ್ನು ಪುನಃಸ್ಥಾಪಿಸಲು; ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಆ ನಾಗರಿಕರ – ವಿಶೇಷವಾಗಿ ಹಿಂದೂಗಳ ಉದ್ದೇಶಿತ ಹಿಂಸೆಯ ಮಾರ್ಗವನ್ನು ಅಳವಡಿಸಿಕೊಂಡಿದ್ದಾರೆ. ನಾಗರಿಕರು ಧೈರ್ಯಶಾಲಿಗಳು ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಜೊತೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಮುಗಿಸಲು ಪ್ರಯತ್ನಗಳು ವೇಗಗೊಳ್ಳಬೇಕು. 

ಹಿಂದು ದೇವಾಲಯಗಳು

            ರಾಷ್ಟ್ರದ ಏಕತೆ, ಸಮಗ್ರತೆ, ಭದ್ರತೆ, ಅಭಿವೃದ್ಧಿ, ಸಮೃದ್ಧಿ ಮತ್ತು ಶಾಂತಿಗೆ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳ ಜೊತೆಗೆ ಹಿಂದೂ ಸಮಾಜದ ಕೆಲವು ಕಾಳಜಿಗಳಿವೆ; ಅದನ್ನು ಪರಿಹರಿಸುವ ಪ್ರಯತ್ನಗಳು ಕೂಡ ಅಗತ್ಯ. ಇಂದಿನ ಹಿಂದೂ ದೇವಾಲಯಗಳ ಸ್ಥಿತಿಯು ಅಂತಹ ಒಂದು ಚಿಂತನೆಯ ವಿಷಯವಾಗಿದೆ. ದಕ್ಷಿಣ ಭಾರತದ ದೇವಾಲಯಗಳನ್ನು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿಯಂತ್ರಿಸುತ್ತವೆ. ದೇಶದ ಉಳಿದ ಭಾಗಗಳಲ್ಲಿ ಕೆಲವು ಸರ್ಕಾರದಿಂದ ನಿರ್ವಹಿಸಲ್ಪಡುತ್ತವೆ, ಕೆಲವು ಅವಿಭಕ್ತ ಕುಟುಂಬ ಟ್ರಸ್ಟ್‌ಗಳ ಮೂಲಕ ನಿರ್ವಹಿಸಲ್ಪಡುತ್ತವೆ ಮತ್ತು ಕೆಲವು ಸಮಾಜದ ನೋಂದಣಿ ಕಾಯಿದೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಟ್ರಸ್ಟ್‌ಗಳಿಂದ ನಡೆಸಲ್ಪಡುತ್ತವೆ. ಕೆಲವು ದೇವಾಲಯಗಳು ಸಂಪೂರ್ಣವಾಗಿ ಯಾವುದೇ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ದೇವಸ್ಥಾನಗಳ ಚರ ಮತ್ತು ಸ್ಥಿರಾಸ್ತಿಗಳ ದುರುಪಯೋಗದ ಪ್ರಕರಣಗಳು ಬೆಳಕಿಗೆ ಬಂದಿವೆ. ನಿರ್ದಿಷ್ಟ ಆಚಾರಗಳು, ಶಾಸ್ತ್ರ ಸಂಪ್ರದಾಯಗಳು ಪ್ರತಿ ದೇವಸ್ಥಾನಕ್ಕೆ ಮತ್ತು ಅದರಲ್ಲಿ ನೆಲೆಸಿರುವ ದೇವರಿಗೆ ಅನ್ವಯಿಸುತ್ತವೆ. ಆ ಆಚರಣೆಗಳಲ್ಲಿ ಹಸ್ತಕ್ಷೇಪ ಮತ್ತು ಮಧ್ಯಪ್ರವೇಶದ ನಿದರ್ಶನಗಳೂ ವರದಿಯಾಗಿವೆ. ದೇವರ ದರ್ಶನ, ಆತನನ್ನು ಆರಾಧಿಸುವುದು, ಜಾತಿ ಮತ ಬೇಧವಿಲ್ಲದೆ ಎಲ್ಲ ಭಕ್ತರಿಗೂ ಮುಕ್ತ ಪ್ರವೇಶವಾಗಬೇಕು, ಅದು ಎಲ್ಲ ದೇವಸ್ಥಾನಗಳಲ್ಲಿ ಇಲ್ಲ, ಇರಬೇಕು. ದೇವಾಲಯಗಳು, ಧಾರ್ಮಿಕ ನೀತಿಗಳು, ಧರ್ಮಶಾಸ್ತ್ರಗಳ ಜ್ಞಾನ, ಧಾರ್ಮಿಕ ವಿದ್ವಾಂಸರು, ಹಿಂದೂ ಸಮಾಜದ ನಂಬಿಕೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಸನ್ನಿವೇಶಗಳು ಎಲ್ಲರ ಮುಂದಿವೆ. “ಜಾತ್ಯತೀತ” ವಾಗಿದ್ದರೂ ಸಹ, ಹಿಂದೂ ಧಾರ್ಮಿಕ ಸ್ಥಳಗಳನ್ನು ಮಾತ್ರ ದಶಕಗಳ ಮತ್ತು ಶತಮಾನಗಳ ಕಾಲ ವ್ಯವಸ್ಥೆಯ ಹೆಸರಿನಲ್ಲಿ ವಶಪಡಿಸಿಕೊಳ್ಳಬೇಕು, ಅವುಗಳನ್ನು ಭಕ್ತರಲ್ಲದವರು / ಅಧರ್ಮಿಗಳು / ಧರ್ಮದ್ರೋಹಿಗಳು ನಡೆಸುತ್ತಾರೆ. ಅನ್ಯಾಯವನ್ನು ತೊಡೆದುಹಾಕಬೇಕು, ಹಿಂದೂ ದೇವಾಲಯಗಳ ನಿರ್ವಹಣೆ ಹಿಂದೂ ಭಕ್ತರಿಂದ ಆಗಬೇಕು ಮತ್ತು ಹಿಂದೂ ದೇವಾಲಯಗಳ ಆಸ್ತಿ ದೇವರ ಪೂಜೆಗೆ ಮತ್ತು ಹಿಂದೂ ಸಮಾಜದ ಸೇವೆ ಹಾಗೂ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು, ಇದು ಸಮಂಜಸವಾಗಿದೆ ಮತ್ತು ಅಗತ್ಯವಾಗಿದೆ. ಈ ಚಿಂತನೆಯ ಜೊತೆಯಲ್ಲಿ, ದೇವಸ್ಥಾನಗಳನ್ನು ಮತ್ತೊಮ್ಮೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಜೀವನದ ಕೇಂದ್ರಬಿಂದುವನ್ನಾಗಿಸುವ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ ಮತ್ತು ಹಿಂದೂ ಸಮಾಜದ ಬಲವನ್ನು ಆಧರಿಸಿ ದೇವಸ್ಥಾನಗಳ ಸೂಕ್ತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.

