• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚುವ ಸ್ವಾವಲಂಬಿ, ಸ್ವಾಭಿಮಾನಿ ಭಾರತದ ಪರಿಕಲ್ಪನೆಯೇ ಆತ್ಮನಿರ್ಭರಭಾರತ : ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹಸರಕಾರ್ಯವಾಹ

Vishwa Samvada Kendra by Vishwa Samvada Kendra
May 17, 2020
in News Digest
250
0
ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚುವ ಸ್ವಾವಲಂಬಿ, ಸ್ವಾಭಿಮಾನಿ ಭಾರತದ ಪರಿಕಲ್ಪನೆಯೇ ಆತ್ಮನಿರ್ಭರಭಾರತ : ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹಸರಕಾರ್ಯವಾಹ
491
SHARES
1.4k
VIEWS
Share on FacebookShare on Twitter

ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹರಾದ ಆದರಣಿಯ ಶ್ರೀ.ದತ್ತಾತ್ರೇಯ ಹೊಸಬಾಳೆರವರ ಮಾತುಗಳ ಸಂಕ್ಷಿಪ್ತ ರೂಪ. ಶ್ರೀ ದತ್ತಾಜಿ ಅವರ ಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದಾಗಿದೆ

ಮೇ-17, ಬೆಂಗಳೂರು: ಆನ್ ಲೈನ್ ಸಂವಾದ ಕಾರ್ಯಕ್ರಮದಲ್ಲಿ ಅವರು ‘ಆತ್ಮನಿರ್ಭರ ಭಾರತ’ ವಿಷಯವಾಗಿ ಫೇಸ್ಬುಕ್ ಲೈವ್ ಮೂಲಕ ಸಾಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿದರು.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

“ಪ್ರಧಾನಮಂತ್ರಿಗಳು ಇತ್ತೀಚಿಗೆ ದೇಶದ ಜನರೊಂದಿಗೆ ಮಾತನಾಡುತ್ತಾ, ಉಲ್ಲೇಖಿಸಿರುವ ‘ಆತ್ಮನಿರ್ಭರತೆ’, ನಮ್ಮೊಳಗಿನ ಚೈತನ್ಯವನ್ನು ಜಾಗೃತಗೊಳಿಸುವಂಥದ್ದು. ನಾವು ನಮ್ಮವರಿಗೆ, ಮನೆಗೆ, ಸಮಾಜಕ್ಕೆ ಭಾರವಾಗದಂತೆ, ಭರ ಅಂದರೆ ತುಂಬಿಕೊಡುವದು ಎಂದರ್ಥದಂತೆ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚುವ ಸ್ವಾವಲಂಭಿ, ಸ್ವಾಭಿಮಾನಿ ಭಾರತದ ಪರಿಕಲ್ಪನೆಯೇ ಆತ್ಮನಿರ್ಭರಭಾರತ ಎಂದು ನುಡಿದರು. ಪುರುಷ ಸೂಕ್ತದಲ್ಲಿ ಹೇಳಿರುವಂತೆ ಇಡೀ ದೇಶವೇ ಒಗ್ಗಟ್ಟಾಗಿ ರಾಷ್ಟ್ರ ಪುರುಷನ ರೀತಿಯಲ್ಲಿ ಎದ್ದು ನಿಲ್ಲಬೇಕು. ಭಾಷಣದಲ್ಲಿ ಪ್ರಧಾನಮಂತಿಗಳು ಮನುಸ್ಮೃತಿಯ “ಸರ್ವಂ ಆತ್ಮವಶಂ ಸುಖಂ” ಎಂಬ ವಾಕ್ಯವೊಂದನ್ನು ಉಲ್ಲೇಖಿಸಿದ್ದು ಅತ್ಯಂತ ಸಮಯೋಚಿತವಾಗಿತ್ತು ಎಂದು ಶ್ರೀ ದತ್ತಾತ್ರೇಯ ಹೊಸಬಾಳೆ ನುಡಿದರು.

