• Samvada
  • Videos
  • Categories
  • Events
  • About Us
  • Contact Us
Tuesday, June 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಕಲ್ಲಡ್ಕ : ವಿವೇಕ ದೃಷ್ಟಿಗಾಗಿ ದೃಷ್ಟಿದಾನ

Vishwa Samvada Kendra by Vishwa Samvada Kendra
August 25, 2019
in News Digest
250
0
ಕಲ್ಲಡ್ಕ : ವಿವೇಕ ದೃಷ್ಟಿಗಾಗಿ ದೃಷ್ಟಿದಾನ
491
SHARES
1.4k
VIEWS
Share on FacebookShare on Twitter

ಮಂಗಳೂರು : ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ವರ್ಷಾಚರಣೆಯ ಅಂಗವಾಗಿ ದೃಷ್ಟಿದಾನ ಕಾರ್ಯಕ್ರಮವನ್ನು ಬುಧವಾರ ೨-೧೦-೨೦೧೩ ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನ್ಯೂಸ್ ೧೩ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ’ವಿವೇಕ ದೃಷ್ಟಿಗಾಗಿ-ದೃಷ್ಟಿದಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

1

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಶ್ರೀರಾಮ ವಿದ್ಯಾ ಕೇಂದ್ರ ಮತ್ತು ನ್ಯೂಸ್೧೩ ವತಿಯಿಂದ ಜಂಟಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ೩೭೨ ಮಂದಿ ನೇತ್ರದಾನ ಮಾಡುವ ಮೂಲಕ ಉತ್ತಮ ಸ್ಪಂದನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ’ಸಂತನಾಗಿ, ರಾಷ್ಟ್ರಭಕ್ತನಾಗಿ ಜಗತ್ತಿನಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ ವಿವೇಕಾನಂದರ ಹಾಗೂ ದೇಶದ ಹೆಮ್ಮೆಯ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬ ಈ ಎರಡು ಮಹಾನ್ ಶಕ್ತಿಯನ್ನು ನೆನಪಿಸುವ ಕಾರ್ಯ ಶ್ರೀರಾಮ ವಿದ್ಯಾಕೇಂದ್ರ ಹಾಗೂ ನ್ಯೂಸ್ ೧೩ ಮಾಡಿದೆ’ ಎಂದು ಹೆಮ್ಮೆಪಟ್ಟರು.

’ಹಲವರು ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸುತ್ತಾರೆ, ಇದಕ್ಕಿಂತಲೂ ತುಸು ಮುಂದೆ ಹೋಗಿ ವ್ಯಕ್ತಿಯೊಬ್ಬ ಏನಾದರೂ ಮಾಡಿದರೆ ಇಡೀ ಸಮಾಜವೇ ಆತನನ್ನು ನೆನಪಿಟ್ಟುಕೊಳ್ಳುತ್ತದೆ, ಅಷ್ಟೇ ಅಲ್ಲದೇ ಆತನಿಗೂ ಜೀವನ ಸಾರ್ಥಕ್ಯದ ಧನ್ಯತೆ ಬರುತ್ತದೆ’ ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.

ದೃಷ್ಟಿದಾನ ಮಾಡಿದಾಗ ಸಿಗುವ ಖುಷಿ. ಸಂತೋಷದ ಅನುಭವ ನಮಗೆ ಕತ್ತಲೆಯಲ್ಲಿ ನಡೆದಾಗ ತಿಳಿಯುತ್ತದೆ, ಕತ್ತಲೆಯಲ್ಲಿ ನಾವಿದ್ದಾಗ ಸ್ವಲ್ಪ ಬೆಳಕು ಬೇಕು ಎಂದು ನಮಗನಿಸುತ್ತದೆ.

ಅದೇ ರೀತಿ ದೃಷ್ಟಿಹೀನ ವ್ಯಕ್ತಿ ಈ ಜಗತ್ತನ್ನೇ ನೋಡಿರುವುದಿಲ್ಲ, ಈ ಸೂರ್ಯ, ಚಂದ್ರ, ಬಿಳಿ, ಕಪ್ಪು ಇದ್ಯಾವುದರ ಕಲ್ಪನೆಯೂ ಆತನಿಗಿರುವುದಿಲ್ಲ, ಈ ಸಂದರ್ಭ ಆತನಿಗೆ ಕಣ್ಣು ದೊರಕಿದರೆ ಆತ ಸಂತೋಷಗೊಳ್ಳುತ್ತಾನೆ. ತನಗೆ ಕಣ್ಣು ಕೊಟ್ಟವರನ್ನು ಜೀವನ ಪೂರ್ತಿ ಸ್ಮರಿಸುತ್ತಾ ಆರಾಧಿಸುತ್ತಾನೆ.