ನಮ್ಮ ಏಕಾತ್ಮತೆಯ ಸೂತ್ರ

            ಸರ್ಕಾರಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತೊಡಗಿರುವ ಜನರು ತಮ್ಮ ಕೆಲಸವನ್ನು ಮಾಡುತ್ತಿದ್ದರೂ ಸಹ, ಎಲ್ಲಾ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಭಾವದಿಂದ ಭಾಗವಹಿಸುವಿಕೆ ಮುಖ್ಯವಾಗಿದೆ. ಸಮಾಜದ ಉಪಕ್ರಮದಿಂದ ಮಾತ್ರ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಆದ್ದರಿಂದ, ಮೇಲಿನ ಸಮಸ್ಯೆಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಗೃತಿಯ ಜೊತೆಗೆ, ಸಮಾಜದ ಮನಸ್ಸು, ಮಾತು ಮತ್ತು ನಡವಳಿಕೆಯ ಅಭ್ಯಾಸಗಳನ್ನು ಬದಲಾಯಿಸುವ ಅವಶ್ಯಕತೆಯಿದೆ. ಆದ್ದರಿಂದ, ಪ್ರಾಚೀನ ಕಾಲದಿಂದ ಹರಿಯುವ ಈ ಸನಾತನ ರಾಷ್ಟ್ರದ ಅಮರ ಸತ್ವದ ಬಗ್ಗೆ ತಿಳುವಳಿಕೆ ಮತ್ತು ಜ್ಞಾನವು ನಮ್ಮ ಸಮಾಜದ ಸಾಮೂಹಿಕ ಪ್ರಜ್ಞೆಯಲ್ಲಿ ಚೆನ್ನಾಗಿ ವ್ಯಾಪಿಸಬೇಕಾಗಿದೆ. ಭಾರತದ ವೈವಿಧ್ಯಮಯ ಭಾಷಿಕ, ಧಾರ್ಮಿಕ ಮತ್ತು ಪ್ರಾದೇಶಿಕ ಸಂಪ್ರದಾಯಗಳನ್ನು ಸಮಗ್ರ ಘಟಕವಾಗಿ ಸಂಯೋಜಿಸುವುದು ಮತ್ತು ಎಲ್ಲರ ನಡುವೆ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳೊಂದಿಗೆ ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುವುದು ಮತ್ತು ಗೌರವಿಸುವುದು ನಮ್ಮ ಸಂಸ್ಕೃತಿ. ನಮ್ಮ ನಡವಳಿಕೆಯು ಈ ಪರಂಪರೆಗೆ ಅನುಗುಣವಾಗಿರಬೇಕು. ನಾವು ನಮ್ಮ ರಾಜಕೀಯ, ಧಾರ್ಮಿಕ, ಜಾತಿ ಆಧಾರಿತ, ಭಾಷಿಕ ಮತ್ತು ಪ್ರಾದೇಶಿಕ ಗುರುತುಗಳಿಂದ ಪಡೆದ ಅಹಂಕಾರದ ಹೆಮ್ಮೆಯನ್ನು ಕರಗಿಸಬೇಕು. ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಆ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು. ಹಸನ್‌ ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂಬುದು ಸತ್ಯದ ಗ್ರಹಿಕೆಯಾಗಿದೆ. ಅವರು ಎಲ್ಲರಿಗೂ ಪ್ರಶಂಸನೀಯ ಆದರ್ಶಪ್ರಾಯರು. ಧಾರ್ಮಿಕ ಆಕ್ರಮಣಶೀಲತೆ, ಪರಮಾಧಿಕಾರ ವರ್ತನೆ ಮತ್ತು ಸ್ವಾರ್ಥಿ ಹಿತಾಸಕ್ತಿಗಳಿಂದ ಉದ್ಭವಿಸುವ ಪ್ರತ್ಯೇಕತಾವಾದಿ ಮನಸ್ಥಿತಿಯಿಂದ ಹೊರಬಂದಾಗ, ಭಾರತ, ಅದರ ಸನಾತನ ಹಿಂದೂ ಸಂಸ್ಕೃತಿ ಮತ್ತು ಎಲ್ಲವನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿಂದು ಸಮಾಜವು ಕೇವಲ ರಕ್ಷಕನಾಗಬಹುದು ಎಂಬುದನ್ನು ಅವನು ಅರಿತುಕೊಳ್ಳುತ್ತಾನೆ. ಅಸಹಿಷ್ಣುತೆ, ಭಯೋತ್ಪಾದನೆ, ಸಂಘರ್ಷ, ವೈರತ್ವ ಮತ್ತು ಶೋಷಣೆಯ ದುರಂತದ ಹಿಡಿತದಿಂದ ಪ್ರಪಂಚವನ್ನು ಸನಾತನ ಹಿಂದೂ ಸಂಸ್ಕೃತಿ ಮತ್ತು ಎಲ್ಲವನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿಂದು ಸಮಾಜದಿಂದ ಮಾತ್ರ ರಕ್ಷಿಸಲು ಸಾಧ್ಯ.

