• Samvada
  • Videos
  • Categories
  • Events
  • About Us
  • Contact Us
Tuesday, June 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಜನ ಲೋಕಪಾಲ್ : ನಾವೇನು ಮಾಡಬೇಕು?

Vishwa Samvada Kendra by Vishwa Samvada Kendra
September 11, 2011
in Articles
251
0
ಜನ ಲೋಕಪಾಲ್ : ನಾವೇನು ಮಾಡಬೇಕು?
492
SHARES
1.4k
VIEWS
Share on FacebookShare on Twitter

ಅಣ್ಣಾ ಹಜಾರೆಯವರು ಕರೆಕೊಟ್ಟ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಾರ್ವತ್ರಿಕ ಬೆಂಬಲ ದೊರೆತ ಹಿನ್ನೆಲೆಯಲ್ಲಿ, ಸಾರ್ವಜನಿಕ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಜನಲೋಕಪಾಲ್ ಮಸೂದೆ ಜಾರಿಗೊಳಿಸಲು ಅಣಿಯಾಗುತ್ತಿದೆ. ಎಲ್ಲೆಡೆಯೂ ಭ್ರಷ್ಟಾಚಾರವನ್ನೂ ತೊಡೆದು ಹಾಕುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಮನೆ-ಕಚೇರಿ-ಪರಿಸರಗಳಲ್ಲಿ ನಾವೆಷ್ಟರ ಮಟ್ಟಿಗೆ ಜಾಗರೂಕರಾಗಿರಬೇಕು? ನಮ್ಮ ಹೊಣೆ ಏನು? ಇಲ್ಲಿದೆ ಒಂದಷ್ಟು ಮಾಹಿತಿ.

ಜನ ಲೋಕಪಾಲ್ ಮಸೂದೆಯೆನೋ ಬಂದೀತು. ಅದು ಜಾರಿಯಾದರೆ ಸರ್ಕಾರಿ ಅಧಿಕಾರಿಗಳ, ರಾಜಕಾರಣಿಗಳ ಭ್ರಷ್ಟಾಚಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಶಿಕ್ಷೆಯ ಭಯದಿಂದ ಕೆಲವರು ಪ್ರಾಮಾಣಿಕರಾಗಿರುವ ಅನಿವಾರ್ಯತೆ ಬರಬಹುದು. ಜಾಗೃತ ಜನರು ಕೆಲವರು ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಬಹುದು. ಲಂಚ ತೆಗೆದುಕೊಳ್ಳುವವರಿಗೆ ಶಿಕ್ಷೆಯಾಗಬಹುದು. ಆದರೆ, ಅಷ್ಟೇ ಸಾಕೇ? ಅದರಿಂದಲೇ ಭ್ರಷ್ಟಾಚಾರ ಸಂಪೂರ್ಣ ನಿಂತೀತೇ? ಭ್ರಷ್ಟಾಚಾರಕ್ಕೆ ಏನು ಕಾರಣ, ಅದರ ಮೂಲ ಎಲ್ಲಿದೆ ಎನ್ನುವುದನ್ನೂ ನಾವು ಯೋಚಿಸಬೇಕಲ್ಲವೇ?

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಭ್ರಷ್ಟಾಚಾರ ಎಂದರೆ ಕೇವಲ ಸರ್ಕಾರಿ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಮಾತ್ರವೇ? ಕೇವಲ ಸರ್ಕಾರಿ ಅಧಿಕಾರಿಗಳನ್ನು ಮಾತ್ರ ದೂರುವ ನಾವು, ಭ್ರಷ್ಟಾಚಾರಕ್ಕೆ ನಾವೂ ಕಾರಣಕರ್ತರಾಗುತ್ತಿದ್ದೇವೆಯೇ ಎಂದು ಯೋಚಿಸಿದ್ದುಂಟೇ? ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಪ್ರಾಮಾಣಿಕರಾಗಿದ್ದು, ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಕಾರಣರಾಗದೇ ಬದುಕಿದಲ್ಲಿ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ನಾವೂ ನೀವೂ ಯೋಚಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.

