• Samvada
Monday, August 15, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳಕ್ಕೆ ಚಾಲನೆ- ‘ಸೇವೆಯೇ ಹಿಂದೂ ಧರ್ಮದ ಮೂಲ ಧ್ಯೇಯ’ : ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮೀಜಿ,

Vishwa Samvada Kendra by Vishwa Samvada Kendra
December 9, 2015
in News Digest
250
0
Aimed to showcase service activities of religious organisations, 5-day Hindu Spiritual and Service Fair begins in Bengaluru
491
SHARES
1.4k
VIEWS
Share on FacebookShare on Twitter

ಬೆಂಗಳೂರು : ಹಿಂದೂ ಧರ್ಮ ಅತ್ಯಂತ ಪವಿತ್ರವಾದದ್ದು, ಅದು ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುತ್ತದೆ, ಸೇವೆಯೇ ಹಿಂದೂ ಧರ್ಮದ ಮೂಲ ಧ್ಯೇಯವಾಗಿದೆ, ಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕೆಂದು ಜಗದ್ಗುರು ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮೀಜಿ ಕರೆ ನೀಡಿದರು.

IMG_6816
ನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಭಾರತದಲ್ಲಿ ಧಾರ್ಮಿಕ ಆಚರಣೆ ಮತ್ತು ಸೇವೆಯನ್ನು ಪ್ರತ್ಯೇಕವಾಗಿ ನೋಡಲ್ಲ, ಸೇವೆಯಲ್ಲೇ ಧರ್ಮವನ್ನು ಕಾಣುವವರು ಭಾರತೀಯರು ಎಂದು ಅಭಿಪ್ರಾಯಪಟ್ಟರು.
ನಮ್ಮಲ್ಲಿರುವ ಕೆಲ ಸಾಹಿತಿಗಳು ಬದುಕಿರುವಾಗ ಹಿಂಧೂ ಧರ್ಮವನ್ನು ಟೀಕಿಸಿ, ಸತ್ತಾಗ ಮಾತ್ರ ಹಿಂದೂ ಧರ್ಮವನ್ನು ಅನುಸರಿಸುವ ಸಾಹಿತಿಗಳು ಹಲವರಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವವರು ಒಮ್ಮೆ ಈ ಆಧ್ಯಾತ್ಮಿಕ ಮೇಳವನ್ನು ಭೇಟಿ ನೀಡಿ ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲಿ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡುತ್ತ ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ಮಕ್ಕಳಿಗೆ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ತಿಳಿಸದೆ ಮಕ್ಕಳಿಗೆ ಧರ್ಮದ ವಿಚಾರಗಳು ತಿಳಿಯದೆ ತಪ್ಪು ಹಾದಿಯತ್ತ ತುಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ನಮ್ಮ ದೇಶದ, ಗ್ರಂಥಗಳ ಬಗ್ಗೆ ವಿದೇಶಿಯರು ಅಭಿಪ್ರಾಯಪಟ್ಟಿರುವ ಒಳ್ಳೆಯ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು, ಇತರರು ಮೆಚ್ಚುವಂತಹ ಸಂಸ್ಕೃತಿ ನಮ್ಮದಾಗಿದೆ ಎಂದರು, ಜಾಗತೀಕರಣದ ಈ ಯುಗದಲ್ಲಿ ಧರ್ಮವನ್ನು ಪ್ರಚಾರ ಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಮಾತನಾಡಿ ಭಾರತದ ಆಧ್ಯಾತ್ಮಿಕತೆಯು ಅತ್ಯಂತ ಶೇಷ್ಠವಾದದು, ಪ್ರಮುಖ ಐದು ವಿಚಾರಗಳಾದ ಆಧ್ಯಾತ್ಮಿಕತೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ವನ್ಯ ಸಂರಕ್ಷಣೆ ಕುರಿತು ಈ ಮೇಳದಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಇಂದು ಆಧುನಿಕ ವಿಜ್ಞಾನ ಎಷ್ಟೇ ಬೆಳೆದರು ಅವೆಲ್ಲವನ್ನು ಗಟ್ಟಿಯಾಗಿ ನಿಲ್ಲುವ ಸಂಸ್ಕೃತಿ ಎಂದರೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ನಮ್ಮ ಭಾರತೀಯ ಸಂಸ್ಕೃತಿ ಎಂದು ತಿಳಿಸಿದರು.
ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪ್ರಿಚುವಲ್ ಪದವನ್ನು ಸೇರಿಸುವಂತೆ ಸಲಹೆ ತಿಳಿಸಿದ್ದರು, ರಾಜಕೀಯ ಕಾರಣಗಳಿಗಾಗಿ ಅದನ್ನು ಸೇರಿಸಿಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಹಿಂದೂ ದೇವಸ್ಥಾನಗಳನ್ನು ಸರ್ಕಾರಿಕರಣ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಯ ಸಾಧಿಸಿದ್ದೇವೆ, ದೇವಸ್ಥಾನಗಳ ವಿಚಾರಗಳಲ್ಲಿ ಕಾನೂನು ಅವಶ್ಯಕ ,ಆದರೆ ಎಲ್ಲಾ ಧಾರ್ಮಿಕ ಮುಖಂಡರ ಸಲಹೆ ಪಡೆದು ಸ್ವಾಯತ್ಥ ಸಂಸ್ಥೆ ರಚಿಸಬೇಕು.
