• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಎಂದು ಕೊನೆ ಇಂತಹ ಸಾವಿಗೆ ?: ಗುರುಗಜಾನನ ಭಟ್

Vishwa Samvada Kendra by Vishwa Samvada Kendra
August 25, 2019
in Articles
250
0
Attack on CRPF Jawans: 'Separatists in J&K should be Jailed Immediately' says VHP chief Dr Togadia
491
SHARES
1.4k
VIEWS
Share on FacebookShare on Twitter

ಎಂದು ಕೊನೆ ಇಂತಹ ಸಾವಿಗೆ ?

429710_399712540142932_1526934107_n

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

 

ಕೇವಲ ಎರಡು ಜನ ಉಗ್ರರು ಐದು ಜನ ಸೈನಿಕರನ್ನು ಕೊಂದರೆಂದರೆ ನಮ್ಮ ಸೈನಿಕರದ್ದು ಎಂತಹ  ಸಾವಾಗಿರಬೇಕು ?? ಎಂದಾದರೂ ಯೋಚಿಸಿದ್ದೇವೆಯೇ? ಕೈಯಲ್ಲಿ ಉಗ್ರರು ಆಧುನಿಕ ಮೆಷೀನ್ ಗನ್ನುಗಳನ್ನೂ ಹಿಡಿದು ಬಂದರೆ , ಭಾರತೀಯ ಸೈನಿಕನಲ್ಲಿ ಎಂತಹ ಗನ್ನುಗಳಿರುತ್ತವೆ ಎಂದು ಗಮನಿಸಿದ್ದೆವೆಯೇ?? ನಮ್ಮ ಮುಗ್ಧ ಯೋಧರ ಎದೆಯಲ್ಲಿ ಅಗಾಧ ದೇಶಪ್ರೇಮವನ್ನು ಬಿತ್ತಿ , ಅದನ್ನು ಬೆಳೆಸಿ ಹೆಮ್ಮರ ವಾಗಿಸಿ , ಕೈಯಲ್ಲಿ ಸರಿಯಾದ ಗನ್ನುಗಳನ್ನೂ ಕೊಡದೆ, ಎದೆಗೆ ರಕ್ಷಾ ಕವಚಗಳನ್ನು ನೀಡದೆ , ಯುದ್ದಕ್ಕೆ ನಿಲ್ಲಿಸಿ ಬಿಡುತ್ತೆವಲ್ಲ ಇದಾವ ನ್ಯಾಯ ?

ಸೈನಿಕರನ್ನು ಕೊಲ್ಲಲು ಬಿಟ್ಟು, ಸತ್ತಮೇಲೆ ಪರಮವೀರ ಚಕ್ರ ಕೊಡುವ ಸರ್ಕಾರ ಬಹುಶಃ ಯಾವ ದೇಶದಲ್ಲೂ ಇಲ್ಲ. ನಮ್ಮ ನೆಲದಲ್ಲೇ ನಮ್ಮ ಸೈನಿಕರ ಹತ್ಯೆ ನಡೆಯುತ್ತದಲ್ಲ ಇದಕ್ಕಿಂತ ವಿಪರ್ಯಾಸ ಎಲ್ಲಾದರೂ ಉಂಟೇ ?? ಕಟ್ಟ ಕಡೆಗೆ ಸೈನಿಕ ಸತ್ತಿದ್ದಾನೆ , ಅವನದು ಮಾತೃ ಭಕ್ತಿ , ನೆಲದ ಮಣ್ಣಿನ ಪ್ರೀತಿ , ಎಲ್ಲವೂ ಸರಿ , ಆದರೇ ಅದನ್ನು ತೋರಿಸಲು ಸಾಯಲೇ ಬೇಕಿತ್ತೆ??   ಅಥವಾ ಆ ಸಾವು ಅನಿವಾರ್ಯವಾಗಿತ್ತೆ ??