  •       ಭ್ರಷ್ಟ ಮಾರ್ಗದಿಂದ ಗಳಿಸಿದ ಹಣದಿಂದ ಅಥವಾ ತೆರಿಗೆ ವಂಚಿಸಿದ ಹಣದಿಂದ ಬಂದ ಯಾವುದೇ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂದು ನಾವು ಪ್ರತಿಜ್ಞೆ ಮಾಡಬಹುದೇ?
  •       ಕಾಲೇಜು ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರನ್ನು ಮೊಬೈಲಿಗಾಗಿಯೋ ಬೈಕಿಗಾಗಿಯೋ ಪೀಡಿಸದೇ, ನಾವೇ ಗಳಿಸಿದ ಹಣದಿಂದ ಅದನ್ನು ಕೊಂಡುಕೊಳ್ಳುತ್ತೇವೆ ಎಂದು ಯೋಚಿಸಬಹುದೇ? ಹಾಗಾದಲ್ಲಿ ತಂದೆ ತಾಯಿಯರು ಹೆಚ್ಚಿನ ಹಣಕ್ಕಾಗಿ ಭ್ರಷ್ಟ ಹಾದಿ ತುಳಿಯುವ ಸಂದರ್ಭ ಕಡಿಮೆಯಾದೀತಲ್ಲವೇ?
  •       ನಮ್ಮ ಸ್ವಂತ ಉದ್ಯೋಗದಿಂದ ಬರುವ ಸರಿಯಾದ ಆದಾಯವನ್ನು ತೋರಿಸದೇ ಸುಳ್ಳು ಲೆಕ್ಕ ತೋರಿಸಿ ಶಾಸ್ತ್ರಕ್ಕೆಂಬಂತೆ ತೆರಿಗೆ ಕಟ್ಟುವುದನ್ನು ನಿಲ್ಲಿಸಿ, ನಿಜವಾದ ಆದಾಯಕ್ಕನುಗುಣವಾಗಿ ಸರಿಯಾದ ತೆರಿಗೆ ಕಟ್ಟಲು ಪ್ರಾರಂಭಿಸಬಹುದೇ?
  •       ನಮ್ಮ ಮಕ್ಕಳ ಸೀಟಿಗೆ ಅವರಿವರ ಶಿಫಾರಸ್ಸು ಉಪಯೋಗಿಸುವುದರ ಬದಲು ಅವರ ಯೋಗ್ಯತೆಗೆ ತಕ್ಕಂತೆ ಸಿಗುವ ಕಾಲೇಜಿನಲ್ಲೇ ಓದಿಸಬಹುದೇ? ಪ್ರತಿಭಾವಂತ ಬಡ ಮಕ್ಕಳೂ ಓದಿ ಮುಂದೆ ಬರಲಿ. ಅಲ್ಲವೇ?

