• Samvada
Monday, August 15, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ವಿಕ್ರಮ ‘ಯೋಗ’ವಿಶೇಷ ಸಂಚಿಕೆ ರಾಜ್ಯಪಾಲ ವಜುಬಾಯಿ ವಾಲಾರಿಂದ ರಾಜಭವನದಲ್ಲಿ ಲೋಕಾರ್ಪಣೆ

Vishwa Samvada Kendra by Vishwa Samvada Kendra
June 20, 2015
in News Digest
250
0
ವಿಕ್ರಮ ‘ಯೋಗ’ವಿಶೇಷ ಸಂಚಿಕೆ ರಾಜ್ಯಪಾಲ ವಜುಬಾಯಿ ವಾಲಾರಿಂದ ರಾಜಭವನದಲ್ಲಿ ಲೋಕಾರ್ಪಣೆ
491
SHARES
1.4k
VIEWS
Share on FacebookShare on Twitter

ಬೆಂಗಳೂರು: ವಿಕ್ರಮ ಯೋಗ ವಿಶೇಷ ಸಂಚಿಕೆಯನ್ನು ಸನ್ಮಾನ್ಯ ರಾಜ್ಯಪಾಲರಾದ ಶ್ರೀ ವಜುಬಾಯಿ ವಾಲಾ ಅವರು 20.06.2015 ರಂದು ರಾಜಭವನದಲ್ಲಿ ಲೋಕಾರ್ಪಣೆ ಮಾಡಿದರು.

Gov Photo

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ  ‘ವಿಕ್ರಮ‘ ದ ಯೋಗ ವಿಶೇಷಾಂಕ

ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂನ್ 21ರಂದು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಹೀಗೆ ಜೂನ್ 21ಅನ್ನು ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಿಸಲು ಪ್ರಧಾನಿ ನರೇಂದ್ರಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಮಾಡಿದ ಆಗ್ರಹ ಮತ್ತು ಅದಕ್ಕೂ ಮೊದಲ ದಶಕಗಳ ಕಾಲ ಕೆಲವು ಸಂಘಟನೆಗಳು ಮಾಡಿದ ಅವಿರತ ಪ್ರಯತ್ನಗಳು ಕಾರಣ. ಜೂನ್ 21 – ಯೋಗ ದಿನ ಆಗಿರುವುದು ಯೋಗಾಭ್ಯಾಸ ಪ್ರೇಮಿಗಳಿಗಂತೂ ಅತೀವ ಸಂತಸ ತಂದಿದೆ. 177 ದೇಶಗಳು ಯೋಗ ದಿನ ಆಚರಣೆಗೆ ಸಜ್ಜಾಗಿವೆ. ಕೇಂದ್ರ ಸರ್ಕಾರ ‘ಯೋಗ ದಿನ’ಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದೇಶದೆಲ್ಲೆಡೆ ಎದ್ದು ಕಾಣುವಂತೆ ಆಚರಿಸಲು ಮುಂದಾಗಿರುವುದು ಒಂದು ಒಳ್ಳೆಯ ಬೆಳವಣಿಗೆ.