ಹಿಂದೂ ಸಂಸ್ಕೃತಿ ಪ್ರಕೃತಿಯನ್ನು ಆರಾಧಿಸುವ , ಪಾಲನೆ ಮಾಡುವ ಸಂಸ್ಕೃತಿಯಾಗಿದೆ, ಇಂದು ನಗರೀಕರಣದ ಭರದಲ್ಲಿ ಅಂತರ್ಜಲ ಸಮಸ್ಯೆ, ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ, ಪ್ರತಿಯೊಬ್ಬರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಮತ್ತು ಸೌರ ಶಕ್ತಿ ಘಟಕಗಳನ್ನು ಅಳವಡಿಸಿಕೊಂಡರೆ ನೀರು ಮತ್ತು ವಿದ್ಯುತ್ ಅಭಾವ ಕಡಿಮೆಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯಪಾಲ ವಜುಭಾಯಿ ವಾಲ ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಸುಧೈವ ಕುಟುಂಬಂ ಎಂಬ ಪದ್ದತಿ ಇದೆ, ಹಿಂದೂ ಸಂಸ್ಕೃತಿಯಲ್ಲಿ ವಿಶಾಲ ಮನೋಭಾವವಿದೆ, ಹಿಂಸೆಯನ್ನು ನಮ್ಮ ಸಂಸ್ಕೃತಿ ವಿರೋಧಿಸುತ್ತದೆ, ಸಾಧು ಸಂತರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಬೇಕಾಗಿದೆ, ಇಂದು ಎಲ್ಲ ಧರ್ಮಗಳಿಗೂ ಸಮಾನವಾದ ಗೌರವಿದೆ, ಇಂದು ಎಲ್ಲಾ ಸಾಧು, ಸಂತರು ಶೈಕ್ಷಣಿಕ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಎಚ್‌ಎಸ್‌ಎಸ್‌ಎಫ್ ಸಂಸ್ಥೆಯ ನಿರ್ವಾಹಕ ಎಸ್.ಗುರುಮೂರ್ತಿ ಮಾತನಾಡಿ ಎಲ್ಲಾ ಹಿಂದೂ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ, ಸೇವಾ ಮನೋಭಾವವನ್ನು ಅಳವಡಿಸಿಕೊಂಡಿರುವ ಧರ್ಮ ನಮ್ಮ ಹಿಂದೂ ಧರ್ಮ, ನಿಸ್ವಾರ್ಥತೆಯಿಂದ ಸೇವೆಯನ್ನು ಹಲವರು ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಇಸ್ಕಾನ್‌ನ ಅಧ್ಯಕ್ಷ ಮಧುಪಂಡಿತ ದಾಸ್, ಕನಕಗಿರಿ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕಲ್ಬುರ್ಗಿ ಭೌದ್ದ ವಿಹಾರದ ಸಂಗಾನಂದ ಬಂತೆ, ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯ ಸಂಕೇಶ್ವರ, ಕಾರ್ಯಾಧ್ಯಕ್ಷರಾದ ನಾಗನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೇಳದ ವಿಶೇಷತೆ:
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದಲ್ಲಿ ಹಲವು ವೈಶಿಷ್ಟತೆಗಳು ಕೂಡಿತ್ತು, ಮೇಳದಲ್ಲಿದ್ದ ಮಠಗಳ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ, ರಾಜ್ಯದ ಪ್ರಮುಖ ಧಾರ್ಮಿಕ ಮಠಗಳಾದ ಶ್ರೀ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೊಂದ ಸ್ವರ್ಣವಲ್ಲಿ ಮಠ, ಶ್ರೀ ಗುರುರಾಘವೇಂದ್ರ ಮಠ, ಯೋಗಿ ನಾರೇಯಣ ಮಠ ಕೈವಾರ, ರಾಮಕೃಷ್ಣ ಮಠ, ಇಸ್ಕಾನ್ ಸೇರಿದಂತೆ ಅನೇಕ ಧಾರ್ಮಿಕ ಮಠಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿವೆ,
ಇನ್ನೊಂದು ವಿಶೇಷವೆಂದರೆ ಎಲ್ಲರ ಗಮನ ಸೆಳೆಯುತ್ತಿರುವ ಸಾನತನ ಮರವೊಂದನ್ನು ಪ್ರತಿಷ್ಠಾಪಿಸಿದ್ದು, ಇದ್ದರ ಮೂಲ ಉದ್ದೇಶ ವನ ಹಾಗೂ ವನ್ಯ ಜೀವಿ ಸಂರಕ್ಷಣೆ, ಪರಿಸರ ಕಾಳಜಿ, ರಾಷ್ಟ್ರ ಭಕ್ತಿ, ಸ್ತ್ರೀ ಗೌರವ, ಮಾಲಿನ್ಯ ನಿಯಂತ್ರಣ ತಡೆಗಟ್ಟುವುದು, ಕುಟುಂಬ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಆಗಿದೆ,
ಮತ್ತೊಂದು ಆಕರ್ಷಿಸುವ ಸಾಧನ ಮಂಟಪವೊಂದಿದ್ದು, ಅಲ್ಲಿ ಪ್ರಾಚೀನ ಭಾರತದ ದಿಗ್ಗಜರಾದ ಆರ್ಯಭಟ, ಭಾಸ್ಕರಚಾರ್ಯ, ಯೋಗ ಪಿತಾಮಹ ಪತಂಜಲಿ ಮಹರ್ಷಿ ಹಾಗೂ ಭಾರತದ ಅದ್ಬುತ ವಾಸ್ತು ಶಿಲ್ಪಗಳಾದ ಅಜಂತಾ ಎಲ್ಲೋರ ಗುಹಾಂತರ ದೇವಾಲಯ, ಹಂಪಿ ಬಗ್ಗೆ ವಿಸ್ತೃತ ಮಾಹಿತಿ ನೀಡುತ್ತದೆ, ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಂಗೊಳ್ಳಿರಾಯಣ್ಣ, ಮಹಾತ್ಮ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ಮಹಿಳಾ ಸಾಧಕಿಯರಾದ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಮಹಿಳಾ ಸಂತರಾದ ಮೀರಾ ಬಾಯಿ, ಶಾರದಾ ದೇವಿ ಸೇರಿದಂತೆ ಮುಂತಾದವರ ಜೀವನ ಚರಿತ್ರೆ ಮತ್ತು ಸಾಧನೆ ಕುರಿತ ಸಮಗ್ರ ಮಾಹಿತಿ ನೀಡುವ ಕೆಲಸವನ್ನು ಸಾಧನ ಮಂಟಪ ಮಾಡುತ್ತಿದೆ.
ಅಷ್ಟೇ ಅಲ್ಲದೆ ಮೇಳದಲ್ಲಿ ಸಾವಯವ ಆರೋಗ್ಯ ಪದ್ದತಿ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಾವಯವ ಪಧಾರ್ಥ, ಗೋ ಉತ್ಪನ್ನಗಳನ್ನು ಒಳಗೊಂಡ ಮಳಿಗೆಗಳು ಇಲ್ಲಿವೆ.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Aimed to showcase service activities of religious organisations, 5-day Hindu Spiritual and Service Fair begins in Bengaluru