  •       ಸುತ್ತಮುತ್ತ ಸ್ವಲ್ಪವೂ ಜಾಗ ಬಿಡದೇ, ಪಕ್ಕದ ಮನೆಯ ಗೋಡೆಗೆ ತಾಗಿಸಿ ಮನೆ ಕಟ್ಟಿ, ನಕ್ಷೆ ಮಂಜೂರಾತಿಗಾಗಿ ಲಂಚ ನೀಡುವ ಬದಲು ಕಾನೂನಿನ ಪ್ರಕಾರವೇ ಮನೆ ಕಟ್ಟಿ ಲಂಚ ಕೊಡದೇ ಸ್ವಾಭಿಮಾನಿಗಳಾಗಿ ಬದುಕಬಹುದೇ?
  •       ಸುಳ್ಳು ಆದಾಯ ಪ್ರಮಾಣ ಪತ್ರ ಪಡೆದು ಸರ್ಕಾರಿ ಯೋಜನೆಗಳಿಗೆ ಅರ್ಜಿ ಗುಜರಾಯಿಸುವ ಬದಲು, ನಿಜವಾದ ಬಡವರಿಗೆ ಅದರ ಉಪಯೋಗವಾಗಲು ಅನುವು ಮಾಡಿಕೊಡಬಹುದೇ?
  •       ಉದ್ಯೋಗ ಖಾತ್ರಿ ಯೋಜನೆಯ ಹಣದ ಆಶೆಗಾಗಿ ಉದ್ಯೋಗವಿದ್ದೂ ನಿರುದ್ಯೋಗಿ ಯೆಂದು ನೋಂದಾಯಿಸದಿರಬಹುದೇ? ಕಾಗದದಲ್ಲೇ ಕೆಲಸವಾಗಿದೆಯೆಂದು ತೋರಿಸಿ ಹಣ ಪಡೆಯುವುದನ್ನು ನಿಲ್ಲಿಸಬಹುದೇ?
  •       ಏಕಮುಖ ಸಂಚಾರದ ವ್ಯವಸ್ಥೆಯಿರುವ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಹೋಗಿಯೂ ಸಬೂಬು ಹೇಳಿ ದಂಡ ಕಟ್ಟದಿರುವ ಬದಲು, ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ಕಟ್ಟಿ ಉತ್ತಮ ಪ್ರಜೆಗಳಾಗಬಹುದೇ?
  •       ಮನೆ ಪಕ್ಕದ ಖಾಲಿ ಸರ್ಕಾರಿ ಜಮೀನಲ್ಲಿ ಅಥವಾ ಖಾಲಿ ಸೈಟಿನಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದೇ? ಸರತಿ ಸಾಲನ್ನು ತಪ್ಪಿಸುವುದನ್ನು ನಿಲ್ಲಿಸಿ, ಶಿಸ್ತಿನಿಂದ ಸಾಲಿನಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬಹುದೇ?
  •       ಚಾಕಲೇಟು, ಬಿಸ್ಕತ್ತು ಇತ್ಯಾದಿ ತಿಂದು ಅದರ ಪ್ಯಾಕೆಟ್ಟನ್ನು ರಸ್ತೆಯಲ್ಲಿಯೇ ಬಿಸಾಡುವುದನ್ನು ನಿಲ್ಲಿಸಬಹುದೇ?
  •       ಮಕ್ಕಳು ಶಾಲೆಗೆ ರಜೆ ಹಾಕಿದಾಗ ಸತ್ತ ಅಜ್ಜಿಯನ್ನು ಪುನಃ ಪುನಃ ಸಾಯಿಸುವುದರ ಬದಲು ಅಥವಾ ಹುಶಾರಿಲ್ಲವೆಂದೋ ಸುಳ್ಳು ಹೇಳಿಸುವ ಬದಲು, ನಿಜವಾದ ಕಾರಣ ಹೇಳುವಂತೆ ಮಕ್ಕಳಿಗೆ ತಿಳಿ ಹೇಳಬಹುದೇ?
  •       ನಮ್ಮ ಪ್ರಾಮಾಣಿಕತೆಯ ಬೆಲೆ ಎಷ್ಟು? ಅದು ಕೆಲವು ಲಕ್ಷ ಕೋಟಿಗಳೇ ಅಥವಾ ಅದು ಬೆಲೆ ಕಟ್ಟಲಾಗದ್ದೇ?
  •       ಕದ್ದು ಮುಚ್ಚಿ ತಿಂದ ಬಾಳೆಹಣ್ಣು ನಮಗೆ ಆನಂದ ಕೊಡುವುದೋ ಅಥವಾ ಇರುವ ಒಂದು ಹಣ್ಣನ್ನು ಎಲ್ಲರಿಗೂ ಹಂಚಿ ಕೊನೆಗೆ ತಿನ್ನುವ ಸಣ್ಣ ತುಣುಕು ಆನಂದ ಕೊಡುವುದೋ?  ಯೋಚಿಸಿ ನೋಡೋಣ. ಹಾಗಾದರೆ, ನಿಜವಾದ ಸುಖ ಆನಂದ ಎಲ್ಲಿದೆ?
  •       ಭ್ರಷ್ಟರಿಗೆ ಕೊರಗು, ಕೀಳರಿಮೆ, ಭಯ ಕಾಡಿದರೆ ಪ್ರಾಮಾಣಿಕನಿಗೆ ಸಮಾಧಾನ, ಆತ್ಮವಿಶ್ವಾಸ, ನಿಶ್ಚಿಂತೆಗಳು ಅದ್ಭುತ ಶಕ್ತಿಯನ್ನು ನೀಡುತ್ತವೆಯೆನ್ನುವುದು ನಮಗೆ, ನಮ್ಮ ಮನೆಮಂದಿಗೆ ತಿಳಿದಿದಿಯೇ?
  •       ನಮ್ಮ ಮಾತಿಗೆ ಎಂದೂ ಬದ್ಧರಾಗಬಲ್ಲ ಶಕ್ತಿ ನಮಗಿದೆ ತಾನೇ? ಕೊಟ್ಟ ಮಾತಿಗೆ ತಪ್ಪುವವರೆಗೆ ನಾವು ಭ್ರಷ್ಟರಾಗಲಾರೆವು.
  •       ಪೋಲೀಸ್‌ರೂ ಸೇರಿದಂತೆ ಯಾವುದೇ ಸರಕಾರಿ ನೌಕರರು ಯಾವುದೇ ಕಾರಣಕ್ಕೆ ಲಂಚ ಕೇಳಿದರೆ ಎಷ್ಟು ಮಾತ್ರಕ್ಕೂ ಜಗ್ಗಬಾರದು. ಲಂಚ ಕೊಡುವವರು ಇರುವ ತನಕ ಲಂಚ ತಗೊಳ್ಳುವವರು ಇದ್ದೇ ಇರುತ್ತಾರೆ
  •       ವರದಕ್ಷಿಣೆ ಸ್ವೀಕಾರ ಯಾವುದೇ ಧರ್ಮ ಆಧಾರಿತವಲ್ಲ. ಅದು ಭ್ರಷ್ಟಾಚಾರದ ಇನ್ನೊಂದು ಬಗೆ. ವರದಕ್ಷಿಣೆಯಿಲ್ಲದ ಮದುವೆಗಳಿಗೆ ಪ್ರೋತ್ಸಾಹ, ವರದಕ್ಷಿಣೆ ಕೇಳುವ ಗಂಡನ ಕಡೆಯವರಿಗೆ ತಿರಸ್ಕಾರವೇ ಮದ್ದು. ವರದಕ್ಷಿಣೆ ಸ್ವೀಕರಿಸುವ ಮದುವೆ ಸಮಾರಂಭಕ್ಕೆ ಹೋಗದಿರುವುದೇ ಲೇಸು.
  •       ವಿಶ್ವಾಸದ್ರೋಹ, ಮೋಸ, ವಂಚನೆ ಎಲ್ಲವೂ ನೈತಿಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಬ್ದಗಳೇ. ಹೊಸಬನೊಬ್ಬ ಸಿಕ್ಕಾಗ ಪ್ರೀತಿಸಿದ ಯುವಕನಿಗೆ ಕೈಕೊಡುವ ಹುಡುಗಿ, ಹೆತ್ತವರನ್ನೇ ಅಲಕ್ಷಿಸಿ ಅವರ ನಂಬಿಕೆಗೆ ದ್ರೋಹಮಾಡುವ ಮಕ್ಕಳು, ಇವರೆಲ್ಲರೂ ನೈತಿಕ ಭ್ರಷ್ಟರೇ.
  •       ಸಾರ್ವಜನಿಕ ಸಂಸ್ಥೆಗಳಲ್ಲಿ ಜಾತಿ ಹೆಸರಲ್ಲಿ ಉದ್ಯೋಗವನ್ನು ಸ್ವಜಾತಿಯ ಬಂಧುಗಳಿಗೆ ಮಾತ್ರ ನೀಡುವುದು ಎಲ್ಲಿಯ ನ್ಯಾಯ? ಜಾತಿ ಮೀರಿದ ವಿದ್ಯಾರ್ಹತೆ ಮಾನದಂಡ ವಾದಾಗಲೇ ಈ ಸಮಸ್ಯೆ ಪರಿಹಾರ ಸಾಧ್ಯ.
  •       ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆಯ ವೇಳೆ ನಕಲು ಮಾಡುವ ಪ್ರವೃತ್ತಿಗೆ ಏನೆನ್ನಬೇಕು? ನಕಲು ಮಾಡಿ ಪರೀಕ್ಷೆಯಲ್ಲಿ ಪಾಸಾಗುವ ವಿದ್ಯಾರ್ಥಿಗಳು ಅದಾವ ಬಗೆಯ ವಿದ್ಯಾವಂತರು?