ಆದರೆ ‘ಯೋಗ ದಿನ’ ಸಮೀಪಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಯೋಗದ ಸುತ್ತ ವಿವಾದದ ಹುತ್ತ ಬೆಳೆಯ ತೊಡಗಿರುವುದು ಒಂದು ಅನಪೇಕ್ಷಿತ ಬೆಳವಣಿಗೆ. ನಮ್ಮ ಚಿಂತನಾಕ್ರಮಗಳು ಒಂದು ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜಡವಾಗಿವೆ ಎಂಬುದಕ್ಕೆ ಇದು ಸೂಚಕ. ಯೋಗಕ್ಕೂ ಧರ್ಮಕ್ಕೂ ತಳಕು ಹಾಕಲಾಗುತ್ತಿರುವುದು ಸಂಕುಚಿತ ಮನಸ್ಸುಗಳ ವಿಕೃತ ಚಿಂತನೆಗೆ ನಿದರ್ಶನ. ಸುಮಾರು 6 ಸಾವಿರ ವರ್ಷಗಳಷ್ಟು ದೀರ್ಘ ಪರಂಪರೆ ಹೊಂದಿದ ಯೋಗದಲ್ಲಿ ಧರ್ಮ ಅಥವಾ ಮತದ ಪ್ರಸ್ತಾಪ ಎಲ್ಲೂ ಇಲ್ಲ. ಯೋಗಕ್ಕೆ ಒಂದು ಶಾಸ್ತ್ರೀಯ ಮತ್ತು ವೈಜ್ಞಾನಿಕ ಚೌಕಟ್ಟನ್ನು ಹಾಕಿಕೊಟ್ಟ ಪತಂಜಲಿಯ ‘ಯೋಗ ಸೂತ್ರ’ದಲ್ಲಿ ಕೂಡ ಇಂತಹ ಯಾವುದೇ ಪ್ರಸ್ತಾಪದ ನಂಟು ಇಲ್ಲ. ಯೋಗವೆನ್ನುವುದು ಮೂಲಭೂತವಾಗಿ ದೇಹ, ಮನಸ್ಸು ಮತ್ತು ಬುದ್ಧಿಗಳ ಸಮತೋಲನ ಹಾಗೂ ಸಮಗ್ರ ವಿಕಾಸಕ್ಕಾಗಿ ಭಾರತೀಯರು ಕಂಡುಕೊಂಡಿರುವ ತಮ್ಮದೇ ಆದ ಒಂದು ಆರೋಗ್ಯ ಪದ್ಧತಿ. ಇದರ ಜೊತೆಗೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳು ಒಟ್ಟಾಗಿ ಸಾಗುವುದನ್ನು, ಮನುಷ್ಯ ಮತ್ತು ನಿಸರ್ಗ ಪರಸ್ಪರ ಪೂರಕವಾಗಿ ಹೆಜ್ಜೆ ಹಾಕುವುದನ್ನು, ಆಸೆ ಮತ್ತು ಅದನ್ನು ನಿಯಂತ್ರಿಸುವ ಬಗೆಯನ್ನು ಯೋಗ ವಿವರಿಸುತ್ತದೆ.

ಯೋಗಾಭ್ಯಾಸದಲ್ಲಿ ಸೂರ್ಯನಮಸ್ಕಾರ ಇರುವುದನ್ನು ಕೆಲವು ಅಲ್ಪಸಂಖ್ಯಾತ ವರ್ಗದ ಜನರು ವಿರೋಧಿಸಿ ವಿವಾದ ಸೃಷ್ಟಿಸಿದ್ದಾರೆ. ಯೋಗವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಬೇಕೇ ಹೊರತು, ಅದಕ್ಕೆ ಧರ್ಮ, ಮತದ ಲೇಪನ ಹಚ್ಚಿ ನೋಡುವುದು ಸಲ್ಲದು. ಯೋಗ ಯಾವುದೇ ಧರ್ಮದ ಸ್ವತ್ತಲ್ಲ. ವೇದಾದಿಗಳಲ್ಲಿ, ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಯೋಗ ಇಡೀ ಮನುಕುಲದ ಒಳಿತಿಗಾಗಿ ಇರುವ ಒಂದು ಶಾಸ್ತ್ರ ಎಂದು ಅರ್ಥವಿಸಿಕೊಂಡರೆ ಈಗ ಎದ್ದಿರುವಂತಹ ಯಾವುದೇ ವಿವಾದ ಸೃಷ್ಟಿಯಾಗದು.  ಕೇಂದ್ರ ಸರ್ಕಾರ ಇದೀಗ ಅಲ್ಪಸಂಖ್ಯಾತರ ವಿರೋಧಕ್ಕೆ ಹೆದರಿ, ಯೋಗದ ಆಚರಣೆಯಲ್ಲಿ ಸೂರ್ಯನಮಸ್ಕಾರ ಮತ್ತು ಶ್ಲೋಕಗಳ ಪಠಣದಿಂದ ವಿನಾಯಿತಿ ನೀಡಿರುವುದು ಅಷ್ಟೇನೂ ಉತ್ತಮ ಕ್ರಮವಲ್ಲ. ಒಂದು ರೀತಿಯಲ್ಲಿ ಅದೊಂದು ಓಲೈಕೆಯ ನೀತಿ. ಮುಸಲ್ಮಾನರು ಪ್ರತಿನಿತ್ಯ ಐದು ಹೊತ್ತು ಸಲ್ಲಿಸುವ ನಮಾಜು ಕೂಡ ಯೋಗವನ್ನು ಒಳಗೊಂಡಿದೆ. ಅಷ್ಟೇಕೆ, ಮನುಷ್ಯ ಪ್ರತಿನಿತ್ಯ ನಡೆಸುವ ಊಟ, ತಿಂಡಿ, ಕೆಲಸ, ನಡಿಗೆ, ನಿದ್ರೆ ಮುಂತಾದ ಎಲ್ಲ ದೈಹಿಕ ಕ್ರಿಯೆಗಳಲ್ಲೂ ಯೋಗ ಇದ್ದೇ ಇದೆ. ಯೋಗವಿಲ್ಲದ ಯಾವುದೇ ಕ್ರಿಯೆ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ‘ಯೋಗದಂತಹ ಸಂಗತಿಗಳನ್ನು ಧರ್ಮದ ಪರಿಧಿಯಲ್ಲಿಟ್ಟು ನೋಡಬಾರದು’ ಎಂದು ಹೇಳಿರುವುದು ಈ ಹಿನ್ನೆಲೆಯಲ್ಲಿ ಸ್ವಾಗತಾರ್ಹ. ನಾವು ಮನುಕುಲಕ್ಕೆ ಒಳಿತಾಗುವ ಸಂಗತಿಗಳನ್ನು ವಿಶಾಲವಾಗಿ ನೋಡುವ, ಸೂಕ್ಷ್ಮವಾಗಿ ಗ್ರಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು ಪ್ರತಿಯೊಂದನ್ನೂ ಬಣ್ಣದ ಕನ್ನಡಕದ ಮೂಲಕ ನೋಡುವ ಸಣ್ಣತನ ತೋರಬಾರದು.