ಎಂದು ಕೊನೆ ಈ ಸಾವಿಗೆ ??  1947 ರಿಂದಲೂ ನಮ್ಮ ಸೈನಿಕರು ಸಾಯುತ್ತಲೇ ಇದ್ದಾರೆ  ನಮ್ಮ ಸೈನಿಕನಿಗೆ , ಅವನ ವೀರಾವೇಶಕ್ಕೆ , ಅವನ ಆತ್ಮ ಸ್ತೈರ್ಯಕ್ಕೆ , ಅವನ ಮಣ್ಣಿನ ಪ್ರೀತಿಗೆ , ಸರ್ಕಾರ ಕೊಟ್ಟಿದ್ದಾದರೂ ಏನು ? ನಮ್ಮ ಸೈನಿಕರ ಆಲೋಚನೆಯನ್ನೇಕೆ ಬದಲು ಮಾಡಲಾಗದು ?? ನೀನು ಹೊರಟಿರುವುದು ವೀರಮರಣವನ್ನೊಪ್ಪಲು ಅಲ್ಲ , ನಿನ್ನನ್ನು ಕಳುಹಿಸುತ್ತಿರುವುದು , ಸಾಯಲಿ ಎಂದಲ್ಲ , ಸಾಯಿಸು ಎಂದು . ನಿನಗೆ ಮುಕ್ತ ಅವಕಾಶವಿದೆ , ದೇಶದ್ರೋಹಿಗಳನ್ನು ಸದೆ ಬಡಿ ಎಂದು ಯಾಕೆ ಆತನಿಗೆ ತಿಳಿಸಬಾರದು ??

ಮೊನ್ನೆ ನನ್ನ ಎರಡು ಸಹೋದರರ ತಲೆ ಕಡಿದು ಹೋದಾಗ ಸರ್ಕಾರವಾಗಲಿ , ಸೈನ್ಯ ವಾಗಲಿ ಮಾತನಾಡಲೇ ಇಲ್ಲ . ನಿನ್ನೆ ಮತ್ತದೇ ಉಗ್ರರ ಗುಂಡಿಗೆ ಐದು ಸಹೋದರರು ಸತ್ತಾಗಲೂ ಯಾರೊಬ್ಬರೂ ಮಾತನಾಡಲಿಲ್ಲ , ಹಾಗಾದರೆ  ಕಾಂಗ್ರೆಸ್ ಸರ್ಕಾರ ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಆಡಳಿತ ನಡೆಸುತ್ತಿದೆಯೇ ?? ನಮ್ಮ ಸೈನ್ಯವೆಕೆ ಇಷ್ಟೊಂದು ಮೌನವಾಗಿ ಕುಳಿತು ಬಿಟ್ಟಿದೆ , ಎಷ್ಟೊಂದು ರಾಷ್ಟ್ರಗಳಲ್ಲಿ ಸರ್ಕಾರ ಆಡಳಿತ ನಡೆಸಲು ವಿಫಲವಾಗುತ್ತಿದ್ದಂತೆ ಸೈನ್ಯ ತಾನೇ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ , ನನ್ನ ತಾಯ್ನಾಡಿನಲ್ಲೇಕೆ ಸೈನ್ಯ ವೈರಿಗಳಿಗೆ ತಕ್ಕ ಉತ್ತರ ನೀಡುತ್ತಿಲ್ಲ , ಎಂದೂ ವೈರಿಗಳು ಭಾರತದ ಕಡೆ ತಲೆಹಾಕದಂತೆ ಮಾಡಲಾಗುತ್ತಿಲ್ಲ, ಸೈನ್ಯವೇಕೆ ಹೇಡಿ ಸರಕಾರದ ಅಡಿಯಾಳಾಗಿದೆ??

ನನ್ನ ಸಹೋದರರು ಸತ್ತಾಗ ಅವರ ಕೈಯಲ್ಲಿ ಸರಿಯಾದ ಆಯುಧವಿರಲಿಲ್ಲ , ಅದೇಶವಿರಲಿಲ್ಲ , ಸಂದೇಹ ಬಂದಾಗ ಅಂತಹ  ವ್ಯಕ್ತಿಗಳನ್ನು ವಿಚಾರಿಸಲು ಅನುಮತಿಯಿರಲಿಲ್ಲ , ನಮ್ಮ ನೆಲದ ಅನ್ನವುಂಡು ನಮ್ಮನೆಲದ ನೀರು ಕುಡಿದು ನಮ್ಮವರನ್ನೇ ಗುಂಡಿಟ್ಟು ಸಾಯಿಸಿದರೂ  ಮೌನವಾಗಿರುವ ನಾವು  ನಮ್ಮ  ವೀರ ಯೋಧರಿಗೆ ಕೊಡುವ ಗೌರವವೆಂಥದ್ಧು?