Aimed to showcase service activities of religious organisations, 5-day Hindu Spiritual and Service Fair begins in Bengaluru

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

RSS Sarsanghchalak Mohan Bhagwat released ‘Vaibhava Sri’ & “Paramananda Madhavam” at Kanyakumari

RSS Sarsanghchalak Mohan Bhagwat released ‘Vaibhava Sri’ & “Paramananda Madhavam” at Kanyakumari

September 19, 2016
ಹಿಂದೂ ಸಮಾಜವನ್ನು ಸಬಲ, ಸದ್ಗುಣಶೀಲವಾಗಿ ಸಂಘಟಿಸಿ, ದುರ್ಬಲರ ರಕ್ಷಣೆಗೆ ನಿಲ್ಲುವುದೇ ಸಂಘ ಕಾರ್ಯ: ವಿಜಯದಶಮಿ ಉತ್ಸವದಂದು  ಡಾ. ಮೋಹನ್ ಭಾಗವತ್

ಹಿಂದೂ ಸಮಾಜವನ್ನು ಸಬಲ, ಸದ್ಗುಣಶೀಲವಾಗಿ ಸಂಘಟಿಸಿ, ದುರ್ಬಲರ ರಕ್ಷಣೆಗೆ ನಿಲ್ಲುವುದೇ ಸಂಘ ಕಾರ್ಯ: ವಿಜಯದಶಮಿ ಉತ್ಸವದಂದು ಡಾ. ಮೋಹನ್ ಭಾಗವತ್

October 8, 2019
Kasaragod:’Balagokulotsavam’

Kasaragod:’Balagokulotsavam’

January 15, 2013
ದೊಡ್ಡಬಳ್ಳಾಪುರ : ಸ್ವಾಮಿ ವಿವೇಕಾನಂದ 150ನೇ ಜಯಂತಿ

ದೊಡ್ಡಬಳ್ಳಾಪುರ : ಸ್ವಾಮಿ ವಿವೇಕಾನಂದ 150ನೇ ಜಯಂತಿ

January 12, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In