ಇದೀಗ ಎಲ್ಲೆಡೆ ಜನಪ್ರಿಯವಾಗಿರುವ ಯೋಗದ ಕುರಿತು ‘ಯೋಗ ದಿನ’ದ ಅಂಗವಾಗಿ, ವಿಕ್ರಮ ಪತ್ರಿಕೆ ಯೋಗ ವಿಶೇಷಾಂಕವೊಂದನ್ನು ಓದುಗರ ಕೈಯಲ್ಲಿಟ್ಟಿದೆ. ಯೋಗ ಕ್ಷೇತ್ರದ ತಜ್ಞರು, ಲೇಖಕರು ಈ ವಿಶೇಷಾಂಕ ಸಮೃದ್ಧವಾಗಿ, ಸಂಗ್ರಾಹ್ಯವಾಗಿ ಹೊರ ಬರಲು ಲೇಖನಗಳ ಮೂಲಕ ನೆರವು ನೀಡಿದ್ದಾರೆ. ಎಂದಿನಂತೆ ಜಾಹೀರಾತುದಾರರು ಕೈಹಿಡಿದಿದ್ದಾರೆ. ಯೋಗಕ್ಕೆ ಸಂಬಂಧಿಸಿದ ಸಮಗ್ರ ಅಲ್ಲದಿದ್ದರೂ, ಸ್ಥೂಲವಾಗಿ ಹಲವು ಸಂಗತಿಗಳನ್ನು ಒಂದೆಡೆ ಸೇರಿಸಿ ಓದುಗರಿಗೆ ಒದಗಿಸಬೇಕೆಂಬ ಆಶಯ ಈ ವಿಶೇಷಾಂಕದ್ದು. ನಿಮಗಿದು ಇಷ್ಟವಾಗಬಹುದೆಂದು ನಮ್ಮ ಅನಿಸಿಕೆ. ನಿರಂತರ, ಕ್ರಮಬದ್ಧ ಯೋಗಾಭ್ಯಾಸದ ಮೂಲಕ ನೆಮ್ಮದಿ, ಆರೋಗ್ಯ, ದೀರ್ಘಾಯಸ್ಸು ನಿಮ್ಮೆಲ್ಲರಿಗೂ ಲಭಿಸಲೆಂದು ಹಾರೈಕೆ.

– ದು.ಗು.ಲಕ್ಷ್ಮಣ

ಸಂಪಾದಕರು

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
75th Punyatithi of Dr Keshav Baliram Hedgewar; Nation remembers icon of National Resurgence

75th Punyatithi of Dr Keshav Baliram Hedgewar; Nation remembers icon of National Resurgence

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Mandya: RSS Convention ಮಂಡ್ಯ : ಆರೆಸ್ಸೆಸ್ ಬೃಹತ್  ಸಮಾವೇಶ

Mandya: RSS Convention ಮಂಡ್ಯ : ಆರೆಸ್ಸೆಸ್ ಬೃಹತ್ ಸಮಾವೇಶ

November 26, 2013
MSN Menon, veteran columnist of Organiser, is no more

MSN Menon, veteran columnist of Organiser, is no more

May 25, 2011
ಮತ್ತೆ ನೆನಪಾಗುವ ಅಮರ ಸೇನಾನಿ-ನೇತಾಜಿ ಬೋಸ್

ಮತ್ತೆ ನೆನಪಾಗುವ ಅಮರ ಸೇನಾನಿ-ನೇತಾಜಿ ಬೋಸ್

January 20, 2012
Three different incidents, the same mentality : an article by Dr Manmohan Vaidya

Three different incidents, the same mentality : an article by Dr Manmohan Vaidya

July 27, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In