• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ-1

Vishwa Samvada Kendra by Vishwa Samvada Kendra
March 9, 2014
in News Digest, RSS ABPS Baitak-2014
250
0
ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ-1
491
SHARES
1.4k
VIEWS
Share on FacebookShare on Twitter

BKR_7472

ರಾಷ್ಟ್ರೀಯ ಸ್ವಯಂಸೇವಕ ಸಂಘ

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಅಖಿಲ ಭಾರತೀಯ ಪ್ರತಿನಿಧಿ ಸಭಾ, ಬೆಂಗಳೂರು

ಫಾಲ್ಗುಣ ಶುಕ್ಲ ೭-೯, ಯುಗಾಬ್ಧ ೫೧೧೫

(ಮಾರ್ಚ್ ೭, ೮ ಮತ್ತು ೯, ೨೦೧೪)

ಪೂಜ್ಯ ಮಾತಾ ಅಮೃತಾನಂದಮಯಿ ಅವರನ್ನು ಅವಮಾನಿಸುವ ಷಡ್ಯಂತ್ರದ ಕುರಿತು

ಆರೆಸ್ಸೆಸ್ ಸರಕಾರ್ಯವಾಹ ಶ್ರೀ ಸುರೇಶ್ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ

ಲಕ್ಷಾಂತರ ಜನರ ’ಅಮ್ಮ’ ಮಾತಾ ಅಮೃತಾನಂದಮಯಿಯವರು ಜಗತ್ತಿನಾದ್ಯಂತ ವಿವಿಧ ಭಾಷೆ, ಜಾತಿ, ಮತಗಳ ಅನುಯಾಯಿಗಳನ್ನು ಹೊಂದಿರುವ ಜಗದ್ವಂದ್ಯರು. ತಮ್ಮ ಅಮಿತ ವಾತ್ಸಲ್ಯ ಮತ್ತು ದೈವಿಕ ಸ್ಪರ್ಶದಿಂದ ಲಕ್ಷಾಂತರ ದುಃಖತಪ್ತ ಜೀವಗಳಿಗೆ ಸಾಂತ್ವನ ನೀಡುತ್ತಿರುವವರು. ಮನುಕುಲದ ದುಃಖ ದುಮ್ಮಾನಗಳನ್ನು ತಗ್ಗಿಸಲು ಶ್ರಮಿಸುತ್ತಿರುವ ಈ ’ಅಪ್ಪುಗೆಯ ಅಮ್ಮ’ನನ್ನು ವಿಶ್ವಸಂಸ್ಥೆ ಮತ್ತು ಅನೇಕ ದೇಶಗಳು ನೂರಾರು ಪ್ರಶಸ್ತಿಗಳೊಂದಿಗೆ ಗೌರವಿಸಿವೆ. ದೈವಿಕ ಪ್ರೇಮವೇ ಮೈವೆತ್ತಂತಿರುವ ಅಮ್ಮ ಪ್ರಪಂಚದ ಮೂಲೆ ಮೂಲೆಗಳಿಗೆ ಭೇಟಿ ಕೊಟ್ಟು ಗಂಟೆಗಟ್ಟಲೆ ಪ್ರವಚನ, ಭಕ್ತಜನರ ಪ್ರಶ್ನೆಗಳಿಗೆ ತಾಳ್ಮೆಯ ಉತ್ತರ, ಸಮಾಧಾನ ನೀಡುವುದರ ಜೊತೆಗೆ ಇಮೈಲ್ ಮತ್ತು ಪತ್ರಗಳಿಗೂ ದಣಿವಿಲ್ಲದೇ ಉತ್ತರಿಸುತ್ತಾರೆ. ಇವಿಷ್ಟೇ ಅಲ್ಲದೇ, ಲೆಕ್ಕವಿಲ್ಲದಷ್ಟು ಸೇವಾಕಾರ್ಯಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಗಳೂ ಕೂಡ ಇವರ ದಿನಚರಿಯ ಅವಿಭಾಜ್ಯ ಭಾಗಗಳಾಗಿವೆ. ಇವರು ತಮ್ಮ ದಣಿವಿಲ್ಲದ ಸೇವಾಕಾರ್ಯದ ಮೂಲಕ ಪ್ರಪಂಚದಾದ್ಯಂತ ಸೇವೆಯ ಆಂದೋಲನಕ್ಕೆ ಪ್ರೇರಣೆಯಾಗಿದ್ದಾರೆ.