ಸತ್ತು ಹೋದ ಶರೀರದ ವ್ಯಾಮೋಹ ಬೇಡ, ಮಣ್ಣಿನೊಂದಿಗೆ ಅಥವಾ ಬೆಂಕಿಯೊಂದಿಗೆ ಸುಟ್ಟು ಭಸ್ಮವಾಗುವ ದೇಹ ಯಾವ ಪ್ರಯೋಜನಕ್ಕೂ ಬರಲಾರದು, ಬದುಕಿದ್ದಾಗ ಏನೂ ಮಾಡಲಾಗದಿದ್ದರೂ ಸತ್ತ ನಂತರವಾದರೂ ಅಮೂಲ್ಯವಾದ ಎರಡು ಕಣ್ಣುಗಳನ್ನಾದರೂ ದಾನ ಮಾಡೋಣ, ಅಲ್ಲದೇ ಕಣ್ಣು ದಾನದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡಬೇಕಿದೆ’ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ನ್ಯೂಸ್ ೧೩ ಮುಖ್ಯಸ್ಥ ಸುನೀಲ್ ಕುಲಕರ್ಣಿ ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ನಾವು ಅವರ ತ್ಯಾಗ ಮತ್ತು ಸೇವೆಗಳನ್ನು ಅರಿತು ಸಮಾಜಕ್ಕೆ ನಮ್ಮಿಂದಾದ ಸಹಾಯವನ್ನು ಮಾಡಬೇಕು. ಮನುಷ್ಯ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಎಂದೂ ವಿಫಲನಾಗಬಾರದು’ ಎಂದರು.

2

ಇಂದು ಮಾಧ್ಯಮಗಳು ಕೂಡಾ ತಮ್ಮ ಕರ್ತವ್ಯವನ್ನು ಪಾಲಿಸುವುದರಲ್ಲಿ ಸೋಲುತ್ತಿರುವುದು ಗಮನಕ್ಕೆ ಬರುತ್ತಿದೆ. ಬಲಪಂಥೀಯ ವಿಚಾರಧಾರೆಯೊಂದಿಗೆ ಸತ್ಯಾಂಶವನ್ನು ಮುಂದಿಡುವ ಉದ್ದೇಶ ನ್ಯೂಸ್೧೩ ದ್ದಾಗಿದೆ.

ದೃಷ್ಟಿದಾನ ಕೇವಲ ಸಾಂಕೇತಿಕವಾಗಬಾರದು, ವಿವೇಕ ದೃಷ್ಟಿಯನ್ನು ಪಡೆದುಕೊಂಡು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವಂತಾಗೋಣ ಎಂದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ದಿವ್ಯಲಕ್ಷ್ಮೀಯವರು ನೇತ್ರದಾನದ ಮಹತ್ವವನ್ನು ತಿಳಿಸಿದರು.

’ಎಲ್ಲಾ ಇಂದ್ರಿಯಗಳಿಗಿಂತಲೂ ಕಣ್ಣು ಅತಿ ಶ್ರೇಷ್ಠ, ಕೆಲವೊಮ್ಮೆ ಅಲ್ಸರ್, ಅನುವಂಶೀಯ ಕಾಯಿಲೆ, ಪೆಟ್ಟುಬಿದ್ದು, ರಾಸಾಯನಿಕ ತಗುಲಿ ಕಣ್ಣಿನ ಗುಡ್ಡೆ ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ದೃಷ್ಟಿ ಹೊರಹೋಗುತ್ತದೆ. ಆ ಸಂದರ್ಭ ಕಣ್ಣಿನ ಕಸಿಯನ್ನು ಮಾಡಿ ದೃಷ್ಟಿ ಕಳೆದುಕೊಂಡವರಿಗೆ ಮತ್ತೆ ದೃಷ್ಟಿ ನೀಡುವ ಕಾಯಕ ಮಾಡಬಹುದು. ಎಲ್ಲಾ ವಯಸ್ಸಿನವರು, ಕನ್ನಡಕ ಹಾಕಿರುವವರೂ ನೇತ್ರದಾನ ಮಾಡಬಹುದು.