ಹೀಗೆ, ಪಟ್ಟಿ ಮಾಡುತ್ತಾ ಹೋದರೆ ನೂರಾರು ಅಂಶಗಳು ಸಿಗಬಹುದು. ಕೆಲವು ವಿಷಯಗಳಂತೂ ಯಾರಾದರೂ ಬೆರಳು ತೋರಿಸಿ ಹೇಳಿದ ಮೇಲೆಯೇ ’ಹೌದಲ್ವಾ?’ ಎಂದು ನಮಗೆ ಅನ್ನಿಸುವಷ್ಟು ಸಾಮಾನ್ಯವಾಗಿ ಬಿಟ್ಟಿವೆ! ಮೇಲೆ ಹೇಳಿದ ವಿಷಯಗಳಲ್ಲಿ ನಾವು ಇನ್ನೂ ತಿದಿಕೊಳ್ಳಬೇಕಾದದ್ದು ಇದೆಯೆಂದಾ ದರೆ, ಅವಕಾಶ ಸಿಕ್ಕರೆ ನಾವೂ ಲಂಚ ತೆಗೆದುಕೊಳ್ಳವ ನೌಕರರೇ ಆದೇವೆಂದು ತಿಳಿದುಕೊಳ್ಳುವುದು ಒಳ್ಳೆಯದು! ಅದನ್ನು ನಾವು ಆದಷ್ಟು ಬೇಗ ತಿದ್ದಿಕೊಳ್ಳುವುದು ಒಳ್ಳೆಯದು.