ಪಶ್ಚಿಮದ ಕೆಲವು ಧೂರ್ತ ಶಕ್ತಿಗಳು ಇಂತಹ ಶ್ರೇಷ್ಠ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಸನಾತನ ಧರ್ಮ ಮತ್ತು ಮನುಕುಲದ ವಿರೋಧಿಗಳು ಪ್ರಕಟಿಸಿರುವ ’ಹೋಲಿ ಹೆಲ್’ ಎನ್ನುವ ಪುಸ್ತಕವು ಮಾತಾ ಅಮೃತಾನಂದಮಯಿಯವರ ಧಾರ್ಮಿಕ ಆಂದೋಲನವನ್ನು ಹಾಳುಗೆಡಹುವ ಒಂದು ಸಂಚು. ಬಹುಶಃ, ಈ ಆಂದೋಲನದ ಹೆಚ್ಚುತ್ತಿರುವ ಪ್ರಭಾವವನ್ನು ಸಹಿಸಲಾಗದ ಪಶ್ಚಿಮದ ಮತೀಯ ಮೂಲಭೂತವಾದಿಗಳ ಕುತಂತ್ರದ ಫಲವೇ ಈ ಪುಸ್ತಕ ಎಂದು ತೋರುತ್ತದೆ.

ಪುಸ್ತಕ ಪ್ರಕಟಣೆಗೆ ಆಯ್ದುಕೊಂಡ ಸಂದರ್ಭ, ಅಮ್ಮ ಮತ್ತು ಅವರ ಕಾರ್ಯದ ಬಗ್ಗೆ ಅದರಲ್ಲಿ ಉಲ್ಲೇಖಿಸಿರುವ ಸಂಪೂರ್ಣ ಆಧಾರರಹಿತ ಆರೋಪಗಳು ಹಾಗೂ ಸತ್ಯಕ್ಕೆ ದೂರವಾದ ವಿಷಯಗಳು ಮತ್ತು ಕೆಲವು ಹಿಂದೂವಿರೋಧಿ ಮಾಧ್ಯಮಗಳು ಹಾಗೂ ಕೆಲವು ಬುದ್ಧಿಜೀವಿಗಳು ಪುಸ್ತಕದಲ್ಲಿನ ನಿಂದನಾತ್ಮಕ ವಿಷಯಗಳನ್ನು ತಕ್ಷಣವೇ ಪ್ರಚುರಪಡಿಸಲು ಶುರುವಿಟ್ಟುಕೊಂಡಿದ್ದನ್ನು ನೋಡಿದರೆ ಇದೊಂದು ದುರುದ್ದೇಶಪೂರಿತ ಅಂತರರಾಷ್ಟ್ರೀಯ ಷಡ್ಯಂತ್ರ ಎಂದು ಅನ್ನಿಸದಿರದು.

ಅಮ್ಮ ಅವರಂತಹ ಶ್ರೇಷ್ಠ ಸಂತರನ್ನು ಅವಮಾನಿಸುವ ಇಂತಹ ನಾಚಿಕೆಗೇಡಿನ ಪ್ರಯತ್ನಗಳನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಹಾಗೆಯೇ, ಸಂಪೂರ್ಣ ಹಿಂದೂ ಸಮಾಜ ಮತ್ತು ಜಗತ್ತಿನ ಎಲ್ಲ ಸಜ್ಜನರು ಈ ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಮನುಕುಲದ ವೈರಿಗಳೆಂದು ಪರಿಗಣಿಸಿ ಬಹಿಷ್ಕರಿಸಬೇಕೆಂದು ಕರೆ ನೀಡುತ್ತೇವೆ.

ಅಮ್ಮ ಮತ್ತು ಅವರ ಉದಾತ್ತ ಕಾರ್ಯಗಳ ಬಗ್ಗೆ ನಮ್ಮ ಶ್ರದ್ಧಾಗೌರವಗಳನ್ನು ಒತ್ತಿಹೇಳುತ್ತಾ, ಅವರ ಮತ್ತು ಇತರ ಹಿಂದೂ ಸಾಧು-ಸಂತರ ಹಾಗೂ ಸಂಸ್ಥೆಗಳ ವಿರುದ್ಧದ ದುಷ್ಟ ಷಡ್ಯಂತ್ರದ ಸವಾಲುಗಳನ್ನು ಎದುರಿಸುವ ಎಲ್ಲ ಪ್ರಯತ್ನಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತೇನೆ.

**********************************

  • email
  • facebook
  • twitter
  • google+
  • WhatsApp

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post

RSS സര്‍കാര്യവാഹ് ഭയ്യാജി ജോഷിയുടെ പ്രസ്താവന-1

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Kerala is country’s most crime-prone state: NCRB

Kerala is country’s most crime-prone state: NCRB

June 25, 2012
Video: Speech by RSS Sarasanghachalak Mohan Bhagwat on Vijayadashami Day at Nagpur on Oct 22, 2015.

Video: Speech by RSS Sarasanghachalak Mohan Bhagwat on Vijayadashami Day at Nagpur on Oct 22, 2015.

October 26, 2015
5000KM by Walk; Bharat Parikrama Yatra lead by Kedilaya reaches Chusalewad Village in Punjab

5000KM by Walk; Bharat Parikrama Yatra lead by Kedilaya reaches Chusalewad Village in Punjab

December 6, 2013
रामनवमी ही क्यों?: -मा. गो. वैद्य

रामनवमी ही क्यों?: -मा. गो. वैद्य

April 3, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In