ಸಂಘಟಿತ ಹಿಂದೂ ಸಮಾಜ

            ನಮ್ಮ ದೇಶದ ಇತಿಹಾಸದಲ್ಲಿ, ಪರಸ್ಪರ ಭಿನ್ನಾಭಿಪ್ರಾಯ, ಅನ್ಯಾಯ, ಹಿಂಸೆಯ ಘಟನೆಗಳು ಸಂಭವಿಸಿವೆ, ದೀರ್ಘಕಾಲದವರೆಗೆ ಯಾವುದಾದರು ಪ್ರತ್ಯೇಕತೆ, ಅಪನಂಬಿಕೆ, ಅಸಮಾನತೆ ಅಥವಾ ವೈರತ್ವವಿದ್ದರೆ ಅಥವಾ ವರ್ತಮಾನದಲ್ಲಿ ಈ ರೀತಿ ಏನಾದರೂ ಸಂಭವಿಸಿದಲ್ಲಿ; ಆ ಸಮಸ್ಯೆಗಳ ಕಾರಣವನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅವುಗಳನ್ನು ನಿವಾರಿಸುವ ಮೂಲಕ,  ಇಂತಹ ಘಟನೆ ಮರುಕಳಿಸಬಾರದು, ಪರಸ್ಪರ ದ್ವೇಷ, ಪ್ರತ್ಯೇಕತೆಯನ್ನು ತೆಗೆದುಹಾಕಬೇಕು ಮತ್ತು ಸಮಾಜವನ್ನು ಅಂತಹ ಮಾತು ಮತ್ತು ಕ್ರಿಯೆಯೊಂದಿಗೆ ಜೊಡಿಸಬೇಕು. ನಮ್ಮಲ್ಲಿರುವ ಭೇದಗಳನ್ನು ಮತ್ತು ಅಪಶ್ರುತಿಯನ್ನು ಬಳಸಿ ನಮ್ಮನ್ನು ವಿಭಜಿಸುವವರು, ಪರಸ್ಪರ ಪ್ರಾಮಾಣಿಕತೆಯ ಬಗ್ಗೆ ಅವಿಶ್ವಾಸವನ್ನು ಮೂಡಿಸುವವರು, ನಮ್ಮ ಶ್ರದ್ಧೆ ನಂಬಿಕೆಯನ್ನು ನಾಶಮಾಡವವರು ಮತ್ತು ಭ್ರಷ್ಟಗೊಳಿಸುವವರು ನಮ್ಮ ತಪ್ಪುನಡೆಗಳಿಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ, ಇದನ್ನು ಅರ್ಥಮಾಡಿಕೊಳ್ಳಬೇಕು. ಹಿಂದೂ ಸಮಾಜವು ಭಾರತದ ಮುಖ್ಯವಾಹಿನಿಯ ಮೌಲ್ಯ ವ್ಯವಸ್ಥೆಯ ಭಾಗವಾಗಿ, ಅದರ ಸಂಘಟಿತ ಸಾಮಾಜಿಕ ಶಕ್ತಿ, ವಿಶ್ವಾಸ ಮತ್ತು ನಿರ್ಭೀತ ಮನೋಭಾವವನ್ನು ಅರಿತುಕೊಂಡಾಗ ಮಾತ್ರ ಇದನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಹಿಂದುಗಳೆಂದು ಹೇಳಿಕೊಳ್ಳುವ ಪ್ರತಿಯೊಬ್ಬರ ಜವಾಬ್ದಾರಿಯೆಂದರೆ, ಅವರು ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ತಮ್ಮ ನಡವಳಿಕೆಯೊಂದಿಗೆ ಹಿಂದೂ ಜೀವನ ದೃಷ್ಟಿಕೋನದ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲಬೇಕು. ನಾವು ಎಲ್ಲಾ ರೀತಿಯ ಭಯಗಳಿಂದ ಮುಕ್ತರಾಗಬೇಕು. ದೌರ್ಬಲ್ಯವು ಹೇಡಿತನಕ್ಕೆ ಕಾರಣವಾಗುತ್ತದೆ.  