ತಾಯಿ ಶಾರದೆಯ ಶ್ರದ್ದೆಯ ಕೇಂದ್ರ, ತಂದೆ ಶಿವನ ವಾಸಸ್ತಾನ , ಜಗತ್ತಿಗೆ ಶಾಂತಿಯನ್ನು , ನೆಮ್ಮದಿಯನ್ನು ನೀಡುತ್ತಿದ್ದ , ಋಷಿ ಪರಂಪರೆಯ ಬೀಡಾಗಿದ್ದ ಕಾಶ್ಮೀರ ಹೇಗೆ ಉಗ್ರರ ತಾಣವಾಯಿತು??  ನಮಗೆಲ್ಲರಿಗೂ ಆತ್ಮ ಸಾಕ್ಷಿ ಕೆಲಸಮಾಡುತ್ತಿಲ್ಲವೇಕೆ? ನಮ್ಮ ಸಂಸ್ಕೃತಿ ಸಂಸ್ಕಾರಗಳ , ಜ್ಞಾನದ ಮೂಲಕ್ಕೆ ಹೊಡೆತ ಬಿದ್ದಾಗಲು ನಾವೇಕೆ ಮೂಕ ಪ್ರೇಕ್ಷಕರಾಗಿದ್ದೇವೆ??

ಇನ್ನೆಷ್ಟು  ಬಲಿ ಬೇಕು ತಾಯ್ನೆಲದ ರಕ್ಷಣೆಗೆ ?? ನಮ್ಮ ಸೈನಿಕರಿಗೆ ಸಿಗುತ್ತಿರುವುದು ನಾಯಿಯ ಸಾವಲ್ಲದೇ ಮತ್ತಿನ್ನೇನು??, ಕೈಯಲ್ಲಿ ಆಯುಧವಿಲ್ಲದೇ, ಆಜ್ಞೆಯಿಲ್ಲದೇ ಶತ್ರುಗಳ ಗುಂಡಿಗೆ ಗುಂಡಿಗೆಯನ್ನಿಟ್ಟು ಮಲಗಿಬಿಡುತ್ತಾರಲ್ಲ ಇದು ವೀರ ಮರಣವೇ ?? ನನ್ನ ಪ್ರಕಾರ ಇದು ಸರ್ಕಾರವೇ ನೀಡಿದ ಸಾವು , ಹೇಗೆ ಬಂದರು ಉಗ್ರರು ಒಳಗೆ ?? ಅವಕಾಶ ಕೊಟ್ಟವರಾರು ?? ನನ್ನ ಸಹೋದರ ಸೈನಿಕರು ಸತ್ತಾಗ ಹೊಣೆ ಹೊರಬೇಕಾದ್ದು ಯಾವ ಇಸ್ಲಾಂ ಸಂಘಟನೆಯೂ ಅಲ್ಲ, ಅದು ಭಾರತದ ಕಾಂಗ್ರೆಸ್ ಸರ್ಕಾರ . ಜೀವದ ಬೆಲೆಯೇ ಗೊತ್ತಿಲ್ಲವೇ ಆಳುತ್ತಿರುವವರಿಗೆ ?? ಇಂತಹ ಹತ್ಯೆಗಳಾಗುತ್ತಿರುವುದು ಇಂದು ನಿನ್ನೆಯಲ್ಲ ಸುಮಾರು 70 ವರ್ಷಗಳಿಂದ .

ಯಾವತ್ತಾದರೂ ಮಡಿದ ಸೈನಿಕರ ಮನೆಯವರ ಕಣ್ಣಿರನ್ನು ಒರೆಸಿದ್ದಿರಾ?? ಅವರ ಕೂಗನ್ನು ಆಲಿಸಿದ್ದೀರಾ?? ಅಂತಹ ನೋವಿನ ಅನುಭವವಾಗಿದೆಯೆ ನಮಗೆ ?  ಒಂದು ಚಿಕ್ಕ ಪಿನ್ ಚುಚ್ಚಿದಾಗ ಸಂಕಟ ಪಡುವ ನಾವುಗಳು , ಗುಂಡೇಟು ತಿನ್ನುವವರನ್ನೂ , ಅವರ ನೋವನ್ನೂ  , ಅವರ ನಿಷ್ಟೆಯನ್ನು ಎಂದಾದರೂ ಗಮನಿಸಿದ್ದೇವೆಯೇ?? ಸೈನ್ಯಕ್ಕೆ ಸೇರಿದರೆ ಅವರ ಬದುಕು ಮುಗಿದಿದೆ ಎಂದಲ್ಲವಲ್ಲ ?? ಅವರ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಹಾಕಬೇಕೆಂದೆನಿಲ್ಲವಲ್ಲ . ಒಮ್ಮೆ ಈ ಸಾವಿನ ಸರಣಿಗೆ ವಿದಾಯ ವೇಕೆ ಹೇಳಬಾರದು ? ?