ಕೋರೋನಾ ಮಹಾಮಾರಿಯ ಸಂದರ್ಭದಲ್ಲಿ ದೇಶದ ನಾಯಕತ್ವ, ಜನರು, ಸಂಘಟನೆಗಳು, ಸಮಾಜ ಹೀಗೆ ಇಡೀ ದೇಶವೇ ಒಂದಾಗಿ, ವಿದೇಶಗಳಿಗೆ ಔಷಧದ ನೆರವನ್ನು ನೀಡಿ, ಆತ್ಮನಿರ್ಭರತೆ ನಿಟ್ಟಿನಲ್ಲಿ ಅನೇಕ ವಿಕ್ರಮಗಳನ್ನು ಸಾಧಿಸಿದ್ದೇವೆ. ದೇಶದ ಪ್ರತಿಯೊಬ್ಬರು ಅನ್ನ, ತರಕಾರಿ, ಹಣ್ಣು, ಹಾಲು ಪಡೆಯುವಂತಹ ಅನ್ನದ ಭದ್ರತೆ, ವೈದ್ಯಕೀಯ ಭದ್ರತೆ ಸಿಗುವಂತಾಗಬೇಕು. ಭಾರತದ ಹಿಂದಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರು ಹೇಳಿರುವಂತೆ ಭಾರತ ವಿದ್ಯುತ್ ಉತ್ಪಾದನೆ, ರಕ್ಷಣೆಯ ಹಿತದೃಷ್ಟಿಯಿಂದ ಸೈನ್ಯದ ಬೆಳವಣಿಗೆ ಮತ್ತು ಮುಂದಿನ ಭವಿಷ್ಯಕ್ಕಾಗಿ ಮಟೇರಿಯಲ್ ಸೈನ್ಸನಲ್ಲಿ ಸ್ವಾವಲಂಭನೆ ಸಾಧಿಸಬೇಕು. ಇವುಗಳ ಜೊತೆಗೆ ಆತ್ಮನಿರ್ಭರತೆಗೆ ಅಡ್ಡಿಯಾಗಿರುವಂತಹ ಬ್ರಿಟಿಷರಿಂದ ಬಳುವಳಿಯಾಗಿ ಬಂದಿರುವ ನಮ್ಮಲ್ಲಿರುವ ಪದ್ಧತಿಗಳು ಮತ್ತು ಸಂಸ್ಥೆಗಳಲ್ಲಿ ಅಪಾರವಾದ ಅತ್ಯವಶ್ಯವಾಗಿ ದೇಶಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಬದಲಾವಣೆ ಆಗಬೇಕಾಗಿದೆ ಎಂದು ಅವರು ಹೇಳಿದರು.

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೂ ಕೋರೋನಾ ಸಂದರ್ಭದಲ್ಲಿ ನಮ್ಮ ಪೋಲಿಸರು, ವೈದ್ಯರು, ಸ್ವಚ್ಛತಾ ಕಾರ್ಮಿಕರು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ, ರಾಷ್ಟ್ರದ ಹಿತದೃಷ್ಟಿಯಿಂದ ಈ ತರಹದ ಕಾರ್ಯಗಳು ಸರ್ವಕಾಲಕ್ಕೂ ನಡೆದುಕೊಂಡು ಹೋಗುವಂತೆ ಪರಿಶ್ರಮದಿಂದ ದೇಶ ಕಟ್ಟಲು ಪಣ ತೊಡಬೇಕಾಗಿದೆ.

ಅರವಿಂದರ ಮಾತುಗಳನ್ನು ಸ್ಮರಿಸುತ್ತಾ, ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು, ಸಂತರು, ಋಷಿಮುನಿಗಳು, ವಿದ್ವಾಂಸರು, ಪಂಡಿತರು, ದಿಗ್ಗಜರು ಬರೆದಿರುವ ಗ್ರಂಥಗಳ ಜ್ಞಾನದ ಭಂಡಾರ ನಮ್ಮಲ್ಲಿದೆ, ಆದರೇ ಅದು ಇಂದಿನ ಕಾಲಮಾನಕ್ಕೆ ತಕ್ಕಂತೆ ಯುಗಾನುಕೂಲವಾಗಿ ಅದರ ಮೇಲೆ ಅಧ್ಯಯನ ಸಂಶೋಧನೆಗಳು ಆಗಿ, ಹೊಸ ಜ್ಞಾನದ ಉದಯವಾಗಬೇಕು, ವಿವೇಕಾನಂದರ ಮಾತುಗಳನ್ನು ಪ್ರಸ್ತಾಪಿಸುತ್ತಾ ನಮ್ಮ ದೇಶದ ಸಂಶೋಧನೆಗಳನ್ನು ಹಳಿಯುವ, ನಿಂದಿಸುವ ಭಾವ, ವಿರೋಧಾಭಾಸಗಳಿಂದ ದೇಶ ಮೇಲೇಳುವಂತಾಗಬೇಕು ಮತ್ತು ಯಾವುದೇ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವದು ಅವಶ್ಯಕವಾಗಿದೆ, ಈ ಎಲ್ಲಾ ಸಂಗತಿಗಳು ದೇಶ ಸ್ವಾವಲಂಭಿಯಾಗಿ, ಆತ್ಮನಿರ್ಭರ ವಾಗಿರುವಂತೆ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ವರದಿ: ಪರಪ್ಪ ಶಾನವಾಡ

  • email
  • facebook
  • twitter
  • google+
  • WhatsApp
Tags: Atma nirbhar bharataAtmanirbharataDattatreya HosabaleDattatreya Hosabale SahsarkaryavahSamartha bharata

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
Article : Decoding the Adivasi Ekta Parishad

Article : Decoding the Adivasi Ekta Parishad

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ

20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ

July 11, 2018
‘Janagraha not against courts but against delay meted out’: Public referendum (Janagraha Sabha) in Bengaluru organised

‘Janagraha not against courts but against delay meted out’: Public referendum (Janagraha Sabha) in Bengaluru organised

December 3, 2018
VHP condemns attack on Sarabjit Singh, demands International Litigation against Pakistan

VHP condemns attack on Sarabjit Singh, demands International Litigation against Pakistan

April 27, 2013
ವಂದನೀಯ ಮೌಶೀಜೀ ಲಕ್ಷ್ಮೀಬಾಯಿ ಕೇಳ್ಕರ್

ವಂದನೀಯ ಮೌಶೀಜೀ ಲಕ್ಷ್ಮೀಬಾಯಿ ಕೇಳ್ಕರ್

June 30, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In