ವೈಯಕ್ತಿಕ ಮಟ್ಟದಲ್ಲಿ, ನಾವು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಶಕ್ತಿ, ಧೈರ್ಯ, ಹುರುಪು ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಒಂದು ಸಮಾಜದ ಬಲವು ಅದರ ಏಕತೆಯಲ್ಲಿರುತ್ತದೆ; ಸಾಮೂಹಿಕ ಆಸಕ್ತಿ ಮತ್ತು ಬುದ್ಧಿವಂತಿಕೆ ಮತ್ತು ಅದರ ಕಡೆಗೆ ಸಮರ್ಪಣೆಯ ಬಗ್ಗೆ ಸೂಕ್ಷ್ಮತೆಯು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ವಿಚಾರಗಳು, ವ್ಯಕ್ತಿಗಳು, ಗುಂಪುಗಳು, ಘಟನೆಗಳು, ಪ್ರಚೋದನೆಗಳಿಂದ ಜಾಗರೂಕರಾಗಿ ಎಲ್ಲ ರೀತಿಯ ಪರಸ್ಪರ ವೈಷಮ್ಯಗಳಿಂದ ಸಮಾಜವನ್ನು ದೂರವಿರಿಸಲು ಪ್ರತಿಯೊಬ್ಬರೂ ಸಿದ್ಧರಾಗಿರುವುದು ಅಗತ್ಯವಾಗಿದೆ. ಶಕ್ತಿಯ ಆರಾಧನೆ ಯಾರಿಗೂ ವಿರೋಧ ಅಥವಾ ಪ್ರತಿಕ್ರಿಯೆಗಾಗಿ ಅಲ್ಲ. ಇದು ಸಮಾಜದ ಸ್ವಾಭಾವಿಕ ನಿರೀಕ್ಷಿತ ಸ್ಥಿತಿ. ಜಗತ್ತು ಶಕ್ತಿ, ನಮ್ರತೆ, ಜ್ಞಾನ ಮತ್ತು ಸಂಘಟಿತ ಸಮಾಜವನ್ನು ಮಾತನ್ನು ಮಾತ್ರ ಕೇಳುತ್ತದೆ. ಸತ್ಯ ಮತ್ತು ಶಾಂತಿ ಶಕ್ತಿಯ ಆಧಾರದ ಮೇಲೆಯೇ ಅವಲಂಭಿತವಾಗಿದೆ. ಬಲಶಾಲಿ ಮತ್ತು ನಿರ್ಭೀತರಾಗುವ ಮೂಲಕ ನಾವು ಹಿಂದೂ ಸಮಾಜವನ್ನು ಸೃಷ್ಟಿಸಬೇಕು, ಅದು ಈ ಪದಗಳನ್ನು ಸಾಕಾರಗೊಳಿಸುತ್ತದೆ – “ನಾನು ಯಾರಿಗೂ ಬೆದರಿಕೆ ಹಾಕುವುದಿಲ್ಲ, ಅಥವಾ ನನಗೆ ಯಾವುದೇ ಭಯವೂ ಗೊತ್ತಿಲ್ಲ.” ಜಾಗರೂಕ, ಒಗ್ಗಟ್ಟಿನ, ಬಲಿಷ್ಠ ಮತ್ತು ಸಕ್ರಿಯ ಸಮಾಜವು ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ.  