ಭ್ರಷ್ಟಾಚಾರವೆನ್ನುವುದು ಒಂದು ಮಾನಸಿಕತೆ ಅಷ್ಟೇ. ಅದು ಸ್ವಾರ್ಥದ ಒಂದು ಮುಖ. ಅಣ್ಣಾ ಹಜಾರೆಯನ್ನು ಬೆಂಬಲಿಸುವ ನಾವು ಆಗಾಗ ನಾವು ಹೇಗೆ ಯೋಚಿಸುತ್ತಿದ್ದೇವೆ, ಹೇಗೆ ಬದುಕುತ್ತಿದ್ದೇವೆನ್ನುವುದನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಿರಬೇಕು.

ಅಗತ್ಯವಿದ್ದೆಡೆ ನಮ್ಮಲ್ಲಿ ಪರಿವರ್ತನೆ ಆಗುತ್ತಿರಬೇಕು. ಆಗ ಮಾತ್ರ ’ಬದುಕು, ಬದುಕಲು ಬಿಡು’ ಎಂದು ಯೋಚಿಸಲು ನಮಗೆ ಅಭ್ಯಾಸವಾದೀತು. ಇಲ್ಲವಾದಲ್ಲಿ, ಮೊದಲ ಭಾಗ ಮಾತ್ರ ನಮ್ಮ ತಲೆಯಲ್ಲಿರುತ್ತದೆ. ಅದೇ ಭ್ರಚ್ಟಾಚಾರಕ್ಕೆ ಕಾರಣ! ಅದಕ್ಕೇ, ನಮ್ಮೊಳಗಿನ ಲೋಕಪಾಲನಿಗೆ ಮೊದಲು ಶಕ್ತಿ ತುಂಬೋಣ. ಆಗಲೇ ಜನ ಲೋಕಪಾಲ ಕಾನೂನಿಗೂ ಬಲ. ಇಲ್ಲವಾದರೆ, ನಾವೇ ಜಾರಿಗೆ ತಂದ ಜನ ಲೋಕಪಾಲ ಕಾನೂನು ಹತ್ತರೊಟ್ಟಿಗೆ ಹನ್ನೊಂದನೆಯ ಕಾನೂನಾದೀತು!!

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್

ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

Deendayal’s model for India’s resurgence is still Highly Significant: RSS Veteran V Nagaraj

Deendayal’s model for India’s resurgence is still Highly Significant: RSS Veteran V Nagaraj

September 25, 2012
‘Nothing anti-India should be tolerated’: RSS Prachar Pramukh Dr Manmohan Vaidya’s interview to Economic Times

ಭಾರತ ಮಾತ್ರ ವಿಶ್ವಕ್ಕೆ ದಾರಿ ತೋರಬಹುದು : ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ

May 6, 2020
RSS Sarasanghachalak Mohan Bhagwat addressed MAHANAGAR EKATREEKARAN at Vadodara

RSS Sarasanghachalak Mohan Bhagwat addressed MAHANAGAR EKATREEKARAN at Vadodara

December 21, 2016
Day-73: Farmers greet Kedilaya, Organic welcome for Bharat Parikrama Yatra at Mudipu-Konaje

Day-73: Farmers greet Kedilaya, Organic welcome for Bharat Parikrama Yatra at Mudipu-Konaje

October 20, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In