ಎಂದು ಕೊನೆ ಇಂತಹ ಸಾವಿಗೆ ?? ಇನ್ನೆಷ್ಟು ಹೆಣಗಳು ಉರುಳಬೇಕು ಈ ತಾಯ್ನಾಡಿಗೆ?? ಎಂದು ಸಿಗುವುದು ನೆಮ್ಮದಿಯ ಬದುಕು ನನ್ನ ವೀರ ಸಹೋದರನಿಗೆ ?? ಇದ್ದಾಗ ಬೆಲೆ ಕೊಡದೆ ಸತ್ತಾಗ ಶಾಲು ಹೊದೆಸಿದರೇನು ಫಲ ?? ಶ್ರದ್ಧಾಂಜಲಿ ಇಟ್ಟರೇನು ಫಲ ?? ಎಷ್ಟು ಅತ್ತರೇನು ಫಲ ?? ಸಮಾಧಿ ನಿರ್ಮಿಸಿದರೇನು

ಫಲ ?? ಪಾರ್ಕ್ ಕಟ್ಟಿದರೇನು ಫಲ ?? ರಸ್ತೆ ಗೆ ಬೋರ್ಡ್ ಹಾಕಿದರೇನು ಫಲ ??  ಪುತ್ಥಳಿ ನಿರ್ಮಿಸಿದರೇನು ಫಲ ?? ಪರಮವೀರ  ಕೊಟ್ಟರೇನು ??  ಪದ್ಮಶ್ರೀ ಕೊಟ್ಟರೇನು ?? ಹುತಾತ್ಮ ಅಂದರೇನು ?? ಎಷ್ಟು ಲಕ್ಷ ನೀಡಿದರೇನು ? ಅವನೇ ಇಲ್ಲವಾದಮೇಲೆ ? ಯಾರಿಗಿದನ್ನು ನೀಡಿ ಸಂತೈಸೋಣ ? ಇನ್ನೊಬ್ಬ ಸೈನಿಕ ಸಾಯುವುದನ್ನು ತಡೆಯದ ನಾವು-ನೀವು !!.

 -ಗುರುಗಜಾನನ ಭಟ್

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
Ajmer: VHP Chief Dr Togadia addressed a mammoth gathering, says 'Ram Mandir a reality soon'

Ajmer: VHP Chief Dr Togadia addressed a mammoth gathering, says 'Ram Mandir a reality soon'

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

VHP turns 50: RSS Sararanghachalak Bhagwat, VHP Chief Togadia, Pejawar Seer attended Inaugural Ceremony

VHP turns 50: RSS Sararanghachalak Bhagwat, VHP Chief Togadia, Pejawar Seer attended Inaugural Ceremony

August 18, 2014
सम्मानित होकर घर वापसी करेंगे कश्मीरी हिंदू : मोहन भागवत

सम्मानित होकर घर वापसी करेंगे कश्मीरी हिंदू : मोहन भागवत

February 28, 2011
RSS Akhil Bharatiya Shrunga Ghosh Shibir ‘SWARANJALI’ to be held on January 7-10, 2016 at Bengaluru; Sarasanghachalak Mohan Bhagwat to address Valedictory

RSS Akhil Bharatiya Shrunga Ghosh Shibir ‘SWARANJALI’ to be held on January 7-10, 2016 at Bengaluru; Sarasanghachalak Mohan Bhagwat to address Valedictory

December 24, 2015
RSS Clarification related Media reports on ” RSS’s opinion on IIT “

RSS Clarification related Media reports on ” RSS’s opinion on IIT “

July 21, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In