            ರಾಷ್ಟ್ರೀಯ ಸ್ವಯಂ ಸೇವಕ ಸಂಘವು 96 ವರ್ಷಗಳಿಂದ ಈ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಅಪೇಕ್ಷಿತ ಗುರಿಯನ್ನು ಸಾಧಿಸುವವರೆಗೆ ಅದನ್ನು ಮುಂದುವರಿಸುತ್ತದೆ. ನಾವು ಇಂದು ಆಚರಿಸುತ್ತಿರುವ ಶುಭ ಹಬ್ಬದಲ್ಲಿ ಅಡಕಗೊಂಡಿರುವ ಸಂದೇಶ ಕೂಡ ಇದೇ ಆಗಿದೆ. ಒಂಬತ್ತು ದಿನಗಳ ವೃತದ ನಂತರ, ದೈವಿಕ ಶಕ್ತಿಗಳನ್ನು ಆಹ್ವಾನಿಸಿ, ಪೂಜಿಸಿ, ಎಲ್ಲಾ ಶಕ್ತಿಗಳನ್ನು ಕ್ರೂಡಿಕರಿಸಿದರು. ತದನಂತರ ಮಾನವೀಯತೆಯನ್ನು ಹಲವಾರು ರೀತಿಯಲ್ಲಿ ಕಾಡುತ್ತಿದ್ದ ರಾಕ್ಷಸರು ನಿರ್ನಾಮವಾದರು. ಇಂದು, ಜಗತ್ತು ಪ್ರಸ್ತುತ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತವನ್ನು ಎದುರು ನೋಡುತ್ತಿದೆ ಮತ್ತು ಭಾರತವು ಈ ಭರವಸೆಯನ್ನು ಪೂರೈಸಲು ಸಿದ್ಧವಾಗಿರಬೇಕಾಗಿದೆ. ನಮ್ಮ ಸಮಾಜದ ಏಕತೆಯ ಸೂತ್ರವೆಂದರೆ ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರ ವೈಭವ ಮತ್ತು ನಮ್ಮ ತಾಯ್ನಾಡಿನ ಬಗೆಗೆ ನಮ್ಮ ಹೃದಯದಲ್ಲಿ ಮೂಡುವ ಪರಿಶುದ್ಧ ಭಕ್ತಿ. ‘ಹಿಂದು’ ಎಂಬ ಪದವು ಈ ಅರ್ಥದ ಅಭಿವ್ಯಕ್ತಿಯಾಗಿದೆ. ನಾವೆಲ್ಲರೂ ಈ ಮೂರು ತತ್ವಗಳನ್ನು ಮೇಳೈಸಿಕೊಂಡು ನಮ್ಮ ಅನನ್ಯತೆಯ ಅಂತರ್ಗತವಾದ ಶಾಶ್ವತ ಏಕತೆಯ ಅಲಂಕಾರದಿಂದ ಸಂಪೂರ್ಣ ದೇಶವನ್ನು ನಿರ್ಮಿಸಬೇಕಾಗಿದೆ. ಈ ಕಾರ್ಯವನ್ನು ಮಾಡಲೇ ಬೇಕಾಗಿದೆ. ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಗಿದೆ. ಈ ತಪಸ್ಸಿನಲ್ಲಿ ನಿಮ್ಮ ಕೊಡುಗೆಯನ್ನು ನೀಡಲು ನಿಮ್ಮೆಲ್ಲರನ್ನೂ ಆಹ್ವಾನಿಸಿ ನನ್ನ ವಿನಂತಿಯನ್ನು ಮುಗಿಸುತ್ತೇನೆ.       