ನೇತ್ರದಾನ ಮಾಡಿದ ವ್ಯಕ್ತಿಯು ಮರಣ ಹೊಂದಿದ ೬ ಗಂಟೆಯೊಳಗೆ ಅವರ ಹತ್ತಿರದ ಸಂಬಂಧಿಗಳು ಹತ್ತಿರದ ’ಐ ಬ್ಯಾಂಕ್’ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದರು.

ದೇಶದಲ್ಲಿ ಸುಮಾರು ೨ ಮಿಲಿಯನ್ ಜನ ದೃಷ್ಟಿ ಕಳೆದುಕೊಂಡಿದ್ದಾರೆ, ಇವರ ಕಣ್ಣು ಕಸಿ ಮಾಡಲು ಅಷ್ಟೇ ಪ್ರಮಾಣದಲ್ಲಿ ಕಣ್ಣುಗಳ ಅಗತ್ಯವಿದೆ, ನಮ್ಮ ದೇಶದಲ್ಲಿ ನಿಮಿಷಕ್ಕೆ ಇಬ್ಬರು ಮೃತರಾದರೂ ವರ್ಷಕ್ಕೆ ೨,೦೦೦ ಕಣ್ಣುಗಳು ಮಾತ್ರ ಕಸಿಮಾಡಲಾಗುತ್ತಿದೆ ಎಂದು ಡಾ.ದಿವ್ಯ ಲಕ್ಷ್ಮೀ ಕಳವಳ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಡಾ.ಹೃಷಿಕೇಶ ಅಮೀನ್, ನಾರಾಯಣ ಸೋಮಯಾಜಿ, ವಿಧಾನ ಪರಿಷತ್ ಸದಸ್ಯ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.

ಇವರೆಲ್ಲಾ ನೇತ್ರದಾನ ಮಾಡಿ, ಇತರರಿಗೂ ನೇತ್ರದಾನ ಮಾಡುವಂತೆ ಹುರಿದುಂಬಿಸಿದರು.

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
RSS Clarification on Mai Cha Jayadev's health, Press Release says 'His health is much fine'

RSS Clarification on Mai Cha Jayadev's health, Press Release says 'His health is much fine'

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

VHP protests against increasing atrocities on Hindus in Pak-Bangla पाक-बंग्लादेश में हिन्दुओं के उत्पीडन के विरुद्ध VHP का प्रदर्शन

VHP protests against increasing atrocities on Hindus in Pak-Bangla पाक-बंग्लादेश में हिन्दुओं के उत्पीडन के विरुद्ध VHP का प्रदर्शन

January 11, 2014
ABVP’s call Against Corruption: ಭ್ರಷ್ಟಾಚಾರದ ವಿರುದ್ಧ ಎಬಿವಿಪಿಯಿಂದ  ರಾಜ್ಯಾದ್ಯಂತ ಆಂದೋಲನ

ABVP’s call Against Corruption: ಭ್ರಷ್ಟಾಚಾರದ ವಿರುದ್ಧ ಎಬಿವಿಪಿಯಿಂದ ರಾಜ್ಯಾದ್ಯಂತ ಆಂದೋಲನ

April 8, 2011
ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ನಡೆಯುವ ಮಾದಕತೆ, ಅಶ್ಲೀಲತೆಯ ವಿರುದ್ಧ ಭಜರಂಗ ದಳ ಪತ್ರಿಕಾ ಗೋಷ್ಠಿ

ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ನಡೆಯುವ ಮಾದಕತೆ, ಅಶ್ಲೀಲತೆಯ ವಿರುದ್ಧ ಭಜರಂಗ ದಳ ಪತ್ರಿಕಾ ಗೋಷ್ಠಿ

December 27, 2018
Sister Nivedita remembered on her 100th death anniversary

Sister Nivedita remembered on her 100th death anniversary

November 12, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In