भ्रांति जनमन की मिटाते क्रांति का संगीत गाते

एक के दशलक्ष होकर कोटियों को है बुलाते

तुष्ट माँ होगी तभी तो विश्व में सम्मान पाकर ।

बढ रहे हैं चरण अगणित बस इसी धुन में निरन्तर

चल रहे हैं चरण अगणित ध्येय के पथ पर निरन्तर ।

भारत माता की जय

ಜನರ ಮನಸ್ಸಿನ ಭ್ರಾಂತಿಯನ್ನು ತೊಡೆಯಲು ಕ್ರಾಂತಿ ಸಂಗೀತವನ್ನು ಹಾಡುತ್ತೇವೆ,

ಒಂದಕ್ಕೆ ದಶಲಕ್ಷಗಳಾಗಿ ಕೋಟಿಗಳನ್ನೇ ಆಹ್ವಾನಿಸುತ್ತೇವೆ.

ಇದಾದಾಗಲೇ ವಿಶ್ವದಲ್ಲಿ ತಾಯಿಯು ಸಮ್ಮಾನಿತಳಾಗುತ್ತಾಳೆ

ನಿರಂತರವಾಗಿ ಈ ರಾಗದ ತಾಳದೊಂದಿಗೆ ಮುನ್ನುಗುತ್ತಿವೆ ಹೆಜ್ಜೆಗಳು

ಅಗಣಿತ ಅವರಿತವಾಗಿ ಧ್ಯೇಯದೆಡೆಗೆ ಸಾಗುತ್ತಿವೆ ಹೆಜ್ಜೆಗಳು

ಭಾರತ ಮಾತೆಗೆ ಜಯವಾಗಲಿ

  • email
  • facebook
  • twitter
  • google+
  • WhatsApp
Tags: #RSSVijayaDashami#ಆರೆಸ್ಸೆಸ್_ವಿಜಯದಶಮಿDr Mohan BhagwatSarsanghachalak Dr Mohan Bhagwat

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
Next Post
ಸಂಘದ ಕೆಲಸ ನಮ್ಮ ಜವಾಬ್ದಾರಿ ಎಂಬ ಭಾವನೆ ಸಮಾಜದ ಜನರಲ್ಲಿ ಮೂಡಬೇಕು: ದಾ ಮ ರವೀಂದ್ರ

ಸಂಘದ ಕೆಲಸ ನಮ್ಮ ಜವಾಬ್ದಾರಿ ಎಂಬ ಭಾವನೆ ಸಮಾಜದ ಜನರಲ್ಲಿ ಮೂಡಬೇಕು: ದಾ ಮ ರವೀಂದ್ರ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ನಾಟೀವೈದ್ಯರ ಪರಂಪರೆಯನ್ನು ಗೌರವಿಸಿ, ಬಳಸಿ, ಬೆಳೆಸಿ : ಪ್ರೊ. ಕುಮಾರಸ್ವಾಮಿ

ನಾಟೀವೈದ್ಯರ ಪರಂಪರೆಯನ್ನು ಗೌರವಿಸಿ, ಬಳಸಿ, ಬೆಳೆಸಿ : ಪ್ರೊ. ಕುಮಾರಸ್ವಾಮಿ

August 25, 2019
ಬೆಂಗಳೂರಿನಲ್ಲಿ ೨ ದಿನಗಳ ಆರೆಸ್ಸೆಸ್ ಎಬಿಪಿಎಸ್ ಗೆ ಚಾಲನೆ RSSABPS2021 #RSSABPS

Annual report presented at the RSS ABPS 2021

March 19, 2021
PARAVARTAN: 180 people from 36 families in 8 villages returned to Hinduism at Jaunpur of UP

PARAVARTAN: 180 people from 36 families in 8 villages returned to Hinduism at Jaunpur of UP

August 25, 2019
RSS swayamsevaks in relief and resuce operations during Ockhi cyclone

RSS swayamsevaks in relief and resuce operations during Ockhi cyclone

December 2, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In